Category: ಲೇಖನಗಳು

  • ಕಾಡಿನಿಂದ ನಾಡಿಗೆ ಬಂದ ಆನೆಗಳು…

    ಕಾಡಿನಿಂದ ನಾಡಿಗೆ ಬಂದ ಆನೆಗಳು…

    ಇಂದು ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಕಾಡಾನೆಗಳದ್ದೇ ಸುದ್ದಿ. ಅವು ಕಾಡಿನಿಂದ ನಾಡಿಗೆ ಕಾಲಿಟ್ಟು ದಾಂಧಲೆ ನಡೆಸಿದ ಘಟನೆಗಳೇ ಹೆಚ್ಚು. ಕೆಲವೊಮ್ಮೆ ಸಾವು-ನೋವಿನ ವಿಷಾದಕರ ಸುದ್ದಿಯೂ ಇರುತ್ತದೆ.

    ಆಳವಾದ ಚಿಂತನೆ ಮಾಡಿದರೆ, ಈ ಆನೆಗಳನ್ನು ನಾಡಿಗೆ ಬರ ಮಾಡಿಕೊಂಡದ್ದೇ ನಮ್ಮವರು. ತಮ್ಮ ಸ್ವಾರ್ಥಕ್ಕೆ ಅವರು ನಾನಾ ಕಾರಣಗಳಿಗೆ ಕಾಡನ್ನು ಕಡಿದು ಉರುಳಿಸಿದರು. ಅಭಿವೃದ್ಧಿಯ ನಾಮದಲ್ಲಿ ಜಲ ವಿದ್ಯುತ್, ಗಣಿಕಾರಿಕೆ, ರೈಲ್ವೆ ಹಳಿ, ರಿಸಾರ್ಟ್, ಸುರಂಗ, ಹೆದ್ದಾರಿ ಅನ್ನುತ್ತಾ ಎಲ್ಲಡೆ ಕೊಡಲಿ ಬೀಸಿದರು. ಕೃಷಿ ಭೂಮಿಯ ಒತ್ತುವರಿಯೆಂದು ಸಾಕಷ್ಟು ಅರಣ್ಯವನ್ನು ಧ್ವಂಸ ಮಾಡಿದರು. ಈಗ ಮೂಕ ಪ್ರಾಣಿ-ಪಕ್ಷಿಗಳು ದಿಕ್ಕುಪಾಲಾಗಿ ಚದುರಿಕೊಂಡವು. ಅದರಲ್ಲಿ ವಿಶೇಷವಾಗಿ ಈ ಗಜಪಡೆಯಂತೂ ತಾವು ತಮ್ಮ ಹಿರಿಯರಿಂದ ಗುರುತಿಸಿಕೊಂಡಿದ್ದ ಹಾದಿಯನ್ನು ಮರೆತು ಹೋದವು. ಈ ಸೇಡನ್ನು ತೀರಿಸಿಕೊಳ್ಳುವ ಅವು ಕಾಡಿನಿಂದ ನಾಡಿನತ್ತ ನುಗ್ಗಿದವು. ಅವುಗಳಿಗೆ ಕಬ್ಬಿನ ತೋಟ, ಪಚ್ಚೆ ಪೈರಿನ ಹೊಲಗದ್ದೆ, ಕಾಫಿ ತೋಟ, ಬಾಳೆಗಿಡಗಳ ಕೃಷಿ ಇತ್ಯಾದಿಗಳೇ ರುಚಿ ಅನಿಸಿದವು. ಸರಕಾರವು ಕಾಡು ಕಡಿದು ಕೃತಕವಾಗಿ ಸೃಷ್ಟಿಸಿದ ಗಿಡ-ಮರಗಳನ್ನು ಅವು ಮೂಸಿಯೂ ನೋಡಲಿಲ್ಲ.

    ಆನೆಗಳು ಯಾವತ್ತೂ ಕಾಡಿನ ಒಂದೇ ನೆಲೆಯಲ್ಲಿ ವಾಸವಾಗಿರುವುದಿಲ್ಲ. ಅವು ಆಹಾರವನ್ನು ಹುಡುಕುತ್ತಾ ಸಾವಿರಾರು ಕಿ.ಮೀ. ದೂರಕ್ಕೆ ಚಲಿಸಿಕೊಂಡೇ ಸಾಗುತ್ತವೆ. ಮನುಷ್ಯರಂತೆ ಆನೆಗಳು ಸಂಘ ಜೀವಿಗಳು. ಅವು ಒಗ್ಗಟ್ಟಿನಿಂದಲೇ ಜೀವನ ಸಾಗಿಸುತ್ತವೆ. ತಾತ-ಮುತ್ತಾತ, ಮಾವ-ಮಾಮಿ, ಚಿಕ್ಕಪ್ಪ-ಚಿಕ್ಕಮ್ಮ, ಅವರ ಮಕ್ಕಳು ಮರಿಗಳೆಂದು ಸುಮಾರು 60 ರಿಂದ 70 ಮಂದಿ ಸದಸ್ಯರು ಇರುತ್ತಾರೆ. ಈ ಗುಂಪಿಗೆ ಹೆಣ್ಣು ಆನೆಯೇ ಯಜಮಾನಿ- ನಾಯಕಿ. ಆಕೆ ಹೇಳಿದಂತೆ ಅವು ಎಲ್ಲಾ ನೀತಿ-ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ಕುಟುಂಬದಿAದ ಹೊರ ದೂಡುತ್ತವೆ.

    ಈ ಬಂಧು-ಬಳಗವು ದಿನದ ಹದಿನೆಂಟು ತಾಸುಗಳನ್ನು ಆಹಾರ ತಿನ್ನವುದರಲ್ಲಿಯೇ ಕಳೆದುಕೊಳ್ಳುತ್ತವೆ. ಅವರ ದೈತ ದೇಹಕ್ಕೆ ಹಸಿವು ಹೆಚ್ಚು. ದಿನನಿತ್ಯ ಅವುಗಳಿಗೆ ಸುಮಾರು 25 ರಿಂದ 30 ಕೆ.ಜಿ.ಯಷ್ಟು ಆಹಾರಬೇಕು. ಹಾಗೆ 150 ರಿಂದ 180 ಲೀಟರ್‌ನಷ್ಟು ನೀರು ಬಾಯಾರಿಕೆಗೆ ಬೇಕು. ಬೇಸಿಗೆಯಲ್ಲಿ ಸ್ಥಳೀಯ ಜಲಧಾರೆಯು ಬತ್ತಿಕೊಂಡರೆ, ಮುಂದೆ ಎಲ್ಲಿ ನೀರು ಸಿಗುತ್ತದೆ ಅನ್ನುವ ಪರಿಜ್ಞಾನ ಅವುಗಳ ಹಿರಿಯರಿಗಿದೆ. ಈಗ ಅವು ಮೇವುವನ್ನು ಹುಡುಕುತ್ತಾ, ನೀರು ಅರಸುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತವೆ.

    ಕೆಲವು ಬಾರಿ ಅವು ಒಂದು ಪಶ್ಚಿಮ ಘಟ್ಟದಿಂದ, ಇನ್ನೊಂದು ಪಶ್ಚಿಮ ಘಟ್ಟಕ್ಕೆ ಪ್ರಯಾಣ ಬೆಳೆಸುತ್ತವೆ. ದಿನಕ್ಕೆ ಸುಮಾರು 20 ರಿಂದ 25 ಕಿ.ಮೀ. ದೂರ ಸಾಗುತ್ತ, ಸಾವಿರಾರು ಕಿ.ಮೀ. ಕ್ರಮಿಸುತ್ತವೆ. ಕರ್ನಾಟಕದಿಂದ ಕೇರಳದ ದಟ್ಟಡವಿಯಲ್ಲಿ ಸಾಗಿದರೂ ಅವು ಮತ್ತೆ ಹಿಂತಿರುಗಿ ಬರುವ ದಾರಿಯನ್ನು ಯಾವತ್ತೂ ಮರೆಯುವುದಿಲ್ಲ. ನಮ್ಮಂತಹ ಮನುಷ್ಯರಿಗೆ ಹೀಗೆ ಕಾಡಿನಲ್ಲಿ ದಾರಿ ತಪ್ಪುವುದೇ ಹೆಚ್ಚು. ಆಗ ಹುಡುಕಾಡಲು ಆಧುನಿಕ ಸೌಲಭ್ಯಗಳು ಬೇಕು. ಇಲ್ಲದಿದ್ದರೆ ಈ ಚಕ್ರವ್ಯೂಹದಿಂದ ಹೊರಬರುವುದೇ ಕಷ್ಟ. ಆದರೆ ಆನೆಗಳು ಈ ಹಾದಿಯನ್ನು ತಮ್ಮ ಹಿರಿಯರಿಂದ ಅರಿತುಕೊಳ್ಳುತ್ತವೆ. ಯಾವ ಋತುಮಾನದಲ್ಲಿ ಯಾವ ಕಡೆ ಸಾಗಬೇಕು ಅನ್ನುವುದು ಕಲಿತುಕೊಂಡಿರುತ್ತವೆ. ಇದು ಅವರಿಗೆ ಅನುಭವದಲ್ಲಿ ದಕ್ಕಿದ ಪಾಠ. ಪರಂಪರೆಯ ಜ್ಞಾನ!

    ಈಗ ಮನುಷ್ಯ ಈ ಹಾದಿಯನ್ನೇ ಕಡಿದು ಹಾಕಿದರೆ ಆನೆಗಳು ಏನು ಮಾಡಬೇಕು? ಯಾರ ತಂಟೆಗೂ ಹೋಗದೆ ಕಾಡಿನಲ್ಲಿ ಹಾಯಾಗಿದ್ದ ಅವು ದಿಕ್ಕು ತಪ್ಪಿ ಎತ್ತ ಸಾಗಬೇಕು? ಆಗ ಕಾಣಿಸಿಕೊಳ್ಳುವುದೇ ನಮ್ಮ ನಾಡು! ನಮ್ಮ ಕಾಡ ಹತ್ತಿರದ ಊರು!

    ಆನೆಗಳಲ್ಲಿ ಏಷ್ಯಾ ಖಂಡದ ಆನೆಗಳು ಮತ್ತು ಆಫ್ರಿಕಾ ಖಂಡದ ಆನೆಗಳು ಅನ್ನುವ ಎರಡು ವರ್ಗಗಳಿವೆ. ನಮ್ಮ ಆನೆಗಳ ಬೆನ್ನು ಹೊರ ಉಬ್ಬಿಕೊಂಡರೆ, ಅವುಗಳ ಹುಬ್ಬು ಒಳಗಡೆ ಬಾಗಿಕೊಂಡಿರುತ್ತದೆ. ನಮ್ಮಲ್ಲಿ ಗಂಡಿಗೆ ಮಾತ್ರ ದಂತವಿದ್ದರೆ ಆಫ್ರಿಕಾದ ಗಂಡು-ಹೆಣ್ಣಿಗೂ ದಂತಗಳಿವೆ. ಆದರೆ ಎರಡು ಖಂಡದ ಆನೆಗಳ ಜೀವಿತ ಅವಧಿ 60 ರಿಂದ 70 ವರ್ಷಗಳು.

    ಹೆಣ್ಣು ಆನೆ ಯೌವನಕ್ಕೆ ಕಾಲಿಡಲು 10 ರಿಂದ 12 ವರುಷಗಳು ಬಏಕು. ಅವುಗಳ ಗರ್ಭಧಾರಣೆಗೆ ಯಾವುದೇ ಋತುಮಾನದ ಅಗತ್ಯವಿಲ್ಲ. ಆದರೆ ಮರಿ ಆನೆ ತಾಯಿಯ ಗರ್ಭದಿಂದ ಹೊರಬರಲು 22 ರಿಂದ 23 ಮಾಸಗಳ ವರೆಗೆ ಕಾಯಬೇಕು. ಅಂದರೆ ಸುಮಾರು ಎರಡು ವರುಷಗಳಿಗೆ ಹತ್ತಿರ! ಹೆಚ್ಚಾಗಿ ಒಂದೇ ಮರಿ ನೀಡುವ ಆನೆಯೂ ಕೆಲವು ಬಾರಿ ಮಾತ್ರ ಅವಳಿಗಳಿಗೆ ಜನ್ಮ ನೀಡುತ್ತವೆ. ವಿಶೇಷವೆಂದರೆ ಆಗ ತಾನೆ ಹುಟ್ಟಿದ ಮರಿಯಾನೆಯೂ ಎದ್ದು ನಿಲ್ಲುತ್ತದೆ.

    ಗಜಲಕ್ಷ್ಮಿ ಈ ಮಗುವನ್ನು ಬಹು ಜಾಗ್ರತೆಯಿಂದ ಲಾಲನೆ-ಪಾಲನೆ ಮಾಡುತ್ತದೆ. ಸದಾ ಇವುಗಳನ್ನು ಗುಂಪಿನ ನಡುವೆ ಇಟ್ಟುಕೊಂಡೇ ಸಾಗುತ್ತವೆ. ಏಕೆಂದರೆ ಹುಲಿ ಮತ್ತು ಕತ್ತೆ ಕಿರುಬ ಇವುಗಳ ಅಜಾತ ಶತ್ರುಗಳು. ಇದನ್ನು ತಿಂದು ಮುಗಿಸಲು ಅವು ಸದಾ ಹೊಂಚು ಹಾಕಿರುತ್ತವೆ. ಹೀಗಾಗಿ ಬಾಣಂತಿಯಾದ ತಾಯಿಯೂ ಅದರ ರಕ್ಷಣೆಯಲ್ಲಿ ರಾತ್ರಿ ನಿದ್ದೆಯೂ ಸರಿಯಾಗಿ ಮಾಡದು.

    ಅಂದ ಹಾಗೆ ಆನೆಗಳಿಗೆ ನಿದ್ರೆ ಕಡಿಮೆ. ಇಡೀ ದಿನದಲ್ಲಿ ಅವು 4-5 ತಾಸು ಮಲಗಿದರೆ ಅದೇ ಹೆಚ್ಚು. ಬಹುತೇಕ ಅವು ನಿಂತುಕೊಂಡೇ ನಿದ್ರಿಸುತ್ತವೆ. ಅನುಕೂಲ ಕಂಡರೆ ಮಾತ್ರ ನೆಲಕ್ಕೆ ಒರಗಿಕೊಳ್ಳುತ್ತವೆ. ಇವುಗಳ ಶ್ರವಣ ಶಕ್ತಿ ಅದೆಷ್ಟು ತೀವ್ರವೆಂದರೆ, ಕಾಡಿನ ಮರದಿಂದ ಸಣ್ಣ ಕಾಯಿ ಬಿದ್ದರೂ ಅವು ಗ್ರಹಿಸಿಕೊಳ್ಳಬಹುದು. ಅದೇ ರೀತಿ ವಾಸನೆ ಗ್ರಂಥಿಯೂ ಸೂಕ್ಷ್ಮ. ಅದೇಷ್ಟು ದೂರದ ಮರದಲ್ಲಿ ಹಲಸಿನ ಹಣ್ಣುಗಳು ಪಕ್ವವಾದರೆ ಅದು ತಿಳಿದುಕೊಳ್ಳಬಹುದು. ನೆಲ್ಲಿಕಾಯಿ, ಬಿದಿರು, ಹುಣಸೆಕಾಯಿ, ಮಾವು ಮತ್ತು ಕಬ್ಬು ಇವುಗಳಿಗೆ ಪ್ರಿಯವಾದ ತಿನಿಸು. ಊರಿನ ಬೆಲ್ಲವೆಂದರೂ ಇಷ್ಟ.

    ಆನೆಗಳಿಗೆ ನೀರಾಟವೆಂದರೆ ತುಂಬಾ ಸಂತೋಷ. ಹೀಗಾಗಿ ಅವು ನದಿ ತೀರದಲ್ಲಿ, ಸರೋವರದ ಬಳಿ ಹೆಚ್ಚಾಗಿ ಕಾಣಿಸಕೊಳ್ಳುತ್ತವೆ. ಅವುಗಳಿಗೆ ಬೆವರು ಗ್ರಂಥಿಗಳಿಲ್ಲದ ಕಾರಣ, ಅವು ದೇಹದ ಉಷ್ಣತೆಯನ್ನು ತನ್ನ ವಿಶಾಲವಾದ ಕಿವಿಗಳಿಂದ ಚಾಮರದಂತೆ ಬೀಸಿಕೊಂಡು ತಂಪು ಮಾಡಿಕೊಳ್ಳುತ್ತವೆ. ಕೆಲವು ಬಾರಿ ಇಂತಹ ನೀರಿನಲ್ಲಿ ಮುಳುಗಿ ಪರಿಹಾರ ಹುಡುಕುತ್ತವೆ. ಅದರ ಸೊಂಡಿಲು ಬಲಿಷ್ಠವಾದರೂ, ತುಂಬಾ ಮೃದುವಾಗಿದೆ. ಸೊಂಡಲಿನ ತುದಿಯಲ್ಲಿ ಅದಕ್ಕೆ ನಮ್ಮ ಬೆರಳಿನಂತಹ ಅಂಗವಿದೆ. ಇದರಿಂದ ಅದು ಸಣ್ಣ ಅಡಿಕೆಯನ್ನೂ ಹೆಕ್ಕಿ ಕೊಡಬಲ್ಲದು. ಕಣ್ಣುಗಳು ಅತೀ ಚಿಕ್ಕದಿದ್ದರೂ, ಬಲು ದೂರದವರೆಗೆ ನೋಟ ಹರಿಸಬಹುದು. ತನ್ನ ಜೊತೆಗೆ ಶತ್ರುತ್ವವನ್ನು ಬೆಳೆಸಿದವರ ಪರಿಚಯವನ್ನು ಬಹಳಷ್ಟು ಕಾಲ ಮರೆಯದೆ ಇಡಬಹುದು. ಎರಡು ಹೊರ ದಂತಗಳAತೂ ಹುಲಿಯಂತಹ ಶತ್ರುಗಳನ್ನು ಎದುರಿಸಲು, ಮರದ ತೊಗಟೆಯನ್ನು ಸೀಳಿ ತೆಗೆಯಲು ನೆರವು ನೀಡುತ್ತದೆ. ಆದರೆ ದವಡೆಗಳಂತೂ ತನ್ನ ಜೀವಿತ ಅವಧಿಯಲ್ಲಿ ಆರು ಬಾರಿ ಉದುರಿ ಮತ್ತೆ ಹುಟ್ಟಿಕೊಳ್ಳುತ್ತವೆ. ದಿನದಲ್ಲಿ ಸುಮಾರು 16-18 ತಾಸುಗಳು ಅವು ಮೇಯುವ ಕಾರ್ಯದಲ್ಲಿ ನಿರಂತರವಾಗಿರುವಾಗ, ಅವು ಸವೆದು ಹೋಗುತ್ತವೆ. ಏಳನೇ ಬಾರಿ ಈ ಹಲ್ಲುಗಳು ಹುಟ್ಟಿಕೊಳ್ಳುವುದಿಲ್ಲ. ಅಷ್ಟರಲ್ಲಿ ಅದಕ್ಕೆ ಮುದಿತನ ಆವರಿಸಿಕೊಂಡಿರುತ್ತದೆ. ಆಗ ಅದಕ್ಕೆ ಜಗಿಯುವ ಶಕ್ತಿಯೇ ಇರದು. ಕೆಲವು ಬಾರಿ ಅವು ಈ ಕಾರಣವಾಗಿಯೇ ಉಪವಾಸ ಬಿದ್ದು ಸಾವನ್ನು ಅಪ್ಪುತ್ತವೆ. ಅದು ಪ್ರಕೃತಿ ನಿಯಮ.

    ಆನೆಯು ಅದೆಷ್ಟೇ ದೈತ ಇರಲಿ, ಮನುಷ್ಯನು ಮಾತ್ರ ಅದಕ್ಕಿಂತ ಬುದ್ಧಿವಂತ. ಅನಾದಿ ಕಾಲದಿಂದಲೂ ಆತ ಆನೆಯ ಬಲ, ಸಾಮರ್ಥ್ಯ ಶಕ್ತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದಾನೆ. ಇದನ್ನು ವಶಪಡಿಸಿಕೊಂಡರೆ ತನಗೆ ಆಗದಿರುವ ಅನೇಕ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದೆಂದು ಲೆಕ್ಕಾಚಾರ ಹಾಕಿದ್ದಾನೆ. ಹೀಗಾಗಿ ಆ ಬೆಟ್ಟದಂತಹ ಆ ಕಾಡು ಪ್ರಾಣಿಯನ್ನೇ ತನ್ನ ಅಂಕುಶದಲ್ಲಿ ಬಂಧಿಸಿ ನೆಲಕ್ಕೆ ಕೆಡವಿದ್ದಾಣೆ. ಮನುಷ್ಯನ ಮೋಹದ ಜಾಲದ ಖೆಡ್ಡಾ'ಕ್ಕೆ ಬಿದ್ದ ಆನೆಯಂತೂ ಮೋಸ ಹೋಗಿದೆ. ಅದು ಮಾವುತನಿಂದ ತರಬೇತಿ ಪಡೆದು, ತನ್ನ ಪ್ರತಿಭಟನೆ, ಒರಟುತನ, ಆಕ್ರೋಶ, ಸಿಟ್ಟು, ಆವೇಶ ಎಲ್ಲವನ್ನೂ ತ್ಯಜಿಸಿ ಸಾಧುವಾಗಿದೆ. ಆತನ ಎಲ್ಲಾ ಕೆಲಸಕ್ಕೂಜೀ ಹುಜೂರ್’ಯೆಂದು ಒಪ್ಪಿಕೊಂಡಿದೆ. ತನ್ನ ದೈತ್ಯ ಬಲದ ಶಕ್ತಿಯನ್ನು ಮರೆತು ಬಾಲ ಮುದುಡಿ ಮೌನವಾಗಿದೆ. ತನ್ನ ಕಂಬದAತಹ ಕಾಳಿಗೆ ಜುಜುಬಿ ಹಗ್ಗ ಕಟ್ಟಿದರೂ ಅದು ಕಬ್ಬಿಣದ ಸರಪಳಿಯೆಂದೇ ಭಾವಿಸಿಕೊಂಡಿದೆ. ಐದಡಿ-ಆರಡಿ ಮನುಷ್ಯನಿಗೆ, ಆತ ಕುಬ್ಬ, ಅಲ್ವ ಅನ್ನುವುದೇ ಮರೆತು ಹೋಗಿದೆ.

    ಒಂದು ವೇಳೆ ಅದು ತನ್ನ ನೈಜ ಕೋಪದಲ್ಲಿ ಸೊಂಡಿಲು ಬಳಸಿದರೆ, ಮನುಷ್ಯನ ದೇಹದ ಮೂಳೆಗಳು ಲಟಲಟನೆ ಮುರಿದು ಹೋಗಬಹುದು. ತಲೆಯು ಬಲವಾದ ಪಾದದ ಅಡಿಯಲ್ಲಿ ಬಂದರೆ ಬುರುಡೆಯೇ ಇರದು. ಕೂಡಲೇ ಅಪ್ಪಚ್ಚಿಯಾಗಿ ಸಿಡಿದು ಹೋಗಬಹುದು!

    ಆದರೆ ಬುದ್ಧಿವಂತ ಮನುಷ್ಯನು ಅದನ್ನೂ ರಾಜ-ಮಹಾರಾಜರ ಕಾಲದಿಂದಲೂ ಯೋಗ್ಯವಾಗಿ ಬಳಸಿಕೊಂಡಿದ್ದಾನೆ. ಘೋರ ಕಾಳಗವೇ ಇರಲಿ, ಸಣ್ಣ ಪುಟ್ಟ ಯುದ್ಧಗಳೇ ಇರಲಿ, ಅದರ ಮೇಲೆ ಹತ್ತಿ ಶತ್ರುಗಳನ್ನು ಸದೆ ಬಡೆದಿದ್ದಾನೆ- ಯಾರೂ ಸಾಗದ ನದಿ, ಬೆಟ್ಟ, ಗುಡ್ಡ, ಕಾಡುಗಳನ್ನು ಬಳಸಿ ದುರ್ಗಮ ಹಾದಿಯನ್ನೂ ಸವೆದಿದ್ದಾನೆ. ಯುದ್ಧದ ಸಾಮಗ್ರಿ ಹಾಗೂ ಆಹಾರ ವಸ್ತುಗಳ ಭಾರವಾದ ವಸ್ತುಗಳನ್ನು ಅದರ ಬೆನ್ನು ಮೇಲೆ ಏರಿಕೊಂಡು ಅದರ ಉಪಯೋಗ ಪಡೆದಿದ್ದಾನೆ. ಕೆಲವೊಮ್ಮೆ ಅದರ ಮೇಲೆ ಅಂಬರಿಯನ್ನೂ ಕಟ್ಟಿ ರಾಜ-ಮಹಾರಾಜರಿಗೆ ಊರ ಸವಾರಿಯನ್ನೂ ಮಾಡಿಸಿದ್ದಾನೆ.

    ದೊಡ್ಡ ದೊಡ್ಡ ಮರದ ದಿಮ್ಮಿಗಳಾಗಲಿ, ದೇವಸ್ಥಾನ ನಿರ್ಮಾಣದ ಕಲ್ಲು ಬಂಡೆಗಳಾಗಲಿ ಅದನ್ನು ಸಾಗಿಸಲು ಈ ಆನೆಗಳನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸೈನಿಕ ಪಡೆಯಲ್ಲಿ ಆನೆಗಳ ಸಂಖ್ಯೆಯೇ ದೊಡ್ಡ ಬಲವಾಗಿತ್ತು. ಈ ಆನೆಗಳು ಭಾರತದಿಂದ ಮುಂದೆ ಅನೇಕ ರಾಷ್ಟçಗಳಿಗೆ ಪ್ರಯಾಣವೂ ಬೆಳೆಸಿದವು. ಅವು ಅಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡವು.

    ಇರ್ಶಾದ್ ಮೂಡಬಿದ್ರೆ

  • ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಸುಲೈಮಾನ್ ಅಲ್-ಉಬೈದ್ – ಪ್ಯಾಲೆಸ್ಟೀನಿಯನ್ ಪೀಲೆ ಎಂಬ ಪ್ರಸಿದ್ಧಿ ಪಡೆದ ಹೆಮ್ಮೆಯ ಆಟಗಾರ. ಗಾಝಾ ಸಮುದ್ರ ಕಿನಾರೆಯ ಮರಳಿನ ಮೇಲೆ ಚೆಂಡನ್ನು ಒದೆಯಲು ಪ್ರಾರಂಭಿಸಿ, ನಂತರ ಬೀಚ್ ಸರ್ವೀಸಸ್ ಕ್ಲಬ್‌ನಲ್ಲಿ ಗಾಝಾ ಸ್ಪೋರ್ಟ್ಸ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದವರು. ರಾಷ್ಟಿçÃಯ ತಂಡಕ್ಕಾಗಿ ನೂರಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಸುಲೈಮಾನ್, 2010ರ ಪಶ್ಚಿಮ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಯೆಮೆನ್ ವಿರುದ್ಧದ ತನ್ನ ಕತ್ತರಿ ಕಿಕ್ ಗೋಲಿನೊಂದಿಗೆ ಮತ್ತೆ ಸೆಲೆಬ್ರಿಟಿಯಾದರು. ಅವರು ಸ್ಥಳೀಯ ಮಕ್ಕಳಿಗೆ ತರಬೇತುದಾರರಾಗಿದ್ದಾರಲ್ಲದೆ 24 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ಯಾಲೆಸ್ಟೀನಿಯನ್ ಧ್ವಜವನ್ನು ಹೊತ್ತಿದ್ದರು.

    ಇಷ್ಟೆಲ್ಲಾ ಇದ್ದು ಕೊನೆಗೆ ಏನಾಯಿತು? ಅವರು ಹುಟ್ಟಿದ ಸ್ಥಳ ಗಾಝಾ ಆಗಿಹೋಯಿತು. ಕಲೆ/ಕ್ರೀಡೆಗಳ ಮೇಲಿನ ಪ್ರೀತಿಯು ಮಾನವೀಯತೆ ಹೊಂದಿರುವವರಿಗೆ ಮಾತ್ರ ಇರುವ ಗುಣಗಳಾಗಿವೆ. ಹಸಿವಿನ ಬೆಂಕಿಯ ವಿರುದ್ಧ ಹೋರಾಡುತ್ತಿರುವ ಗಾಝಾದ ಮಕ್ಕಳನ್ನು ಜನಾಂಗೀಯ ಬಾಣಲೆಯಲ್ಲಿ ಉರಿಯುವ ಪೈಶಾಚಿಕ ವೀರರಿಗೆ ಫುಟ್‌ಬಾಲ್ ಆದರೇನು? ಅದರ ಆಟಗಾರ ಆದರೇನು ಮುಗ್ಧ ಮಕ್ಕಳಾದರೇನು ಎಲ್ಲವೂ ಒಂದೇ, ಸುಲೈಮಾನ್ ಅಲ್-ಉಬೈದ್ ಅವರ ದೃಷ್ಟಿಯಲ್ಲಿ ಕೇವಲ ಮರಣ ಕೂಪಕ್ಕೆ ಒದೆಯಲ್ಪಡಬೇಕಾದ ಓರ್ವ ಗಾಝಾದ ವ್ಯಕ್ತಿ ಮಾತ್ರ. ಇತ್ತೀಚೆಗೆ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸಿದ ಶೆಲ್ ದಾಳಿಯಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ವಿಶ್ವವಿಖ್ಯಾತ ಆಟಗಾರ ಕೊಲ್ಲಲ್ಪಟ್ಟರು. ಫೆಲಸ್ತೀನ್‌ನಲ್ಲಿ ಕೊಲ್ಲಲ್ಪಟ್ಟ 61400 ಮನುಷ್ಯರ ಪೈಕಿ ಒಂದು ಅಂಕೆ ಆದರು.

    ಫೆಲೆಸ್ತೀನ್‌ನಲ್ಲಿ ಹುತಾತ್ಮರಾದ ಸಾವಿರಾರು ಫೆಲೆಸ್ತೀನಿಯನ್ನರಂತೆ, ಸುಲೇಮಾನ್ ಸುಂದರ ಜೀವನದ ಕನಸು ಕಂಡಿದ್ದರು. ಫುಟ್‌ಬಾಲ್ ಅವರ ಸರ್ವಸ್ವವಾಗಿತ್ತು. ಗಾಝಾ ಯುದ್ಧಭೂಮಿಯಲ್ಲಿ ಇಸ್ರೇಲಿ ಬೆಂಕಿಯ ಮಳೆ ಸುರಿಯುತ್ತಿದ್ದಾಗ ಫುಟ್‌ಬಾಲ್ ಆಡುತ್ತಿದ್ದ ಸುಲೇಮಾನ್‌ಗೆ, ಅವನ ಹೆಂಡತಿ ದುವಾ ಮತ್ತು ಐದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಜವಾಬ್ದಾರಿ ಇತ್ತು ಐವತ್ತು ವರ್ಷದವರೆಗೆ ಫುಟ್‌ಬಾಲ್ ಆಡುವುದು, ತನ್ನ ಮಕ್ಕಳನ್ನು ರಾಷ್ಟ್ರ ಹೆಮ್ಮೆಪಡುವಂತಹ ವ್ಯಕ್ತಿತ್ವಗಳಾಗಿ ಬೆಳೆಸುವುದು – ಇವು ನಲವತ್ತೊಂದು ವರ್ಷದ ಸುಲೇಮಾನ್ ಕನಸಾಗಿತ್ತು. ಕಲಾವಿದರು, ಕ್ರೀಡಾಪಟುಗಳು, ವಿವಿಧ ತಜ್ಞರು ಮತ್ತು ಮಾಧ್ಯಮ ಕಾರ್ಯಕರ್ತರು ಸೇರಿದಂತೆ ಫೆಲೆಸ್ತೀನಿಯನ್ನರು ಸಾವು ಬರುವವರೆಗೂ ಇಂತಹ ಸುಂದರ ಕನಸಿನೊಂದಿಗೆ ಬದುಕುತ್ತಿರುತ್ತಾರೆ.

    ಕುಟುಂಬದ ಹಸಿವು ತಣಿಸಲು ಸುಲೇಮಾನ್ ನಿರಾಶ್ರಿತರ ಶಿಬಿರದ ಬಳಿಯ ಆಹಾರ ವಿತರಣಾ ಕೇಂದ್ರದಲ್ಲಿ ಸರದಿಯಲ್ಲಿ ಕಾಯುತ್ತಿದ್ದರು. ಆಹಾರಕ್ಕಾಗಿ ಸರದಿ ಸಾಲಿನಲ್ಲಿ ನಿಂತವರ ಮೇಲೆ ಪ್ರಪಂಚದ ಮೌನ ಬೆಂಬಲದೊಂದಿಗೆ ಜಿಯೋನಿಸ್ಟ್ ಸೈನ್ಯವು ಕ್ಷಿಪಣಿಗಳ ಮಳೆ ಸುರಿಸಿದಾಗ ಕೊಲ್ಲಲ್ಪಟ್ಟ 1,500 ಜನರಲ್ಲಿ ಸುಲೇಮಾನ್ ಅಲ್-ಒಬೈದ್ ಒಬ್ಬರು. ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (UEFA) ಕಾಟಾಚಾರಕ್ಕೆ ಎರಡು ಗೆರೆಯ ಸಂತಾಪ ಸೂಚಿಸಿತು. “ಫೆಲಸ್ತೀನ್ ಪೀಲೆ ಸುಲೇಮಾನ್ ಅಲ್-ಒಬೈದ್‌ಗೆ ಭಾವಪೂರ್ಣ ವಿದಾಯ ಅವರು ಕತ್ತಲೆಯ ಕಾಲದಲ್ಲೂ ಅಸಂಖ್ಯಾತ ಮಕ್ಕಳಿಗೆ ಭರವಸೆಯ ಕಿರಣ ಮೂಡಿಸಿದ ಪ್ರತಿಭಾವಂತ” ಎಂದು UEFAಯ Xನಲ್ಲಿ ಬರೆಯಿತು. ಈ ಸಂದೇಶವು ಸುಲೇಮಾನ್, ಗಾಝಾವನ್ನು ಪ್ರೀತಿಸುವ ಮತ್ತು ಮಾನವೀಯತೆಯನ್ನು ಪ್ರೀತಿಸುವವರಿಗೆ ಅರಗಿಸಿಕೊಳ್ಳಲಾಗಲಿಲ್ಲ.

    ಸುಲೇಮಾನ್ ನಿವೃತ್ತರಾದದ್ದಲ್ಲ, ಅವರು ವೃದ್ಧಾಪ್ಯದಿಂದ ಸಾಯಲಿಲ್ಲ, ಅವರು ಮೈದಾನದಲ್ಲಿ ಆಘಾತದಿಂದ ಸತ್ತದ್ದಲ್ಲ. ಅವರನ್ನು ಇಸ್ರೇಲ್ ಎಂಬ ಕ್ರೂರ ಸೈನ್ಯವು ಕೊಂದು ಹಾಕಿದ್ದು ಎಂಬುದು ಹಾಡು ಹಗಲಿನಂತೆ ಸ್ಪಷ್ಟವಾಗಿದ್ದರೂ ಕೊಂದ ಹಂತಕರ ಹೆಸರನ್ನು ಉಲ್ಲೇಖಿಸಲು ಹಿಂಜರಿಕೆ ಏಕೆ ಎಂಬುದೇ ಎಲ್ಲರ ಪ್ರತಿಕ್ರಿಯೆಯಾಗಿತ್ತು. ಫೆಲೆಸ್ತೀನ್‌ನ ಎಲ್ಲಾ ಕಹಿ ಮತ್ತು ನೋವನ್ನು ತನ್ನ ಎದೆಗೆ ಹಾಕಿಕೊಂಡಿರುವ ಲಿವರ್‌ಪೂಲ್‌ನ ಈಜಿಪ್ಟ್ ತಾರೆ ಮೊಹಮ್ಮದ್ ಸಲಾಹ್, UEFA ಅಥವಾ ಅವರಂತೆಯೇ ನಿದ್ರಿಸುತ್ತಿರುವ ಇಡೀ ಜಗತ್ತನ್ನು ಕೇಳುತ್ತಿದ್ದಾರೆ, “ಅವರು ಎಲ್ಲಿ, ಹೇಗೆ ಮತ್ತು ಏಕೆ ಸತ್ತರು ಎಂದು ನೀವು ನಮಗೆ ಹೇಳಬಲ್ಲಿರಾ?” ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದ ಸಂದೇಶವಾಗಿತ್ತದು, ಇಸ್ರೇಲಿಗೆ ಮಾಮೂಲಿಯಾಗಿದ್ದ ಒಂದು ಹತ್ಯೆಯನ್ನು ಜಗತ್ತನ್ನು ನಡುಗಿಸುವ ಪ್ರಶ್ನೆಯನ್ನಾಗಿ ಪರಿವರ್ತಿಸಲು ಇದಕ್ಕೆ ಸಾಧ್ಯವಾಯಿತು.

    ಜಿಯೋನಿಸ್ಟ್ ಭಯೋತ್ಪಾದನೆಯ ವಿರುದ್ಧ ಮೊದಲ ದಿನದಿಂದಲೂ ಸಲಾಹ್ ಫೆಲಸ್ತೀನಿಯನ್ನರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

    ಮುಗ್ಧ ಜೀವಗಳು ಸೇರಿದಂತೆ 62,000ಕ್ಕೂ ಹೆಚ್ಚು ಮಾನವ ಜೀವಗಳ ಸಾಮೂಹಿಕ ಹತ್ಯೆಯ ಹೊರತಾಗಿಯೂ ರಕ್ತಪಿಪಾಸು ಆಗಿಯೇ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವ ಇಸ್ರೇಲ್ ಅನ್ನು ತಹಬಂದಿಗೆ ತರಲು ಜಗತ್ತಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಅವರ ಪ್ರಶ್ನೆ.

    ಅತ್ಯಂತ ಸಣ್ಣ ಪ್ರದೇಶದಲ್ಲಿ. ಯುದ್ಧ ಭೀತಿಯ ನಡುವೆ, ನಿರಂತರ ದಿಗ್ಬಂಧನದ ನಡುವೆಯೂ ಅದನ್ನು ಲೆಕ್ಕಿಸದೆ ತಾವು ಇಷ್ಟಪಟ್ಟ ರಂಗಗಳಲ್ಲಿ ಗಾಝಾದ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅತ್ಯುತ್ತಮ ವೈದ್ಯಕೀಯ ತಜ್ಞರು, ಪ್ರಸಿದ್ಧ ಶಿಕ್ಷಣ ತಜ್ಞರು, ಅಂತರಾಷ್ಟಿçÃಯವಾಗಿ ಗುರುತಿಸಲ್ಪಟ್ಟ ಕಲಾವಿದರು ಮತ್ತು ಪತ್ರಕರ್ತರು ಮರಣ ಭೀತಿಯ ನಡುವೆಯು ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್ಗೆ ತಮ್ಮನ್ನು ಅರ್ಪಿಸಿಕೊಂಡ ಯುವಕರು… ಹೀಗೆ ಗಾಝಾದ ಜನತೆಯು ವಿಶ್ವದ ಅಸಾಧಾರಣ ಹಾಗೂ ಅದ್ಭುತವಾದ ಮಾನವ ಸಂಪನ್ಮೂಲವಾಗಿದೆ.

    ಇಸ್ರೇಲ್, ಕ್ಷಿಪಣಿಗಳು ಮತ್ತು ಹಸಿವಿನಿಂದ ಅವರನ್ನು ನಾಶಪಡಿಸುತ್ತಿದೆ ಅವರು ಇಲ್ಲಿಯವರೆಗೆ ಗಾಝಾದಲ್ಲಿ 103 ಮಕ್ಕಳು ಸೇರಿದಂತೆ 421 ಫುಟ್ಬಾಲ್ ಆಟಗಾರರನ್ನು ಕೊಂದಿದ್ದಾರೆ. ದೊಡ್ಡ ಕ್ರೀಡಾಂಗಣಗಳು ಮತ್ತು ಸಣ್ಣವುಗಳು ಸೇರಿದಂತೆ 268 ಕ್ರೀಡಾಂಗಣಗಳನ್ನು ಕೆಡವಿದ್ದಾರೆ. ಝಿಯೋನಿಸ್ಟ್ ನರಮೇಧವು ಗಾಝಾದಲ್ಲಿ ಹತ್ತಾರು ಸಾವಿರ ಮುಗ್ಧ ಜನರನ್ನು ಕೊಲ್ಲುತ್ತಿದೆ. ಹಸಿವು ಹಾಗೂ ಬಾಂಬುಗಳ ಭೀತಿಯ ನಡುವೆ ಅವರು ನಿರ್ಮಿಸಿರುವ ಮಹಾನ್ ಮಾನವ ನಾಗರಿಕತೆಯನ್ನು ಸಹ ನಾಶಪಡಿಸುತ್ತಿದೆ. ಮೊಹಮ್ಮದ್ ಸಲಾಹ್ ಅವರು ಎತ್ತಿರುವ ಪ್ರಶ್ನೆಯು ಒಂದು ಸಣ್ಣ ಬೆರಳನ್ನು ಎತ್ತಲೂ ಕೂಡ ಸಾಧ್ಯವಾಗದೇ ಲೋಕದಲ್ಲಿ ಮೆರೆದಾಡುತ್ತಿರುವ ಅಧಿಕಾರ ಶಾಹಿ ಜಗತ್ತಿನ ಮುಂದೆ, ಅದರ ಕಪಟತೆಯ ವಿರುದ್ಧ ಬೀಸಿದ ಚಾಟಿಯೇಟು ಆಗಿದೆ.
    ಮುರ್ಶಿದ್ ಅಲಿ

  • ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

    ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

    ಮುಹಮ್ಮದರು(ಸ) ಪ್ರವಾದಿಯಾಗಿದ್ದರು. ದೇವನು ಇವರನ್ನು ಜನರಿಗೆ ದೇವನ ಆದೇಶ ಮತ್ತು ಸದ್ವಿವೇಕವನ್ನು ಕಲಿಸಿ ಕೊಡಲಿಕ್ಕಾಗಿ ಕಳುಹಿಸಿಕೊಟ್ಟರು. ಇವರು ಜಗತ್ತು ಕಂಡ ಅದ್ವಿತೀಯ ಶಿಕ್ಷಕರಾಗಿದ್ದರು. ಮುಹಮ್ಮದರು ಮೊತ್ತ ಮೊದಲು ಮದೀನಾದ ಮಸೀದಿಯ ಒಂದು ಭಾಗದಲ್ಲಿ ಶಿಕ್ಷಣ ಕೇಂದ್ರವನ್ನು ಆರಂಭಿಸಿದರು. ಅಲ್ಲಿ ಸರಿ ಸುಮಾರು 70ರಿಂದ 80 ವಿದ್ಯಾರ್ಥಿಗಳಿದ್ದರು. ಪ್ರವಾದಿಯವರಿಂದ ನೇರವಾಗಿ ಶಿಕ್ಷಣ ಮತ್ತು ತರಬೇತಿಯನ್ನು ಗಳಿಸಿದವರಿಗೆ ಅವರ ಪ್ರತಿಭೆ ಸಾಮರ್ಥ್ಯಗಳ ಆಧಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಅವರ ಪೈಕಿ ಕೆಲವರು ಶಿಕ್ಷಕರಾಗಿಯೇ ಮುಂದುವರಿದರು. ಕೇವಲ ಮದೀನಾದಲ್ಲಿ ಮಾತ್ರವಲ್ಲ ಜಗತ್ತಿನ ವಿವಿಧೆಡೆಗಳಲ್ಲಿ ಹೆಚ್ಚಾಗಿ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು ಮತ್ತು ದೊಡ್ಡ ಸಂಖ್ಯೆಯ ಶಿಕ್ಷಕ ವೃಂದವನ್ನು ಹೊಂದಿದ್ದರು.

    ಶಿಕ್ಷಕ ಎಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದರ(ಸ) ಜೀವನದಿಂದ ನಾವು ಗಳಿಸಬೇಕಾದ ಪಾಠಗಳು ಸಾಕಷ್ಟಿವೆ. ಇವುಗಳ ಪೈಕಿ ಮೊದಲನೆಯದು ಅವರ ಮಾದರಿ ಜೀವನ. ಪ್ರವಾದಿ ಮುಹಮ್ಮದರು(ಸ) ಸದಾ ಹೇಳುತ್ತಿದ್ದುದನ್ನು ಜೀವನದಲ್ಲಿಯೂ ಪಾಲಿಸಿ ತೋರಿಸುತ್ತಿದ್ದರು. ಇದರಿಂದಾಗಿ ಜನರಿಗೆ ಅವರನ್ನು ಅನುಸರಿಸಲು ಸುಲಭವಾಯಿತು. ಇತರರಿಗೆ ಬೋಧಿಸುತ್ತಾ ಎಲ್ಲ ವಿಷಯಗಳನ್ನು ಚಾಚು ತಪ್ಪದೆ ಸ್ವಂತ ಪಾಲಿಸಿದಾಗ ಜನರಿಗೆ ಅವರ ಆಜ್ಞೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಸುಲಭವಾಗುತ್ತದೆ. ಇದರ ಕಾರಣದಿಂದಾಗಿ ಅವರಿಂದ ಶಿಕ್ಷಣವನ್ನು ಗಳಿಸಿದವರ ಜೀವನದಲ್ಲಿಯೂ ಅವರ ಶಿಕ್ಷಣ ತರಬೇತಿಯ ಪ್ರತಿಫಲನವು ಕಂಡುಬರುತ್ತಿತ್ತು. ನಮ್ಮ ಶಿಕ್ಷಕ ವೃಂದವು ಈ ಆದರ್ಶವನ್ನು ಅಳವಡಿಸಿಕೊಂಡರೆ ಮಾದರಿ ಸಮಾಜವನ್ನು ಕಟ್ಟಿ ಬೆಳೆಸಲು ಖಂಡಿತ ಸಹಾಯಕವಾಗಬಹುದು.

    ಯಾರನ್ನು ಸುಶಿಕ್ಷಿತರನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದರೋ ಅವರೊಂದಿಗೆ ಪ್ರವಾದಿಯವರು(ಸ) ಆತ್ಮೀಯವಾಗಿ ಒಡನಾಟ ಇಟ್ಟುಕೊಂಡಿದ್ದರು. ಪ್ರವಾದಿಯವರ ಒಡನಾಟದಿಂದಾಗಿ ಅನೇಕ ಜನರು ಶೂನ್ಯದಿಂದ ಎತ್ತರಕ್ಕೆ ಬೆಳೆದರು. ಜೀತದಾಳು ಆಗಿದ್ದ ಬಿಲಾಲ್ ಆಪ್ತ ಸಂಗಾತಿಯಾಗಿ ಮಾರ್ಪಟ್ಟರು. ಜಗಳಗಂಟಿಯಾಗಿದ್ದ ಝುಬೇರ್ ಸೇನಾನಿಯಾಗಿ ಮಾರ್ಪಟ್ಟರು. ಮಿತಬಾಷಿಯಾಗಿದ್ದ ಮಿಸ್‌ಅಬ್ ಬಿನ್ ಉಮೈರ್ ಪ್ರವಚನಕಾರರಾದರು. ಬೇಟೆಗಾರರಾಗಿದ್ದ ಹಂಝ ಸೇನಾ ಪಡೆಯ ನಾಯಕರಾದರು. ಮುಂಗೋಪಿಯಾಗಿದ್ದ ಉಮರ್ ನಾಯಕರಾಗಿ ಮಾರ್ಪಟ್ಟರು. ಗೃಹಿಣಿ ಯಾಗಿದ್ದ ಆಯಿಷ ಉಪದೇಶಕಿ ,ವೈದ್ಯಕೀಯ ಮತ್ತು ಸಂಖ್ಯಾಶಾಸ್ತ್ರದ ತಜ್ಞೆಯಾಗಿ ಬೆಳೆದು ನಿಂತರು. ನಮ್ಮ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅವರ ಆಗುಹೋಗುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅವರೊಂದಿಗೆ ಒಡನಾಡಿದ್ದೆ ಆದರೆ ಖಂಡಿತವಾಗಿಯೂ ಮಕ್ಕಳ ಪ್ರತಿಭೆಗಳನ್ನು ಸಕಾರಾತ್ಮಕಾಗಿ ಬೆಳೆಸಬಹುದಾಗಿದೆ.

    ಪ್ರವಾದಿಯವರು(ಸ) ಶಿಕ್ಷಣ ನೀಡುತ್ತಿದ್ದ ವಿಧಾನವೇ ಬಹಳ ಸುಂದರ .ವಿವಿಧ ರೀತಿಯ ಪರಿಕಲ್ಪನೆಗಳನ್ನು ವಿವರಿಸಲು ಹಲವಾರು ಉದಾಹರಣೆಗಳನ್ನು ಅವರು ಬಳಸುತ್ತಿದ್ದರು. ಸಾಮಾನ್ಯ ಮನುಷ್ಯನ ಮೆದುಳು ವಿಷಯವನ್ನು ಅರ್ಥಮಾಡಿಕೊಳ್ಳಲು ಹಲವಾರು ಮಿತಿಗಳನ್ನು ಹೊಂದಿರುತ್ತದೆ .ಆದುದರಿಂದ ಉದಾಹರಣೆಗಳ ಮೂಲಕ ವಿಷಯಗಳನ್ನು ತುಂಬಾ ಸರಳವಾಗಿ ಅರ್ಥ ಮಾಡಿಸಿಕೊಡಬಹುದಾಗಿದೆ.
    ಪ್ರವಾದಿ ಮುಹಮ್ಮದರು(ಸ) ಹೇಳಿದರು: “ಯಾರ ಕೈಯಲ್ಲಿ ನನ್ನ ಆತ್ಮ ಇದೆಯೋ ಅವನ ಆಣೆ .ಸತ್ಯ ವಿಶ್ವಾಸಿಯ ಉದಾಹರಣೆಯು ಜೇನುನೊಣದಂತಿದೆ. ಅದು ಶುದ್ಧ ಮತ್ತು ಆರೋಗ್ಯಕರವಾದದನ್ನು ಮಾತ್ರ ತಿನ್ನುತ್ತದೆ. ಶುದ್ಧವಾದದನ್ನು ಮತ್ತು ಉಪಯುಕ್ತವಾದದ್ದನ್ನೇ ನೀಡುತ್ತದೆ.”

    “ಮರುಭೂಮಿಯಲ್ಲಿ ತನ್ನ ಒಂಟೆಯನ್ನು ಕಳೆದುಕೊಂಡು ವ್ಯಥೆಪಡುವಂತಹ ವ್ಯಕ್ತಿಗೆ ಅನಿರೀಕ್ಷಿತವಾಗಿ ಆ ಒಂಟೆ ಮರಳಿ ಸಿಗುವಾಗ ಆಗುವ ಖುಷಿಗಿಂತಲೂ ತನ್ನ ಪಾಪಗಳಿಗೆ ಪ್ರಾಯಶ್ಚಿತಪಟ್ಟು ಮರಳುವ ದಾಸನ ಬಗ್ಗೆ ದೇವನು ಹೆಚ್ಚು ಸಂತೋಷಗೊಳ್ಳುತ್ತಾನೆ” ಈ ರೀತಿಯ ಮನಮುಟ್ಟುವ ಉದಾಹರಣೆಗಳನ್ನು ಯಾರು ಸುಲಭದಲ್ಲಿ ಮರೆತುಬಿಡುವುದಿಲ್ಲ .ನಮ್ಮ ಶಿಕ್ಷಕರು ಈ ಉದಾಹರಣೆಗಳ ಮೂಲಕ ಮಕ್ಕಳಿಗೆ ಪಾಠ ಮನದಟ್ಟು ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು.

    ಕೆಲವರಿಗೆ ತಮ್ಮ ವಿದ್ವತ್ತನ್ನು ಅತಿಯಾಗಿ ಪ್ರದರ್ಶಿಸುವ ಅಭ್ಯಾಸವಿರುತ್ತದೆ. ಅಂತಹವರು ಕಠಿಣ ಪದಗಳನ್ನು ಬಳಸುವ ಮೂಲಕ ವಿಷಯಗಳನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಇದು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ವ್ಯಕ್ತಿಗೆ ವಿಷಯ ಅರ್ಥವಾಗಬೇಕೆಂದರೆ ಅದು ಸರಳವಾಗಿರಬೇಕು. ಸಂಕ್ಷಿಪ್ತವಾಗಿರಬೇಕು ಮತ್ತು ನೇರವಾದ ನುಡಿಯಾಗಿರಬೇಕು. ಪ್ರವಾದಿ ಮುಹಮ್ಮದರ(ಸ) ಜೀವನದುದ್ದಕ್ಕೂ ಅವರು ಬಳಸಿದಂತಹ ಕೆಲವು ವಚನಗಳು ನಮ್ಮ ಗಮನವನ್ನು ಸೆಳೆಯುತ್ತದೆ. ಎಷ್ಟು ಸಣ್ಣ ಮತ್ತು ನೇರವಾದ ನುಡಿಗಳ ಮೂಲಕ ಒಂದು ದೊಡ್ಡ ವಿಷಯವನ್ನು ಪ್ರಸ್ತುತಪಡಿಸಬಹುದು ಎಂಬ ಕಲೆಯನ್ನು ನಾವು ಪ್ರವಾದಿಯವರ ಶಿಕ್ಷಣ ರೀತಿಯಿಂದ ಅರ್ಥಮಾಡಿಕೊಳ್ಳಬಹುದು. ಸ್ವಚ್ಛತೆಯು ವಿಶ್ವಾಸದ ಅರ್ಧಾಂಶವಾಗಿದೆ. ಕುಡಿಯುವ ನೀರನ್ನು ಮೊದಲು ಗಮನಿಸಿ ನೋಡಿ. ವಿನಮ್ರತೆಯು ವಿಶ್ವಾಸದ ಒಂದು ಭಾಗವಾಗಿದೆ .ಸ್ವರ್ಗವು ತಾಯಿಯ ಪಾದದಡಿಯಲ್ಲಿದೆ. ನಿಮ್ಮ ನೆರೆಹೊರೆಯವರಿಗೂ ನಿಮ್ಮ ಮೇಲೆ ಹಕ್ಕಿದೆ. ಸಭ್ಯತೆ ವಿಶ್ವಾಸದ ಅರ್ಧಾಂಶವಾಗಿದೆ. ಅನುಚಿತ ವರ್ತನೆಯು ಅನ್ಯಾಯವಾಗಿದೆ. ಈ ರೀತಿಯ ಸುಲಭವಾದ ನೇರವಾದ ಸಂದೇಶಗಳು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆನಪಿಟ್ಟುಕೊಳ್ಳಲು ಮತ್ತು ಅನುಸರಿಸಲು ಸಾಧ್ಯವಾಗುತ್ತದೆ.

    ಕಲಿಕೆಯ ಮಧ್ಯೆ ವಿರಾಮ ನೀಡುವುದು ಬಹಳ ಮುಖ್ಯ. ಪ್ರವಾದಿಯವರು ಇದನ್ನು ಚೆನ್ನಾಗಿ ಬಳಸುತ್ತಿದ್ದರು. ಜನರಿಗೆ ಬೇಸರವಾಗದಂತೆ ಸೂಕ್ತ ಸಮಯವನ್ನು ಉಪದೇಶ ನೀಡಲು ಆರಿಸಿಕೊಳ್ಳುತ್ತಿದ್ದರು. ಧರ್ಮೋಪದೇಶ ಮತ್ತು ಜ್ಞಾನ ಸಂಪಾದನೆ ಸಹಚರರಿಗೆ ಬೇಸರ ಮತ್ತು ಹೊರೆಯಾಗದಂತೆ ನೋಡಿಕೊಂಡರು. ಕೆಲವೊಮ್ಮೆ ಅವರು ಸಹಚರರಿಗೆ ಹೊಸದಾಗಿ ಏನನ್ನು ಕಲಿಸುತ್ತಿರಲಿಲ್ಲ. ಅದಕ್ಕೆ ಅವರೊಡನೆ ಕಾರಣವನ್ನು ಕೇಳಿದಾಗ ಹೆಚ್ಚು ಹೊರೆ ಮಾಡಲು ಬಯಸುವುದಿಲ್ಲ ಎಂದು ಉತ್ತರಿಸಿದರು. ಪ್ರವಾದಿಯವರು ತರಬೇತಿಗಳ ನಡುವೆ ಮನಸ್ಸನ್ನು ಉಲ್ಲಾಸಗೊಳಿಸುವಂತೆ ವಿರಾಮ ನೀಡುವುದರಲ್ಲಿ ನಂಬಿಕೆಯನ್ನು ಹೊಂದಿದ್ದರು. ಆಧುನಿಕ ಶಿಕ್ಷಣ ವ್ಯವಸ್ಥೆಯು ಕೇವಲ ಅಂಕಿಗಳ ಸುತ್ತ ಗಿರಕಿ ಹೊಡೆಯುತ್ತಿರುವುದರಿಂದ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿನ ಶಾಲೆಗಳು ಮರೆತಿವೆ. ಪಠ್ಯೇತರ ಚಟುವಟಿಕೆಗಳಿಗಾಗಿ ಆ ತೋಟಗಳಿಗಾಗಿ ಮೀಸಲಾಗಿರುವ ತರಗತಿಗಳನ್ನು ಇತರ ವಿಷಯಗಳನ್ನು ಕಲಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಈ ಮೂಲಕ ಮಕ್ಕಳಿಗೆ ವಿರಾಮ ಮತ್ತು ಮನಸ್ಸಿಗೆ ಉಲ್ಲಾಸ ಸಿಗುವ ಅವಕಾಶದಿಂದಲೂ ವಂಚಿತಗೊಳಿಸಲಾಗುತ್ತಿದೆ. ಈ ಬಗ್ಗೆ ಶಿಕ್ಷಕರು ವಿಶೇಷ ಗಮನವನ್ನು ಹರಿಸಬೇಕು.

    ಪ್ರವಾದಿಯವರು(ಸ) ಎಂದೂ ಸುದೀರ್ಘವಾಗಿ ವಿಷಯ ಮಂಡನೆ ಮಾಡುತ್ತಿರಲಿಲ್ಲ. ಕೇಳುಗರು ಆಲಿಸಲು ಬಯಸಿದ್ದಾರೆ ಎಂಬAತಹ ಪರಿಸ್ಥಿತಿ ಇದ್ದ ಸ್ಥಳದಲ್ಲಿ ಮಾತ್ರ ಅವರು ಮಾತನಾಡುತ್ತಿದ್ದರು. ಕೇಳುಗರನ್ನು ದಣಿಯುವಂತೆ ಮಾಡುವುದು ಪ್ರವಾದಿಯವರಿಗೆ ಇಷ್ಟವಿರಲಿಲ್ಲ .ಆದುದರಿಂದ ಕಲಿಯುವ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಹಂತ ತಲುಪದ ಹಾಗೆ ಶಿಕ್ಷಕರು ನೋಡಿಕೊಳ್ಳಬೇಕು ಮತ್ತು ಕಲಿಕೆಯನ್ನು ಮಕ್ಕಳು ಆಸ್ವಾದಿಸಿ ಕಲಿಯುವಂತಹ ವಾತಾವರಣವನ್ನು ತರಗತಿಯಲ್ಲಿ ಉಂಟು ಮಾಡಬೇಕು.

    ಪ್ರವಾದಿಯವರು(ಸ) ಯಾವುದಾದರೂ ಪ್ರಮುಖ ವಿಷಯವನ್ನು ಪ್ರಸ್ತಾಪಿಸುವಾಗ ಅದನ್ನು ಮೂರು ಬಾರಿ ಪುನರಾವರ್ತಿಸುತ್ತಿದ್ದರು. ಇದರಿಂದ ವಿಷಯವು ಸರಿಯಾಗಿ ಅರ್ಥವಾಗುತ್ತಿತ್ತು. ವಿವರಣೆಗಾಗಿ ಚಿತ್ರಗಳನ್ನು ಬಳಸುವುದು ಪ್ರವಾದಿಯವರ ಶಿಕ್ಷಣದ ಒಂದು ಪ್ರಮುಖ ಮಾಧ್ಯಮವಾಗಿತ್ತು. ಚಿಕ್ಕ ಆಕೃತಿಯ ಮೂಲಕ ವಿಷಯಕ್ಕೆ ಯಾವ ರೀತಿಯಲ್ಲಿ ಅದನ್ನು ಜೋಡಿಸಬಹುದು ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ರಸಪ್ರಶ್ನೆಗಳನ್ನು ಕೇಳುವುದು ಪ್ರವಾದಿಯವರಿಗೆ ಇಷ್ಟವಾದಂತಹ ಒಂದು ವಿಧಾನವಾಗಿತ್ತು. ಜನರಿಗೆ ಪ್ರಶ್ನೆಯನ್ನು ಕೇಳಿ, ಅವರು ಯೋಚಿಸುವಂತೆ ಮಾಡಿ ಜೀವನಕ್ಕೆ ಸಂಬAಧಿಸಿದ ವಿವಿಧ ಅಂಶಗಳನ್ನು ಅವರು ಅರಿತುಕೊಳ್ಳುವಂತೆ ಮಾಡುತ್ತಿದ್ದರು. ಇದೇ ವಿಧಾನವನ್ನು ನಮ್ಮ ಶಿಕ್ಷಕರು ಅಳವಡಿಸಿಕೊಳ್ಳಬಹುದು.
    ಕಥೆಗಳಿಗೆ ಎಲ್ಲ ಕಾಲಗಳಲ್ಲೂ ತನ್ನದೇ ಆದ ಮಹತ್ವವಿರುತ್ತದೆ.

    ಪ್ರವಾದಿಯವರು ಸಣ್ಣ ಸಣ್ಣ ಕಥೆಗಳನ್ನು ಹೇಳುವ ಮೂಲಕ ಸಂಗಾತಿಗಳಲ್ಲಿ ಜ್ಞಾನದ ಹಣತೆಯನ್ನು ಹಚ್ಚುತ್ತಿದ್ದರು. ಪ್ರವಾದಿಯವರು(ಸ) ಹೇಳಿದ ಕಥೆಯೊಂದು ಹೀಗಿದೆ: ನಾಯಿಯೊಂದು ಬಾವಿಯ ಸುತ್ತಲೂ ಓಡಾಡುತ್ತಿತ್ತು. ಅದು ಬಾಯಾರಿಕೆಯಿಂದ ಬಳಲಿತ್ತು. ಬನೀ ಇಸ್ರಾಈಲರಿಗೆ ಸೇರಿದ್ದ ದುರಾಚಾರಿ ಒಬ್ಬಳು ಈ ಸ್ಥಿತಿಯಲ್ಲಿ ನಾಯಿಯನ್ನು ನೋಡಿದಳು. ಅವಳು ತನ್ನ ಚರ್ಮದ ಕಾಲು ಚೀಲವನ್ನು ತೆಗೆದು ತಾನು ಧರಿಸಿದ್ದ ಮೇಲು ಹೊದಿಕೆಗೆ ಕಟ್ಟಿದಳು. ಅದನ್ನು ಇಳಿಬಿಟ್ಟು ಬಿಟ್ಟು ಬಾವಿಯಿಂದ ನೀರು ಸೇರಿದಳು. ನಂತರ ಅದನ್ನು ನಾಯಿಗೆ ಕುಡಿಯಲು ಕೊಟ್ಟಳು. ಈ ಕೃತ್ಯದಿಂದಾಗಿ ಆಕೆಯ ಹಿಂದಿನ ಪಾಪಗಳನ್ನು ಕ್ಷಮಿಸಲಾಯಿತು.

    ಆಧುನಿಕ ತಂತ್ರಜ್ಞಾನದ ಮಧ್ಯೆ ಬೆಳೆಯುತ್ತಿರುವ ಮಕ್ಕಳೂ, ನಮ್ಮ ಶಿಕ್ಷಕರ ಬಾಯಿಂದ ಕಥೆಗಳನ್ನು ಕೇಳುವುದನ್ನು ಇಷ್ಟಪಡುತ್ತಾರೆ. ಆದುದರಿಂದ ನೀತಿ ಬೋಧಕ ಕಥೆಗಳನ್ನು ಮಕ್ಕಳಿಗೆ ಹೇಳಲು ಶಿಕ್ಷಕರು ಆಸಕ್ತಿ ತೋರಬೇಕು.
    ಇತರರನ್ನು ತೆಗಳದಿರುವುದು ಅವಮಾನಿಸದಿರುವುದು ಪ್ರವಾದಿಯವರ(ಸ) ವಿಶೇಷ ಗುಣವಾಗಿತ್ತು. ತಪ್ಪುಗಳು ಯಾರಿಂದಲೂ ಸಂಭವಿಸಬಹುದು. ಆದರೆ ಸಾರ್ವಜನಿಕವಾಗಿ ವ್ಯಕ್ತಿಯನ್ನು ಅವನ ತಪ್ಪಿಗಾಗಿ ಅವಹೇಳನ ಮಾಡುವುದು ಸರಿಯಲ್ಲ. ಪ್ರವಾದಿಯವರು(ಸ) ಎಂದೂ ಈ ವಿಧಾನವನ್ನು ಬಳಸಲಿಲ್ಲ. ಅವರು ವೈಯಕ್ತಿಕವಾಗಿ ಅವರನ್ನು ಕರೆಸಿ ವಿಷಯವನ್ನು ಮನವರಿಕೆ ಮಾಡಿಸಿ ನಯವಾಗಿ ಇನ್ನು ಮುಂದೆ ಹೀಗೆ ಮಾಡಬಾರದು ಎಂದು ತಿಳಿಸುತ್ತಿದ್ದರು. ಸಹನೆಯಿಂದ ತಪ್ಪನ್ನು ತಿದ್ದಿ ಹೇಳುತ್ತಿದ್ದರು. ಈ ಅಭ್ಯಾಸವನ್ನು ಕೂಡ ನಮ್ಮ ಶಿಕ್ಷಕರು ತಮ್ಮ ಜೀವನದ ಭಾಗವಾಗಿಸಬೇಕು. ಸಣ್ಣಪುಟ್ಟ ವಿಷಯಗಳಿಗೂ ಜೀವನವನ್ನೇ ಮುಗಿಸಬೇಕು ಎಂಬ ಒತ್ತಡದೊಂದಿಗೆ ಬದುಕುತ್ತಿರುವ ಆಧುನಿಕ ಯುಗದ ಮಕ್ಕಳ ಮಧ್ಯೆ ಅವರಿಗೆ ಶಿಕ್ಷಣವನ್ನು ನೀಡುವ ಶಿಕ್ಷಕರು ಸಹನೆಯ ಮೂರ್ತಿಗಳಾಗಿ ವರ್ತಿಸಬೇಕು .ಎಂದೂ ಯಾವ ಮಕ್ಕಳನ್ನು ಅವಮಾನಿಸುವುದು ತೆಗಳುವುದು ಸಲ್ಲದು. ಒಂದು ವೇಳೆ ಈ ಅಭ್ಯಾಸ ನಮ್ಮಲ್ಲಿದ್ದರೆ ಅದನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು.

    ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಶಿಕ್ಷಣ ತರಬೇತಿ ನೀಡಲು ಪ್ರವಾದಿ ಮುಹಮ್ಮದರು(ಸ) ತಾಕೀತು ಮಾಡಿರುವರು. ನೀವು ನಿಮ್ಮ ಮಕ್ಕಳಿಗೆ ಕೊಡುವ ಅತ್ಯುತ್ತಮವಾದಂತಹ ಉಡುಗೊರೆ ಅದು ಉತ್ತಮ ತರಬೇತಿ ಮತ್ತು ಶಿಕ್ಷಣವಾಗಿದೆ ಎಂಬ ಪ್ರವಾದಿ ವಚನ ಬಹಳ ಮಾರ್ಮಿಕವಾದುದಾಗಿದೆ. ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡುವ ಓಟದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿಯನ್ನು ನೀಡಲು ವಿಫಲರಾಗುವ ಹೆತ್ತವರು ಜೀವಿಸುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ .ಪ್ರವಾದಿ ಮುಹಮ್ಮದರ(ಸ) ಈ ಶಿಕ್ಷಣ ರೀತಿಯನ್ನು ಹೆತ್ತವರು ಮತ್ತು ಶಿಕ್ಷಕರು ಅಳವಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಬದಲಾವಣೆ ಗೋಚರಿಸಬಹುದು.

    ಸಬೀಹ ಫಾತಿಮ, ಮಂಗಳೂರು

  • ಇಸ್ರೇಲಿನಿಂದ ಕೊಲ್ಲಲ್ಪಟ್ಟ ಗಾಝ ವರದಿಗಾರ ಅನಸ್: 
ಜಗತ್ತಿಗೆ ಮಾಡಿದ ಕೊನೆಯ ವಿನಂತಿಯೇನು?

    ಇಸ್ರೇಲಿನಿಂದ ಕೊಲ್ಲಲ್ಪಟ್ಟ ಗಾಝ ವರದಿಗಾರ ಅನಸ್: ಜಗತ್ತಿಗೆ ಮಾಡಿದ ಕೊನೆಯ ವಿನಂತಿಯೇನು?

    ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ವಾರ್ತಾ ಮಾಧ್ಯಮಗಳಲ್ಲಿ ಒಂದು ಟ್ವೀಟ್ ಸಂದೇಶ ಬಹಳ ವೈರಲ್ ಆಗಿದೆ. ಅದು ಗಾಝ ನಗರದಾದ್ಯಂತ ಇಸ್ರೇಲ್ ಎಂಬ ನರಹಂತಕರ ಬಾಂಬರ್ ಮತ್ತು ಮಿಸೈಲ್ ಆಕ್ರಮಣದ ಲೈವ್ ರಿಪೋರ್ಟ್ ಮಾಡುತ್ತಿದ್ದ ಅಲ್ ಜಝೀರ ಚಾನೆಲ್‌ನ ಅನಸ್ ಅಲ್ ಶರೀಫ್ ಅವರ ಬರಹ.

    ನಿರೀಕ್ಷೆಯಂತೆ ಏಕದೇವೋಪಾಸನೆಯನ್ನು ಉಚ್ಚರಿಸುತ್ತಾ ರಕ್ತದಾಹಿಗಳ ಮಿಸೈಲ್‌ಗಳಿಗೆ ತಲೆಯೊಡ್ಡಿ ವೀರ ಮರಣವನ್ನಪ್ಪಿದ ಅನಸ್ ಅಲ್ ಶರೀಫ್ ಅವರ ಹುತಾತ್ಮತೆಯು ಕಸ್ತೂರಿಯ ಪರಿಮಳದಂತೆ ಜಗತ್ತಿನಾದ್ಯಂತ ಪಸರಿಸಿದೆ. ಗಾಝ ನಗರದಾದ್ಯಂತ (ವಂಶಹತ್ಯೆಯ ರಣಭೂಮಿ) ಓಡಾಡುತ್ತಾ ಅಲ್ ಜಝೀರಾದ ಕ್ಯಾಮರ ಮತ್ತು ಮೈಕ್ ನೊಂದಿಗೆ ವಂಶಹತ್ಯೆಯ ದೃಶ್ಯವನ್ನು ಹೊರಜಗತ್ತಿಗೆ ತಿಳಿಸುತ್ತಿದ್ದ ಆ ಧೀರ ಯೋಧ ತನ್ನ ಸಂದೇಶವನ್ನು ಉಯಿಲು ಬರೆದು ಇನ್ನಿಲ್ಲದ ಲೋಕಕ್ಕೆ ಮರಳಿದ್ದಾರೆ.

    ಇದು ಅವರ ಟ್ವೀಟ್ ಸಂದೇಶದ ಸಾರಾಂಶ
    ಇದು ನನ್ನ ಕೊನೆಯ ಉಯಿಲು ಮತ್ತು ಸಂದೇಶ. ನನ್ನ ಈ ಮಾತು ನಿಮಗೆ ತಲುಪುವುದಿದ್ದರೆ ನನ್ನ ಶಬ್ದವನ್ನಡಗಿಸುವುದರಲ್ಲಿ ಮತ್ತು ನನ್ನನ್ನು ವಧಿಸುವುದರಲ್ಲಿ ಇಸ್ರೇಲ್ ಯಶಸ್ಸಿಯಾಗಿದೆ ಎಂದು ತಿಳಿಯಿರಿ. ಸರ್ವಶಕ್ತನ ಶಾಂತಿ ಮತ್ತು ಕರುಣೆ ನಿಮ್ಮ ಮೇಲಿರಲಿ. ಜಬಾಲಿಯ ಅಭಯಾರ್ಥಿ ಶಿಬಿರದಲ್ಲಿ ಮತ್ತು ಪರಿಸರದಲ್ಲಿ ನಾನು ಬದುಕಿಗೆ ಕಣ್ಣು ತೆರೆದಂದಿನಿAದ ನಾನು ನನ್ನ ಶಕ್ತಿ ಮತ್ತು ಸಾಮರ್ಥ್ಯಕ್ಕನುಸಾರ ಎಲ್ಲಾ ರೀತಿಯ ಕಠಿಣ ಪ್ರಯತ್ನ ಮತ್ತು ಸಹಕಾರ ನನ್ನ ಜನರಿಗೆ ನಾನು ನೀಡುತ್ತಾ ಬಂದಿದ್ದೇನೆ ಎಂದು ಸೃಷ್ಟಿಕರ್ತನಿಗೆ ಗೊತ್ತು. ನನ್ನ ಕುಟುಂಬ ಮತ್ತು ತಾಯ್ನಾಡಿನ ಜನತೆಯೊಂದಿಗೆ ನನ್ನ ಹುಟ್ಟೂರಾದ ಅಶ್ಕಲೋನಿಯಾಗೆ ಮರಳಲು ಸಾಧ್ಯವಾಗುವ ರೀತಿಯಲ್ಲಿ ನನ್ನ ಆಯಸ್ಸು ಹೆಚ್ಚಾಗಲಿ ಮತ್ತು ನನ್ನ ಮರಣ ಸಂಭವಿಸದಿರಲಿ ಎಂದು ನಾನು ಬಯಸಿದ್ದೆ. ಆದರೆ ವಿಧಿಯಾಟವನ್ನು ಬಲ್ಲವರಾರು. ಸೃಷ್ಟಿಕರ್ತನ ತೀರ್ಮಾನ ಬೇರೆಯೇ ಆಗಿತ್ತು. ಅವನ ಇಚ್ಛೆಯೇ ಅಂತಿಮ.

    ಬದುಕಿನ ಎಲ್ಲಾ ಸಂಕಟದಲ್ಲೂ ಮತ್ತು ಸಂಕಷ್ಟದಲ್ಲೂ ನಾನು ತುಂಬಾ ನೊಂದಿದ್ದೇನೆ. ಆದರೂ ನನ್ನ ವೃತ್ತಿಯಲ್ಲಿ ಯಾವುದೇ ಕಳಂಕ ಮತ್ತು ಅಸತ್ಯದ ಹಾದಿಯನ್ನು ನಾನು ಆಯ್ಕೆ ಮಾಡಿರಲಿಲ್ಲ. ಸತ್ಯವನ್ನು ಅದರ ನಿಜಾರ್ಥದಲ್ಲಿ ಜನರ ಮುಂದಿಡಲು ನಾನು ಹಿಂದೇಟು ಹಾಕಿರಲಿಲ್ಲ. ನಮ್ಮನ್ನು ನಿರ್ಮೂಲನ ಮಾಡಲು ಸಂಕಲ್ಪ ಮತ್ತು ಪ್ರತಿಜ್ಞೆ ಮಾಡಿದವರೊಂದಿಗೆ ಮೌನ ವಹಿಸಿದವರು, ಉಸಿರು ಬಿಗಿಹಿಡಿದವರು, ನಮ್ಮ ಮಕ್ಕಳು ಮತ್ತು ಸ್ತ್ರೀಯರ ಮಾರಣಹೋಮ ಮತ್ತು ಅವುಗಳ ಅವಶೇಷಗಳನ್ನು ನೋಡಿ ಹೃದಯ ಕಂಪಿಸದವರು, ಒಂದೂವರೆ ವರ್ಷಗಳಿಂದ ನಮ್ಮ ಜನತೆ ಅನುಭವಿಸುತ್ತಿರುವ ವಂಶಹತ್ಯೆಯನ್ನು ಮಾಡುವ ಮತ್ತು ಅದನ್ನು ಪ್ರೋತ್ಸಾಹಿಸುವವರ ವಿರುದ್ಧ ಸೃಷ್ಟಿಕರ್ತನು ಸಾಕ್ಷಿಯಾಗಲಿ.

    ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ಹೃದಯ ಮಿಡಿತವಾದ ಫೆಲೆಸ್ತೀನ್ ಅನ್ನು ನಾನು ನಿಮಗೆ ವಹಿಸುತ್ತಿದ್ದೇನೆ. ಸ್ವತಂತ್ರ ಫೆಲೆಸ್ತೀನಿನ ಕನಸು ಮತ್ತು ಸುರಕ್ಷಿತವಾಗಿ ಮತ್ತು ಶಾಂತಿ ಹಾಗೂ ಸಮಾಧಾನದಿಂದ ಬದುಕುವ ಅವಕಾಶವನ್ನು ನಿಷೇಧಿಸಲ್ಪಟ್ಟ ಫೆಲೆಸ್ತೀನ್ ಜನತೆಯ ಮತ್ತು ಪುಟ್ಟ ಮಕ್ಕಳ ಹಾಗೂ ಮರ್ದಿತರನ್ನು ನಾನು ನಿಮಗೆ ಬಿಟ್ಟು ಹೋಗುತ್ತಿದ್ದೇನೆ. ಅವರ ಪವಿತ್ರವಾದ ಶರೀರಗಳು ಮತ್ತು ಅವಶೇಷಗಳು ಗಾಝದ ಬಿರುಕುಬಿಟ್ಟ ಮತ್ತು ಹುಡಿ ಹುಡಿಯಾಗಿ ನೆಲಕ್ಕಪ್ಪಳಿಸಿದ ಕಟ್ಟಡಗಳ ರಾಶಿಗಳ ಮಧ್ಯೆ ಗುರುತು ಪತ್ತೆ ಹಚ್ಚಲ್ಪಡದ ರೀತಿಯಲ್ಲಿ ಅಪ್ಪಚ್ಚಿಯಾಗಿ ಬಿದ್ದುಹೋಗಿವೆ. ಗಡಿ ರೇಖೆಯಲ್ಲಿ ನಿರ್ಬಂಧಗಳ ಕಾರಣದಿಂದ ತಡೆಯಲ್ಪಡಬಾರದೆಂದೂ ನಿಯಂತ್ರಣದ ಕಾರಣದಿಂದ ಮೌನ ವಹಿಸಬಾರದೆಂದೂ ನಾನು ನಿಮಗೆ ಉಪದೇಶಿಸುತ್ತಿದ್ದೇನೆ.

    ನಮ್ಮ ಕೈಯಿಂದ ಕಿತ್ತು ತೆಗೆದ ಫೆಲೆಸ್ತೀನ್ ಎಂಬ ಮಾತೃಭೂಮಿಯ ಗೌರವ ಮತ್ತು ಅಭಿಮಾನ ಹಾಗೂ ಸ್ವಾತಂತ್ರ‍್ಯದ ಪ್ರಕಾಶವಾಗುವ ರೀತಿಯಲ್ಲಿ ನೀವು ಅದರ ವಿಮೋಚನೆಯ ವಾಹಕರಾಗಬೇಕು. ನನ್ನ ಕುಟುಂಬ ಮತ್ತು ನನ್ನ ಬದುಕಿನ ಕಣ್ಣು ಎಂದು ವಿಶ್ಲೇಷಿಸುವ ನನ್ನ ಮುದ್ದಿನ ಮಗಳು ಶಾಮ್ ಇದುವರೆಗೂ ಕನಸು ಕಾಣದಿದ್ದ ಅವಳನ್ನು ನಾನು ನಿಮ್ಮ ಕೈಗಿಡುತ್ತಿದ್ದೇನೆ. ನನ್ನ ಅಮ್ಮನನ್ನ ನಿಮಗೆ ವಹಿಸಿಕೊಡುತ್ತಿದ್ದೇನೆ. ಅವರ ಪ್ರಾರ್ಥನೆ ನನಗೆ ಅನುಗ್ರವಾದೀತು. ನನ್ನ ಪ್ರಿಯ ಪತ್ನಿ ಉಮ್ಮು ಸಲಾಹ್ ಬಯಾನ್ ಳನ್ನು ಕೂಡ ನಾನು ನಿಮಗೆ ವಹಿಸಿಕೊಡುತ್ತಿದ್ದೇನೆ. ಯುದ್ಧ ನಮ್ಮಿಬ್ಬರನ್ನು ತಿಂಗಳುಗಳ ಕಾಲ ಬೇರ್ಪಡಿಸಿತು. ಆದರೂ ಅವಳು ಸನ್ನಿವೇಶವನ್ನರಿತು ಓಲಿವ್ ವೃಕ್ಷದ ಹಾಗೆ ಗಟ್ಟಿಯಾಗಿ ನಿಂತಳು. ಸೃಷ್ಟಿಕರ್ತನ ಹೊರತಾಗಿ ನೀವು ಅವಳನ್ನು ಸುತ್ತುವರಿದು ಅವಳ ಸಂರಕ್ಷಣೆಯನ್ನು ವಹಿಸಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇನೆ.

    ನನಗೆ ತಪ್ಪು ಸಂಭವಿಸಿದ್ದರೆ ನೀವು ನನಗೆ ಕ್ಷಮಿಸಬೇಕು. ನಾನು ನನ್ನ ಕರಾರನ್ನು ಪಾಲಿಸಿದ್ದೇನೆ. ನಾನು ವಹಿಸಿರುವ ದೌತ್ಯವನ್ನು ಚೆನ್ನಾಗಿ ನಿಭಾಯಿಸಿದೆನೆಂಬ ಸಂತೃಪ್ತಿ ನನಗಿದೆ. ಗಾಝವನ್ನು ನೀವೆಂದೂ ಮರೆಯಬಾರದು. ಅದರ ವಿಮೋಚನೆಗಾಗಿ ಮತ್ತು ಸ್ವತಂತ್ರ ಫೆಲೆಸ್ತೀನ್ ಗಾಗಿ ಹಾಗೂ ಫೆಲೆಸ್ತೀನ್ ಜನತೆ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.

    ಸುಮಾರು ಒಂದುವರೆ ವರ್ಷದಿಂದ ಫೆಲೆಸ್ತೀನ್ ಜನತೆ ಇಸ್ರೇಲಿನ ವಂಶಹತ್ಯೆ, ಆಹಾರೋತ್ಪನ್ನಗಳ ತಡೆ, ನಿರಂತರ ಮರ್ದನ, ಲೈಂಗಿಕ ದೌರ್ಜನ್ಯಗಳಿಂದ ಕಂಗೆಟ್ಟು ಹೋಗಿದ್ದಾರೆ. ವಿಶ್ವಸಂಸ್ಥೆ ಮತ್ತು ವಿಶ್ವ ಮಾನವ ಹಕ್ಕು ಹೋರಾಟಗಾರರು ಅಸಾಹಾಯಕರಾಗಿದ್ದಾರೆ. ಇಸ್ರೇಲ್ ಮತ್ತು ಅದಕ್ಕೆ ಬೆನ್ನೆಲುಬಾಗಿ ನಿಂತ ಅಮೇರಿಕ ವಂಶಹತ್ಯೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲವನ್ನೂ ಮೂಕವಾಗಿ ನೋಡುತ್ತಿರುವ ಜಗತ್ತಿನ ಇತರೆಲ್ಲಾ ಸ್ವತಂತ್ರ ರಾಷ್ತ್ರಗಳು ಮೌನವಹಿಸಿವೆ. ಗಾಝ ನಗರದಲ್ಲಿ ಇನ್ನು ಬಾಂಬ್ ವರ್ಷಿಸಲು ಸ್ಥಳವೇ ಇಲ್ಲ ಎಂಬಷ್ಟರ ಮಟ್ಟಿಗೆ ನಶಿಸಿ ಹೋಗಿವೆ.

    ಗಾಝದ ಜನರಿಗೆ ಪತ್ರಕರ್ತರೆಂದರೆ ಎಲ್ಲಿಲ್ಲದ ಸಿಟ್ಟು. ಆದಕ್ಕೆ ಕಾರಣವೂ ಇದೆ. ಸುಳ್ಳು ಸುದ್ಧಿ ಮತ್ತು ಇಸ್ರೇಲ್ ಕಿರಾತಕರು ನಿರಂತರವಾಗಿ ಸುರಿಸುವ ಬಾಂಬರ್‌ಗಳು ಮತ್ತು ಮಿಸೈಲ್‌ಗಳಿಂದ ಸಂಕಷ್ಟದಿAದ ಬದುಕು ಮುನ್ನಡೆಸುತ್ತಿರುವ ಫೆಲೆಸ್ತೀನಿಯರಿಗೆ ಆಹಾರದ ಅಲಭ್ಯತೆಯನ್ನು ಕೂಡ ಸರಿಯಾದ ರೀತಿಯಲ್ಲಿ ವಾರ್ತೆ ನೀಡದಿರುವುದೇ ಅದಕ್ಕೆ ಕಾರಣ. ಮಾತ್ರವಲ್ಲ ಅವರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಾ ಮಹಿಳೆಯರ ಮತ್ತು ಮಕ್ಕಳ ವಂಶ ಹತ್ಯೆಯನ್ನು ವಿಜೃಂಭಿಸುವ ಪತ್ರಕರ್ತರನ್ನು ಅವರಿಗೆ ಕಂಡರಾಗದು. ಆದರೆ ಅನಸ್ ಇವೆಲ್ಲದಕ್ಕಿಂತಲೂ ವಿಭಿನ್ನ. ಅವರು ಸತ್ಯದ ವಾಹಕರು. ಫೆಲೆಸ್ತೀನಿ ಜನತೆಯನ್ನು ಹತ್ತಿರದಿಂದ ತಿಳಿದವರು ಹಾಗೂ ತನ್ನವರಿಗಾಗಿ ಸದಾ ಮಿಡಿಯುವ ಹೃದಯವಂತರು.

    ಇತ್ತೀಚಿಗೆ ವರದಿ ಮಾಡುತ್ತಿದ್ದ ವೇಳೆ ಅನಸ್ ಬಳಲಿ ತನ್ನ ಕ್ಯಾಮಾರದೊಂದಿಗೆ ಕೆಳಗೆ ಬಿದ್ದಾಗ ಜನರು ಈ ರೀತಿ ಆಡುತ್ತಿದ್ದರು. ಅನಸ್ ಎದೆಗುಂದದಿರು, ಸ್ಥೆöÊರ್ಯದಿಂದಿರು. ಧೀರವಾಗಿ ಮುನ್ನುಗ್ಗಿ ದೌತ್ಯವನ್ನು ನಿರ್ವಹಿಸು. ಅನಸ್ ನಂತಹ ನೂರಾರು ಅನಸ್‌ಗಳು ಫೆಲೆಸ್ತೀನ್‌ನಲ್ಲಿ ಹುಟ್ಟಿ ಬರಬಹುದು ಆದರೆ ಅವರಾರು ಅನಸ್‌ಗಳಾಗಲು ಸಾಧ್ಯವಿಲ್ಲ. ಏಕೆಂದರೆ ಅನಸ್‌ರ ವ್ಯಕ್ತಿತ್ವ, ಆತ್ಮ ಸ್ಥೆöÊರ್ಯ ಹಾಗೂ ವೀರಾವೇಶದಿಂದ ತನ್ನ ಕೆಲಸವನ್ನು ನಿರ್ವಹಿಸುವ ಶೈಲಿ ಅದ್ಭುತವಾಗಿತ್ತು.

    ಜನವರಿ ತಿಂಗಳಲ್ಲಿ ಕದನ ವಿರಾಮ ಘೋಷಿಸಲಾಗಿತ್ತು. ಆದರೆ ಇಸ್ರೇಲ್ ಅದನ್ನು ಉಲ್ಲಂಘಿಸಿ ನಿರಂತರವಾಗಿ ಬಾಂಬ್ ಗಳನ್ನು ಸುರಿದ ಪರಿಣಾಮ ಅನಸ್ ಮತ್ತು ಅವರ ಸ್ನೇಹಿತರು ಸೇರಿದಂತೆ ಒಟ್ಟು ಐದು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ 28 ವರ್ಷ ಪ್ರಾಯದ ಅನಸ್ ಗಾಝದ ಹೆಸರಾಂತ ಪತ್ರಕರ್ತನಾಗಿದ್ದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ನಿಷೇಧ ಹೇರಿದ್ದರೂ ಬಹಳ ಅಚ್ಚುಕಟ್ಟಾಗಿ ಧೈರ್ಯದಿಂದ ಅನಸ್ ತನ್ನ ದೌತ್ಯವನ್ನು ನಿರ್ವಹಿಸುತ್ತಿದ್ದರು. ಅವರ ವಧೆ ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಪ್ರತಿಭಟನೆಗೆ ಕಾರಣವಾಗಿದೆ.

    ಇಂದಿನ ಜಗತ್ತು ರಕ್ತದಾಹಿಗಳ ರಣಭೂಮಿಯಾಗಿದೆ, ಯುದ್ಧ ಸರಕು ಮತ್ತು ಆಯುಧ ವ್ಯಾಪಾರಿಗಳ ಮಾರುಕಟ್ಟೆಯಾಗಿದೆ. ಮಾನವೀಯತೆ ನಶಿಸಿ ಹೋದ, ವಂಶಹತ್ಯೆಯನ್ನೇ ಬಂಡವಾಳವಾಗಿಸಿದ ದುರುಳರು ಇಂದು ಜಗತ್ತನ್ನು ಆಳುತ್ತಿದ್ದಾರೆ. ಅದನ್ನು ನೋಡುತ್ತಾ ಮೌನ ಸಮ್ಮತಿಯನ್ನು ನೀಡುವವರು ಅದಕ್ಕಿಂತಲೂ ನೀಚರು. ಅಸಹಾಯಕರಾದ ಬಡಪಾಯಿಗಳನ್ನು ನಿಷ್ಕಾರುಣ್ಯವಾಗಿ ವಧಿಸುವ ವ್ಯಾಘ್ರರಿಗೆ ಗಾಝದ ಜನತೆ ತಕ್ಕ ಪಾಠ ಕಲಿಸುವಂತಾಗಲಿ ಮತ್ತು ಅದಕ್ಕಾಗಿ ಲಕ್ಷಾಂತರ ಅನಸ್‌ಗಳು ಜನ್ಮ ತಾಳಲಿ. ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿ ವೀರ ಮರಣವನ್ನಪ್ಪಿದ ಹುತಾತ್ಮತೆಯ ಉತ್ತುಂಗಕ್ಕೇರಿದ ಅನಸ್‌ರಂತಹ ಮುತ್ತುರತ್ನಗಳು ಸಮಾಜಕ್ಕೆ ಮಾದರಿಯಾಗಲಿ ಎಂಬ ಹಾರೈಕೆ.

    ಅಬ್ದುಸ್ಸಲಾಮ್ ದೇರಳಕಟ್ಟೆ

  • “ಅಪ್ಪಾ ನನ್ನನ್ನು ಕ್ಷಮಿಸಿ” 
Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ ನನ್ನನ್ನು ಕ್ಷಮಿಸಿ” Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಬದುಕು ಮುಂದುವರಿಸಲು ಸಾಧ್ಯವಿಲ್ಲ” ಇದು ನವ ವಿವಾಹಿತೆ ರಿಧನ್ಯಾ ತನ್ನ ಸಾವಿನ ಮೊದಲು ತಂದೆಗೆ ಕಳಿಸಿದ ಧ್ವನಿ ಸಂದೇಶದ ಚುಟುಕು.

    ತಮಿಳುನಾಡಿನ ತಿರುಪುರ ಜಿಲ್ಲೆಯ 27 ವರ್ಷದ ನವವಿವಾಹಿತೆ ರಿಧನ್ಯಾ ಜೂನ್ 28 ರಂದು ದಾಂಪತ್ಯದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಘಟನೆ ತಮಿಳುನಾಡಿನೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಅವಳು ತನ್ನ ಸಾವಿಗೆ ಮೊದಲು ತಂದೆಗೆ ಕಳಿಸಿದ್ದ ಹೃದಯವೇ ಒಡೆಯುವಂತಹ ಧ್ವನಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಮೃತರಾದ ರಿಧನ್ಯಾ, 2025ರ ಏಪ್ರಿಲ್ 11ರಂದು ಕವಿನ್ ಕುಮಾರ್ (28) ಎಂಬವರೊಂದಿಗೆ ವಿವಾಹವಾಗಿದ್ದರು. ವಿವಾಹಕ್ಕಾಗಿ ಅವರ ಕುಟುಂಬವು ಸುಮಾರು 100 ಪವನ್ ಚಿನ್ನ (800 ಗ್ರಾಂ) ಹಾಗೂ 70 ಲಕ್ಷ ಮೌಲ್ಯದ ವೋಲ್ವೋ ಕಾರ್ ವರದಕ್ಷಿಣೆ ರೂಪದಲ್ಲಿ ನೀಡಿದ್ದರೂ, ಪುನಹ 500 ಪವನ್ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಅವರ ಪತಿಯ ಕುಟುಂಬದವರು ನಿರಂತರ ಕಿರುಕುಳಗಳು ನೀಡುತ್ತಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ.

    “ಅವಳನ್ನು ಗಂಟೆಗಟ್ಟಲೇ ನಿಲ್ಲಿಸಿಟ್ಟು, ಊಟ ಕೊಡದೆ ಕೋಣೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.” “ವಿವಾಹವು ಅವಳಿಗೆ ಸಂತೋಷ ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಅದು ಅವಳಿಗೆ ಹಿಂಸೆಯೊಂದಿಗೆ ಅಂತ್ಯಕ್ಕೆ ಕಾರಣವಾಯಿತು” ಎಂದು ಆಕೆಯ ತಂದೆ ದಿ ಇಂಡಿಯನ್ ಎಕ್ಸ್ಪ್ರೆಸ್‌ಗೆ ತಿಳಿಸಿದ್ದಾರೆ.
    ಜೂನ್ 28ರಂದು ರಿಧನ್ಯಾ ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂದು ಹೇಳಿ ಹೊರಟು, ಕಾರನ್ನು ಮಂಡಿಪಾಳ್ಯಮ್ನಲ್ಲಿ ನಿಲ್ಲಿಸಿ ಸಾಮಾನ್ಯವಾಗಿ ಗ್ರಾಮೀಣ ಜನರು ಆತ್ಮಹತ್ಯೆಗೆ ಬಳಸುವ ವಿಷ ಪದಾರ್ಥವನ್ನು ಖರೀದಿಸಿದಳು ಎಂದು
    ದಿ ನ್ಯೂಸ್ ಮಿನಿಟ್‌ನಲ್ಲಿ ವರದಿಯಾಗಿದೆ.

    ವಿಷ ಸೇವಿಸಿ ಅರೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಆಕೆಯನ್ನು ದಾರಿಹೋಕರು ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಮೃತಪಟ್ಟಿದ್ದಳು.
    ಸಾವಿಗೆ ಮುನ್ನ ಆ ಹೆಣ್ಣು ಮಗಳು ತಂದೆಗೆ ವಾಟ್ಸಾಪ್ ಮೂಲಕ ಏಳು ಧ್ವನಿಸಂದೇಶಗಳನ್ನು ಕಳಿಸಿದ್ದಳು.. ಅವುಗಳಲ್ಲಿ ಒಂದು
    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಮುಂದುವರಿಸಿ ಬದುಕುವುದು ಸಾಧ್ಯವಿಲ್ಲ” ಎಂದು ರಿಧನ್ಯಾಳ ರೋದನ.”

    ಸಾರ್ವಜನಿಕರ ಪ್ರತಿಭಟನೆ ಹಾಗೂ ಮಾಧ್ಯಮದ ಒತ್ತಡದಿಂದಾಗಿ, ಸೇವೂರು ಪೊಲೀಸರು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿ ಅವರ ಮೇಲೆ IPಅ ಸೆಕ್ಷನ್ 498 A, 304 B ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961ರ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ (ಹಿಂದುಸ್ತಾನ್ ಟೈಮ್ಸ್).ವಿವಾಹದ ಸಮಯದಲ್ಲಿ ನಡೆದ ಹಣಕಾಸು ಮತ್ತು ವಸ್ತು ವಿನಿಮಯಗಳ ಕುರಿತು ಆದಾಯ ವಿಭಾಗ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ವರದಕ್ಷಿಣೆ ನಿಷೇಧ ಕಾನೂನು 1961ರಲ್ಲಿ ಜಾರಿಗೆ ಬಂದರೂ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 6,500 ವರದಕ್ಷಿಣೆ ಸಂಬಂಧಿತ ಸಾವುಗಳ ವರದಿಯಾಗುತ್ತಿವೆ. (ದಿ ನ್ಯೂಸ್ ಮಿನಿಟ್). 2022ರಲ್ಲಿ ಕೇವಲ ತಮಿಳುನಾಡಿನಲ್ಲಿ ಮಾತ್ರ 29 ಪ್ರಕರಣಗಳು ದಾಖಲಾಗಿವೆ (The CSR Journal)

    “ಇದು ಬರೇ ಚಿನ್ನ ಅಥವಾ ಐಶಾರಾಮಿ ಕಾರಿನ ವಿಷಯವಲ್ಲ” ಎನ್ನುತ್ತಾರೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ರಾಜನ್. “ಎಷ್ಟೇ ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳಿಗಾದರೂ ಶೋಷಣೆಯಿಂದ ರಕ್ಷಣೆ ಸಿಗುವುದಿಲ್ಲ. ರಿಧನ್ಯಾಳ ಅಂತಿಮ ಧ್ವನಿ ಸಂದೇಶಗಳು- ಕ್ಷಮಾಪಣೆಯ ನೋವಿನ ಧ್ವನಿ- ಈ ರಾಷ್ಟ್ರವನ್ನು ಎಚ್ಚರಿಸಬೇಕು” (ದಿ ಇಂಡಿಯನ್ ಎಕ್ಸ್ಪ್ರೆಸ್).

    ಮಹಿಳಾ ಹಕ್ಕು ಹೋರಾಟಗಾರರು ಅಧಿಕಾರಿಗಳ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ವಿಧಿಸಬೇಕೆಂದು ಹಾಗೂ ಮಹಿಳೆಯರಿಗಾಗಿ ಜಿಲ್ಲಾಮಟ್ಟದ ದೂರು ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ..
    ಈ ಘಟನೆ ಭಾರತದೆಲ್ಲೆಡೆ ಭಾವನಾತ್ಮಕ, ನೋವಿನ ಹಾಗೂ ಚೀತ್ಕಾರದ ಪ್ರತಿಧ್ವನಿಯನ್ನು ಉಂಟುಮಾಡಿದೆ. ಹಣವಿರುವ ಕುಟುಂಬದಿಂದ ಬಂದಿದ್ದರೂ ರಿಧನ್ಯಾಳಿಗೆ ವರದಕ್ಷಿಣೆಯ ಶಾಪದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಪ್ರಕರಣವು ಎಲ್ಲ ವರ್ಗಗಳಲ್ಲಿಯೂ ಶೋಷಣೆಯ ಆಳವನ್ನು ತೋರಿಸುವ ಸಂಕೇತವಾಗಿದೆ.

    ಸಾಮಾಜಿಕ ಮಾಧ್ಯಮಗಳಲ್ಲಿ Justice For Ridhanya ಮತ್ತು End Dowry Deaths ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ನಟರು, ಹಕ್ಕು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಎಲ್ಲರೂ ನ್ಯಾಯ ಮತ್ತು ಸಕಾರಾತ್ಮಕ ಬದಲಾವಣೆಗೆ ಬೊಬ್ಬಿಡುತ್ತಿದ್ದಾರೆ.

    ವರದಕ್ಷಿಣೆ ಸಂಬಂಧಿಸಿದ ಸಾವುಗಳು ಭಾರತದಲ್ಲಿ ಬೃಹತ್ ಸಮಸ್ಯೆಯಾಗಿ ಉಳಿದಿವೆ. ಪಿತೃಪ್ರಧಾನ ರೂಢಿಗಳು, ಕಳಪೆ ಕಾನೂನು ಜಾರಿ ಮತ್ತು ಆಳವಾಗಿ ಬೇರೂರಿರುವ ದುರಾಸೆಯಿಂದಾಗಿ ಇದಕ್ಕೆ ಕಾರಣವಾಗಿವೆ
    ಅವಿನಾಶಿಯಲ್ಲಿ ರಿಧನ್ಯಾಳ ಅಂತ್ಯಕ್ರಿಯೆಯ ವೇಳೆ ತಂದೆ ಕಣ್ಣೀರಿಡುತ್ತಾ ಹೇಳಿದರು: “ನಮಗೆ ಅವಳ ಸಂತೋಷ ಬೇಕಿತ್ತು. ಆದರೆ ನಮ್ಮ ಹೃದಯದಲ್ಲಿ ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳೊಂದಿಗೆ ಸಹಿಸಲಾಗದ ನೋವಿನೊಂದಿಗೆ ಈಗ ಅವಳ ಸಮಾಧಿಯ ಮುಂದೆ ನಿಂತಿದ್ದೇವೆ.”

    ಭವಿಷ್ಯದಲ್ಲಿ ಆಶೆ ಮತ್ತು ಆಕಾಂಕ್ಷೆಗಳೊಂದಿಗೆ ಪತಿಯ ಮನೆಯಲ್ಲಿ ಬದುಕಬೇಕು ಎಂಬ ಮಗಳ ಕನಸುಗಳು ಬಾಲ್ಯದಿಂದ ಯೌವನದವರೆಗೆ ಯಾವುದೆ ನೋವೂ ಸಂಕಷ್ಟವೂ ಆಗದಂತೆ ತೊಟ್ಟಿಲಿನಿಂದ ಜೀವರಕ್ಷೆ ಮಾಡಿದ ತಂದೆ-ತಾಯಿಯ ಮಮತೆಯನ್ನೂ ಕೊನೆಗೆ ಬೆಂಕಿಗೆ ಆಹುತಿಯಾಗುತ್ತವೆಂದರೆ, ಅದನ್ನು ಹೇಗೆ ಸಹಿಸಬೇಕು?
    ನಮ್ಮ ಕಾನೂನು ವ್ಯವಸ್ಥೆ ಎಲ್ಲಿ ತಪ್ಪುತ್ತಿದೆ? ಮಾನವೀಯ ಮೌಲ್ಯಗಳು ಎಲ್ಲಿ ಕುಸಿದುಹೋಗಿವೆ? ಇವು ಚಿಂತನೆಗೆ ಗಂಭೀರ ಕಾರಣಗಳಾಗಿವೆ.

    ಉತ್ತಮ ನಾಗರಿಕರೆಂಬ ನಿಟ್ಟಿನಲ್ಲಿ, ಗೃಹಹಿಂಸೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಯಾರಾದರೂ ಕಂಡಾಗ, ತಕ್ಷಣವೇ ಸಂಬAಧಿತ ಸಹಾಯವಾಣಿಗೆ ಕರೆಮಾಡುವುದು ಅಥವಾ ಸ್ಥಳೀಯ ಮಾನಸಿಕ ಆರೋಗ್ಯ ತಜ್ಞರ ಬಳಿ ಮಾಹಿತಿ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
    ಕುಲ್ಸೂಮ್ ಅಬೂಬಕರ್

  • ಒಂದೇ ಮನೆಯಲ್ಲಿ ವಾಸಿಸುವ ಕ್ರಿಶ್ಚಿಯನ್-ಮುಸ್ಲಿಮ್ ಮಾದರೀ ಕುಟುಂಬ: 
ಇವರ ಮಧ್ಯವಿರುವ ಸಂಬಂಧವೇನು..?

    ಒಂದೇ ಮನೆಯಲ್ಲಿ ವಾಸಿಸುವ ಕ್ರಿಶ್ಚಿಯನ್-ಮುಸ್ಲಿಮ್ ಮಾದರೀ ಕುಟುಂಬ: ಇವರ ಮಧ್ಯವಿರುವ ಸಂಬಂಧವೇನು..?

    ಓದುಗರೇ! ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಧರ್ಮ ಎಂದು ಕಚ್ಚಾಡುತ್ತಿರುವ ಈ ಸಮಾಜದಲ್ಲಿ ಎರಡು ಬೇರೆ ಧರ್ಮಗಳಿಗೆ ಸೇರಿದ ಕುಟುಂಬಗಳು ಅನ್ಯೋನ್ಯವಾಗಿ ಬಾಳುತ್ತಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚುತ್ತಿದ್ದೇನೆ. ಬಳಗವು ಜಸಿಂತ ಮತ್ತು ನಸೀಮ್ ಎಂಬ ಇಬ್ಬರು ಮಹಿಳೆಯರಿಗೆ ಭೇಟಿ ಮಾಡಿತು.

    ಬಳಗ : ಜಸಿಂತ, ನೀವು ಮತ್ತು ನಸೀಮ್ ಬೇರೆ ಧರ್ಮಕ್ಕೆ ಸೇರಿದವರಾಗಿ ಇಷ್ಟು ಪ್ರೀತಿ ಮತ್ತು ಅನ್ಯೋನ್ಯವಾಗಿ ಬಾಳಲು ಹೇಗೆ ಸಾಧ್ಯ?

    ಜಸಿಂತ : ನನ್ನ ಅತ್ತಿಗೆ ನಸೀಮ ತುಂಬ ಒಳ್ಳೆಯವರು. ಅವರು ಅತ್ತಿಗೆ ಮಾತ್ರವಾಗಿರದೆ ನನ್ನ ತಂಗಿಯೂ ಆಗಿದ್ದಾರೆ. ತಂಗಿಗಿಂತಲೂ ಆಪ್ತಳು ಎಂದು ಹೇಳಿದರೆ ತಪ್ಪಾಗಲಾರದು. ಅವಳ ಒಳ್ಳೆಯತನ ನಮಗೆ ಪ್ರೀತಿ ಮತ್ತು ಅನ್ಯೋನ್ಯವಾಗಿರಲು ಸಹಕರಿಸುತ್ತದೆ.

    ಬಳಗ : ನಿಮ್ಮ ಅಣ್ಣ ಬೇರೆ ಧರ್ಮದ ಹುಡುಗಿಯನ್ನು ವಿವಾಹ ಆದಾಗ ಮನೆಯಲ್ಲಿ ಸಮಸ್ಯೆ ಆಗಲಿಲ್ಲವೇ?

    ಜಸಿಂತ : ಅಪ್ಪ-ಅಮ್ಮ ಮತ್ತು ನಮಗೆಲ್ಲರಿಗೂ ವಿರೋಧವಿತ್ತು. ಇಂತಹ ವಿವಾಹಕ್ಕೆ ಯಾರು ಒಪ್ಪುತ್ತಾರೆ? ಆದರೆ ಅಣ್ಣ ತನ್ನಿಷ್ಟದಿಂದ ತನ್ನ ಧರ್ಮವನ್ನು ಬದಲಿಸಿರುವುದರಿಂದ ನಾವು ಏನು ಮಾಡಲು ಸಾಧ್ಯ? ಈ ಬಗ್ಗೆ ಮಾತನಾಡಿದರೆ ಎಲ್ಲರೂ ಬೇಸರ ಪಡುತ್ತಾರೆ ಎಂದು ಅಮ್ಮ ವಿರೋಧಿಸಿದಾಗ, ನಾವು ಯಾರು ವಿರೋಧಿಸಲಿಲ್ಲ. ಆದರೆ ಅಪ್ಪನಿಗೆ ಬಹಳ ಸಮಯದ ತನಕ ಬೇಸರವಿತ್ತು.

    ಬಳಗ : ಅಣ್ಣ ತನ್ನ ಧರ್ಮ ಬದಲಾಯಿಸಿದ ನಂತರ ಮೊದಲಿನಂತೆಯೇ ಇದ್ದಾರೆಯೆ? ಅಥವಾ ಬದಲಾಗಿದ್ದಾರೆಯೇ?

    ಜಸಿಂತ : ಇಲ್ಲಿ ಅಣ್ಣನು ಸ್ವಲ್ಪವೂ ಬದಲಾಗಲಿಲ್ಲ. ಮೊದಲಿಗಿಂತಲೂ ಹೆಚ್ಚು ನಿಕಟವಾದರು. ಅಪ್ಪ-ಅಮ್ಮನನ್ನು ನೋಡುವುದರಲ್ಲಿರಲಿ ಅಥವಾ ನಮ್ಮೊಂದಿಗಿನ ಸಂಬಂಧವು ಮೊದಲಿಗಿಂತ ಗಟ್ಟಿಯಾಯಿತು.

    ಬಳಗ : ನಸೀಮ, ನೀವು ಮತ್ತು ಬಿಲಾಲ್ ಪ್ರೀತಿಸಿ ಮದುವೆಯಾದದ್ದೇ?

    ನಸೀಮ : ಇಲ್ಲ. ನಮ್ಮದು ಅರೆಂಜ್ ಮ್ಯಾರೇಜ್. ನನ್ನ ಸಂಬಂಧಿಕರೊಬ್ಬರು ಬಿಲಾಲ್‌ರ ಸ್ನೇಹಿತರಾಗಿದ್ದರು. ಅವರು ಈ ಸಂಬಂಧವನ್ನು ಮಾಡಿಸಿದರು. ಅಮ್ಮ ಹುಡುಗಿಯನ್ನು ನೋಡಿ ಒಪ್ಪಿದರೆ, ನಾನು ವಿವಾಹ ಆಗುವುದು ಎಂದು ಬಿಲಾಲ್ ಹೇಳಿದರಿಂದ, ಅಮ್ಮ ನನ್ನನ್ನು ನೋಡಲು ಬಂದಿದ್ದರು.

    ಬಳಗ : ವಿವಾಹದ ನಂತರ ಅತ್ತೆ ಮನೆಗೆ ಹೋಗಿದ್ದೀರಾ?

    ನಸೀಮ : ಹೌದು, ಅಪ್ಪ-ಅಮ್ಮ ಮತ್ತು ಮನೆವರೆಲ್ಲರು ಬಹಳ ಸಂತೋಷದಿಂದ ಬರಮಾಡಿಕೊಂಡರು. ನಾನು ಅಮ್ಮನಿಲ್ಲದ ಹೆಣ್ಣು ಎಂದು ಅತ್ತೆ ನನ್ನನ್ನು, ನನ್ನ ಸಹೋದರ, ಸಹೋದರಿಯರನ್ನೂ ಪ್ರೀತಿಸುತ್ತಿದ್ದರು.

    ಬಳಗ: ನಿಮ್ಮ ಮತ್ತು ನಿಮ್ಮ ಅತ್ತೆ ಮನೆಯವರ ಸಂಬಂಧ ಹೇಗಿದೆ?

    ನಸೀಮ : ಅಲ್‌ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿಗಳು) ಬಹಳ ಉತ್ತಮ ಸಂಬಂಧ. ನಾದಿನಿ ಮೈದುನನವರೊಂದಿಗೂ ಉತ್ತಮ ಸಂಬಂಧindu ವಿದೆ. ನನ್ನ ಮನೆಯವರೊಂದಿಗೂ ಅವರ ಸಂಬಂಧ ಒಳ್ಳೆದಿದೆ. ನಮ್ಮ ಧರ್ಮ ಯಾವುತ್ತೂ ನಮ್ಮ ಅನ್ಯೋನ್ಯತೆಗೆ ಅಡ್ಡಿ ಬರಲಿಲ್ಲ.

    ಬಳಗ : ಜಸಿಂತ, ನಿಮ್ಮ ಅಣ್ಣ ಹಾಗೂ ಅತ್ತಿಗೆಯ ಸಂಬಂಧ ನಿಮ್ಮೊಂದಿಗೆ ಹೇಗಿದೆ?

    ಜಸಿಂತ : ಪ್ರೀತಿಯ ಸಂಬಂಧ. ಅಮ್ಮ ಜೀವಂತವಾಗಿರುವ ವರೆಗೆ ಅಮ್ಮನಿಗೆ ಎಲ್ಲ ರೀತಿಯಲ್ಲಿ ಸಹಕರಿಸಿದ್ದಾರೆ. ಅಮ್ಮನ ಯಾವುದೇ ಅಗತ್ಯದ ವಿಷಯದಲ್ಲಿ ಬೇಸರ ಪಡಿಸಲಿಲ್ಲ. ಮಾತ್ರವಲ್ಲದೇ ನಮ್ಮೆಲ್ಲರ ಅಗತ್ಯವನ್ನು ಕೇಳುವ ಮೊದಲೇ ಪೂರೈಸುತ್ತಾರೆ. ನನ್ನ ಆರೋಗ್ಯ ಸರಿ ಇಲ್ಲದಾಗಲೂ ಅಣ್ಣ ಅತ್ತಿಗೆ ನನ್ನನ್ನು ಬಿಡಲಿಲ್ಲ. ಈ ವಿಷಯದಲ್ಲಿ ನಸೀಮ ಎತ್ತಿದ ಕೈ. ನಸೀಮ ನಮಗೆ ಯಾರಿಗೂ ದೂರ ಮಾಡಲಿಲ್ಲ. ನಾವು, ಅವರು ಪರಸ್ಪರ ನಮ್ಮ ಮನೆಗಳಿಗೆ ಭೇಟಿ ಕೊಡುತ್ತೇವೆ.

    ಬಳಗ : ನಸೀಮ, ಬಿಲಾಲ್‌ರ ಸಹೋದರ ಸಹೋದರಿಯರೊಂದಿಗೆ ನಿಮ್ಮ ಸಂಬಂಧ ಹೇಗಿದೆ?

    ನಸೀಮ : ಒಂದು ಕುಟುಂಬ ಹೇಗಿರಬೇಕೋ ಹಾಗೆಯೇ ಇದೆ. ಕೆಲವು ತಿಂಗಳ ಹಿಂದೆ, ಅವರ ಓರ್ವ ಹಿರಿಯ ಸಹೋದರಿ ಗಲ್ಫ್ನಲ್ಲಿ 15 ದಿನ ನಮ್ಮೊಂದಿಗೆ ನಿಲ್ಲಲು ಬಂದವರು ಒಂದೂವರೆ ತಿಂಗಳು ನಮ್ಮೊಂದಿಗೆ ಇದ್ದು ಹೋದರು. ನಮ್ಮ ಮಕ್ಕಳು ಮತ್ತು ಅವರೆಲ್ಲರ ಮಕ್ಕಳೊಂದಿಗೆ ಉತ್ತಮ ಸಂಬಂಧ ಇದೆ. ಸುಖ-ದುಃಖಗಳಲ್ಲೆಲ್ಲ ಇಡೀ ಕುಟುಂಬ ಸೇರುತ್ತೇವೆ. ಪರಸ್ಪರ ಉಡುಗೊರೆ ಹಂಚುತ್ತೇವೆ ಮತ್ತು ಪರಸ್ಪರ ಸಹಕರಿಸುತ್ತೇವೆ ಕೂಡ.

    ಬಳಗ :ವಿವಾಹದ ಮೊದ ಮೊದಲು ಬಿಲಾಲ್ ತನ್ನ ಮನೆಯವರಿಗೆ ಸಹಕರಿಸುವಾಗ ನಿಮಗೆ ಬೇಸರ ಆಗುತ್ತಿತ್ತೇ

    ನಸೀಮ : ಇಲ್ಲ. ಸ್ವಲ್ಪನೂ ಇಲ್ಲ. ಕೆಲಸದ ನಿಬಿಢತೆಯಿಂದ ಬಿಲಾಲ್‌ಗೆ ಕೆಲವೊಮ್ಮೆ ಅಮ್ಮನಿಗೆ ಫೋನಾಯಿಸಲು ಅಥವಾ ಹಣ ಕಳುಹಿಸಲು ನೆನಪಿಲ್ಲದಾಗ, ನಾನು ಅವರಿಗೆ ನೆನಪಿಸುತ್ತೇನೆ. ಬಿಲಾಲ್ ಫೋನಾಯಿಸದಿದ್ದರೂ ನಾನು ಫೋನಾಯಿಸುತ್ತಾ ಇರುತ್ತೇನೆ. ಹಣ ಕಳುಹಿಸಲು ಬಿಲಾಲ್‌ಗೆ ಸಮಯ ಇರುವುದಿಲ್ಲವೆಂದು ನಾನೇ ಕಳುಹಿಸಲು ಆರಂಭಿಸಿದೆ. ಕ್ರಮೇಣ ಆ ಜವಾಬ್ದಾರಿಯನ್ನು ಬಿಲಾಲ್ ನನಗೆನೇ ವಹಿಸಿಕೊಟ್ಟರು. ಅವರ ಸಹೋದರ ಸಹೋದರಿಯರಿಗೆ ಹಣದ ಅಗತ್ಯ ಇದ್ದರೆ, ಅವರ ಮೊಬೈಲ್ ನೋಡಿ ನಾನೇ ಕಳುಹಿಸಿಕೊಡುತ್ತೇನೆ. ಅಮ್ಮನಿಗೆ ಕಳುಹಿಸುವ ಹಣ ನಾನು ವಹಿಸಿಕೊಂಡ ನಂತರ ಒಂದು ದಿನ ಕೂಡ ಲೇಟ್ ಮಾಡಲಿಲ್ಲ.

    ಬಳಗ : ಅಮ್ಮನ ನಿಧನದ ಸಮಯ ಅಣ್ಣ ಅತ್ತಿಗೆ ಬಂದಿದ್ದರೆ?

    ಜಸಿಂತ : ಅಮ್ಮ ಅನಾರೋಗ್ಯಗೊಂಡಾಗ ಅಣ್ಣ ಮತ್ತು ಅತ್ತಿಗೆಯನ್ನೇ ನೆನೆಯುತ್ತಿದ್ದರು. ಅಣ್ಣನಿಗೆ ಕೆಲಸದ ನಿಬಿಢತೆಯಿಂದ ಬರಲು ಆಗುತ್ತಿರದಿದ್ದರೂ ಅತ್ತಿಗೆ ಬರುತ್ತಿದ್ದರು. ನಿಧನದ ಸಮಯ ಕೂಡ ಅಮ್ಮ ಇವರಿಬ್ಬರನ್ನು ಕಾಯುತ್ತಿದ್ದರು. ನಸೀಮ- ಅಮ್ಮನ ಆರೋಗ್ಯ ಸರಿಯಿಲ್ಲ ಎಂದು ಕೇಳಿದ ತಕ್ಷಣ ನಾವು ಹೊರಟೆವು. ಆದರೆ… ಪ್ರಯಾಣ… ನಾವು ಮುಟ್ಟುವಷ್ಟರಲ್ಲಿ ಅಮ್ಮ ನಿಧನ ಹೊಂದಿದ್ದರು. ಬಿಲಾಲ್ ಹೆಚ್ಚಾಗಿ ಗಲ್ಫ್ನಲ್ಲಿರುವುದರಿಂದ ಇಲ್ಲಿಯ ವಿಷಯ ಅವರಿಗೆ ಗೊತ್ತಿಲ್ಲ. ಆದ್ದರಿಂದ ಅಮ್ಮನ ದೇಹವನ್ನು ಶವಾಗಾರದಲ್ಲಿಡುವ ವ್ಯವಸ್ಥೆ, ಅವರಿಗೆ ಉಡಿಸಲು ಸೀರೆ ಮತ್ತು ಹೂವು ಎಲ್ಲದರ ವ್ಯವಸ್ಥೆ ನಾನು ಮಾಡಿಕೊಂಡು ಮರುದಿನ ಮರಣವನ್ನು ಊರಿಗೆ ಕಳುಹಿಸಿದೆ. ಮತ್ತು ಹಿಂದಿನಿಂದ ನಾವು ಕೂಡ ಹೋದೆವು. ಜಸಿಂತ- ಅಮ್ಮ ಮರಣದ ತನಕ ನಮ್ಮೆಲ್ಲರೊಂದಿಗೆ ಹೇಳುತ್ತಿದ್ದರು ಏನೆಂದರೆ ನೀವೆಲ್ಲ ಸಹೋದರ-ಸಹೋದರಿಯರು ಒಂದಾಗಿ ಇರಬೇಕು. ಬೇರೆ ಬೇರೆ ಆಗಬಾರದು. ಈ ಅಣ್ಣ ಅತ್ತಿಗೆಯನ್ನು ದೂರ ಮಾಡಬಾರದು. ನಸೀಮ- ಬಿಲಾಲ್‌ರ ತಮ್ಮ ಜೋಸೆಫ್ ಅಂದರೆ ನಮ್ಮ ಮಕ್ಕಳಿಗೆ ಪಂಚ ಪ್ರಾಣ. ಅವರಿಗೂ ನಮ್ಮ ಮಕ್ಕಳೊಂದಿಗೆ ತುಂಬಾ ಪ್ರೀತಿ. ನಮ್ಮ ಊರಿಗೆ ಬಂದಾಗ, ನಮ್ಮ ಹೆಚ್ಚಿನ ಕೆಲಸ ಕಾರ್ಯಗಳಿಗೆ ಅವರು ನಮಗೆ ಸಹಕರಿಸುತ್ತಾರೆ. ಬಿಲಾಲ್ ನಮ್ಮೊಂದಿಗೆ ಬಾರದಿದ್ದರೂ ಅವರು ನಮ್ಮೊಂದಿಗೆ ಇರುತ್ತಾರೆ.

    ಬಳಗ : ಬಿಲಾಲ್‌ರೊಂದಿಗೆ ವಿವಾಹದ ನಂತರ ನಿಮ್ಮ ಜೀವನ ಹೇಗೆ ಸಾಗುತ್ತಿದೆ?

    ನಸೀಮ : ಅಲ್‌ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿ) ತುಂಬ ಒಳ್ಳೆಯ ಜೀವನ ಸಾಗಿಸುತ್ತಿದ್ದೇವೆ. ಅವರು ತುಂಬ ಶ್ರಮ ಜೀವಿ. ವಿವಾಹದ ಮೊದಲು ಇದ್ದ ಜೀವನ, ವಿವಾಹದ ನಂತರ ಸಂಪೂರ್ಣ ಬದಲಾಗಿದೆ. ನಾವು ಮಾತ್ರವಲ್ಲಿ ನಮ್ಮೊಂದಿಗೆ ನನ್ನ ಕುಟುಂಬ ಹಾಗೂ ಬಿಲಾಲ್‌ರ ಕುಟುಂಬವು ಉತ್ತಮ ಜೀವನ ಜೀವಿಸುತ್ತಿದ್ದೇವೆ.ind

  • “ಇಸ್ರೇಲಿ ಪ್ರಧಾನಿ ನ್ಯೂಯಾರ್ಕ್ ಪ್ರವೇಶಿಸಿದರೆ ಬಂಧಿಸುವೆ” 
ಘೋಷಿಸಿದ್ದ ಈ ಝೊಹ್ರಾನ್ ಮಮ್ದಾನಿ ಯಾರು?

    “ಇಸ್ರೇಲಿ ಪ್ರಧಾನಿ ನ್ಯೂಯಾರ್ಕ್ ಪ್ರವೇಶಿಸಿದರೆ ಬಂಧಿಸುವೆ” ಘೋಷಿಸಿದ್ದ ಈ ಝೊಹ್ರಾನ್ ಮಮ್ದಾನಿ ಯಾರು?

    ಇತ್ತೀಚಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪ್ರಚಾರ ಪಡೆದ ಮತ್ತು ವೈರಲ್ ಆದ ಒಂದು ಹೆಸರು ಝೊಹ್ರಾನ್ ಮಮ್ದಾನಿ, ಅವರ ಬಗ್ಗೆ ಒಂದಿಷ್ಟು ಚರ್ಚಿಸೋಣ. ಝೊಹ್ರಾನ್ ಮಮ್ದಾನಿ 33 ವರ್ಷದ ಗುಜರಾತ್ ಮೂಲದ ಸ್ಪುರದ್ರೂಪಿ ಯುವಕ ತನ್ನ ಧೀರ ಧೋರಣೆ, ಜನಪರ ಕಾರ್ಯಕ್ರಮಗಳು ಮತ್ತು ಶೋಷಿತರ ಪರವಾಗಿ ನಡೆಸುವ ಹೋರಾಟಗಳಿಂದ ಇಂದು ಜಗತ್ತಿನ ಗಮನ ಸೆಳೆದಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಜನಸಾಮಾನ್ಯರಿಗೆ ಝೊಹ್ರಾನ್ ಮಮ್ದಾನಿ ಒಂದು ಹೊಸ ಭರವಸೆಯ ಕಿರಣವಾಗಿದ್ದಾರೆ. ಝೊಹ್ರಾನ್ ಮಮ್ದಾನಿ ಮೂಲತಃ ಗುಜರಾತ್ ನವರಾಗಿದ್ದು ಉಗಾಂಡಾದಲ್ಲಿ ಜನಿಸಿ ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಬೆಳೆದವರು. ಅವರು ಖ್ಯಾತ ಚಲನ ಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಗುಜರಾತಿನ ಶಿಕ್ಷಣ ತಜ್ಞ ಮುಹಮ್ಮದ್ ಮಮ್ದಾನಿಯವರ ಪುತ್ರ. ಆದರೆ ಜಗತ್ತಿಗೆ ಅವರ ಪರಿಚಯವಾಗುವುದು ಅವರ ಪೋಷಕರ ಕಾರಣದಿಂದಲ್ಲ ಬದಲಾಗಿ ಅವರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶೋಷಿತ ಮತ್ತು ಹಕ್ಕು ವಂಚನೆಗೊಳಗಾದವರ ಹಾಗೂ ದಮನಿತ ವರ್ಗದವರಿಗಾಗಿ ರೋಟಿ ಕಪ್ಡಾ ಮಕಾನ್ ಎಂಬ ಘೋಷಣೆಯೊಂದಿಗೆ ಹೋರಾಡಿ ಜನಪರ ಕೆಲಸ ಮಾಡುವವರಾಗಿದ್ದಾರೆ. ಅದು ಮಾತ್ರವಲ್ಲ ಸುಮಾರು ಅರವತ್ತು ಸಾವಿರ ಮಂದಿಯನ್ನು ಫೆಲೆಸ್ತೀನಿನಲ್ಲಿ ಮಾರಣ ಹೋಮಗೈದ ಕಿರಾತಕ ಇಸ್ರೇಲ್ ವಿರುದ್ಧ ಮಾತನಾಡಿದ ಧೈರ್ಯಶಾಲಿ ಯುವಕ. ಆದ್ದರಿಂದಲೇ ಅವರು ಸಾಮಾನ್ಯರ ಮತ್ತು ಯುವಜನರ ಹೃದಯಗಳಲ್ಲಿ ತರಂಗವನ್ನು ಸೃಷ್ಟಿಸಿದ್ದಾರೆ. ಅವರ ಈ ಖ್ಯಾತಿ ಇಂದು ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ಮೊದಲ ಸುತ್ತಿನಲ್ಲಿ ಗೆಲುವನ್ನು ಕಂಡಿದ್ದಾರೆ.

    ಝೊಹ್ರಾನ್‌ನ ತಂದೆ ಗುಜರಾತ್ ಮೂಲದ ಶಿಕ್ಷಣ ತಜ್ಞ, ತಾಯಿ ಮೀರಾ ಒರಿಸ್ಸಾ ಮೂಲದ ಚಲನ ಚಿತ್ರ ನಿರ್ಮಾಪಕಿ. 1991 ಅವರು ಉಗಾಂಡದಲ್ಲಿ ಜನ್ಮ ತಾಳಿದರು. ತನ್ನ ಏಳನೆಯ ವಯಸ್ಸಿನಲ್ಲಿ ನ್ಯೂಯಾರ್ಕ್ಗೆ ವಲಸೆ ಬಂದ ಅವರು ಅಲ್ಲೇ ಬೆಳೆದು ಉನ್ನತ ಶಿಕ್ಷಣ ಪಡೆದು ತದ ನಂತರ ರಾಜಕೀಯಕ್ಕೆ ಧುಮುಕಿದರು. ಎಲ್ಲಾ ಕಾಲದಲ್ಲೂ ಜಗತ್ತಿನ ದೊಡ್ಡಣ್ಣನೆಂಬ ಹೆಸರನ್ನು ಉಳಿಸಿಕೊಂಡೇ ಜಗತ್ತನ್ನು ನಿಯಂತ್ರಿಸುವ ಅಮೇರಿಕ ಬಂಡವಾಳ ಶಾಹಿಗಳ ಕೂಪ. ಆದ್ದರಿಂದಲೇ ಜನಸಾಮಾನ್ಯರ ಕಷ್ಟಗಳನ್ನು ಅರಿತು ಅದಕ್ಕೆ ಸ್ಪಂದಿಸುವ ಗೋಜಿಗೆ ಅಲ್ಲಿನ ದೊಡ್ಡಣ್ಣ ಪ್ರಯತ್ನಿಸುವುದೇ ಇಲ್ಲ. ನ್ಯೂಯಾರ್ಕ್ ನಗರದ ಜನರ ಕಷ್ಟಗಳು ಮತ್ತು ಸಮಸ್ಯೆಗಳನ್ನು ಅರಿತ ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿ ನಂತರ 2020 ರಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಅವರು ಅದುವರೆಗೆ ನಾಲ್ಕು ಬಾರಿ ಸದಸ್ಯರಾಗಿದ್ದಂತಹ ಅರವಿಲ್ಲಾ ಸಿಮೋಟಸ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಆಯ್ಕೆಯಾದರು. ತಮ್ಮ ಜನಪರ ಆಡಳಿತ, ದಿಟ್ಟ ಎಡಪಂತೀಯ ನಿಲುವು ಮತ್ತು ಹೋರಾಟಗಳ ಮೂಲಕ 2024ರಲ್ಲಿ ಕೂಡ ಅವರು ಮರು ಆಯ್ಕೆಯಾದರು. ಆಗಲೇ ಅವರು ನ್ಯೂಯಾರ್ಕ್ ನ ಮೇಯರ್ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಘೋಷಿಸಿ ನ್ಯೂಯಾರ್ಕ್ನ ಮಾಜಿ ಗವರ್ನರ್ ಆಂಡ್ರೋವನ್ನು ಸೋಲಿಸಿ ನ್ಯೂಯಾರ್ಕ್ನ ನೂತನ ಮೇಯರ್ ಆಗುವ ನಿಟ್ಟಿನಲ್ಲಿ ಆಯ್ಕೆಯಾಗಿದ್ದಾರೆ ಮತ್ತು ಅಧಿಕೃತ ಘೋಷಣೆ ಈ ವರ್ಷದ ಕೊನೆಯಲ್ಲಿ ಘೋಷಣೆಯಾಗಲಿದೆ.

    ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೇನೆAದರೆ ಇಡೀ ಜಗತ್ತು ಇಂದು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿರುವಾಗ ಅದರಲ್ಲೂ ಬಂಡವಾಳಶಾಹಿಗಳ ತವರೂರು ಎಂದೇ ಖ್ಯಾತಿಯಲ್ಲಿರುವ ನ್ಯೂಯಾರ್ಕ್ ಶೇಕಡಾ ಮೂರರಷ್ಟು ಮಾತ್ರ ಮುಸ್ಲಿಮ್ ಜನಸಂಖ್ಯೆ ಇರುವ ನಗರದಲ್ಲಿ ಓರ್ವ ಮುಸ್ಲಿಮ್ ಮಾತ್ರವಲ್ಲ ಎಡಪಂಥೀಯ ವಿಚಾರಧಾರೆಯ ಯುವಕ ಮೇಯರ್ ಸ್ಥಾನಕ್ಕೆ ಗೆಲುವು ಸಾಧಿಸಿದ್ದು ಹೇಗೆ ಎಂಬುದು ಒಂದು ವಿಚಿತ್ರ. ಮಮ್ದಾನಿಗೆ ಗೆಲುವು ತಂದು ಕೊಡಲು ಕಾರಣ ಅವರ ವಿಭಿನ್ನ ಶೈಲಿಯ ಹೋರಾಟದ ಮಾದರಿಯಾಗಿತ್ತು. ರೋಟಿ ಕಪ್ಡಾ ಔರ್ ಮಕಾನ್ ಎಂಬ ಘೋಷಣೆಯೊಂದಿಗೆ ಜನಸಾಮಾನ್ಯರನ್ನು ಒಟ್ಟು ಸೇರಿಸಿ ಮಾಡಿದ ಹೋರಾಟ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

    ಒಂದು ಕಡೆಯಲ್ಲಿ ಅವರ ಗೆಲುವಿನಲ್ಲಿ ಜನಸಾಮಾನ್ಯರು ಖುಷಿ ಪಟ್ಟರೆ, ಇನ್ನೊಂದು ಕಡೆ ಸೋಷಿಯಲಿಸ್ಟ್ ಮತ್ತು ಬಂಡವಾಳಶಾಹಿಗಳ ನಿದ್ರೆಗೆಡಿಸಿದೆ. ಏಕೆಂದರೆ ಅವರೊಬ್ಬ ಮುಸ್ಲಿಮ್, ಅವರು ಫೆಲೆಸ್ತೀನ್ ಪರ ಮಾತಾನಾಡುತ್ತಾರೆ, ನ್ಯೂಯಾರ್ಕ್ ನಗರಕ್ಕೆ ಬೆಂಜಮಿನ್ ನೆತನ್ಯಾಹು ಪ್ರವೇಶಿಸಿದರೆ ಅವರನ್ನು ಬಂಧಿಸುವೆ ಎಂದು ಎಚ್ಚರಿಸಿದ್ದಾರೆ, ಗುಜರಾತಿನಲ್ಲಿ ಗೋದ್ರಾ ಹತ್ಯಾಕಾಂಡದಲ್ಲಿ ನೇರ ಪಾತ್ರಧಾರಿಯಾದ ನರೇಂದ್ರ ಮೋದಿಯನ್ನು ದೂಷಿಸಿದ್ದಾರೆ ಮತ್ತು ಆರೆಸ್ಸೆಸ್ ಭಯೋತ್ಪಾದನೆಯನ್ನು ಖಂಡಿಸುತ್ತಾರೆ. ಆದಾಗ್ಯೂ ಅವರು ಮೇಯರ್ ಚುನಾವಣೆಯಲ್ಲಿ ಆಯ್ಕೆಯಾಗುವುದು ಒಂದು ವಿಶೇಷವೇ ಸರಿ. ಅದಕ್ಕೆ ಮುಖ್ಯ ಕಾರಣ ಅವರ ವಿಭಿನ್ನ ಶೈಲಿಯ ಚುನಾವಣಾ ಪ್ರಚಾರ.

    ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಡ ಮತ್ತು ಸಾಧಾರಣ ವರ್ಗದವರನ್ನು ಪರಿಗಣಿಸಿ ಅವರಿಗೆ ವಿಶೇಷ ಕೆಲವೊಂದು ಸ್ಕೀಮ್‌ಗಳನ್ನು ಮುಂದಿಡುತ್ತಾರೆ. ಅದರಲ್ಲಿ ಅಗ್ಗದ ದರದಲ್ಲಿ ಮನೆ ಮತ್ತು ಕಡಿಮೆ ಬಾಡಿಗೆಗೆ ಮನೆ ಸಿಗುವಂತೆ ಮಾಡುವುದು, ಜನರಿಗೆ ದಿನನಿತ್ಯ ಓಡಾಡುವ ನಿಟ್ಟಿನಲ್ಲಿ ಉಚಿತ ಸಾರಿಗೆ ಸೌಲಭ್ಯ, ಆರೋಗ್ಯ ಮತ್ತು ಸುರಕ್ಷತೆಯ ಭರವಸೆ, ದಿನಸಿ ಸಾಮಾಗ್ರಿಗಳನ್ನು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವುದು, ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ತೆರಿಗೆಯಲ್ಲಿ ಪರಿಷ್ಕರಣೆ ಅರ್ಥಾತ್ ಇದೆಲ್ಲವೂ ಹೇಗೆ ಸಾಧ್ಯ ಎಂದು ಕೇಳಿದರೆ ಶ್ರೀಮಂತರ ಮತ್ತು ವ್ಯಾಪಾರಿಗಳಿಗೆ ಹೆಚ್ಚು ತೆರಿಗೆ ವಿಧಿಸಿ ಅದರಿಂದ ಮಧ್ಯಮ ವರ್ಗದವರ ಜೀವನವನ್ನು ಉತ್ತಮಗೊಳಿಸುವುದು. ಮಾತ್ರವಲ್ಲ ನ್ಯೂಯಾರ್ಕ್ನಲ್ಲಿ ಅಧ್ಯಕ್ಷ ಟ್ರಂಪ್‌ನ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸುವುದು. ಹೀಗೆ ಶ್ರಮಿಕ ಮತ್ತು ಮಧ್ಯಮ ವರ್ಗಕ್ಕೆ ಚೇತರಿಸಿಕೊಂಡು ಬದುಕಲು ಸಾಧ್ಯವಾಗುವ ಎಲ್ಲಾ ರೀತಿಯ ಯೋಜನೆಗಳನ್ನು ಅವರು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಇದುವೇ ಅವರಿಗೆ ಗೆಲುವನ್ನು ತಂದುಕೊಟ್ಟಿತು.

    ಅವರು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಶ್ರೀಮಂತರನ್ನು ಭೇಟಿಯಾಗಿ ಅವರ ಮುಂದೆ ಮಂಡಿಯೂರುವ ಕೆಲಸಕ್ಕೆ ಕೈಹಾಕಲಿಲ್ಲ. ಏಕೆಂದರೆ ಅವರ ಚುನಾವಣಾ ಪ್ರಣಾಳಿಕೆ ಶ್ರೀಮಂತರ ವಿರುದ್ಧವಾಗಿತ್ತು. ಅವರು ಅದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕೆ ಬದಲಾಗಿ ಅವರು ಸೋಷಿಯಲ್ ಮೀಡಿಯಾದ ಮೊರೆ ಹೋಗಿ ಜನರಲ್ಲಿ ತನ್ನ ಪ್ರಣಾಳಿಕೆಯನ್ನು ವಿವರಿಸುವ ಮೂಲಕ ಹಣ ಸಂಗ್ರಹಕ್ಕೆ ಭಿನ್ನವಿಸಿದರು ಮತ್ತು ಆ ಮೂಲಕ ಅವರಿಗೆ ಹೆಚ್ಚು ಹಣ ಸಂಗ್ರಹ ಮಾಡಲು ಸಾಧ್ಯವಾಯಿತು. ಮಾತ್ರವಲ್ಲ ಇದರಿಂದ ಅವರು ಕೈಗೊಂಡ ಪ್ರಚಾರ ಎಷ್ಟು ಜನಪ್ರಿಯವಾಯಿತೆಂದರೆ ಕೇವಲ ನ್ಯೂಯಾರ್ಕ್ ಮಾತ್ರವಲ್ಲ ಇಡೀ ಜಗತ್ತೇ ಇಂದು ಅವರ ಭಾಷಣವನ್ನು ಆಲಿಸಲು ಮತ್ತು ಅವರ ಪ್ರಚಾರದ ರೀತಿಯನ್ನು ತದೇಕಚಿತ್ತದಿಂದ ಗಮನಿಸುವಂತೆ ಮಾಡಿದೆ.
    ಇವೆಲ್ಲದರ ನಡುವೆ ಮಮ್ದಾನಿಯ ವಿರುದ್ಧ ಪ್ರಚಾರ ಮಾಡುವ ವಿರೋಧ ಪಕ್ಷವೂ ತನ್ನ ಪ್ರಚಾರವನ್ನು ಮುಂದುವರಿಸಿದೆ. ಅವರೊಬ್ಬ ಆಂಟಿ ಸೆಮೆಟಿಕ್ (ಯಹೂದಿಯರ ವಿರೋಧಿ) ಏಕೆಂದರೆ ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಹೂದಿಗಳೂ ಇದ್ದಾರೆ. ಅವರೊಬ್ಬ ಮೂಲಭೂತವಾದಿ ಮುಸ್ಲಿಮ್ ಮತ್ತು ಅವರೊಬ್ಬ ಎಡಪಂಥೀಯ ಎಂಬಿತ್ಯಾದಿ ಆಪಾದನೆಗಳನ್ನು ಹುಟ್ಟು ಹಾಕಿ ಪ್ರಚಾರ ಮಾಡುತ್ತಲೂ ಇದ್ದಾರೆ.

    ನಿಜವಾಗಿ ಅಮೇರಿಕ ಎಂಬ ಅಷ್ಟು ದೊಡ್ಡ ದೇಶದ ಒಂದು ಚಿಕ್ಕ ನಗರವಾದ ಆದರೆ ಅಷ್ಟೇ ಶ್ರೀಮಂತ ನಗರವಾದ ನ್ಯೂಯಾರ್ಕ್ನ ಮೇಯರ್ ಚುನಾವಣೆಯಲ್ಲಿ ಆಯ್ಕೆಯಾದ ಮುಮ್ದಾನಿಯ ವಿರುದ್ಧ ಅಧ್ಯಕರಾದ ಟ್ರಂಪ್ ತಲೆಕೆಡಿಸುವ ಅಗತ್ಯ ಖಂಡಿತಾ ಇಲ್ಲ. ಆದರೆ ಟ್ರಂಪ್ ನೇರವಾಗಿ ಮುಮ್ದಾನಿಯ ವಿರುದ್ಧ ವಾಗ್ದಾಳಿಗೆ ಇಳಿದಿದ್ದು ಅವರೊಬ್ಬ ಪಕ್ಕಾ ಹುಚ್ಚು ಕಮ್ಯೂನಿಸ್ಟ್ ಮತ್ತು ನೋಡಲು ಭಯಾನಕ ಜೀವಿಯಂತೆ ಕಾಣುತ್ತಿದ್ದಾರೆ ಮಾತ್ರವಲ್ಲ ಅವರೊಬ್ಬ ಆಡಳಿತಕ್ಕೆ ತಕ್ಕುದಾದ ವ್ಯಕ್ತಿಯಲ್ಲ ಎಂಬ ಹೇಳಿಕೆಯ ಮೂಲಕ ತನ್ನ ಅಸಹಿಷ್ಣುತೆ ಮತ್ತು ಅಸಹಾಯಕತೆಯನ್ನು ತೋಡಿ ಮತ್ತೊಮ್ಮೆ ಮುಸ್ಲಿಮರೊಂದಿಗಿನ ವೈರತ್ವವನ್ನು ಇಸ್ಲಾಮೊಫೋಬಿಯಾವನ್ನು ನಾಲಿಗೆಯ ಮೂಲಕ ಹರಿಯಬಿಟ್ಟಿದ್ದಾರೆ.

    ಟ್ರಂಪ್ ಸೇರಿದಂತೆ ವಿರೋಧ ಪಕ್ಷವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಮ್ದಾನಿಯ ಪೌರತ್ವನ್ನು ರದ್ಧುಗೊಳಿಸುವಂತೆ ಕೋರಿದ್ದಾರೆ. ಅದಕ್ಕಾಗಿ ಅಲ್ಲಿನ ರಿಪಬ್ಲಿಕ್ ಪಕ್ಷವು ಅಧ್ಯಕ್ಷ ಟ್ರಂಪ್‌ರೊAದಿಗೆ 1954 ರ ಕಮ್ಯೂನಿಸ್ಟ್ ವಿರೋಧಿ ನೀತಿಯನ್ನು ಪುನಃಸ್ಥಾಪನೆಗೊಳಿಸಬೇಕೆಂದು ಕೂಡ ಕೋರಿದ್ದಾರೆ. 1954 ರಲ್ಲಿ ಅಂದಿನ ಸರಕಾರವು ಕಮ್ಯೂನಿಸ್ಟ್ ವಿರೋಧಿ ನೀತಿಯನ್ನು ಜಾರಿಗೊಳಿಸಿತ್ತು. ಅದರಂತೆ ಸರಕಾರಿ ಮತ್ತು ಸರಕಾರೇತರ ಹುದ್ದೆಗಳಲ್ಲಿದ್ದ ಎಲ್ಲ ಎಡಪಂಥೀಯರನ್ನು ವಜಾಗೊಳಿಸಿ ಅವರ ಪೌರತ್ವನ್ನು ರದ್ಧುಗೊಳಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.

    ಅದಕ್ಕೆ ಕಾರಣವೂ ಇದೆ. ಮಮ್ದಾನಿ ಸ್ವೇಚ್ಛೆಯ ವಿರುದ್ಧ ಮತ್ತು ಬಂಡವಾಳಶಾಹಿಯ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ. ಮಾತ್ರವಲ್ಲ ಟ್ರಂಪ್‌ನ ಆಪ್ತ ಮಿತ್ರರಾದ ನೆತನ್ಯಾಹು ಮತ್ತು ಅನೇಕ ಶ್ರೀಮಂತರಿಗೆ ಮಮ್ದಾನಿಯ ಯೋಜನೆ ನಿದ್ರೆಗೆಡಿಸುವುದಂತೂ ಸತ್ಯ. ಏಕೆಂದರೆ ನ್ಯೂಯಾರ್ಕ್ ನಗರ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ದರಿಂದಲೇ ಮಮ್ದಾನಿಯ ಯೋಜನೆ ಶ್ರೀಮಂತರ ಮತ್ತು ಉದ್ಯಮಿಗಳ ನೀತಿಯನ್ನು ತಲೆಕೆಳಗಾಗಿಸುವುದಂತೂ ಸತ್ಯ.

    ನಾವು 21 ನೇಯ ಶತಮಾನದಲ್ಲಿ ಬದುಕುತ್ತಿದ್ದೇವೆ. ಆದರೆ ನಮ್ಮ ದೇಶದಲ್ಲಿ 20 ನೆಯ ಶತಮಾನದ ರಾಜಕೀಯ ನೀತಿಯನ್ನು ಬಳಸಲಾಗುತ್ತೆ. ಆದ್ದರಿಂದಲೇ ಫ್ಯಾಸಿಸ್ಟ್ ಮತ್ತು ಕೋಮುವಾದಿಗಳು ಪದೇ ಪದೇ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತಿದ್ದಾರೆ. ಆದರೆ ಮಮ್ಡಾನಿ ಚುನಾವಣಾ ಪ್ರಚಾರಕ್ಕೆ ಅನುಸರಿಸಿದ ನೀತಿ ವಿಶಿಷ್ಟವಾದುದಾಗಿದೆ. ಅವರು ಹೊಸ ಬಗೆಯ ನೀತಿಯನ್ನು ಅನುಸರಿಸುವ ಮೂಲಕ ಜನ ಸಾಮಾನ್ಯರ ಹೃದಯವನ್ನು ಗೆಲ್ಲಲು ಸಾಧ್ಯವಾಗಿದೆ. ಇದೇ ನೀತಿಯನ್ನು ಅಥವಾ ಇದಕ್ಕೆ ಅನುರೂಪವಾದ ಹೊಸ ಬಗೆಯ ಯೋಜನೆ ಮತ್ತು ತಂತ್ರಗಾರಿಕೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿದರೆ ಕೋಮುವಾದಿ, ಕ್ರಿಮಿನಲ್ ಮತ್ತು ಫ್ಯಾಸಿಸ್ಟರನ್ನು ಸೋಲಿಸಲು ಸಾಧ್ಯವಿದೆ ಎಂದು ಮಮ್ದಾನಿ ತೋರಿಸಿಕೊಟ್ಟಿದ್ದಾರೆ.

    ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಇದ್ದೇ ಇದೆ. ಆದರೆ ಚುನಾವಣಾ ಪ್ರಚಾರದಲ್ಲಿ ಹತ್ತಾರು ಭರವಸೆಗಳನ್ನು ನೀಡುವ ಮೂಲಕ ಮತ ಗಳಿಸಿ ಅಧಿಕಾರಕ್ಕೆ ಬಂದರೆ ಅವೆಲ್ಲವನ್ನೂ ಮರೆತು ಬಿಡುವುದು ರಾಜಕಾರಣಿಗಳಿಗೆ ಅಭ್ಯಾಸವಾಗಿ ಬಿಟ್ಟಿದೆ. ಅಂತವರಿಗೆ ತಕ್ಕ ಪಾಠ ಕಲಿಸಲು ಇನ್ನಾದರೂ ಜನಸಾಮಾನ್ಯರು ಮುಂದಾಗಬೇಕು. ಮತೀಯವಾದಿಗಳನ್ನು ಮತ್ತು ಅಧಿಕಾರದಾಹಿಗಳನ್ನು ಸೋಲಿಸಿ ಮನೆಯಲ್ಲಿ ಕೂರಿಸಬೇಕು ಮತ್ತು ಜನಸಾಮಾನ್ಯರಿಗಾಗಿ ಮಿಡಿಯುವ, ಅವರ ಹಕ್ಕುಗಳಿಗಾಗಿ ಹೋರಾಡುವ ಹೊಸ ಯುವ ಸಮೂಹವು ರಾಜಕೀಯಕ್ಕೆ ಧುಮುಕುವ ಅಗತ್ಯ ಖಂಡಿತ ಇದೆ. ಅಂತಹ ಗುಣ ಮತ್ತು ವೈಶಿಷ್ಯತೆ ಮಮ್ದಾನಿಯವರಲ್ಲಿ ಇದೆ. ಅವರು ಬಳಸಿದ ತಂತ್ರಗಾರಿಕೆ ನಮ್ಮ ದೇಶದ ಜಾತ್ಯಾತೀತವಾದಿಗಳು ಅನುಸರಿಸಬೇಕಾಗಿದೆ. ಅಧಿಕಾರದ ಲಾಲಸೆಯಿಂದ ಹೊರಬಂದು ತನ್ನ ಸ್ವಾರ್ಥತೆಯನ್ನು ಬದಿಗಿಟ್ಟು ಜನರಿಗಾಗಿ ತನ್ನಿಂದೇನು ಮಾಡಲು ಸಾಧ್ಯ ಎಂಬ ಹೊಸ ಕಲ್ಪನೆಯನ್ನು ಹುಟ್ಟು ಹಾಕುವಲ್ಲಿ ಮಮ್ದಾನಿ ಒಂದು ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಅವರಂತಹ ಮುತ್ತು ರತ್ನಗಳು ಬೆಳೆದು ಬರಲಿ ಮತ್ತು ಅವರ ಕನಸು ನನಸಾಗಲಿ ಎಂದು ಹಾರೈಸೋಣ.

  • ಮಿಸೇಲ್ ಉಡಾಯಿಸುವ ಇರಾನಿ ಮಹಿಳೆಯರು: 
ಇವರ ಪರ್ಸೆಂಟೇಜ್ ಎಷ್ಟಿದೆ ಗೊತ್ತೇ?

    ಮಿಸೇಲ್ ಉಡಾಯಿಸುವ ಇರಾನಿ ಮಹಿಳೆಯರು: ಇವರ ಪರ್ಸೆಂಟೇಜ್ ಎಷ್ಟಿದೆ ಗೊತ್ತೇ?

    ಮಬ್ಬು ಬೆಳಕಿನ ನಿಯಂತ್ರಣ ಕೊಠಡಿಗಳಲ್ಲಿ ಕುಳಿತಿದ್ದು, ದಾಳಿಯ ಚಲನ ವಲನಗಳನ್ನು ವಿಶ್ಲೇಷಿಸುತ್ತಾ, ನಿಯಂತ್ರಿಸುತ್ತಾ, ಉಡಾವಣೆ ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಾ, ಅತ್ಯಂತ ಶಿಸ್ತು ಮತ್ತು ನಿಖರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದದ್ದು ಹಿಜಾಬ್ ಧರಿಸಿದ ಇರಾನಿನ ಮಹಿಳೆಯರು.

    ಖತಮ್ ಅಲ್-ಅಂಬಿಯಾ ಏರೋಸ್ಪೇಸ್ ಸಂಸ್ಥೆಗಳಲ್ಲಿ ಇರಾನಿನ ಮಹಿಳೆಯರು ಡೇಟಾ ವಿಶ್ಲೇಷಕರು, ಸಿಸ್ಟಂ ಪ್ರೋಗ್ರಾಮರ್‌ಗಳು ಮತ್ತು ನಿಯಂತ್ರಣ ಕೊಠಡಿಗಳ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಾಫ್ಟ್ವೇರ್ ವ್ಯವಸ್ಥೆಗಳನ್ನು, ಉಪಗ್ರಹ ನಕ್ಷೆಗಳನ್ನು ಮತ್ತು ಉಡಾವಣೆ ಸಮನ್ವಯಗಳನ್ನು ನಿಖರವಾಗಿ ನಿರ್ವಹಿಸುತ್ತಿದ್ದಾರೆ. ಅವರು ಇರಾನಿನ ರಕ್ಷಣಾ ರಚನೆಯೊಳಗೆ ಸಕ್ರಿಯ ಮತ್ತು ಅನಿವಾರ್ಯ ಪಾತ್ರದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಜಗತ್ತಿನ ಹಲವು ಭಾಗಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸಾರ್ವಜನಿಕವಾಗಿ ಪ್ರದಶಿಸುವುದು, ಪ್ರಶಂಸೆ ಪಡೆಯುವುದು ಮತ್ತು ನಾಯಕತ್ವ ವಹಿಸುವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕ್ಷಿಪಣಿ ಉಡಾವಣಾ ಕನ್‌ಸೋಲ್ ಹಿಂದೆ ಹಿಜಾಬ್ ಧರಿಸಿದ ಮಹಿಳೆ ಆದುನಿಕತೆಗೆ ತಕ್ಕವಳಾಗಿ ಕಾಣಿಸದಿರಬಹುದು. ಆದರೆ ಅವಳು ಡೇಟಾ ಮೇಲೆ ಹಿಡಿತವಿಟ್ಟಿದ್ದಾಳೆ, ದೇಶದ ರಕ್ಷಣೆಯಲ್ಲಿ ಕೆಲಸಮಾಡುತ್ತಿದ್ದಾಳೆ ಮತ್ತು ರಾಷ್ಟ್ರಸೇವೆಯ ಕಾರ್ಯನಿರ್ವಹಿಸುತ್ತಿದ್ದಾಳೆ. ಇದು ಫ್ಯಾಶನ್ ಅಥವಾ ಸ್ವಾರ್ಥಕ್ಕಾಗಿ ಅಲ್ಲ. ಇದು ನಂಬಿಕೆ, ಶಿಕ್ಷಣ ಮತ್ತು ಕೌಶಲ್ಯದ ಮೇಲೆ ಆಧಾರಿತವಾದ ನಿಜವಾದ ಶಕ್ತಿ ಮಹಿಳಾ ಶಕ್ತಿಯಾಗಿದೆ.

    1979ರ ಕ್ರಾಂತಿಯ ಬಳಿಕ ಇರಾನ್‌ನಲ್ಲಿ ಮಹಿಳೆಯರ ಶಿಕ್ಷಣ, ವಿಶೇಷವಾಗಿ ಮೆಡಿಕಲ್ ಮತ್ತು ಎಂಜಿನಿಯರಿAಗ್ ಕ್ಷೇತ್ರಗಳಲ್ಲಿ, ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಯುನೆಸ್ಕೋ ಮತ್ತು ವಿಶ್ವ ಬ್ಯಾಂಕ್ ಮಾಹಿತಿಯ ಪ್ರಕಾರ, ಇರಾನ್‌ನಲ್ಲಿನ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿAಗ್, ಗಣಿತ) ಪದವೀಧರರಲ್ಲಿ 70%ಕ್ಕಿಂತ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ಇಂದು ಇರಾನಿನ ನಿಲುವು ಮಹಿಳೆಯರೂ ರಾಷ್ಟ್ರದ ಹೆಗ್ಗಳಿಕೆಯ ಗುರುತು ಹಾಗೂ ಏಳಿಗೆಯಲ್ಲಿ ರಾಷ್ಟ್ರದ ಪರವಾಗಿ ಪ್ರತಿರೋಧ ಚಲನೆಯನ್ನು ರೂಪಿಸುವ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಪರಿಗಣಿಸಿದೆ.

    ಈ ದೃಷ್ಟಿಕೋನವೇ ಮಹಿಳೆಯರಿಗೆ ರಕ್ಷಣಾ ಕ್ಷೇತ್ರದಂತಹ ಅತ್ಯಂತ ವಿಶೇಷ ಹಾಗೂ ಸಂವೇದನಾಶೀಲ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಪ್ರಮುಖವಾಗಿ ಇವರ ಪಾತ್ರಗಳನ್ನು ಪರಂಪರಾಗತವಾಗಿ ಸೌಮ್ಯ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಲಾಗಿಲ್ಲ. ಬದಲಾಗಿ ಯುದ್ಧತಂತ್ರ ಹಾಗೂ ಉನ್ನತ ತಾಂತ್ರಿಕ ಕಾರ್ಯಾಚರಣೆಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ.
    ಇಂದಿನ ಕಾಲದಲ್ಲಿ ಜಾಗತಿಕ ಮಾಧ್ಯಮಗಳು ಮುಸ್ಲಿಂ ಮಹಿಳೆಯರನ್ನು ಬಹುತೇಕ ಸಂದರ್ಭಗಳಲ್ಲಿ ಮೌನವಾಗಿರುವವರು ಅಥವಾ ದಬ್ಬಾಳಿಕೆಗೆ ಒಳಪಡುವವರು ಎಂದು ಚಿತ್ರಿಸಲಾಗುತ್ತದೆ. ಆದರೆ ಇರಾನಿನ ಈ ಒಂದು ಬೆಳವಣಿಗೆಯು ಬೇರೊಂದು ಪರ್ಯಾಯ ಚಿತ್ರಣವನ್ನು ನಮ್ಮ ಮುಂದಿಡುತ್ತದೆ.

    ಇದು ಧರ್ಮದ ಮೇರೆಯನ್ನು ನಿರಾಕರಿಸುವುದಲ್ಲ ಬದಲಾಗಿ ಅದನ್ನೇ ವೇದಿಕೆಯಾಗಿ ಬಳಸುತ್ತಿದೆ. ಕ್ಷಿಪಣಿ ಕಮಾಂಡ್ ಕೊಠಡಿಗಳಲ್ಲಿ ಈ ಮಹಿಳೆಯರ ಉಪಸ್ಥಿತಿಯು ಧಾಮಿಕತೆಯ ವಿರುದ್ಧವಲ್ಲ ಅದು ನಂಬಿಕೆಯಿAದಲೇ ಹುಟ್ಟಿಕೊಂಡಿರುವುದಾಗಿದೆ.

    ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹೂ ಸೇರಿದಂತೆ ಪಶ್ಚಿಮಾತ್ಯ ನಾಯಕರು ಇರಾನಿನ ಸೇನಾ ಜಾಲವನ್ನು ನಾಶಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಶಕ್ತಿ ಮತ್ತು ಸ್ಥೈರ್ಯದ ಹಿಂದೆ ಸಮಾನ ಶಿಕ್ಷಣ ಹಾಗೂ ಇರಾನ್ ಹೊಂದಿರುವ ನಿಷ್ಠೆ ಎದ್ದು ಕಾಣುತ್ತಿದೆ. ಈ ನಿಷ್ಠೆಯಲ್ಲಿ ಈಗ ಅಲ್ಲಿಯ ಮಹಿಳೆಯರೂ ಸೇರಿಕೊಂಡಿರುವುದು ಮಹತ್ತರ ಪಾತ್ರವನ್ನು ಹೊಂದಿದೆ.

    ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ವಹಿಸುತ್ತಿರುವ ಇರಾನಿನ ಮಹಿಳೆಯರ ಚಿತ್ರಣ ಬಹುತೇಕ ಜನರಿಗೆ ಅಚ್ಚರಿಯಾಗಿ ಕಾಣಬಹುದು. ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ನಿಷ್ಕ್ರಿಯರು, ಮೌನವಾಗಿರುವವರು ಅಥವಾ ಕೇವಲ ಗೃಹ ಬಂಧನದಕ್ಕೆ ಸೀಮಿತವಾಗಿರುವವರು ಎಂದು ತಪ್ಪಾಗಿ ಪರಿಗಣಿಸಲಾಗುತ್ತಿರುವ ಜಾಗತಿಕ ಮಟ್ಟದವರಿಗೆ…!
    ಅದರ ರಾಜಕೀಯ ಜಟಿಲತೆಗಳೇನೇ ಇರಲಿ, ಇರಾನ್‌ನ ನಿಲುವು ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ: ಧರ್ಮಾಧಾರಿತ ಸಮಾಜಗಳು ಮಹಿಳಾ ನಾಯಕತ್ವಕ್ಕೆ ಸಹಜವಾಗಿ ವಿರೋಧಿಯಾಗಿಲ್ಲ. ಜಗತ್ತಿನ ಅನೇಕ ಮುಸ್ಲಿಂ ದೇಶಗಳು ಈಗಾಗಲೇ ಈ ದಾರಿಗೆ ಬೇಕಾದ ಮಾನವ ಸಂಪತ್ತು, ಶಿಕ್ಷಣ ವ್ಯವಸ್ಥೆ ಮತ್ತು ನೈತಿಕತೆ ಹೊಂದಿವೆ. ಇದೀಗ ಅಗತ್ಯವಿರುವುದು, ಮಹಿಳೆಯರನ್ನು ಕೇವಲ ನೈತಿಕ ಲಾಭಪಡೆಯುವವರಂತೆ ನೋಡದೆ ಅವರನ್ನು ಪ್ರಗತಿಯೆಡೆಗೆ ಮುನ್ನಡೆಸುವ ಧೈರ್ಯವನ್ನು ತುಂಬುವುದು ಕಾಲದ ಬೇಡಿಕೆಯಾಗಿದೆ.
    ಇರಾನಿನ ಮಾದರಿಯನ್ನೇ ಅನುಸರಿಸಬೇಕೆಂದಿಲ್ಲ. ಆದರೆ ಅದು ನಮ್ಮ ಕಲ್ಪನೆಗೆ ಆಹ್ವಾನ ನೀಡುತ್ತದೆ. ಇದು ಮುಸ್ಲಿಂ ಜಗತ್ತಿನಾದ್ಯಂತ ಇರುವ ಮಹಿಳೆಯರ ಅಪಾರ ಸಾಮರ್ಥ್ಯಗಳನ್ನು ಗುರುತಿಸಿ, ಅವರ ಬೆಳವಣಿಗೆಗೆ ತಡೆ ಹಾಕುವ ಅಂಶಗಳನ್ನು ತೊಡೆದು ಹಾಕಬೇಕಾಗಿದೆ.

    ಇರಾನ್-ಇಸ್ರೇಲ್ ಸಂಘರ್ಷ ಮುಂದುವರಿಯುತ್ತಿರುವಂತೆ, ಕ್ಷಿಪಣಿ ಉಡಾವಣೆ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಚಿತ್ರಗಳು ಪರ್ಯಾಯ ಮಾಧ್ಯಮಗಳಲ್ಲಿ ನಿಧಾನವಾಗಿ ಹರಿದಾಡುತ್ತಿವೆ. ಇದರಿಂದಾಗಿ ಜಗತ್ತು ಈಗ ಒಂದು ಹೊಸ ದೃಷ್ಟಿಕೋನವನ್ನು ಅಂಗೀಕರಿಸಬೇಕಾದ ಅಗತ್ಯತೆ ಎದು ರಾಗಿದೆ.

  • ಹುಲಿ ಸಾಗಿದ ದಾರಿ…

    ಹುಲಿ ಸಾಗಿದ ದಾರಿ…

    [ಜುಲೈ 29ರಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ದಿನ. ಹುಲಿಗಳ ತವರೂರಾದ ಭಾರತದಲ್ಲಿ ಹುಲಿಗಳ ಸಂತತಿಯು ಕ್ಷೀಣಿಸುತ್ತಿರುವುದು ಕಳವಳಕಾರಿ ಸುದ್ದಿ. ಅವುಗಳ ಅಭಿವೃದ್ಧಿಗೆ ಐವತ್ತು ವರುಷಗಳ ಹಿಂದೆಯೇ ಪ್ರಾಜೆಕ್ಟ್ ಟೈಗರ್' ಅನ್ನುವ ಯೋಜನೆಯನ್ನು ಜಾರಿಗೆ ತಂದರೂ ಅವು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಮೂಲ ಕಾರಣ ಏನು ಅನ್ನುವುದನ್ನು ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ವ್ಯಾಘ್ರನ ಕಾಡಿನಲ್ಲಿ ಸುತ್ತಿ ಬರೋಣ- ಸಂಪಾದಕಿ]

    ಸುಮಾರು ಮುನ್ನೂರು ವರುಷಗಳ ಹಿಂದೆ, ನಮ್ಮ ದೇಶದ ದಟ್ಟ ಅಡವಿಗಳಲ್ಲಿ ಹುಲಿಗಳ ಸಂತತಿ ಸುಮಾರು 60 ಸಾವಿರಕ್ಕೂ ಮಿಕ್ಕಿ ಇದ್ದವು. ಆಗ ಈ ದೇಶದಲ್ಲಿ ಇರುವಷ್ಟು ಹುಲಿಗಳ ಸಂಖ್ಯೆ ಇನ್ನಾವುದೇ ರಾಷ್ಟ್ರಗಳಲ್ಲಿ ಇರಲಿಲ್ಲ. ಹಿಂದೆ ರಾಜ-ಮಹಾರಾಜರು, ಸುಲ್ತಾನ-ನವಾಬರು, ಈ ಹುಲಿ ಬೇಟೆಗೆ ಗುಂಪುಗೂಡಿ ಕಾಡಿಗೆ ಹೋಗುತ್ತಿದ್ದರು. ಅವರಿಗೆ ಈ ಹುಲಿಗಳ ಶಿಕಾರಿ ಅನ್ನುವುದು ಸಾಹಸ-ಪರಾಕ್ರಮದ ಸಂಕೇತ. ಭಾರತಕ್ಕೆ ನುಸುಳಿ ಬಂದ ಆಂಗ್ಲರಿಗೂ ಹುಲಿ ಬೇಟೆಯ ಹುಚ್ಚು. ಹತ್ಯೆ ಮಾಡಿದ ಹುಲಿಯ ಎದುರು ಬಂದೂಕು ಹಿಡಿದು ಫೋಟೋ ಕ್ಲಿಕ್ಕಿಸುವುದೆಂದರೆ ಅವರಿಗೆ ಶೌರ್ಯದ ಸಾಧನೆ. ಯಾರದೋ ಕಾಡು- ಯಾರದೋ ಜಂಗಲ್ ರಾಜ್! ಸ್ವಾತಂತ್ರ್ಯ ಪೂರ್ವದಲ್ಲಿ ಮಧ್ಯ ಪ್ರದೇಶದ ಒಂದು ಪ್ರಾಂತ್ಯವನ್ನು ಸರ್ಗೂಜ್ ಅನ್ನುವ ಮಹಾರಾಜ ಅಳುತ್ತಿದ್ದ. ಆತನಿಗೆ ಹುಲಿಗಳನ್ನು ಕೊಲ್ಲುವ ಮೋಜು. ಆತನ ಈ ಹವ್ಯಾಸಕ್ಕೆ ಅಂದು 1160 ಹುಲಿಗಳು ಕೈಯಾರೆ ಹತ್ಯೆಯಾದವು. ಇದು ಇತಿಹಾಸದ ಪುಟದಲ್ಲಿ ಅಚ್ಚಳಿಯದ ದಾಖಲೆ! ದಂತ ಪೋರ ವೀರಪ್ಪನ್‌ನಂತೆ! ಆತ ಕೊಂದ ಆನೆಗಳು ಇನ್ನೊಂದು ಕಪ್ಪು ಚರಿತ್ರೆ! ಮನುಷ್ಯರ ಈ ದುರಾಶೆಗೆ-ಸಾಹಸಕ್ಕೆ ಕಾಡಿನಲ್ಲಿ ವಾಸವಾಗಿದ್ದ ಸಾವಿರಾರು ಹುಲಿಗಳು ನಶಿಸಿ ಹೋದವು. 1970ರಲ್ಲಿ ಈ ಹುಲಿಗಳ ಗಣತಿ ಕಾರ್ಯ ಆರಂಭಿಸಿದಾಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸುದ್ದಿ ಬಹಿರಂಗವಾಯಿತು. ಆಗ ಕಾಡಿನಲ್ಲಿ ಉಳಿದುಕೊಂಡಿದ್ದ ಹುಲಿಗಳ ಸಂಖ್ಯೆ ಕೇವಲ 1780 ಮಾತ್ರ! ಈ ಕಳವಳಕಾರಿ ವರದಿಯನ್ನು ಅಂದಿನ ಕೇಂದ್ರ ಸರಕಾರವು ಬಹು ಗಂಭೀರವಾಗಿ ಪರಿಗಣಿಸಿತು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಹುಲಿಗಳ ಸಂರಕ್ಷಣೆಗೆಪ್ರಾಜೆಕ್ಟ್ ಟೈಗರ್’ ಅನ್ನುವ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದರು. ಬಹಳಷ್ಟು ದೂರಾದೃಷ್ಟಿಯ ಈ ಕಾರ್ಯ ಕ್ರಮವನ್ನು ಸ್ವಯಂ ಇಂದಿರಾ ಗಾಂಧಿಯವರು ಬಹು ಕಾಳಜಿಯಿಂದ ನಿರ್ವಹಿಸಿದರು. ಕಳ್ಳ ಬೇಟೆಯಾಡುವ ಶೋಕಿಗಳಾಗಲಿ, ಆದಿವಾಸಿ ಜನಾಂಗವಾಗಲಿ ಅಥವಾ ಅರಣ್ಯಾಧಿಕಾರಿಗಳೇ ಆಗಲಿ ಅವರಿಗೆ ಕಠಿಣವಾಗಿ ಶಿಕ್ಷಿಸುವ ಬಿಗಿ ಕಾನೂನನ್ನು ಜಾರಿಗೆ ತಂದರು. ಕಾಡು ಕಾಯುವ ವನ ಪಾಲಕರನ್ನು ಹೆಚ್ಚಿಸಲಾಯಿತು. ಈ ಯೋಜನೆಯನ್ನು ಮೆಚ್ಚಿಕೊಂಡ ವಿಶ್ವ ವನ್ಯ ಮೃಗ ನಿಧಿ'ಯು ಇದರ ಉತ್ತೇಜನಕ್ಕೆ ಒಂದು ಮಿಲಿಯನ್ ಡಾಲರ್ ಮೊತ್ತವನ್ನು ಅನುದಾನವಾಗಿ ನೀಡಿತು. ಒಂದು ದಶಕಗಳ ಬಳಿಕ ಮತ್ತೆ ಹುಲಿಗಳ ಗಣತಿ ಆರಂಭ ಮಾಡಿದರು. ಈ ಯೋಜನೆಯು ಪರಿಣಾಮ ಎಂಬAತೆ ಸುಮಾರು 4,334 ಹುಲಿಗಳು ಹೊಸತಾಗಿ ಕಂಡು ಬಂದವು. ಈ ಪ್ರಗತಿಯನ್ನು ಇಡೀ ವಿಶ್ವವೇ ಕೊಂಡಾಡಿತು. ಅಂತೂ ಈ ಯೋಜನೆಯು ಹುಲಿಗಳ ನಿರ್ಮೂಲವನ್ನು ತಡೆಗಟ್ಟುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿತು. ವಿಶ್ವಸಂಸ್ಥೆಯು ಈ ಸಾಧನೆಗೆ ಭಾರತದ ಬೆನ್ನು ತಟ್ಟಿತು. ಇದಕ್ಕೆ ಸೂಕ್ತ ಸಮಯದಲ್ಲಿ ಕಡಿವಾಣವನ್ನು ಹಾಕದೆ ಇದ್ದಿದ್ದರೆ, ನಮ್ಮ ಮುಂದಿನ ಪೀಳಿಗೆಯು ಇಂತಹ ಹುಲಿಗಳನ್ನು ಬರೇ ಚಿತ್ರಪಟಗಳಲ್ಲಿ ಕಾಣುವ ದಿನಗಳು ಎದುರಾಗುತ್ತಿತ್ತೆಂದು ಸಂತೋಷ ವ್ಯಕ್ತಪಡಿಸಿತು. ಇಂದಿಗೂ ಈ ಹುಲಿ ಯೋಜನೆಯ ಸಂರಕ್ಷಣಾ ಕಾರ್ಯಕ್ರಮವು ಜಾರಿಯಲ್ಲಿದೆ. ಜೊತೆಗೆ ಜುಲಾÊ 29ರ ದಿನವನ್ನು ಅದು ಅಂತರಾಷ್ಟ್ರೀಯ ಹುಲಿ ದಿನಾಚಣೆಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಹುಲಿಯು ನಿಸರ್ಗದ ಅತ್ಯುತ್ತಮ ಸುಂದರ ಹಾಗೂ ಕೆಚ್ಚದೆಯ ಮೃಗ. ಅದು ಭಾರತದ ರಾಷ್ಟಿçÃಯ ಪ್ರಾಣಿಯಾಗಿಯೂ ಗುರುತಿಸಿಕೊಂಡಿದೆ. ಅದರ ರಾಜ ಗಾಂಭೀರ್ಯದ ನಡಿಗೆ, ತೀಕ್ಷ÷್ಣವಾದ ನೋಟ, ವೇಗದ ಓಟ, ಅಸಾಧರಣ ಮೈ ಕಟ್ಟು, ಭೇಟೆಯಾಡುವ ಶೈಲಿ, ಹೆಣ್ಣು ಹುಲಿಯು ಮಕ್ಕಳನ್ನೂ ಪೋಷಣೆ ಮಾಡುವ ರೀತಿ, ಮಕ್ಕಳನ್ನು ಉಳಿಸಿಕೊಳ್ಳಲು ಅದು ನಡೆಸುವ ಹೋರಾಟ ಇತ್ಯಾದಿ ಅದನ್ನು ರಾಷ್ಟಿçÃಯ ಮೃಗವಾಗಿ ಆಯ್ಕೆ ಮಾಡಲಾಗಿದೆ. ಹುಲಿಗಳ ಗುಂಪು ಕಾಡಿನಲ್ಲಿ ತಮ್ಮದೇ ವ್ಯಾಪ್ತಿ ಪ್ರದೇಶವನ್ನು ಗುರುತಿಸಿಕೊಂಡು ಜೀವಿಸುತ್ತವೆ. ತನ್ನ ಕುಟುಂಬದ ಹೆಣ್ಣು ಹುಲಿಯು ಬೇರೆ ವ್ಯಾಪ್ತಿಗೆ ಹೋಗ ಕೂಡದೆಂದು ಅದು ಸದಾ ಕಟ್ಟೆಚ್ಚರ ವಹಿಸುತ್ತದೆ. ಮರಗಳ ತೊಗಟೆಗಳನ್ನು ತನ್ನ ಹರಿತವಾದ ಉಗುರಿನಿಂದ ಕೆರೆದು ಆಗಾಗ ಅದರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತದೆ. ತನ್ನ ಸರ ಹದ್ದಿಗೆ ಬರುವ ಅನೇಕ ಮರಗಳಿಗೆ ಅದು ಈ ರೀತಿಯ ಗುರುತುಗಳನ್ನು ಹಾಕಿಕೊಳ್ಳುತ್ತದೆ. ಇದು ಉಳಿದ ವ್ಯಾಪ್ತಿಯ ಹುಲಿಗಳು ಅತಿಕ್ರಮಣ ಮಾಡಬಾರದೆಂಬ ಸೂಚನೆ. ಈ ಎಚ್ಚರಿಕೆಯನ್ನು ಉಲ್ಲಂಘಿಸಿಯೂ ಕೆಲವು ಹುಲಿಗಳು ಲಕ್ಷö್ಮಣ ರೇಖೆಯನ್ನು ದಾಟುವುದಿದೆ. ಹೀಗೆ ಆಕ್ರಮವಾಗಿ ನುಸುಳಿದಾಗ ಅದು ತೀವ್ರವಾದ ಪ್ರತಿಭಟನೆ ಮಾಡುತ್ತದೆ. ಕಾದಾಟಕ್ಕೆ ನಿಂತು, ಇಡೀ ಕಾಡೇ ನಡುಗುವಂತೆ ಘರ್ಜಿಸುತ್ತದೆ. ತನ್ನ ಬಿಗಿ ಪಂಜದಲ್ಲಿ ಮುಖಮೂತಿಯನ್ನು ಗಮನಿಸದೆ ಹೊಡೆಯುತ್ತದೆ. ಇದನ್ನುಟೆರಿಟರಿ ಪೈಟ್’ ಅನ್ನುತ್ತಾರೆ. ಇಲ್ಲಿ ಒಂದೋ ಎದುರಾಳಿ ಹುಲಿ ತೀವ್ರವಾದ ಗಾಯಗೊಂಡು ಪರಾರಿಯಾಗುತ್ತದೆ ಅಥವಾ ಕಾದಾಟದಲ್ಲಿಯೇ ಹತವಾಗುತ್ತದೆ.
    ಮುಖ್ಯ ವಿಚಾರವೆಂದರೆ ಇಲ್ಲಿಯೇ ಹುಟ್ಟಿ ಬೆಳೆದ ಹುಲಿಯು ತನ್ನ ತವರು ಪ್ರದೇಶವನ್ನು ಯಾರಿಗೂ ಬಿಟ್ಟು ಕೊಡಲು ಸಿದ್ಧವಿರುವುದಿಲ್ಲ. ಅದು ತನ್ನ ವ್ಯಾಪ್ತಿ ಪ್ರದೇಶದಲ್ಲಿಯೇ ತನ್ನ ಜೀವಿತವನ್ನು ಕಳೆಯ ಬಯಸುತ್ತದೆ. ಹೀಗಾಗಿ ಕಾಡ್ಗಿಜ್ಜಿಗೂ, ಸರಕಾರದ ಯೋಜನೆಗಳಿಗೂ ಅಥವಾ ಬೇರೆ ರಾಜ್ಯದ ವಲಸೆಗೂ ಅವುಗಳನ್ನು ಸ್ಥಳಾಂತರ ಮಾಡಿದರೆ ಅವು ಬದುಕಿ ಉಳಿಯುವ ಆಯಸ್ಸು ಬಲು ಕಡಿಮೆಯಾಗಿರುತ್ತದೆ.
    ನಮ್ಮ ರಾಜ್ಯದ ನಾಗರ ಹೊಳೆಯಂತೆ, ಹುಲಿಗಳಿಗೆ ರಾಜಸ್ತಾನದ ಸರಿಸ್ಕಾ' ಮತ್ತು ಮಧ್ಯ ಪ್ರದೇಶದಪನ್ನಾ’ ಅರಣ್ಯಾಧಾಮಗಳು ಬಲು ಪ್ರಸಿದ್ಧ ತಾಣಗಳು. ಇಲ್ಲಿ ನೂರಾರು ಹುಲಿಗಳಿವೆ. ಆದರೆ ಈ ಪ್ರದೇಶದ ಹುಲಿಗಳನ್ನು ಇನ್ನೊಂದು ತಾಣಕ್ಕೆ ಸ್ಥಳಾಂತರ ಗೊಳಿಸಿದರೆ ಅವು ಹೊಸ ಪ್ರದೇಶವನ್ನು ಇಷ್ಟಪಡುವುದಿಲ್ಲ. ಹೇಗಾದರೂ ತಪ್ಪಿಸಿಕೊಂಡು ತಮ್ಮ ಮೂಲ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತವೆ. ಇದಕ್ಕಾಗಿಯೇ ಮೃಗಾಲಯಗಳಲ್ಲಿ ಹುಲಿಗಳ ಸಣ್ಣ ಮರಿಗಳನ್ನೇ ತಂದು, ಪೋಷಣೆ ಮಾಡುತ್ತಾರೆ. ಅವು ಅಲ್ಲೇ ಬೆಳೆದು, ಬಾಲ್ಯ ಸವೆದು ಯೌವನಕ್ಕೆ ಕಾಲಿಡುತ್ತವೆ. ಕೊನೆಗೆ ಮೃಗಾಲಯವನ್ನೇ ಮನೆ ಮಾಡಿಕೊಂಡು ಜೀವನ ಪೂರ್ತಿ ಕಳೆಯುತ್ತವೆ. ಇಲ್ಲದಿದ್ದರೆ, ಅದರ ಜಿನ್‌ನಲ್ಲಿ ಹರಿದು ಬಂದ ವಂಶವಾಹಿ ಗುಣವನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಿಲ್ಲ.
    ಇನ್ನು ಮನುಷ್ಯರಾದ ನಾವು ಪ್ರಾಣಿಗಳ ಕಾಡಿನ ವ್ಯಾಪ್ತಿ ಪ್ರದೇಶವನ್ನು ನಿರ್ಮೂಲನ ಮಾಡುತ್ತೇವೆ. ಅವರ ತವರು ಪ್ರದೇಶವನ್ನು ಕಡಿದು ರೈಲು ಮಾರ್ಗ ನಿರ್ಮಿಸುತ್ತೇವೆ. ದೊಡ್ಡ ದೊಡ್ಡ ರಾಷ್ಟಿçÃಯ ಹೆದ್ದಾರಿಗಳನ್ನು ಅಗೆದು ನಗರಗಳಿಗೆ ಜೋಡಿಸುತ್ತೇವೆ. ಸುರಂಗಗಳನ್ನು ಕೊರೆದು, ಹೊಸ ಹೊಸ ಹಾದಿಗಳನ್ನೂ ಹುಡುಕುತ್ತೇವೆ. ಕಾಡ್ಗಿಚ್ಚು' ಅನ್ನುವ ನಾಟಕವನ್ನು ಆಡಿ ಸಾವಿರಾರು ಪ್ರಾಣಿ-ಪಕ್ಷಿಗಳನ್ನು ದೂರಕ್ಕೆ ಅಟ್ಟಿ ಬಿಡುತ್ತೇವೆ. ಆಗ ಅಲ್ಲಿ ಲಕ್ಷಾಂತರ ಕ್ರಿಮಿ-ಕೀಟಗಳು, ಹುಳ-ಹುಪ್ಪಟೆಗಳು, ಹರಿದಾಡುವ ಸರಿಸೃಪಗಳು ಬೆಂಕಿಗೆ ಆಹುತಿಯಾಗುತ್ತವೆ. ಓಡಿ ಹೋಗಲು ಸಾಧ್ಯವಾಗದ ಅದೆಷ್ಟು ಮರಿಗಳು, ಗರ್ಭವತಿ ಪ್ರಾಣಿಗಳು ಸುಡುವ ಅಗ್ನಿಗೆ ಕರಟಿ ಹೋಗುತ್ತವೆ. ಇದರಿಂದ ಕಾಡಿನ ಇಡೀ ಪರಿಸರವೇ ಅಸಮತೋಲನಗೊಳ್ಳುತ್ತದೆ. ಅವು ಮುಂದೆ ಪರಿಸರದ ಮೇಲೆ ಕೆಟ್ಟದಾದ ಪರಿಣಾಮ ಬೀರುತ್ತವೆ. ಇದರಿಂದಲೇ ಪ್ರಕೃತಿ ವಿಕೋಪಗಳು ಸೃಷ್ಟಿಯಾಗುತ್ತವೆ. ಇಲ್ಲಿ ಹುಲಿಯ ಸಮಸ್ಯೆಯೂ ಇದೇ. ಅವು ವ್ಯಾಪ್ತಿ ಪ್ರದೇಶದಿಂದ ತಪ್ಪಿಹೋದರೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತವೆ. ತನ್ನ ಕ್ಷೇತ್ರವನ್ನು ಹುಡುಕಾಡಲು ಓಡಾಡುತ್ತವೆ. ಅದು ಸಿಗದೇ ಹೋದಾಗ ನೇರವಾಗಿ ಹತ್ತಿರದ ಹಳ್ಳಿಗೂ, ಊರಿಗೂ ನುಗ್ಗುತ್ತವೆ. ತಿನ್ನಲು ಆಹಾರವು ಸಿಗದೆ ಹೋದಾಗ ಮೇಯುವ ಜಾನುವಾರಗಳನ್ನೂ, ನಾಯಿಗಳನ್ನೂ ಹಿಡಿದು ಕೊಲ್ಲುತ್ತವೆ. ಮನುಷ್ಯರ ಮೇಲೆ ದಾಳಿ ಮಾಡಿದಾಗನರಭಕ್ಷಕ’ ಅನ್ನುವ ಹಣೆಪಟ್ಟಿಯನ್ನು ಪಡೆಯುತ್ತವೆ. ಈ ದುಷ್ಕೃತ್ಯಕ್ಕೆ ಇಲ್ಲಿ ಮನುಷ್ಯನೇ ಕಾರಣವೇ ಹೊರತು, ಹುಲಿಯಲ್ಲ. ಕಾಡಿನ ರಾಜನಾದ ಹುಲಿಯು ಯಾವತ್ತೂ ರಾಜ ಹುಲಿಯೇ. ಅದಕ್ಕೆ ಮನುಷ್ಯನ ಹಣ, ಬಂಗಾರ ಮನೆ-ಮಠಗಳು ಯಾವುದೂ ಬೇಕಿಲ್ಲ. ಮದ, ಮತ್ಸರ, ಅಸೂಯೆ, ಹಗೆತನ ತುಂಬಿಕೊAಡಿರುವ ಕೊಳಕು ಮನಸ್ಸಿನ ರಕ್ತವೂ ಬೇಕಿಲ್ಲ. ಅದಕ್ಕೆ ಬೇಕಾಗಿರುವುದು ತನ್ನ ವ್ಯಾಪ್ತಿ-ತನ್ನ ವಲಯ. ಅಲ್ಲೇ ಅದು ತನ್ನ ಸಂಸಾರದ ಜೊತೆಗೆ ಸಭ್ಯ ಗೃಹಸ್ಥನಾಗಿ ಸ್ವಚಂದವಾಗಿ ಬದುಕಬಲ್ಲದು. ಅದಕ್ಕೆ ನಾಡಿಗೆ ನುಸುಳಿ ಕಳ್ಳರಂತೆ ಅಡಗಿಕೊಳ್ಳಲು, ಭಯದಲ್ಲಿ ನಡುಗಿಕೊಳ್ಳಲು ಯಾವತ್ತೂ ಇಷ್ಟವಿಲ್ಲ. ಅದು ಸದಾ ಸ್ವಾತಂತ್ರ್ಯವನ್ನೇ ಬಯಸುತ್ತವೆ.
    ಇವತ್ತು ಹುಲಿ ಸಂರಕ್ಷಣಾ ಯೋಜನೆಗೆ 50 ವರ್ಷಗಳು ದಾಟಿದವು. ಆದರೆ ಅದು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ದುರಂತವೆAದರೆ ನಮ್ಮಲ್ಲಿ ಅದೆಷ್ಟು ಪ್ರಗತಿಪರ ಯೋಜನೆಗಳನ್ನು ರೂಪಿಸಿದರೂ, ಅದನ್ನು ಅಡ್ಡಹಾದಿಯಲ್ಲಿ ಕಬಳಿಸುವವರೇ ಹೆಚ್ಚು. ಇದಕ್ಕೆ ಈ ಪ್ರಾಜೆಕ್ಟ್ ಟೈಗರ್' ಕೂಡ ಹೊರತಲ್ಲ. ಇದರಲ್ಲಿ ಮುಖ್ಯವಾಗಿ ಆದಿವಾಸಿಗಳು, ಶ್ರೀಮಂತರು, ರಾಜಕಾರಣಿಗಳು ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಶಾಮೀಲಾಗಿರುತ್ತಾರೆ. ಇಲ್ಲಿ ಬೇಲಿಯೇ ಹೊಲವನ್ನು ಮೇಯಿದರೆ ಯಾರಿಗೆ ಕಾನೂನಿನ ಕುಣಿಕೆಯೊಳಗೆ ಸಿಕ್ಕಿಸುವುದು? ಮನುಷ್ಯನಿಗೆ ಹಣದ ದಾಹವು ಮಾಡಬಾರದ ಕೆಲಸಗಳನ್ನೂ ಮಾಡಿಸುತ್ತದೆ. ಇವರಿಂದಲೇ ತೆರೆಮರೆಯಲ್ಲಿ ಹುಲಿಗಳ ಮಾರಣ ಹೋಮಗಳು ಜರುಗುತ್ತಲೇ ಇರುತ್ತವೆ. ಇಂದಿಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಲಿಗಳ ಚರ್ಮ, ಮೂಳೆ, ಮಾಂಸ, ಕಣ್ಣುಗಳು, ಉಗುರುಗಳು ಇತ್ಯಾದಿಗಳಿಗೆ ಬಹು ಬೇಡಿಕೆ ಇದೆ. ಇದರಲ್ಲಿ ಅತ್ಯಧಿಕ. ಗ್ರಾಹಕರಿರುವುದು ಥೈಲ್ಯಾಂಡ್ ರಾಷ್ಟçದಲ್ಲಿ. ಹೀಗಾಗಿ ಭಾರತದಿಂದ ಚೀನಾ ಮೂಲಕವಾಗಿ ಹುಲಿಗಳ ದೇಹದ ಭಾಗಗಳು ಅಕ್ರಮವಾಗಿ ರವಾನೆಯಾಗುತ್ತಲೇ ಇರುತ್ತದೆ. ಈ ವ್ಯವಸ್ಥಿತ ಜಾಲದಲ್ಲಿ ಅನೇಕ ಕಾಣದ ಕೈಗಳಿವೆ. ಬಲವಾದ ರಾಜಕೀಯ ಕೈವಾಡವಿರುವ ಕಾರಣ ಅವರನ್ನು ಸುಲಭವಾಗಿ ಬಂಧಿಸುವುದು ಸುಲಭವಲ್ಲ. ಈ ರೀತಿ ಅವ್ಯಾಹಿತವಾಗಿ ಸಾಗುವ ಕಳ್ಳ ಸಾಗಣೆಯಿಂದ ಹುಲಿಗಳ ಸಂತತಿ ಕ್ಷೀಣಿಸುತ್ತಾ ಸಾಗುತ್ತಿದೆ. ದೇಶಕ್ಕೆ ದ್ರೋಹ ಬಗೆಯುವ ಇಂತಹ ನೀಚರೇ ಹುಲಿಗಳ ನಿಜವಾದ ಭಕ್ಷಕರು. ಇವರಿಗೆ ಹಣದಾಶೆಗೆ ಕುಮ್ಮಕ್ಕು ನೀಡುವ ಖಾಕಿ ಅಧಿಕಾರಿಗಳೇ ನಿಜವಾದ ಹುಲಿ ಹಂತಕರು! ಕಳೆದ ಬಾರಿಯ ಹುಲಿ ಗಣತಿಯ ಪಟ್ಟಿಯನ್ನು ಎತ್ತಿ ನೋಡಿದರೆ, ಈಗ ಭಾರತದಲ್ಲಿ ಬದುಕಿ ಉಳಿದಿರುವ ಹುಲಿಗಳ ಸಂಖ್ಯೆ ಕೇವಲ 3,167. ಎಲ್ಲಿಯ ವರೆಗೆ ಸರಕಾರದ ಕಾಯ್ದ-ಕಾನೂನುಗಳು ಸಡಿಲಗೊಳ್ಳುತ್ತವೋ ಅಲ್ಲಿಯವರೆಗೆ ಇಂತಹದ್ದೇ ಫಲಿತಾಂಶಗಳು ಕಾಣಸಿಗುತ್ತದೆ. ಹುಲಿ ಬೇಟೆಯಾಡುವ ಯಾವುದೇ ಹಂತಕನಿರಲಿ, ಆತ ಕಾಡಿಗೆ ಹೊಕ್ಕರೆಕಂಡಲ್ಲಿ ಗುಂಡು’ ಅನ್ನುವ ಕಾನೂನು ಜಾರಿಗೆ ತಂದರೆ ಹುಲಿಗಳ ಸಂತತಿ ಏರ ಬಹುದೋ ಏನೋ?
    ಇರ್ಶಾದ್ ಮೂಡಬಿದ್ರಿ

  • ಬೇಸಿಗೆಗೂ ಮುನ್ನ ನೀರನ್ನು ಸಂಗ್ರಹಿಸಿ

    ಬೇಸಿಗೆಗೂ ಮುನ್ನ ನೀರನ್ನು ಸಂಗ್ರಹಿಸಿ

    ಬೇಸಿಗೆಕಾಲ ಆರಂಭವಾಗುತ್ತಿದ್ದಂತೆಯೇ ಸುಡು ಬಿಸಿಲು. ಜೊತೆಗೆ ದೇಶದ ಹಲವಾರು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಬರಗಾಲ ಉಂಟಾಗುತ್ತದೆ. ವಾಸ್ತವದಲ್ಲಿ ಮಳೆಗಾಲದಲ್ಲಿ ಧಾರಾಳವಾಗಿ ಮಳೆ ಸುರಿಯುವ ಅನೇಕ ಪ್ರದೇಶಗಳು ನಮ್ಮಲ್ಲಿವೆ. ಮಳೆ ನೀರು ಹೆಚ್ಚಾಗಿ ಪ್ರವಾಹ. ನೆರೆ ಬರುವುದೂ ಇದೆ. ಈ ಮಳೆ ನೀರನ್ನು ಹೀಗೆ ಹಾಳಾಗುವುದನ್ನು ತಪ್ಪಿಸಿ ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕ್ರಮವನ್ನು ಅಳವಡಿಸಿದರೆ ಖಂಡಿತವಾಗಿಯೂ ಇದರಿಂದ ಎಲ್ಲರಿಗೂ ಪ್ರಯೋಜನ ಪಡೆಯಬಹುದು.

    1000 ಚದರ ಅಡಿಗಳ ಪ್ರದೇಶದಿಂದ ವರ್ಷಕ್ಕೆ 3 ರಿಂದ 5 ಲಕ್ಷ ಲೀಟರ್ ಮಳೆ ನೀರು ಲಭ್ಯವಾಗುತ್ತದೆ ಎಂಬುದು ಲೆಕ್ಕಾಚಾರ. 10 ಸೆಂಟ್ ಹೊಲವು 1,60,000 ಲೀಟರ್ ಮಳೆ ನೀರನ್ನು ಭರಿಸುತ್ತದೆ. ಕಾಡು, ಹೊಲ, ಕೆರೆ, ಬಾವಿಗಳು ಮಳೆ ನೀರನ್ನು ದೀರ್ಘಾವಧಿಯವರೆಗೆ ಸಂಗ್ರಹಿಸಿಡುತ್ತದೆ. ಆದುದರಿಂದ ಮಳೆ ನೀರನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಉಪಯೋಗಿಸಿ ನೆಲದೊಳಗೆ ಇಂಗಿಸಿ ಭೂಗರ್ಭ ಜಲಮಟ್ಟವನ್ನು ಹೆಚ್ಚಿಸಲು ಗಮನಹರಿಸಬೇಕು.

    ಮನೆ ಮಠಗಳಲ್ಲಿ ಜಲಸಂರಕ್ಷಣಾ ವಿಧಾನಗಳು

    ಹಿಂದಿನ ಅವಿಭಕ್ತ ಕುಟುಂಬಗಳು ಇಂದು ನ್ಯೂಕ್ಲಿಯರ್ ಕುಟುಂಬಗಳಾಗಿವೆ. ಒಂದು ಸಣ್ಣ ಮನೆ, ಗೋಡೆ, ಬೇಲಿ ನಿರ್ಮಿಸಿ ಗಡಿಯನ್ನು ಸೃಷ್ಟಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಮನೆಗಳ ನಾಲ್ಕೂ ಕಡೆ ಗೋಡೆಗಳಿರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಮುಂದಿನ ಬಾಗಿಲಿನ ಭಾಗದಲ್ಲಿ ಗೋಡೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಗೋಡೆಗಳ ಮೇಲೆ ದ್ವಾರ ಸೃಷ್ಟಿಸಿ ಮಳೆ ನೀರನ್ನು ಹೊರಗೆ ಹಾಕಲಾಗುತ್ತದೆ. ಇದರಿಂದ ಬಾವಿಯಲ್ಲಿ ನೀರಿನ ಸಂಗ್ರಹವು ಕಡಿಮೆಯಾಗುತ್ತದೆ. ಮಲಿನ ಜಲವು ಕೂಡಾ ಇದೇ ರೀತಿಯಲ್ಲಿ ಹರಿಸುವುದರಿಂದ ಪರಿಸರವೂ ಕಲುಷಿತವಾಗುತ್ತದೆ.

    ಹಳೆಯ ಕಾಲದಲ್ಲಿ ಸುರಿಯುವ ನೀರು ಅಡುಗೆ ಮನೆ, ತೊಟ್ಟಿಗೆ, ತೆಂಗಿನ ಮರದ ಬುಡಕ್ಕೆ ಹರಿಸುವ ವ್ಯವಸ್ಥೆ ಇತ್ತು. ಆದರೆ ಇಂದು ಎಲ್ಲ ನೀರನ್ನೂ ರಸ್ತೆಯ ಮೇಲೆ ಹರಿಯ ಬಿಡಲಾಗುತ್ತದೆ. ಇದರಿಂದ ನೀರು ಅಲ್ಲಲ್ಲಿ ಸಂಗ್ರಹವಾಗಿ ಸೊಳ್ಳೆಗಳು ಹೆಚ್ಚಾಗಿ ಬೆಳೆಯುತ್ತವೆ. ಹಲವು ರೀತಿಯ ಜ್ವರಗಳು ಬರಲು ಕಾರಣವಾಗುತ್ತದೆ. ಮನೆ ಮಠಗಳಿಂದ ಹರಿಯುವ ಮಳೆಯ ನೀರನ್ನು ಅಡ್ಡಗಟ್ಟಿದರೆ ಬಾವಿಯಲ್ಲಿ ನೀರು ಹೆಚ್ಚಾಗಿ ಸಂಗ್ರಹವಾಗಬಹುದು.

    ಮನೆಯ ಅಂಗಳ ಮತ್ತು ಹಿತ್ತಿಲನ್ನು ಕಾಂಕ್ರೀಟ್ ಮಾಡಿದರೆ ಮಾತ್ರ ಆಕರ್ಷಕವಾಗುತ್ತದೆ ಎಂಬ ಭಾವನೆ ಇಂದು ಸರ್ವೇ ಸಾಮಾನ್ಯವಾಗಿದೆ. ಮಳೆ ನೀರು ನಮ್ಮ ಹಿತ್ತಿಲಲ್ಲಿ ಇಂಗಬೇಕು. ಆಗ ಬಾವಿಯಲ್ಲಿ ನೀರು ಸಂಗ್ರಹವಾಗುತ್ತದೆ. ಇಲ್ಲದಿದ್ದರೆ ಕುಡಿಯುವ ಶುದ್ಧ ನೀರಿಗೂ ಕಷ್ಟಪಡಬೇಕಾಗಿ ಬರಬಹುದು.

    ಮನೆಯ ಸುತ್ತಲೂ ಜೈವಿಕ ಬೇಲಿಯನ್ನು ನಿರ್ಮಿಸಿದರೆ ಮಳೆಯ ನೀರನ್ನು ಸಂಗ್ರಹಿಸಬಹುದು. ಈ ಮೂಲಕ ಮಳೆ ನೀರನ್ನು ಸಂರಕ್ಷಿಸಬಹುದು. ಮಣ್ಣಿನ ಗೋಡೆಗಳನ್ನು ನಿರ್ಮಿಸಿ ಅವರಲ್ಲಿ ದಾಸವಾಳ, ಹನಿಗುಬ್ಬಿ, ರಾಮಪತ್ರೆಯಂತಹ ಗಿಡಗಳನ್ನು ನಾಟಿ ಮಾಡಿ ಬೆಳೆಸಬಹುದು. ಹಿತ್ತಲಲ್ಲಿ ಸುರಿಯುವ ಮಳೆ ನೀರು ಹೊರಗೆ ಹರಿಯದಂತೆ ಹಿತ್ತಲಿನಲ್ಲಿಯೇ ನೆನೆಸಲು ಅವಕಾಶ ನೀಡಬೇಕು. ಈ ವಿಧಾನವು ಮಣ್ಣಿನ ಗುಣಮಟ್ಟದ ಸುಧಾರಣೆಗೂ ಸಹಾಯಕವಾಗಿದೆ. ಮೇಲ್ಮಟ್ಟದ ಮಣ್ಣು ಫಲವತ್ತಾಗುತ್ತದೆ. ಇದರಿಂದ ಬೆಳೆಗಳಿಗೆಉತ್ತಮ ಮಣ್ಣು ಲಭ್ಯವಾಗುತ್ತದೆ. ಜೊತೆಗೆ ಬಾವಿಯಲ್ಲಿಯೂ ಧಾರಾಳ ನೀರು ಸಂಗ್ರಹವಾಗುತ್ತದೆ.

    ಮಣ್ಣಿನ ತಡೆಗೋಡೆ ಮತ್ತು ಗಿಡಗಳನ್ನು ಬೆಳೆಸುವುದರಿಂದ ಒಳ್ಳೆಯ ರೀತಿಯಲ್ಲಿ ಮಳೆ ನೀರು ಸಂರಕ್ಷಣೆ ಸಾಧ್ಯವಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಈ ರೀತಿಯ ಜೈವಿಕ ಬೇಲಿಗಳನ್ನು ನಿರ್ಮಿಸಬಹುದಾಗಿದೆ.

    ಮಳೆ ನೀರು ಮನೆಯ ಹಿತ್ತಲಿನಿಂದ ಹೊರಗೆ ಹರಿಯದಿದ್ದರೆ ಹಿತ್ತಲಿನಲ್ಲಿ ಹೆಚ್ಚು ನೀರು ಸಂಗ್ರಹವಾಗಬಹುದು. ಈ ನೀರಿನ ಜಮಾವಣೆಯನ್ನು ತಪ್ಪಿಸಲು ಇಂಗು ಗುಂಡಿಗಳನ್ನು ರಚಿಸಬಹುದು. ಬಾವಿ ಇರುವ ಸ್ಥಳ, ಮಣ್ಣಿನ ಗುಣಮಟ್ಟವನ್ನು ಗಮನದಲ್ಲಿರಿಸಿ ಇಂತಹ ವೇಳೆ ಕೊಯ್ಲು ಗುಂಡಿಗಳನ್ನು ರಚಿಸಬೇಕು. ಪ್ರತಿ ಮನೆಗಳಲ್ಲಿ ಇಂತಹ ಪ್ರಯತ್ನ ಮಾಡಿದರೆ ನಮ್ಮ ಮನೆಗಳಲ್ಲಿರುವ ಬಾವಿಗಳೇ ಶುದ್ಧ ನೀರಿನ ಮೂಲಗಳಾಗಿ ಮಾರ್ಪಾಟಾಗಬಲ್ಲದು.

    ಮೇಲ್ಛಾವಣೆ ಮಳೆ ನೀರು ಸಂಗ್ರಹಣೆ

    ಮನೆಯ ಮೇಲ್ಛಾವಣೆಯಿಂದ ಬೀಳುವ ಮಳೆ ನೀರನ್ನು ಪೈಪುಗಳು ಮತ್ತು ತೊಟ್ಟಿಗಳ ಸಹಾಯದಿಂದ ನೇರವಾಗಿ ಸಂಗ್ರಹಿಸುವ ವಿಧಾನವನ್ನು ಮೇಲ್ಛಾವಣೆ ಮಳೆ ನೀರು ಸಂಗ್ರಹಣೆ (Roof Top Rain Water Harvesting) ಎಂದು ಕರೆಯಲಾಗುತ್ತದೆ.

    ಈ ಪೈಪುಗಳು ಮತ್ತು ತೊಟ್ಟಿಗಳ ಮೂಲಕ ಹರಿದು ಬರುವ ಮಳೆ ನೀರನ್ನು ಫಿಲ್ಟರ್ ವ್ಯವಸ್ಥೆ ಮೂಲಕ ಶುದ್ಧೀಕರಿಸಬಹುದು.

    ಒಬ್ಬ ವ್ಯಕ್ತಿಗೆ ದಿನಕ್ಕೆ 20 ಲೀಟರ್ ನೀರಿನಂತೆ 5 ಜನರಿರುವ ಒಂದು ಕುಟುಂಬಕ್ಕೆ 100 ಲೀಟರ್ ನೀರು ಬೇಕಾಗುತ್ತದೆ ಎಂಬುದು ಸಾಮಾನ್ಯ ಲೆಕ್ಕಾಚಾರ. ಒಂದು ವರ್ಷದಲ್ಲಿ ಸುಮಾರು 100 ದಿನಗಳಷ್ಟು ಬೇಸಿಗೆ ಇರುತ್ತದೆ ಎಂದು ಲೆಕ್ಕ ಹಾಕಿದರೆ, ಪ್ರತಿದಿನ 40 ಲೀಟರ್‌ನಂತೆ 10,000 ಲೀಟರ್ ಸಾಮರ್ಥ್ಯವಿರುವ ಟ್ಯಾಂಕ್ ಬೇಕಾಗುತ್ತದೆ. ನೀರಿನ ಅಗತ್ಯ ಹೆಚ್ಚಾದರೆ ಟ್ಯಾಂಕಿನ ಸಾಮರ್ಥ್ಯವನ್ನು ಹೆಚ್ಚಿಸಬೇಕು.

    ಮೇಲ್ಛಾವಣೆಯಿಂದ ಸಂಗ್ರಹಿಸಿದ ಮಳೆ ನೀರನ್ನು ಶುದ್ಧಿಕರಿಸಿ ಟ್ಯಾಂಕುಗಳಲ್ಲಿ ಸಂಗ್ರಹಿಸಿಟ್ಟರೆ ಅದನ್ನು ಕುಡಿಯಲು ಉಪಯೋಗಿಸಬಹುದು. ಈ ಟ್ಯಾಂಕುಗಳನ್ನು ಸಿಮೆಂಟ್, ಫೈಬರ್ ಅಥವಾ ಫೆರೋ ಸಿಮೆಂಟ್‌ಗಳಿAದ ರಚಿಸಬಹುದಾಗಿದೆ. ಇದರಿಂದಲೇ ಬಾವಿಗೂ ನೀರನ್ನು ಹರಿಯಬಿಟ್ಟು ಬಾವಿಯ ನೀರಿನ ಪ್ರಮಾಣವನ್ನು ಹೆಚ್ಚಿಸಬಹುದು.

    ಭೂಮಟ್ಟದಲ್ಲಿ ಮಳೆ ನೀರು ಸಂರಕ್ಷಣೆ

    ಮಳೆ ನೀರನ್ನು ಮಣ್ಣಿನಲ್ಲಿ ಮತ್ತು ವಿವಿಧ ರೀತಿಯ ನೀರಿನ ಸಂರಕ್ಷಣೆಯ ವಿಧಾನದಲ್ಲಿ ಶೇಖರಿಸಿಡುವುದೇ ಭೂಮಟ್ಟದಲ್ಲಿ ಮಳೆ ನಿರು ಸಂಗ್ರಹಣೆ. ಮಹಾತ್ಮಾಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾವಿಗಳ ಪುನಶ್ಚೇತನ (ರೀಚಾರ್ಚ್) ಸಾಧ್ಯವಿದೆ. ಸರಾಸರಿ 10,000 ರೂಪಾಯಿ ಖರ್ಚಿನಲ್ಲಿ ಇದನ್ನು ಅಳವಡಿಸಬಹುದು.

    ಮಳೆ ನೀರು ಸಂರಕ್ಷಣೆಯ ಕೊಳಗಳು

    ಮಳೆ ನೀರನ್ನು ನೇರವಾಗಿ ಅಥವಾ ಹರಿದು ಹೋಗುತ್ತಿರುವ ನೀರನ್ನೂ ಸಂಗ್ರಹಿಸಿ ಕುಡಿಯುವ ಹೊರತಾಗಿ ಇತರ ಅಗತ್ಯಗಳಿಗೆ ಬಳಸಬಹುದು. ಇದಕ್ಕಾಗಿ ಕಡಿಮೆ ವೆಚ್ಚದ ಸಾಮಗ್ರಿಗಳನ್ನು, ಟರ್ಪಾಲನ್ನು ಬಳಸಿಯೂ ಸರಳ ನಿರ್ಮಾಣಗಳನ್ನು ಮಾಡಬಹುದು. ಬಾವಿಯ ಸುತ್ತಲೂ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಬಹುದು.

    ಮಳೆ ನೀರನ್ನು ಭೂಮಿಯೊಳಗೆ ಇಂಗಿಸಲು ಕಡಿಮೆ ವೆಚ್ಚದ ಗುಂಡಿಗಳನ್ನು ನಿರ್ಮಿಸಬೇಕು. ಮಳೆಯ ಸಮಯದಲ್ಲಿ ನೀರು ಸಂಗ್ರಹವಾಗಿ ನಿಧಾನವಾಗಿ ಭೂಮಿಯೊಳಗೆ ಇಂಗುವAತೆ ಮಾಡಬಹುದು. 0.6 ಮೀಟರ್ ಅಗಲ ಮತ್ತು ಆಳವಿರುವ ಗುಂಡಿಗಳ ನಿರ್ಮಾಣ ಉತ್ತಮ. ಇದರಿಂದ ಭೂಮಿಯೊಳಗಿನ ನೀರಿನ ಮಟ್ಟವೂ ಹೆಚ್ಚಾಗುತ್ತದೆ.

    ಕೆಂಪು ಕಲ್ಲುಗಳು ಮತ್ತು ಕಲ್ಲಿನ ಕ್ವಾರಿಗಳು

    ಬಳಕೆಯಾಗದ ಕೆಂಪು ಕಲ್ಲಿನ ಗುಂಡಿಗಳು. ಬಾವಿಗಳು ಇತ್ಯಾದಿಗಳನ್ನು ಜಲಾಶಯಗಳಾಗಿ ಪರಿವರ್ತಿಸಬಹುದಾಗಿದೆ. ಮನೆಗಳ ಛಾವಣೆ ಮತ್ತು ಅಂಗಳಗಳ ಮೇಲೆ ಬೀಳುವ ನೀರನ್ನು ಪೈಪ್‌ಗಳು ಅಥವಾ ಕಾಲುವೆಗಳ ಮೂಲಕ ಅಂತಹ ಹೊಂಡ ಮತ್ತು ಕ್ವಾರಿಗಳಿಗೆ ಹರಿಸಿದರೆ ಅದು ಮಣ್ಣಿನಲ್ಲಿ ಇಂಗಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಉಪಯುಕ್ತವಾಗುತ್ತದೆ.

    ತಡೆಗೋಡೆಗಳು

    ಹೊಳೆಗಳು ನದಿಗಳ ಕಿರಿದಾದ ಭಾಗಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರನ್ನು ಉಳಿಸಬಹುದು. ಮರಳು ಚೀಲಗಳು ಮತ್ತು ಇತರ ವಸ್ತುಗಳನ್ನು ಬಳಸುವ ಮೂಲಕ ಇದನ್ನು ಹೆಚ್ಚು ಖರ್ಚಿಲ್ಲದೆ ಪರಿಣಾಮಕಾರಿ ರೀತಿಯಲ್ಲಿ ಮಾಡಬಹದು.

    ಹೊದಿಕೆ ಮಾಡುವುದು

    ಮಣ್ಣನ್ನು ಹೊದಿಕೆ ಮಾಡುವುದರಿಂದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ನೀವು ಒಣ ಎಲೆಗಳು, ಕಸ, ಒಣ ಹುಲ್ಲಿನ ಇತ್ಯಾದಿಗಳನ್ನು ಹೊದಿಕೆ ಮಾಡಲು ಬಳಸಬಹುದು. ಇದು ಮಣ್ಣಿನ ಸಾವಯವ ಪದಾರ್ಥವನ್ನು ಹೆಚ್ಚಿಸುತ್ತದೆ ಮತ್ತು ನೀರು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

    ಅಂತರ್ಜಲದ ಯೋಜನಾಬದ್ಧ ಬಳಕೆ

    ಅಂತರ್ಜಲವನ್ನು ನಾವೆಂದೂ ಅನಿಯಂತ್ರಿತವಾಗಿ ಬಳಸಬಾರದು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಅದು ತನ್ನ ಮೂಲ ಅವಸ್ಥೆಗೆ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ಅದನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ.

    ಕೊಳವೆ ಬಾವಿಗಳನ್ನು ಕಡಿಮೆ ಮಾಡಬೇಕು

    ಭೂಗರ್ಭ ಜಲವು ನಿರಂತರವಾಗಿ ಕಡಿಮೆಯಾಗುತ್ತಿರುವುದಾಗಿ ಅಧ್ಯಯನಗಳು ತಿಳಿಸುತ್ತವೆ. ಅವೈಜ್ಞಾನಿಕವಾದ ಕೊಳವೆ ಬಾವಿಗಳ ನಿರ್ಮಾಣವು ಇದಕ್ಕೆ ಪ್ರಮುಖ ಕಾರಣವೆನ್ನಲಾಗುತ್ತಿದೆ.

    ಅನಿಯಂತ್ರಿತವಾಗಿ ಕೊಳವೆ ಬಾವಿ ಕೊರೆಯುವುದರ ಮೇಲೆ ನಿಯಂತ್ರಣ ಹೇರಬೇಕು.

    ವಿವಿಧ ಅಲರ್ಟುಗಳು

    ಮಳೆ ಬರುವುದಕ್ಕೆ ಮುಂಚೆಯೇ ಹವಾಮಾನ ವರದಿ ಕೇಂದ್ರವು ವಿವಿಧ ಅಲರ್ಟುಗಳನ್ನು ಘೋಷಿಸುತ್ತದೆ. ನಾಲ್ಕು ಬಣ್ಣಗಳ ಅಲರ್ಟುಗಳನ್ನು ಕೇಂದ್ರ ಹವಾಮಾನ ಇಲಾಖೆ ಹೊರಡಿಸುತ್ತದೆ. ಕೆಂಪು, ಆರೆಂಜ್, ಹಳದಿ ಮತ್ತು ಹಸಿರು. ಮಳೆ ಉಂಟಾಗುವ ಸಾಧ್ಯತೆಯನ್ನು ಗುರುತಿಸಿ ತಯಾರಿ ನಡೆಸಲಿಕ್ಕಾಗಿ ಮತ್ತು ಎಲ್ಲ ವಿಷಯಗಳಲ್ಲೂ ಸಿದ್ಧರಾಗಿರಲು ಈ ಅಲರ್ಟನ್ನು ಘೋಷಿಸಲಾಗುತ್ತದೆ. ಕೆಂಪು ಅಲರ್ಟ್ ಹೊರತುಪಡಿಸಿ ಉಳಿದವುಗಳ ಬಗ್ಗೆ ಹೆಚ್ಚು ಭೀತಿ ಪಡಬೇಕಾದ ಅಗತ್ಯವಿರುವುದಿಲ್ಲ. ಆರೆಂಜ್, ಹಳದಿ ಅಲರ್ಟ್ಗಳನ್ನು ಘೋಷಿಸಿದರೆ ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಬೇಕು.

    ರೆಡ್ ಅಲರ್ಟ್

    ಅತಿಯಾದ ಮಳೆ ಉಂಟಾಗುವ ಸಾಧ್ಯತೆ ಇದ್ದರೆ ರೆಡ್ ಆಲರ್ಟ್ ಘೋಷಣೆಯಾಗುತ್ತದೆ. 24 ಗಂಟೆಗಳೊಳಗೆ 204.4 ಮಿಲಿ ಮೀಟರ್‌ಗಿಂತ ಹೆಚ್ಚಿದ್ದರೆ ಅತಿ ತೀವ್ರವಾದ ಮಳೆ ಬರುವ ಸಾಧ್ಯತೆ ಇರುತ್ತದೆ.

    ಆರೆಂಜ್ ಅಲರ್ಟ್

    ಭಾರಿ ಮಳೆ ಸಾಧ್ಯತೆ ಇದ್ದರೆ ಆರೆಂಜ್ ಅಲರ್ಟ್ ಘೋಷಣೆಯಾಗುತ್ತದೆ. 24 ಗಂಟೆಗಳೊಳಗೆ 115.6 ಮಿಲಿಮೀಟರ್‌ನಿಂದ 204.4 ಮಿಲಿ ಮೀಟರ್ ವರೆಗೆ ಮಳೆ ಲಭಿಸುವ ಅತಿಯಾದ ಮಳೆ ಎಂಬುದು ಇದರಿಂದ ಅರ್ಥವಾಗುತ್ತದೆ. ಆರೆಂಜ್ ಅಲರ್ಟ್ ಅತಿ ಗಂಭೀರವಾದ ಮುನ್ನೆಚ್ಚರಿಕೆ ನೀಡುತ್ತದೆ. ಸುರಕ್ಷಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.

    ಎಲ್ಲೋ ಅಲರ್ಟ್

    ಒಮ್ಮೆಲೆ ಸುರಿಯುವ ಸಾಧ್ಯತೆ ಇರುವ ಮಳೆ ಇದ್ದರೆ ಎಲ್ಲೋ ಅಲರ್ಟ್ ಘೋಷಿಸಲಾಗುತ್ತದೆ. 24 ಗಂಟೆಗಳೊಳಗೆ 64.5 ಮಿಲಿ ಲೀಟರ್‌ನಿಂದ 115.5 ಮಿಲಿ ಲೀಟರ್ ವರೆಗೆ ಮಳೆಯಾಗುವ ಸಾಧ್ಯತೆ ಇದ್ದರೆ ಅದನ್ನು ಎಲ್ಲೋ ಅಲರ್ಟ್ ಎನ್ನಲಾಗುತ್ತದೆ. ಸುರಕ್ಷಾ ಕ್ರಮವನ್ನು ಜಾಗೃತಗೊಳಿಸಬೇಕು. ವಾತಾವರಣದ ಮೇಲೆ ನಿಗಾ ಇರಲಿ.

    ಗ್ರೀನ್ ಅಲರ್ಟ್

    ಇದು ಹೆಚ್ಚು ಭಯ ಪಡಬೇಕಾದ ಅವಸ್ಥೆಯಲ್ಲ.

    ಮುಹಮ್ಮದ್ ಮುರ್ಸಿ