Category: ಮಕ್ಕಳ ರಂಗ

  • ಮಕ್ಕಳು ಹೆಚ್ಚು ಸಿಹಿ ತಿನ್ನುತ್ತಿದ್ದಾರೆಯೇ..? 
ಅದನ್ನು ಕಡಿಮೆ ಮಾಡಲು ಇಲ್ಲಿವೆ ಮಾರ್ಗಗಳು

    ಮಕ್ಕಳು ಹೆಚ್ಚು ಸಿಹಿ ತಿನ್ನುತ್ತಿದ್ದಾರೆಯೇ..? ಅದನ್ನು ಕಡಿಮೆ ಮಾಡಲು ಇಲ್ಲಿವೆ ಮಾರ್ಗಗಳು

    ​”ಮಕ್ಕಳಲ್ಲವೇ, ಅವರು ಸಿಹಿ ಮತ್ತು ಮಿಠಾಯಿಗಳನ್ನು ತಿನ್ನಲಿ ಬಿಡಿ” ಎಂದು ಹೇಳುವವರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಆದರೆ ನೆನಪಿರಲಿ, ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಆರೋಗ್ಯವೇ ನಮಗೆ ಮುಖ್ಯ.
    ​ಸಿಹಿ ತಿನ್ನಲು ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ ಕೇಳಲೇಬೇಡಿ. ಚಾಕೊಲೇಟ್, ಕೇಕ್, ಸಿಹಿತಿಂಡಿ ಮತ್ತು ತಂಪು ಪಾನೀಯಗಳೆಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. “ಮಕ್ಕಳೇ ತಾನೇ, ಸ್ವಲ್ಪ ಹೆಚ್ಚು ತಿಂದರೆ ಏನಾಗುತ್ತದೆ?” ಎಂದು ನಿರ್ಲಕ್ಷಿಸಬೇಡಿ. ದೊಡ್ಡವರಂತೆ ಅತಿಯಾದ ಸಿಹಿ ಸೇವನೆಯು ಮಕ್ಕಳ ದೈನಂದಿನ ಜೀವನದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

    ಅತಿಯಾದ ಸಿಹಿ ಸೇವನೆಯಿಂದ ಆಗುವ ತೊಂದರೆಗಳು:

    ಹಸಿವು ಕಡಿಮೆಯಾಗುವುದು: ಸಕ್ಕರೆ ಅಂಶ ಹೆಚ್ಚಿರುವ ತಿಂಡಿಗಳನ್ನು ತಿನ್ನುವುದರಿಂದ ಮಕ್ಕಳ ಹಸಿವು ಕಡಿಮೆಯಾಗುತ್ತದೆ. ಇದರಿಂದ ಅವರು ಪೌಷ್ಟಿಕ ಆಹಾರಗಳನ್ನು ಸೇವಿಸಲು ಹಿಂಜರಿಯುತ್ತಾರೆ.

    ​ಪೋಷಕಾಂಶಗಳ ಕೊರತೆ: ಸರಿಯಾದ ಊಟ ಮಾಡದಿದ್ದರೆ ಮಗುವಿನ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಕಬ್ಬಿಣಾಂಶ ಮತ್ತು ನಾರಿನಂಶದಂತಹ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.

    ಆರೋಗ್ಯ ಸಮಸ್ಯೆಗಳು:

    ಹೆಚ್ಚು ಸಿಹಿ ತಿನ್ನುವುದರಿಂದ ಹೊಟ್ಟೆ ನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಅಲ್ಲದೆ, ಹಗಲಿನಲ್ಲಿ ಅತಿಯಾದ ಸಕ್ಕರೆ ಸೇವನೆಯು ಮಕ್ಕಳ ನಿದ್ರೆಯ ಮೇಲೂ ಪರಿಣಾಮ ಬೀರಬಹುದು.

    ಇದನ್ನು ನಿಯಂತ್ರಿಸುವುದು ಹೇಗೆ?

    ಊಟದ ನಂತರ ಸಿಹಿ ನೀಡಿ: ಒಂದು ವೇಳೆ ಮಗು ಸಿಹಿ ಕೇಳಿದರೆ, ಊಟದ ನಂತರ ಸ್ವಲ್ಪ ನೀಡುವ ಅಭ್ಯಾಸ ಮಾಡಿ. ಇದರಿಂದ ರಕ್ತದಲ್ಲಿ ಸಕ್ಕರೆ ಹೀರಿಕೊಳ್ಳುವ ಪ್ರಮಾಣ ನಿಧಾನವಾಗುತ್ತದೆ.

    ಆಹಾರ ಕ್ರಮದ ಮೇಲೆ ನಿಗಾ ಇರಲಿ: ದಿನವಿಡೀ ಮಗುವಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ ಮತ್ತು ಸಾಕಷ್ಟು ನೀರು ಕುಡಿಸುವ ಅಭ್ಯಾಸ ಮಾಡಿಸಿ. ಹೊಟ್ಟೆ ತುಂಬಿದ್ದರೆ ಅವರಿಗೆ ಸಿಹಿ ತಿನ್ನುವ ಹಂಬಲ ತಾನೇ ಕಡಿಮೆಯಾಗುತ್ತದೆ.

    ಬಹುಮಾನವಾಗಿ ಸಿಹಿ ನೀಡಬೇಡಿ: ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದಾಗ ಅಥವಾ ಯಾವುದಾದರೂ ಕೆಲಸ ಮಾಡಿದಾಗ ಸಿಹಿತಿಂಡಿ, ಚಾಕೊಲೇಟ್ ಅಥವಾ ಐಸ್ ಕ್ರೀಮ್ ನೀಡುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ “ಸಿಹಿ ತಿನ್ನುವುದು ಒಂದು ಬಹುಮಾನ ಅಥವಾ ಒಳ್ಳೆಯದು” ಎಂಬ ತಪ್ಪು ಕಲ್ಪನೆ ಮಕ್ಕಳಲ್ಲಿ ಮೂಡುತ್ತದೆ.

    ಎಲ್ಲಾ ​ಸಂದರ್ಭಗಳಲ್ಲೂ ಜಾಗರೂಕರಾಗಿರಿ: ಮನೆಯಲ್ಲಿ ಸಮಾರಂಭ ಅಥವಾ ಮದುವೆ ಇದ್ದಾಗಲೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಿತವಾಗಿ ಸಿಹಿ ತಿನ್ನಲು ಬಿಡಿ.

    ​ಮನೆಯಿಂದಲೇ ಉತ್ತಮ ಆಹಾರ ಪದ್ಧತಿಯನ್ನು ಕಲಿಸಿಕೊಡುವುದು ಪೋಷಕರ ಜವಾಬ್ದಾರಿ.

  • ಮಕ್ಕಳ Screen ಬಳಕೆಗೆ ಆಸ್ಟ್ರೇಲಿಯಾ ಮಾದರಿ ಕಾನೂನು: 
ಮದ್ರಾಸ್ ಹೈಕೋರ್ಟ್ ಸಲಹೆ

    ಮಕ್ಕಳ Screen ಬಳಕೆಗೆ ಆಸ್ಟ್ರೇಲಿಯಾ ಮಾದರಿ ಕಾನೂನು: ಮದ್ರಾಸ್ ಹೈಕೋರ್ಟ್ ಸಲಹೆ


    ​ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಮಾಧ್ಯಮಗಳ ಅತಿಯಾದ ವ್ಯಸನಕ್ಕೆ ಒಳಗಾಗುತ್ತಿರುವುದು ಮತ್ತು ಅಂತರ್ಜಾಲದಲ್ಲಿ ಅಶ್ಲೀಲ ವಿಷಯಗಳು ಯಾವುದೇ ಅಡೆತಡೆಯಿಲ್ಲದೆ ಲಭ್ಯವಿರುವುದು ಇಡೀ ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

    ಈ ಕಳವಳಕಾರಿ ವಿದ್ಯಮಾನದ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿರುವ ಮದ್ರಾಸ್ ಹೈಕೋರ್ಟ್, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವುದನ್ನು ತಡೆಯಲು ಆಸ್ಟ್ರೇಲಿಯಾ ಮಾದರಿಯ ಕಾನೂನು ಜಾರಿಗೆ ತರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

    ಎಸ್. ವಿಜಯಕುಮಾರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರ ಪೀಠವು ಈ ಮಹತ್ವದ ನಿರ್ದೇಶನ ನೀಡಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಐತಿಹಾಸಿಕ ಕಾನೂನನ್ನು ಅಂಗೀಕರಿಸಿದೆ.

    ಭಾರತದಲ್ಲೂ ಇಂತಹ ಕಾನೂನಿನ ಅಗತ್ಯವಿದ್ದು, ಅಂತಹ ವ್ಯವಸ್ಥೆ ಜಾರಿಗೆ ಬರುವವರೆಗೆ ಸರ್ಕಾರವು ಸಾರ್ವಜನಿಕರಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
    ​ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಕಠಿಣ ಕ್ರಮ ಅತ್ಯಂತ ಅನಿವಾರ್ಯವಾಗಿದೆ. ಏಕೆಂದರೆ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಷಯಗಳು ಮಕ್ಕಳ ಮೇಲೆ ಮಾನಸಿಕವಾಗಿ ತೀವ್ರ ಪ್ರಭಾವ ಬೀರುತ್ತಿದ್ದು, ಅವರನ್ನು ಸೈಬರ್ ಲೋಕದ ಅಪಾಯಗಳಿಗೆ ಒಡ್ಡುತ್ತಿವೆ.

    ಇಂಟರ್ನೆಟ್ ಸೇವಾ ಪೂರೈಕೆದಾರರು ಪೋಷಕರಿಗಾಗಿ ವಿಶೇಷ ನಿಯಂತ್ರಣ ವ್ಯವಸ್ಥೆಗಳನ್ನು ರೂಪಿಸಬೇಕಾದ ಅಗತ್ಯವಿದ್ದು, ಮಕ್ಕಳನ್ನು ದಾರಿ ತಪ್ಪಿಸುವ ಕಂಟೆಂಟ್‌ಗಳಿಂದ ದೂರವಿಡುವುದು ಇಂದಿನ ತುರ್ತು ಅಗತ್ಯವಾಗಿದೆ. ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಮಾಧ್ಯಮದ ಕಪಿಮುಷ್ಠಿಗೆ ಸಿಲುಕುತ್ತಿರುವ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಆದಷ್ಟು ಬೇಗ ಆಸ್ಟ್ರೇಲಿಯಾ ಮಾದರಿಯ ಕಾನೂನು ತರುವ ಕುರಿತು ಚಿಂತಿಸಬೇಕಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

    ಭಾರತದಂತಹ ಬೃಹತ್ ದೇಶದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಇಂತಹ ನಿಯಮಗಳು ಜಾರಿಗೆ ಬರುವುದು ಅವರ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

  • ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? 
ಇಲ್ಲಿದೆ ಪರಿಹಾರ ಸೂತ್ರಗಳು

    ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? ಇಲ್ಲಿದೆ ಪರಿಹಾರ ಸೂತ್ರಗಳು

    ಮಾವಿನ ತೋಪಿನಲ್ಲಿ ಮಕ್ಕಳು ಓಡಾಡುತ್ತಾ ಆಟವಾಡುತ್ತಿದ್ದ ಹಳೆಯ ದಿನಗಳು ಕೇವಲ ನೆನಪು. ಆ ಉತ್ಸಾಹದ ಬದಲಿಗೆ, ಇಂದು ಮನೆಗಳ ನಾಲ್ಕು ಗೋಡೆಗಳ ಒಳಗೆ ಬಂಧಿಯಾಗಿರುವ ಹೊಸ ಪೀಳಿಗೆಯೊಂದು, ರೀಲ್‌ಗಳು ಮತ್ತು ಶಾರ್ಟ್ಗಳ ಅಂತ್ಯವಿಲ್ಲದ ಹರಿವನ್ನು ನೋಡುವುದನ್ನು ನಾವು ನೋಡುತ್ತಿದ್ದೇವೆ.

    ಪ್ರತಿಯೊಂದು ಯುಗದಲ್ಲೂ, ವಿಭಿನ್ನ ವ್ಯಸನಗಳು ಮನುಷ್ಯನನ್ನು ವಶಪಡಿಸಿಕೊಳ್ಳಲು ಬಂದಿವೆ. ಅಫೀಮು ಮತ್ತು ಮದ್ಯದಿಂದ ಕೂಡಿದ ವ್ಯಸನ ಅನೇಕ ಜೀವಗಳನ್ನು ನಾಶಮಾಡಿವೆ. ಇಂದು, ಡಿಜಿಟಲ್ ಹೆರಾಯಿನ್ ಎಂಬ ಸುಂದರ ಹೆಸರಿನ ಮೊಬೈಲ್ ಫೋನ್‌ಗಳು ಅವುಗಳ ಸ್ಥಾನವನ್ನು ಪಡೆದುಕೊಂಡಿವೆ.

    ಮೆದುಳನ್ನು ಹೆಪ್ಪುಗಟ್ಟಿಸುವ ಮಾಂತ್ರಿಕ ದೃಶ್ಯಗಳನ್ನು ಗಂಟೆಗಟ್ಟಲೆ ರೀಲ್‌ಗಳು ಮತ್ತು ಶಾರ್ಟ್ಗಳ ಮೂಲಕ ವೀಕ್ಷಿಸುತ್ತಿರುವ ಮಗುವಿನ ಮೆದುಳಿನಲ್ಲಿ ಏನಾಗುತ್ತದೆ ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೇ? ಪ್ರತಿ ಸೆಕೆಂಡಿಗೆ ಬದಲಾಗುವ ದೃಶ್ಯಗಳಿಗೆ ಅನುಗುಣವಾಗಿ ಅವರ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಮಟ್ಟವು ವೇಗವಾಗಿ ಏರುತ್ತದೆ ಮತ್ತು ಇಳಿಯುತ್ತದೆ. ಅದು ಒದಗಿಸುವ ತಾತ್ಕಾಲಿಕ ಆನಂದವನ್ನು ಮತ್ತೆ ಮತ್ತೆ ಪಡೆಯಲು ಅವರ ಮನಸ್ಸುಗಳು ಹಂಬಲಿಸುತ್ತವೆ. ಪುಸ್ತಕ ಓದುವ ಶಾಂತ ಆನಂದವನ್ನು ಅಥವಾ ನಂತರ ಸ್ನೇಹಿತರೊಂದಿಗೆ ಆಟವಾಡುವಾಗ ಸಿಗುವ ಸಾಮಾಜಿಕ ಮೋಜನ್ನು ಅವರು ಅನುಭವಿಸಲು ಸಾಧ್ಯವಾಗುವುದಿಲ್ಲ. ಏಕಾಗ್ರತೆ ಕಳೆದುಹೋಗುತ್ತದೆ, ಸ್ಮರಣಶಕ್ತಿ ಕಡಿಮೆಯಾಗುತ್ತದೆ ಮತ್ತು ಆಲೋಚನಾ ಸಾಮರ್ಥ್ಯವು ಪಾರ್ಶ್ವವಾಯುವಿಗೆ ಒಳಗಾಗುತ್ತದೆ.

    ಅಜ್ಜ-ಅಜ್ಜಿ ಹೇಳುವ ಕಥೆಗಳು ಮತ್ತು ಬಾಲ್ಯದಲ್ಲಿ ಪೋಷಕರು ತೋರಿಸುವ ಪ್ರಕೃತಿಯ ಅದ್ಭುತಗಳ ಮೂಲಕ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತಿತ್ತು. ಆದರೆ, ಇಂದು, ಕಾರ್ಟೂನ್ ಮತ್ತು ಗೇಮ್‌ಗಳ ಕೃತಕ ಜಗತ್ತಿನಲ್ಲಿ ಅಲೆದಾಡುವ ಮಕ್ಕಳು ತಮ್ಮ ವಿಶಿಷ್ಟ ಕಲ್ಪನೆಗಳನ್ನು ಕಳೆದುಕೊಳ್ಳುತ್ತಾರೆ. ಅವರು ತಾವು ನೋಡುವ ಪಾತ್ರಗಳಂತೆ ಮಾತನಾಡಲು ಮತ್ತು ವರ್ತಿಸಲು ಪ್ರಾರಂಭಿಸುತ್ತಾರೆ. ವಾಸ್ತವ ಮತ್ತು ಭ್ರಮೆಯನ್ನು ಪ್ರತ್ಯೇಕಿಸಲು ಸಾಧ್ಯವಾಗದ ಒಂದು ರೀತಿಯ ಕನಸಿನ ಸ್ಥಿತಿಗೆ ಅವರು ಜಾರುತ್ತಾರೆ.

    ಆರೋಗ್ಯ ಸಮಸ್ಯೆಗಳು
    ಮಾನಸಿಕ ಪರಿಣಾಮಗಳ ಜೊತೆಗೆ, ದೈಹಿಕ ಸವಾಲುಗಳು ಸಹ ಸಣ್ಣದಲ್ಲ. ಫೋನ್ ನೋಡುತ್ತಾ ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳುವುದು ಮಕ್ಕಳ ಕಣ್ಣುಗಳ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. `ಕಂಪ್ಯೂಟರ್ ವಿಷನ್ ಸಿಂಡ್ರೋಮ್’ ಎಂದು ಕರೆಯಲ್ಪಡುವ ರೋಗ ಇಂದಿನ ಮಕ್ಕಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ಕುತ್ತಿಗೆ ನೋವು, ಬೆನ್ನು ನೋವು ಮತ್ತು ಬೊಜ್ಜು ಕೂಡ ಉಳಿದ ಲಕ್ಷಣಗಳಾಗಿವೆ. ಓಡುತ್ತಾ ಆಟವಾಡಬೇಕಾದ ವಯಸ್ಸಿನಲ್ಲಿ, ಆಟದ ಮೈದಾನಗಳಿಂದ ವಂಚಿತರಾದ ಮಕ್ಕಳು ರೋಗಗಳ ಕತ್ತಲಕೋಣೆಯಲ್ಲಿ ಬಂಧಿ ಯಾಗುತ್ತಿದ್ದಾರೆ.

    ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಇದು ಮಕ್ಕಳಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತದೆ. ಸರಿಯಾದ ನಿದ್ರೆ ಸಿಗದ ಮಗು ಅಧ್ಯಯನದತ್ತ ಗಮನಹರಿಸಲು ಮತ್ತು ಆರೋಗ್ಯವಾಗಿರಲು ಹೇಗೆ ಸಾಧ್ಯವಾಗುತ್ತದೆ?

    ನೈತಿಕತೆಯ ಕುಸಿತ
    ಇಂಟರ್‌ನೆಟ್‌ನ ವಿಶಾಲ ಜಗತ್ತು ಮಕ್ಕಳಿಗೆ ತೆರೆದುಕೊಂಡಾಗ, ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಅವರು ವಯಸ್ಸಿಗೆ ಸೂಕ್ತವಲ್ಲದ ವಿಷಯ ಮತ್ತು ಅಪಾಯಕಾರಿ ಆನ್‌ಲೈನ್ ಬಲೆಗಳಿಗೆ ಸುಲಭವಾಗಿ ಆಕರ್ಷಿತರಾಗಬಹುದು. ಹಿಂಸೆ ಮತ್ತು ಅಶ್ಲೀಲತೆಯಿಂದ ತುಂಬಿರುವ ಆಟಗಳು ಮತ್ತು ವೀಡಿಯೊಗಳು ಅವರ ಯುವ ಮನಸ್ಸನ್ನು ವಿಷಪೂರಿತಗೊಳಿಸುತ್ತವೆ. ಅವರು ಸಹಾನುಭೂತಿ, ಪ್ರೀತಿ ಮತ್ತು ಕರುಣೆಯನ್ನು ಕಲಿಯಬೇಕಾದ ವಯಸ್ಸಿನಲ್ಲಿ, ಕೃತಕ ಪ್ರಪಂಚದ ಕ್ರೌರ್ಯವನ್ನು ಕಂಡು ಸಂವೇದನಾ ಶೀಲತೆಯನ್ನು ಕಳೆದುಕೊಳ್ಳುತ್ತಾರೆ.

    ತಮ್ಮ ಮಕ್ಕಳಿಗೆ ಫೋನ್‌ಗಳನ್ನು ನೀಡುವ ಮೂಲಕ ತಮ್ಮ ಕೆಲಸವನ್ನು ಸುಲಭಗೊಳಿಸುವ ಪೋಷಕರು, ನೆನಪಿಡಿ, ನೀವು ಮಾಡುತ್ತಿರುವ ಕೆಲಸಗಳ ದೂರಗಾಮಿ ಪರಿಣಾಮಗಳನ್ನು ನಿಮ್ಮಿಂದ ಅರಗಿಸಿಕೊಳ್ಳಲು ಸಾಧ್ಯವಾಗದಿರಬಹುದು.

    ನಾವು ಏನು ಮಾಡಬಹುದು?
    ನಮ್ಮ ಕಣ್ಣ ಮುಂದೆ ಒಂದು ಪೀಳಿಗೆ ದಾರಿ ತಪ್ಪುತ್ತಿರುವಾಗ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಅದಕ್ಕೆ ಖಂಡಿತಾ ಪರಿಹಾರಬೇಕು.

    ಮಾದರಿಯಾಗಿ:
    ಮಕ್ಕಳಿಗೆ ಫೋನ್ ಬಳಸಬೇಡಿ ಎಂದು ಹೇಳುವ ಮೊದಲು, ನಾವೇ ಅದರ ಬಳಕೆಯನ್ನು ನಿಯಂತ್ರಿಸಬೇಕು. ಕುಟುಂಬದೊAದಿಗೆ ಕಳೆಯುವ ಸಮಯದಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ದೂರವಿಡಿ.

    ಸಮಯ ಮಿತಿಯನ್ನು ನಿಗದಿಪಡಿಸಿ:
    ಮಕ್ಕಳ Screen ನೋಡುವ ಸಮಯಕ್ಕೆ ಸ್ಪಷ್ಟ ಮಿತಿಯನ್ನು ನಿಗದಿಪಡಿಸಿ. ಆ ಸಮಯದ ಕಳೆದ ಬಳಿಕ ರಾಜಿ ಮಾಡಿಕೊಳ್ಳಲು ಸಿದ್ದರಾಗಬಾರದು.

    ಮುಕ್ತವಾಗಿ ಮಾತನಾಡಿ:
    ಆನ್‌ಲೈನ್ ಪ್ರಪಂಚದ ಅಪಾಯಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಅವರಿಗೆ ಕಲಿಸಿ.

    ಹೊಸ ಲೋಕಗಳನ್ನು ತೆರೆಯಿರಿ:
    ಅವರನ್ನು ಕೈ ಹಿಡಿದು ಪುಸ್ತಕಗಳು, ಆಟಗಳು ಮತ್ತು ಪ್ರಕೃತಿಯ ಜಗತ್ತಿಗೆ ತಲುಪಿಸಿ. ಪ್ರವಾಸಗಳಿಗೆ ಕರೆದುಕೊಂಡು ಹೋಗಿ, ಅವರಿಗೆ ಹೊಸ ಅನುಭವಗಳನ್ನು ನೀಡಿ.

    ಕಾಮನಬಿಲ್ಲನ್ನು ನೋಡಲು ಆಕಾಶದತ್ತ ನೋಡಿ, ಚಿಟ್ಟೆಯನ್ನು ನೋಡಲು ತೋಟಕ್ಕೆ ಹೋಗಿ, ಮತ್ತು ಅವರ ಸ್ನೇಹಿತರ ಪ್ರೀತಿಯನ್ನು ಅನುಭವಿಸಲು ಅವರೊಂದಿಗೆ ಆಟವಾಡುವ ಅವಕಾಶ ಕೊಡಿ. ಆಕಾಶ ಮತ್ತು ಭೂಮಿಯ ಸಂಪರ್ಕವನ್ನು ಕಳೆದುಕೊಂಡು ಆರು ಇಂಚಿನ ಪರದೆಗೆ ಕುಗ್ಗುವ ಪೀಳಿಗೆ ನಮಗೆ ಅಗತ್ಯವಿಲ್ಲ.

    “ಉಜ್ವಲ ಬಾಲ್ಯ” ಎಂಬುದು ಪ್ರತಿ ಮಗುವಿನ ಹಕ್ಕು. ಆ ಹಕ್ಕನ್ನು ಅವರಿಗೆ ನಿರಾಕರಿಸುವ ಹಕ್ಕು ನಮಗಿಲ್ಲ. ನೆನಪಿಡಿ, ಇಂದು ನಾವು ಅವರಿಗೆ ನೀಡುವ ಗಮನ ಮತ್ತು ಪ್ರೀತಿ ನಾಳಿನ ಸಮಾಜದ ಶಕ್ತಿ. ಅದಕ್ಕಾಗಿ, ಅವರಿಗೆ ಪ್ರೀತಿ, ಜ್ಞಾನ ಮತ್ತು ಅನುಭವಗಳ ಹೊಸ ಬಾಗಿಲುಗಳನ್ನು ತೆರೆಯೋಣ. ಆ ಮೂಲಕ, ಅವರ ಬೆಳವಣಿಗೆ ಮತ್ತು ಆ ಮೂಲಕ ನಮ್ಮ ದೇಶದ ಭವಿಷ್ಯ ಉಜ್ವಲ ವಾಗಲಿ.

    ಸಮಿಯುಲ್ಲಾ

  • ಜ್ಞಾನೋಲೂಕ

    ಜ್ಞಾನೋಲೂಕ

    ಒಂದು ಅರಣ್ಯದ ಎಲ್ಲಾ ಪ್ರಾಣಿಗಳು ತೀರ್ಮಾನ ತೆಗೆದುಕೊಳ್ಳಲು ಚರ್ಚಿಸುತ್ತಿದ್ದಾಗ, ಕೀಚುಮೀಚಾದ ನಡುವೆ ಓಲೆಯೊಂದು ಮೌನವಾಗಿಯೇ ಗಮನಿಸುತ್ತಿತ್ತು. ಕೊನೆಗೆ, ಎಲ್ಲರೂ ಓಲೆಯ ಶಾಂತವಾದ ಮಾತನ್ನು ಕೇಳಿ ಸಮಸ್ಯೆಗೆ ಪರಿಹಾರ ಕಂಡರು.
    ಪಾಠ: ಗದ್ದಲಕ್ಕಿಂತ ನಿಶ್ಶಬ್ದ ಜ್ಞಾನ ಶ್ರೇಷ್ಠ.

  • ಆಮೆ ಮತ್ತು ಎರೆಹುಳು

    ಆಮೆ ಮತ್ತು ಎರೆಹುಳು

    ಆಮೆಯು ನದಿಗೆ ಹೋದಾಗ ನಡು ರಸ್ತೆಯಲ್ಲಿ ಎರೆಹುಳುವನ್ನು ಕಂಡು ಅದನ್ನು ನೆರವಿಗೆ ತೆಗೆದುಕೊಂಡಿತು. ದಿನಗಳ ನಂತರ ಆಮೆ ಒಂದು ಬಂಡೆಯಲ್ಲಿ ಸಿಕ್ಕಿ ಬಿದ್ದಾಗ ಆ ಎರೆಹುಳು ತನ್ನ ಕೊಂಬೆಗಳಿಂದ ಪತ್ತೆ ಹಚ್ಚಿ ನೆರವಾಯಿತು.
    ಪಾಠ: ಸಣ್ಣ ಸಹಾಯವೂ ಸಕಾಲದಲ್ಲಿ ದೊಡ್ಡ ಉದ್ಧಾರವಾಗಬಹುದು.

  • ನರಿಯ ಉಪಾಯ

    ನರಿಯ ಉಪಾಯ

    ನಟ ಕಮಲ್ಅದೊಂದು ಕಾಡಿನಲ್ಲಿ,ಕಾಡಿನ ರಾಜನಾದ `ಸಿಂಹ’ದ ಆಡಳಿತವಿತ್ತು. ಅದು ಕಾಡಿನ ಮೃಗಗಳಿಗೆ ಯಾವುದೇ ಕುಂದು ಕೊರತೆಗಳು ಬರದಂತೆ ನೋಡಿಕೊಳ್ಳುತ್ತಿತ್ತು. ಅವು ಸಹ ಅದರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದವು. ಹೀಗಿರಲು ಒಂದು ಸಲ…

    “ಮೃಗರಾಜ, ನರಿಯು ನನ್ನ ಮರಿಗಳಿಗೆ ಸಂಗ್ರಹಿಸಿಟ್ಟಿದ್ದ ಜೇನುತುಪ್ಪವನ್ನು ಕಬಳಿಸಿದೆ; ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು!” ಎಂದು ಕರಡಿಯೊಂದು ಮೃಗರಾಜನ ಆಸ್ಥಾನಕ್ಕೆ ಬಂದು ದೂರು ಸಲ್ಲಿಸಿತು. ಅದಾದ ಕೆಲವೇ ನಿಮಿಷಗಳಲ್ಲಿ ಮೊಲವೊಂದು ಬಂದು…

    “ಮೃಗರಾಜ ನರಿಯು ನನ್ನ ಮರಿಗಳನ್ನು ಭಕ್ಷಿಸಿದೆ; ನನಗೆ ನ್ಯಾಯ ಕೊಡಿಸಬೇಕು!” ಎಂದು ಅಲವತ್ತುಕೊಂಡಿತು! “ಮೇಲಿಂದ ಮೇಲೆ ನರಿಯ ಮೇಲಿನ ಆರೋಪಗಳನ್ನು ಕೇಳಿಸಿಕೊಂಡ ಮೃಗರಾಜನ ಪಿತ್ತವು ನೆತ್ತಿಗೇರಿತು. ನರಿಯನ್ನು ಕೂಡಲೇ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡಿತು. ನರಿಯು ಇನ್ನು ನನ್ನ ಕಥೆಯು ಮುಗಿಯಿತು; ಎಂದು ಮೃಗರಾಜನ ಆಜ್ಞೆಗೆ ಓಗೊಟ್ಟು ಆಸ್ಥಾನಕ್ಕೆ ಧಾವಿಸಿತು. ಅದು ಯಾವ ಕಾರಣವನ್ನು ನೀಡದೆ ತನ್ನ ತಪ್ಪು ಒಪ್ಪಿಕೊಂಡಿತು. ಅದರಂತೆ ಯಾವ ಶಿಕ್ಷೆಗೂ ಸಿದ್ಧನಿದ್ದೇನೆ! ಎಂದು ತಲೆತಗ್ಗಿಸಿತು! 

    ಮೃಗರಾಜ… “ನಿನಗೆ ಈ ಕಾಡಿನಿಂದ ಬಹಿಷ್ಕಾರವನ್ನು ಹಾಕಿದ್ದೇನೆ!” ಎಂದು ಹಿಂದು ಮುಂದು ಯೋಚಿಸದೆ ತನ್ನ ತೀರ್ಪನ್ನು ಪ್ರಕಟಿಸಿತು. ಅದರ ತೀರ್ಪಿಗೆ ಆಸ್ಥಾನದಲ್ಲಿ ನೆರೆದಿದ್ದ ಕಾಡಿನ ಪ್ರಾಣಿಗಳೂ… ಸಂತ್ರಸ್ತರೂ.. ಖುಷಿಗೊಂಡು ಮೃಗರಾಜನಿಗೆ ಜೈಕಾರವನ್ನು ಹಾಕಿದವು!

    ನರಿಯು ವಿಧಿ ಇಲ್ಲದೆ ಪಕ್ಕದ ಕಾಡಿನಲ್ಲಿ ನುಸುಳಬೇಕೆಂದು ಬಂದಿತು. ಆದರೆ ಪಕ್ಕದ ಕಾಡನ್ನು ಪ್ರವೇಶಿಸಬೇಕಾದರೆ ಕಾಡಿನ ಮಧ್ಯೆದಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ದಾಟಬೇಕಿತ್ತು! ನದಿಯ ವೇಗವು ತಗ್ಗುವವರೆಗೂ ಅದು ದಡದ ಮೇಲೆ ಕುಳಿತಿತು. ಇದೇ ಅವಕಾಶಕ್ಕಾಗಿ ಕಾದು ಕಾದು ಕುಳಿತ ಮೊಸಳೆಯೊಂದು ನರಿಯ ಸನಿಹವೇ ಬಂದಿತು. ಮೊಸಳೆಯ ಆಕಸ್ಮಿಕ ಆಗಮನದಿಂದ ನರಿಯು ಬೆಚ್ಚಿತು. ಅದು ತನ್ನನ್ನೆ ಹೊಂಚು ಹಾಕುತ್ತಿರುವ ಸಂಗತಿ ನರಿಗೆ ಮನದಟ್ಟಾಯಿತು. ನರಿಯನ್ನು ಉಪಾಯದಿಂದ ಕಬಳಿಸಬೇಕು; ಇಲ್ಲದಿದ್ದರೆ ಅದು ತಪ್ಪಿಸಿಕೊಳ್ಳುವ ಸಂಭವವುAಟು! ಎಂದು ಮೊಸಳೆಯು ಲೆಕ್ಕ ಹಾಕಿತು. ಅಷ್ಟರಲ್ಲಿ ನರಿಯು ದೂರ ಸರಿದು ನಿಂತುಕೊAಡಿತು.

    ಮೊಸಳೆ… “ಏನು ತಮ್ಮಾ, ಪಕ್ಕದ ಕಾಡಿಗೆ ಹೋಗಬೇಕೆಂದಿರುವೆಯಾ? ನದಿಯ ವೇಗಕ್ಕೆ ನೀನು ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗಬೇಕಾಗೀತು; ಅದಕ್ಕೆ ನಾನಿಲ್ಲವೇ? ಹಾಗಾದರೆ ತಡವೇಕೆ? ನನ್ನ ಬೆನ್ನ ಮೇಲೆ ಕುಳಿತುಕೋ; ನಿನ್ನನ್ನು ಸುರಕ್ಷಿತವಾಗಿ ದಡ ಮುಟ್ಟಿಸುವೆನು.” ಎಂದು ಕುಹಕ ನೋಟ ಬೀರಿ ನುಡಿಯಿತು.

    ನರಿ… “ಮೊಸಳೆಯಣ್ಣಾ, ನೀನು ಊಹಿಸಿದ್ದು ನಿಜ; ಪಕ್ಕದ ಕಾಡಿನಲ್ಲಿ ನನ್ನ ಪರಿವಾರದವರು ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ! ಹಾಗಾಗಿ ಅವರನ್ನು ಕೆಲವು ವಾರಗಳವರೆಗೆ ನಮ್ಮ ಕಾಡಿಗೆ ಕರೆ ತರಬೇಕೆಂದಿದ್ದೇನೆ; ಆದರೆ ಹಿಂದೊಮ್ಮೆ ಅವರು ನಮ್ಮ ಕಡುವೈರಿಗಳಾಗಿದ್ದರು; ಈಗ ಅವರನ್ನು ಮುಗಿಸುವ ಕಾಲ ಬಂದಿದೆ; ಒಬ್ಬೊಬ್ಬರನ್ನು ಸಾಗಿಸುವ ನೆಪಮಾಡಿ ಕಬಳಿಸಿಬಿಡು!” ಎಂದು ಹುಬ್ಬೇರಿಸಿತು. ನರಿಯ ನುಡಿಗಳಿಗೆ ಮೊಸಳೆಯು ಬಹುಬೇಗನೆ ಮಾರುಹೋಗಿ ಉಬ್ಬಿಹೋಯಿತು.

    ಮೊಸಳೆ… “ಬೇಗ ನನ್ನ ಬೆನ್ನು ಏರಿ ಕುಳಿತುಕೋ!” ಎಂದು ಖುಷಿಯಿಂದ ಹೇಳಿತು. ನರಿಯು ಮೊಸಳೆಯಲ್ಲಾದ ಎಲ್ಲಾ ಬದಲಾವಣೆಗಳನ್ನು ಗಮನಿಸಿ, ಮೆಲ್ಲನೆ ಮೊಸಳೆಯ ಬೆನ್ನು ಏರಿ ಕುಳಿತಿತು. ಕೆಲ ನಿಮಿಷಗಳಲ್ಲಿ ನದಿಯ ದಡವು ಆಗಮಿಸುತ್ತಿದ್ದಂತೆಯೇ ನರಿಯು ಚಂಗನೆ ದಡಕ್ಕೆ ಜಿಗಿಯಿತು.

    ನರಿ… “ಮೊಸಳೆಯಣ್ಣಾ, ನನ್ನ ದಡ ಮುಟ್ಟಿಸಿದ್ದಕ್ಕೆ ಧನ್ಯವಾದಗಳು; ಇಲ್ಲಿ ನನ್ನ ಪರಿವಾರದವರು ಸುರಕ್ಷಿತವಾಗಿದ್ದಾರೆ; ನಿನ್ನ ಬುದ್ಧಿಯು ನನಗೆ ತಿಳಿದಿಲ್ಲವೇ? ಅದಕ್ಕಾಗಿ ನಾನು ಚಿಕ್ಕ ನಾಟಕವಾಡಬೇಕಾಗಿ ಬಂದಿತು!”ಎAದು ಅಲ್ಲಿಂದ ಕಣ್ಮರೆಯಾಯಿತು. 

    ಅದೊಂದು ಕಾಡಿನಲ್ಲಿ,ಕಾಡಿನ ರಾಜನಾದ `ಸಿಂಹ’ದ ಆಡಳಿತವಿತ್ತು. ಅದು ಕಾಡಿನ ಮೃಗಗಳಿಗೆ ಯಾವುದೇ ಕುಂದು ಕೊರತೆಗಳು ಬರದಂತೆ ನೋಡಿಕೊಳ್ಳುತ್ತಿತ್ತು. ಅವು ಸಹ ಅದರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದವು. ಹೀಗಿರಲು ಒಂದು ಸಲ…

    “ಮೃಗರಾಜ, ನರಿಯು ನನ್ನ ಮರಿಗಳಿಗೆ ಸಂಗ್ರಹಿಸಿಟ್ಟಿದ್ದ ಜೇನುತುಪ್ಪವನ್ನು ಕಬಳಿಸಿದೆ; ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು!” ಎಂದು ಕರಡಿಯೊಂದು ಮೃಗರಾಜನ ಆಸ್ಥಾನಕ್ಕೆ ಬಂದು ದೂರು ಸಲ್ಲಿಸಿತು. ಅದಾದ ಕೆಲವೇ ನಿಮಿಷಗಳಲ್ಲಿ ಮೊಲವೊಂದು ಬಂದು…

    “ಮೃಗರಾಜ ನರಿಯು ನನ್ನ ಮರಿಗಳನ್ನು ಭಕ್ಷಿಸಿದೆ; ನನಗೆ ನ್ಯಾಯ ಕೊಡಿಸಬೇಕು!” ಎಂದು ಅಲವತ್ತುಕೊಂಡಿತು! “ಮೇಲಿಂದ ಮೇಲೆ ನರಿಯ ಮೇಲಿನ ಆರೋಪಗಳನ್ನು ಕೇಳಿಸಿಕೊಂಡ ಮೃಗರಾಜನ ಪಿತ್ತವು ನೆತ್ತಿಗೇರಿತು. ನರಿಯನ್ನು ಕೂಡಲೇ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡಿತು. ನರಿಯು ಇನ್ನು ನನ್ನ ಕಥೆಯು ಮುಗಿಯಿತು; ಎಂದು ಮೃಗರಾಜನ ಆಜ್ಞೆಗೆ ಓಗೊಟ್ಟು ಆಸ್ಥಾನಕ್ಕೆ ಧಾವಿಸಿತು. ಅದು ಯಾವ ಕಾರಣವನ್ನು ನೀಡದೆ ತನ್ನ ತಪ್ಪು ಒಪ್ಪಿಕೊಂಡಿತು. ಅದರಂತೆ ಯಾವ ಶಿಕ್ಷೆಗೂ ಸಿದ್ಧನಿದ್ದೇನೆ! ಎಂದು ತಲೆತಗ್ಗಿಸಿತು! 

    ಮೃಗರಾಜ… “ನಿನಗೆ ಈ ಕಾಡಿನಿಂದ ಬಹಿಷ್ಕಾರವನ್ನು ಹಾಕಿದ್ದೇನೆ!” ಎಂದು ಹಿಂದು ಮುಂದು ಯೋಚಿಸದೆ ತನ್ನ ತೀರ್ಪನ್ನು ಪ್ರಕಟಿಸಿತು. ಅದರ ತೀರ್ಪಿಗೆ ಆಸ್ಥಾನದಲ್ಲಿ ನೆರೆದಿದ್ದ ಕಾಡಿನ ಪ್ರಾಣಿಗಳೂ… ಸಂತ್ರಸ್ತರೂ.. ಖುಷಿಗೊಂಡು ಮೃಗರಾಜನಿಗೆ ಜೈಕಾರವನ್ನು ಹಾಕಿದವು!

    ನರಿಯು ವಿಧಿ ಇಲ್ಲದೆ ಪಕ್ಕದ ಕಾಡಿನಲ್ಲಿ ನುಸುಳಬೇಕೆಂದು ಬಂದಿತು. ಆದರೆ ಪಕ್ಕದ ಕಾಡನ್ನು ಪ್ರವೇಶಿಸಬೇಕಾದರೆ ಕಾಡಿನ ಮಧ್ಯೆದಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ದಾಟಬೇಕಿತ್ತು! ನದಿಯ ವೇಗವು ತಗ್ಗುವವರೆಗೂ ಅದು ದಡದ ಮೇಲೆ ಕುಳಿತಿತು. ಇದೇ ಅವಕಾಶಕ್ಕಾಗಿ ಕಾದು ಕಾದು ಕುಳಿತ ಮೊಸಳೆಯೊಂದು ನರಿಯ ಸನಿಹವೇ ಬಂದಿತು. ಮೊಸಳೆಯ ಆಕಸ್ಮಿಕ ಆಗಮನದಿಂದ ನರಿಯು ಬೆಚ್ಚಿತು. ಅದು ತನ್ನನ್ನೆ ಹೊಂಚು ಹಾಕುತ್ತಿರುವ ಸಂಗತಿ ನರಿಗೆ ಮನದಟ್ಟಾಯಿತು. ನರಿಯನ್ನು ಉಪಾಯದಿಂದ ಕಬಳಿಸಬೇಕು; ಇಲ್ಲದಿದ್ದರೆ ಅದು ತಪ್ಪಿಸಿಕೊಳ್ಳುವ ಸಂಭವವುAಟು! ಎಂದು ಮೊಸಳೆಯು ಲೆಕ್ಕ ಹಾಕಿತು. ಅಷ್ಟರಲ್ಲಿ ನರಿಯು ದೂರ ಸರಿದು ನಿಂತುಕೊAಡಿತು.

    ಮೊಸಳೆ… “ಏನು ತಮ್ಮಾ, ಪಕ್ಕದ ಕಾಡಿಗೆ ಹೋಗಬೇಕೆಂದಿರುವೆಯಾ? ನದಿಯ ವೇಗಕ್ಕೆ ನೀನು ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗಬೇಕಾಗೀತು; ಅದಕ್ಕೆ ನಾನಿಲ್ಲವೇ? ಹಾಗಾದರೆ ತಡವೇಕೆ? ನನ್ನ ಬೆನ್ನ ಮೇಲೆ ಕುಳಿತುಕೋ; ನಿನ್ನನ್ನು ಸುರಕ್ಷಿತವಾಗಿ ದಡ ಮುಟ್ಟಿಸುವೆನು.” ಎಂದು ಕುಹಕ ನೋಟ ಬೀರಿ ನುಡಿಯಿತು.

    ನರಿ… “ಮೊಸಳೆಯಣ್ಣಾ, ನೀನು ಊಹಿಸಿದ್ದು ನಿಜ; ಪಕ್ಕದ ಕಾಡಿನಲ್ಲಿ ನನ್ನ ಪರಿವಾರದವರು ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ! ಹಾಗಾಗಿ ಅವರನ್ನು ಕೆಲವು ವಾರಗಳವರೆಗೆ ನಮ್ಮ ಕಾಡಿಗೆ ಕರೆ ತರಬೇಕೆಂದಿದ್ದೇನೆ; ಆದರೆ ಹಿಂದೊಮ್ಮೆ ಅವರು ನಮ್ಮ ಕಡುವೈರಿಗಳಾಗಿದ್ದರು; ಈಗ ಅವರನ್ನು ಮುಗಿಸುವ ಕಾಲ ಬಂದಿದೆ; ಒಬ್ಬೊಬ್ಬರನ್ನು ಸಾಗಿಸುವ ನೆಪಮಾಡಿ ಕಬಳಿಸಿಬಿಡು!” ಎಂದು ಹುಬ್ಬೇರಿಸಿತು. ನರಿಯ ನುಡಿಗಳಿಗೆ ಮೊಸಳೆಯು ಬಹುಬೇಗನೆ ಮಾರುಹೋಗಿ ಉಬ್ಬಿಹೋಯಿತು.

    ಮೊಸಳೆ… “ಬೇಗ ನನ್ನ ಬೆನ್ನು ಏರಿ ಕುಳಿತುಕೋ!” ಎಂದು ಖುಷಿಯಿಂದ ಹೇಳಿತು. ನರಿಯು ಮೊಸಳೆಯಲ್ಲಾದ ಎಲ್ಲಾ ಬದಲಾವಣೆಗಳನ್ನು ಗಮನಿಸಿ, ಮೆಲ್ಲನೆ ಮೊಸಳೆಯ ಬೆನ್ನು ಏರಿ ಕುಳಿತಿತು. ಕೆಲ ನಿಮಿಷಗಳಲ್ಲಿ ನದಿಯ ದಡವು ಆಗಮಿಸುತ್ತಿದ್ದಂತೆಯೇ ನರಿಯು ಚಂಗನೆ ದಡಕ್ಕೆ ಜಿಗಿಯಿತು.

    ನರಿ… “ಮೊಸಳೆಯಣ್ಣಾ, ನನ್ನ ದಡ ಮುಟ್ಟಿಸಿದ್ದಕ್ಕೆ ಧನ್ಯವಾದಗಳು; ಇಲ್ಲಿ ನನ್ನ ಪರಿವಾರದವರು ಸುರಕ್ಷಿತವಾಗಿದ್ದಾರೆ; ನಿನ್ನ ಬುದ್ಧಿಯು ನನಗೆ ತಿಳಿದಿಲ್ಲವೇ? ಅದಕ್ಕಾಗಿ ನಾನು ಚಿಕ್ಕ ನಾಟಕವಾಡಬೇಕಾಗಿ ಬಂದಿತು!”ಎAದು ಅಲ್ಲಿಂದ ಕಣ್ಮರೆಯಾಯಿತು. 

     ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಮೊಸಳೆಯು ತನ್ನನ್ನು ತಾನೇ ಹಳಿದುಕೊಂಡಿತು!