Blog

  • ಪುಲಿಯೋಗರೆ

    ಪುಲಿಯೋಗರೆ

    Ingredients:

    • ಅಕ್ಕಿ (Rice) – 1 cup (cooked)
    • ಹುಣಸೆಹಣ್ಣು ಪೇಸ್ಟ್ (Tamarind paste) – 2 tbsp
    • ಎಳ್ಳು (Sesame seeds) – 1 tsp (dry roasted and ground)
    • ಬೆಲ್ಲ (Jaggery) – 1 tsp
    • ಎಣ್ಣೆ (Oil) – 2 tbsp
    • ಸಾಸಿವೆ (Mustard seeds) – 1 tsp
    • ಉದ್ದುಬೇಳೆ (Urad dal) – 1 tsp
    • ಅಡಿಕೆಕಡಲೆ (Chana dal) – 1 tsp
    • ಕರಿಬೇವು (Curry leaves) – few
    • ಹಸಿಮೆಣಸು (Green chilies) – 2, chopped
    • ಎಳ್ಳು (Dry red chilies) – 2
    • ಉಪ್ಪು (Salt) – to taste
    • ಏಲಕ್ಕಿ ಮತ್ತು ಹಿಂಗು (Hing/Asafoetida) – a pinch
    • ಕರಿಬೇವು ಪುಡಿ ಅಥವಾ ಪುಲಿಯೋಗರೆ ಪುಡಿ (Puliyogare mix powder) – optional
  • ಋತು ಚಕ್ರಪೂರ್ವ (ಪ್ರಿಮೆನ್ಸು÷್ಟçವಲ್) ಸಿಂಡ್ರೋವ್

    ಪ್ರಿಮೆನ್ಸು÷್ಟçವಲ್ ಸಿಂಡ್ರೋಮ್ (PMS) ಎನ್ನುವುದು ಅನೇಕ ಮಹಿಳೆಯರು ತಮ್ಮ ಮುಟ್ಟಿನ ಮೊದಲು ಅನುಭವಿಸುವ ದೈಹಿಕ ಮತ್ತು ಮಾನಸಿಕ ಲಕ್ಷಣಗಳ ಒಂದು ಗುಂಪು. ಇದು ಮುಟ್ಟಿನ ಸುಮಾರು ಒಂದು ಅಥವಾ ಎರಡು ವಾರಗಳ ಮೊದಲು ಪ್ರಾರಂಭವಾಗಿ, ಮುಟ್ಟು ಪ್ರಾರಂಭವಾದ ಕೂಡಲೇ ಅಥವಾ ಅದರ ನಂತರ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಸ್ಥಿತಿಯಾಗಿದ್ದು, ಹೆಚ್ಚಿನ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇದನ್ನು ಅನುಭವಿಸುತ್ತಾರೆ.

    ಪಿ.ಎಂ.ಎಸ್.ನ ಲಕ್ಷಣಗಳು

    ಪಿ.ಎಂ.ಎಸ್.ನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಮತ್ತು ತೀವ್ರತೆಯೂ ಭಿನ್ನವಾಗಿರಬಹುದು. ಸಾಮಾನ್ಯ ದೈಹಿಕ ಲಕ್ಷಣಗಳೆಂದರೆ ಸ್ತನಗಳ ನೋವು, ಹೊಟ್ಟೆ ಉಬ್ಬುವುದು, ತಲೆನೋವು, ದೇಹದ ನೋವು, ಆಯಾಸ ಮತ್ತು ನಿದ್ರಾಹೀನತೆ ಸೇರಿವೆ. ಮಾನಸಿಕ ಲಕ್ಷಣಗಳಲ್ಲಿ ಮನಸ್ಥಿತಿ ಬದಲಾವಣೆಗಳು (ಒooಜ Sತಿiಟಿgs)- ಒಂದು ಕ್ಷಣ ಸಂತೋಷ, ಇನ್ನೊಂದು ಕ್ಷಣ ದುಃಖ ಅಥವಾ ಕಿರಿಕಿರಿ, ಆತಂಕ, ಖಿನ್ನತೆ, ಅಸಮಾಧಾನ ಮತ್ತು ಏಕಾಗ್ರತೆಯ ಕೊರತೆ ಇತ್ಯಾದಿ ಸೇರಿವೆ. ಕೆಲವು ಮಹಿಳೆಯರು ಆಹಾರದ ಹಂಬಲ ಅಥವಾ ಹಸಿವಿನಲ್ಲಿ ಬದಲಾವಣೆಗಳನ್ನೂ ಸಹ ಅನುಭವಿಸಬಹುದು.

    ಪ್ರಿಮೆನ್ಸು÷್ಟçವಲ್ ಡಿಸ್ಪೂರಿಕ್ ಡಿಸಾರ್ಡರ್ (Pಒಆಆ)

    ಇದು ಪಿ.ಎಂ.ಎಸ್.ನ ತೀವ್ರತರಹ ರೂಪ. ಪಿ.ಎಂ.ಡಿ.ಡಿ.ನಲ್ಲಿ ಪಿ.ಎಂ.ಎಸ್.ನ ಲಕ್ಷಣಗಳ ಜೊತೆಗೆ ತೀವ್ರತರಹದ ಕಿರಿಕಿರಿ, ಸಿಟ್ಟಾಗುವಿಕೆ, ಉದ್ವಿಗ್ನತೆ ಅಥವಾ ಖಿನ್ನತೆ ಕಾಣಿಸಿಕೊಳ್ಳಬಹುದು ಮತ್ತು ಈ ಲಕ್ಷಣಗಳು ಅವರ ದೈನಂದಿನ ಚಟುವಟಿಕೆಗಳನ್ನು ಭಾದಿಸಬಲ್ಲಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಬಹುದು.

    ಕಾರಣಗಳು

    ಪಿ.ಎಂ.ಎಸ್.ಗೆ ನಿಖರವಾದ ಕಾರಣ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಮುಟ್ಟಿನ ಚಕ್ರದ ಸಮಯದಲ್ಲಿ ಹಾರ್ಮೋನ್ ಮಟ್ಟದಲ್ಲಿನ ಬದಲಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಂಬಲಾಗಿದೆ. ಈಸ್ಟೊçಜೆನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್‌ಗಳ ಬದಲಾವಣೆಗಳಿಗೆ ದೇಹದಲ್ಲಿ ಉಂಟಾಗುವ ಅಸಹಜ ಪ್ರತಿಸ್ಪಂದನೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಮಿದುಳಿನ ರಾಸಾಯನಿಕಗಳಲ್ಲಿ ಒಂದಾದ ಸೆರೆಟೊನಿನ್ ಮೇಲೆ ಉಂಟಾಗುವ ಪ್ರಭಾವವೂ ಪಿ.ಎಂ.ಎಸ್. ಹಾಗೂ ಪಿ.ಎಂ.ಡಿ.ಡಿ. ಉಂಟಾಗುವಲ್ಲಿ ಪಾತ್ರ ವಹಿಸಬಹುದಾಗಿದೆ. ಋತುಚಕ್ರದ ಅವಧಿಯುದ್ಧಕ್ಕೂ ಸೆರೆಟೊನಿನ್ ಮಟ್ಟದಲ್ಲಿ ಬದಲಾವಣೆ ಆಗುತ್ತಿರುತ್ತದೆ. ಕೆಲವು ಮಹಿಳೆಯರು ಈ ಬದಲಾವಣೆಗಳಿಗೆ ಸೂಕ್ಷö್ಮ ಸಂವೇದಿಯಾಗಿರುತ್ತಾರೆ.

    PMS ನಿರ್ವಹಣೆ ಹೇಗೆ?

    PMS ಸಾಮಾನ್ಯವಾಗಿ ಗಂಭೀರ ಆರೋಗ್ಯ ಸಮಸ್ಯೆಯಲ್ಲವಾದರೂ, ಅದರ ಲಕ್ಷಣಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಈ ಲಕ್ಷಣಗಳನ್ನು ನಿರ್ವಹಿಸಲು ಹಲವಾರು ಮಾರ್ಗಗಳಿವೆ:

    – ಆರೋಗ್ಯಕರ ಜೀವನ ಶೈಲಿ: ಸಮತೋಲಿನ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸಾಕಷ್ಟ ನಿದ್ರೆ ಮಾಡುವುದು ಪಿ.ಎಂ.ಎಸ್. ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    – ಒತ್ತಡ ನಿರ್ವಹಣೆ: ಯೋಗ, ಧ್ಯಾನ, ಉಸಿರಾಟದ ವ್ಯಾಯಮಗಳು ಅಥವಾ ವಿಶ್ರಾಂತಿ ತಂತ್ರಗಳು (ಖeಟಚಿxಚಿಣioಟಿ ಣeಛಿhಟಿiques) ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಲು ಮತ್ತು ಮಾನಸಿಕ ಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡಬಹುದು.

    _ ಆಹಾರ ಪದ್ಧತಿ: ಕೆಫೇನ್, ಉಪ್ಪು, ಸಕ್ಕರೆ ಮಿತವಾಗಿ ಬಳಸಿ ಮತ್ತು ಮದ್ಯಪಾನದಿಂದ ದೂರವಿರಿ.

    – ವೈದ್ಯರ ಸಲಹೆ: ಲಕ್ಷಣಗಳು ತೀವ್ರವಾಗಿದ್ದರೆ ಮತ್ತು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    – ಹೋಮಿಯೋಪತಿ ಚಿಕಿತ್ಸೆ: ಹೋಮಿಯೋಪತಿ ಚಿಕಿತ್ಸಾ ವಿಧಾನದಲ್ಲಿ ಪಿ.ಎಂ.ಎಸ್. ಸಮಸ್ಯೆಯನ್ನು ನಿವಾರಿಸಲು ಅನೇಕ ಪರಿಣಾಮಕಾರಿ ಔಷಧಗಳು ಲಭ್ಯವಿದೆ. ಹಾಗೂ ಇತರೆ ಔಷಧಗಳಂತೆ ಇದನ್ನೂ ಸೇವಿಸುದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗೂ ಯಾವುದೇ ಬಗೆಯ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಸಾಧ್ಯವಿದೆ.

  • ನಮ್ಮ ಬೆಲೆಯನ್ನು ತಿಳಿದುಕೊಳ್ಳಬೇಕು

    ನಮ್ಮ ಬೆಲೆಯನ್ನು ತಿಳಿದುಕೊಳ್ಳಬೇಕು

    ನಿಮಗೊಂದು ಕಥೆ ಹೇಳುತ್ತೇನೆ. ಆಬಿದ್ ಎಂಬ ಯುವಕ ಒಂದು ಶೂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕಠಿಣವಾಗಿ ಪರಿಶ್ರಮ ಪಡುತ್ತಿದ್ದ. ಐದು ವರ್ಷದಿಂದ ವಿಭಿನ್ನ ವಿನ್ಯಾಸಗಳನ್ನು ಮಾಡುತ್ತಿದ್ದ. ಅವನ ವಿನ್ಯಾಸದ ಪ್ರಕಾರ ಬಿಡುಗಡೆಯಾದ ಸ್ಯಾಂಡಲ್ ಮತ್ತು ಶೂಗಳಿಗೆ ಮಾರ್ಕೆಟ್‌ನಲ್ಲಿ ಉತ್ತಮ ಬೇಡಿಕೆಯಿತ್ತು. ಆದರೂ ಕಂಪೆನಿಯ ಮೆನೇಜರ್ ಆತನನ್ನು ಒಮ್ಮೆಯೂ ಹೊಗಳಲಿಲ್ಲ. ಒಳ್ಳೆಯ ಒಂದು ಮಾತನ್ನೂ ಹೇಳಲಿಲ್ಲ. ಆರು ತಿಂಗಳ ಹಿಂದೆ ಬಂದ ನೌಕರನಿಗೂ ಭಡ್ತಿ ದೊರೆತದ್ದು ಕಂಡು ದುಃಖವಾಯಿತು. ತನ್ನ ಸಾಮರ್ಥ್ಯವನ್ನು ಯಾರೂ ಗುರುತಿಸುತ್ತಿಲ್ಲವಲ್ಲ ಎಂದು ಯೋಚಿಸುತ್ತಾ ದಾರಿಯಲ್ಲಿ ನಡೆಯು ತ್ತಿದ್ದ. ಆಗ ದಾರಿಯಲ್ಲಿ ಒಬ್ಬ ಮುದುಕ ನನ್ನು ಕಂಡ. ಸಮೀಪದಲ್ಲಿ ಬಿದ್ದಿದ್ದ ಸಣ್ಣ ಬೆಣಚು ಕಲ್ಲನ್ನು ತೆಗೆದುಕೊಳ್ಳಲು ಆ ವ್ಯಕ್ತಿ ಹೆಣಗಾಡುತ್ತಿದ್ದರು. ಆಬಿದ್ ಅವರ ಬಳಿ ಹೋಗಿ ಅದನ್ನು ತೆಗೆದುಕೊಟ್ಟ. ಮುದುಕ ಆಬಿದ್‌ನಿಗೆ ಧನ್ಯವಾದ ಸಲ್ಲಿಸಿದರು.

    “ಇದೊಂದು ಸಾಮಾನ್ಯ ಕಲ್ಲಲ್ಲವೇ, ಏನು ಇದಕ್ಕಿಷ್ಟು ವಿಶೇಷತೆ?” ಎಂದು ವ್ಯಕ್ತಿಯೊಂದಿಗೆ ಆಬಿದ್ ಕೇಳಿದ. “ಮಗನೇ, ಈ ಲೋಕದಲ್ಲಿ ಯಾವುದೂ ಸಾಮಾನ್ಯವಲ್ಲ. ಸರಿಯಾದ ಸ್ಥಳದಲ್ಲಿ ಅಥವಾ ಪ್ರತಿಯೊಂದಕ್ಕೂ ತನ್ನದೇ ಆದ ಅಸಾಮಾನ್ಯ ಮೌಲ್ಯವಿದೆ.”

    ಆದರೆ ಮುದುಕನ ಮಾತು ಆಬಿದ್‌ಗೆ ಅರ್ಥವಾಗಲಿಲ್ಲ ಎಂದು ಮುದುಕನಿಗೆ ಗೊತ್ತಾಯಿತು. ಆತ ಆಬಿದ್‌ಗೆ ಆ ಕಲ್ಲನ್ನು ಕೊಡುತ್ತಾ, “ನೀನು ಈ ಕಲ್ಲನ್ನು ಆ ಸ್ಟೇಶನರಿ ಅಂಗಡಿಗೆ ಕೊಡು. ಆಗ ಈ ಕಲ್ಲಿಗೆ ಎಷ್ಟು ರೂಪಾಯಿ ಕೊಡುತ್ತೀರಾ ಎಂದು ಕೇಳು.” ಆಬಿದ್ ಆ ಕಲ್ಲನ್ನು ಕೊಂಡು ಹೋದಾಗ ಐವತ್ತು ರೂಪಾಯಿ ಕೊಡುತ್ತೇನೆಂದು ಅಂಗಡಿಯಾತ ಹೇಳಿದ. ಆ ವಿಷಯ ಆಬಿದ್ ವೃದ್ಧನೊಂದಿಗೆ ಹೇಳಿದಾಗ, ಆಭರಣದ ಅಂಗಡಿಗೆ ತೆಗೆದು ಕೊಂಡು ಹೋಗಲು ಸೂಚಿಸಿದ. ಅಲ್ಲಿ ೫೦೦ ರೂಪಾಯಿ ಕೊಡುತ್ತೇವೆ ಎಂದಾಗ ಮುದುಕ ಅದನ್ನು ಮ್ಯೂಸಿಯಂಗೆ ತೋರಿಸಲು ಹೇಳಿದನು. ಇದು ಸಾಮಾನ್ಯ ಕಲ್ಲಲ್ಲವೆಂದೂ ಚಂದ್ರನ ಉಲ್ಕಾ ಶಿಲೆಯ ದ್ದೆಂದು ಮ್ಯೂಸಿಯಂನ ವ್ಯಕ್ತಿ ಹೇಳಿದರು. ೨೦,೦೦೦ ಬೆಲೆಯನ್ನೂ ಹೇಳಿದರು.

    ಆಶ್ಚರ್ಯದಿಂದ ಈ ವಿಷಯವನ್ನು ವೃದ್ಧನಿಗೆ ಹೇಳಿದಾಗ, ಕುಳಿತಲ್ಲಿ ಕುಳಿತರೇ, ತಲುಪುವಲ್ಲಿಗೆ ತಲುಪಿದರೇ, ಅದರ ನೈಜ ಮೌಲ್ಯ ದೊರೆಯುತ್ತದೆ ಎಂದು ವೃದ್ಧ ಹೇಳಿದ. ಆ ಕಲ್ಲನ್ನು ಆಬಿದ್‌ಗೆ ಉಡುಗೊರೆಯಾಗಿ ನೀಡಿದ. ಅಂದು ರಾತ್ರಿ ವೃದ್ಧನು ಹೇಳಿದ ವಿಷಯದ ಕುರಿತೇ ಯುವಕ ಯೋಚಿಸಿದ. ಮರುದಿನ ಆಫೀಸ್‌ಗೆ ಹೋಗಿ ತನ್ನ ಕೆಲಸಕ್ಕೆ ರಾಜೀ ನಾಮೆ ನೀಡಿದ. ಮ್ಯಾನೇಜರ್ ಎಷ್ಟೇ ವಿನಂತಿಸಿದರೂ ಆತ ಕೇಳಲಿಲ್ಲ.

    ಇನ್ನೊಂದು ಶೂ ಕಂಪೆನಿಗೆ ಅವನು ಸೇರಿಕೊಂಡ. ಆಬಿದ್‌ನ ಪ್ರತಿಭೆಯನ್ನು ತಿಳಿದುಕೊಂಡ ಕಂಪೆನಿಯು ಆತನಿಗೆ ಉತ್ತಮ ಹುದ್ದೆ ನೀಡಿತು.

    ಈ ಕತೆಯಿಂದ ಹಲವು ವಿಷಯಗಳು ನಿಮಗೆ ತಿಳಿದಿರಬಹುದು. ನಾವು ಇರುವ ಸ್ಥಳಗಳು ಬಹಳ ಮುಖ್ಯ. ಕೊಳದಲ್ಲಿ ಕಟ್ಟಿದ ನೀರು ಮತ್ತು ಸಮುದ್ರದಲ್ಲಿ ತೆರೆಯಾಗಿ ಅಪ್ಪಳಿಸುವುದು ನೀರೇ ಆಗಿದೆ. ಅದರ ಸ್ಥಳ ವಿಭಿನ್ನವಾಗಿದೆ ಎಂಬುದೇ ವ್ಯತ್ಯಾಸ. ಆದರೆ ಆ ಬದಲಾವಣೆ ಎಷ್ಟು ದೊಡ್ಡದು ಎಂದು ಯೋಚಿಸಿದರೆ ಅರ್ಥಮಾಡಿಕೊಳ್ಳಬಹುದು. ಟಿ

  • ಕುಮಾರಿ ಹರ್ಷಿಯ ಬಾನುರವರ ಮನ ಮುಟ್ಟುವ ಬರಹ…

    ಕುಮಾರಿ ಹರ್ಷಿಯ ಬಾನುರವರ ಮನ ಮುಟ್ಟುವ ಬರಹ…

    ನಮಸ್ಕಾರ ಬಂಧುಗಳೇ,

    ನಾನು ಶಿಕ್ಷಕಿಯಾಗಬೇಕೆಂದು ನಮ್ಮ ಅಮ್ಮ ಆಸೆಪಟ್ಟಿದ್ರು. ಹಾಗಾಗಿ ಓದು-ಬರಹ ಕಲಿಯಲು ಕಷ್ಟ ಎನಿಸಿದರೂ ಸಹ ಅಮ್ಮನ ಒಂದೇ ಒಂದು ಆಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಮುಕ್ಕಾಲು ಭಾಗ ಅಂಧತ್ವವನ್ನು ಹೊತ್ತು ಹುಟ್ಟಿದ ನನಗೆ ಸಾಮಾನ್ಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಶಾಲೆಗೆ ನನ್ನನ್ನು ದಾಖಲಿಸಿದರು. ನನ್ನ ಕಲಿಕೆಯೇ ಅಲ್ಲಿ ಆಗುತ್ತಿರಲಿಲ್ಲ. ಕಾರಣ ಕಪ್ಪುಹಲಗೆಯ ಅಕ್ಷರಗಳು ನನಗೆ ಕಾಣುತ್ತಿರಲಿಲ್ಲ. ಅಕ್ಕ ಪಕ್ಕದ ವಿದ್ಯಾರ್ಥಿಗಳು ಸಹಾಯ ಮಾಡುತ್ತಿರಲಿಲ್ಲ. ಬದಲಾಗಿ ಆಡಿಕೊಳ್ಳುತ್ತಿದ್ದರು, ಛೇಡಿಸುತ್ತಿದ್ದರು. ಶಿಕ್ಷಕರು ನಮ್ಮ ತಂದೆ ತಾಯಿಗಳಿಗೆ ಸಲಹೆ ಕೊಟ್ಟರು: “ದಯವಿಟ್ಟು ನಿಮ್ಮ ಮಗುವನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಿ. ನಿಮ್ಮ ಮಗಳ ಭವಿಷ್ಯ ಉತ್ತಮವಾಗುತ್ತದೆ”.

    ನಮ್ಮ ತಂದೆ-ತಾಯಿ ಅಂದು ತೆಗೆದುಕೊಂಡ ನಿರ್ಧಾರ ನನ್ನ ಜೀವನದ ದಿಕ್ಕೇ ಬದಲಾಯಿಸಿತು. ಅವರು ಹೀಗೆ ಉತ್ತರಿಸಿದರು:- “ನೋಡಿ ಸರ್, ನಮ್ಮ ಮಗಳು ಹೇಗಾದರೂ ಇರಲಿ, ನಮ್ಮ ಕಣ್ಣ ಮುಂದೆ ಬೆಳೆಯ ಬೇಕು. ಅವಳನ್ನು ನೋಡಿ ನಾವು ಖುಷಿಪಡಬೇಕು. ಅವಳಿಂದ ನಾವು ಯಾವ ನಿರೀಕ್ಷೆಯೂ ಮಾಡಲ್ಲ. ಅವಳು ನಮ್ಮನ್ನು ಸಾಕಬೇಕೆಂದು ನಾವು ಬಯಸುವುದಿಲ್ಲ. ನಾವು ಬದುಕಿರುವವರೆಗೂ ಕೊನೆಯವರೆಗೂ ನಾವು ಅವಳನ್ನು ನೋಡಿಕೊಳ್ಳುತ್ತೇವೆ. ಕಷ್ಟನೋ ಸುಖನೋ ನಮ್ಮ ಮಗು ನಮ್ಮ ಜೊತೆಯೇ ಇರಲಿ” ಎಂದು ಉತ್ತರಿಸಿ ಮನೆಯ ಕಡೆ ಹೆಜ್ಜೆ ಹಾಕಿದರು. ಅಕ್ಕ ಪಕ್ಕದ ಮನೆಯವರ ಚುಚ್ಚು ಮಾತುಗಳಿಗೂ ಆಹಾರವಾದರು. “ಅಯ್ಯೋ ಪಾಪ, ಈ ಮಗು ನಾ ಅವರ ತಂದೆ ತಾಯಿ ಸಾಯೋವರೆಗೂ ಸಾಕಬೇಕಲ್ಲ!” ಎಂದು ಜನರೆಲ್ಲ ಆಡಿಕೊಂಡು ನಗುತ್ತಿದ್ದರು.

    ಇದನ್ನೆಲ್ಲ ಮೌನವಾಗಿ ಗಮನಿಸುತ್ತಿದ್ದ ನನಗೂ ನಾನೇಕೆ ನನ್ನ ಅಪ್ಪ ಅಮ್ಮನಿಗೆ ಹೊರೆಯಾಗಿರಬೇಕು ನಾನೂ ಸಹ ಓದಬೇಕು ಏನಾದರೂ ಮಾಡಬೇಕು ಎಂಬ ಆಲೋಚನೆ ಉಂಟಾಯಿತು. ತರಗತಿಯಲ್ಲಿ ಶಿಕ್ಷಕರು ಸರತಿಯ ಸಾಲಿನಲ್ಲಿ ಎಲ್ಲರನ್ನೂ ಓದಿಸುತ್ತಿದ್ದರು. ನನ್ನ ಸರದಿ ಬಂದಾಗ ನಿನ್ನ ಕೈಲಾಗಲ್ಲಮ್ಮ ಕಷ್ಟ ಆಗುತ್ತೆ ಕುಳಿತುಕೋ ಎಂದು ಕೂರಿಸಿಬಿಡುತ್ತಿದ್ದರು. ಅದಕ್ಕೆ ಕಾರಣ ಶಿಕ್ಷಕರಿಗೆ ನನ್ನ ಮೇಲಿರುವ ಕಾಳಜಿಯೋ ಅನುಕಂಪವೋ ತಿಳಿಯದು. ನಂತರದ ದಿನಗಳಲ್ಲಿ ಸ್ವತಃ ನಾನೇ ಹಿರಿಯ ವಿದ್ಯಾರ್ಥಿಗಳ ಬಳಿ ಹೇಳಿಸಿಕೊಂಡು ಕಲಿಯತೊಡಗಿದೆ. ಕಾರಣ ಅಪ್ಪ ಅಮ್ಮ ಅಷ್ಟೇನೂ ಓದಿಲ್ಲ. ಅಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರು (ಈಗ ನಿವೃತ್ತರು).

    ಅಮ್ಮ ಗೃಹಿಣಿ, ನಾನೇ ಮೊದಲ ಮಗು ಆಗಿದ್ರಿಂದ ಹೇಳಿಕೊಡುವವರಾರೂ ಇರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಕಲಿತ ನಾನು ಸರದಿಯ ಸಾಲಿನಲ್ಲಿ ನನ್ನ ಸರದಿ ಬಂದಾಗ ನಾನೇ ಎದ್ದು ನಿಂತೆ ಎಂದಿನAತೆ ನನ್ನ ಶಿಕ್ಷಕರು ಕೂರಲು ಹೇಳಿದರು. ಆಗ ನಾನು ಹೇಳಿದೆ, “ಸರ್. ನಾನೂ ಓದುತ್ತೇನೆ, ತಪ್ಪಿದ್ದರೆ ತಿಳಿಸಿ ಸರಿ ಇದ್ದರೆ ಓದಲು ಅವಕಾಶ ಕೊಡಿ” ಎಂದೆ. ಅಂದೇ ನನಗೆನಿಸಿದ್ದು, “ಅನುಕಂಪ ಬೇಡ, ಅವಕಾಶ ಕೊಡಿ” ಎಂದು. ಗುರುಗಳು ಓದಲು ತಿಳಿಸಿದರು. ಕನ್ನಡ ಪಾಠ ಓದಿದೆ. ನಂತರ ಇತರೆ ವಿಷಯಗಳನ್ನು ಓದಲು ಹೇಳಿದರು ಅವುಗಳನ್ನೂ ಓದಿದೆ. ಆಗ ಶಿಕ್ಷಕರೆಲ್ಲ ಒಟ್ಟಿಗೆ ಒಂದೆಡೆ ಸೇರಿ ಇವಳೂ ಸಹ ಓದಬಲ್ಲಳು. ಪ್ರೋತ್ಸಾಹದ ಅಗತ್ಯವಿದೆ. ಎಂದರಿತ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರು ೬ನೇ ತರಗತಿಯಿಂದ ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಆಟಕ್ಕೆಂದು ಹೋದರೆ ಸಹಪಾಠಿಗಳಿಂದ ಹೀಯಾಳಿಕೆಗೊಳಗಾಗಬೇಕಿತ್ತು. ಕುರುಡಿ ಎಂದು ಆಡಿಕೊಳ್ಳುತ್ತಿದ್ದರು. ಭಯದಿಂದಲೇ ಶಾಲೆಯ ಆಟದ ಮೈದಾನದಲ್ಲಿರಬೇಕಿತ್ತು. ಶಾಲೆ ಬಿಟ್ಟ ನಂತರ ಮನೆ ಕಡೆ ಹೋಗ್ತಾ ಇದ್ರೆ ಕಲ್ಲಲ್ಲೆಲ್ಲ ಹೊಡೆಯೋರು. ೭ನೇ ತರಗತಿಯಲ್ಲಿ ಅನುತ್ತೀರ್ಣವಾಗಲು ಕಾರಣ ಗಣಿತದ ಲೆಕ್ಕಗಳು ಕಪ್ಪು ಹಲಗೆಯ ಮೇಲೆ ಕಾಣದಿರುವುದು. ನಂತರ ಕಷ್ಟಪಟ್ಟು ಅಭ್ಯಾಸ ಮಾಡಿ ಪರೀಕ್ಷೆ ೭ನೇ ತರಗತಿ ಪಾಸಾದೆ. ಪ್ರೌಢ ಶಾಲೆಯಲ್ಲಿ ಆಟದ ಅವಧಿ ಬಂದಾಗ ಶಿಕ್ಷಕರ ಬಳಿ ಹೋಗಿ ಗಣಿತದ ಲೆಕ್ಕಗಳು, ವಿಜ್ಞಾನದ ಚಿತ್ರಗಳು, ಸಮಾಜ ವಿಜ್ಞಾನದ ಭೂಪಟಗಳನ್ನು ಅಭ್ಯಾಸ ಮಾಡುತ್ತಿದ್ದೆ. ಪ್ರೌಢ ಶಾಲೆಯಲ್ಲಿ ನಾನು ಮೊದಲ ಬೆಂಚಿನ ಮೊದಲ ವಿದ್ಯಾರ್ಥಿನಿ. ಹಾಗಿದ್ದರೂ ಸಹ ಕಪ್ಪು ಹಲಗೆಯ ಅಕ್ಷರಗಳು ಕಾಣುತ್ತಿರಲಿಲ್ಲ. ನಮ್ಮ ಶಿಕ್ಷಕರು ಈ ವಿಚಾರದಲ್ಲಿ ಬಹಳ ಸಹಕಾರ ಕೊಟ್ಟರು. ಅವರು ಹೇಳಿಕೊಂಡೇ ಪಾಠಗಳ ನೋಟ್ಸ್ ಅನ್ನು ಕಪ್ಪು ಹಲಗೆಯ ಮೇಲೆ ಬರೆಯುತ್ತಿದ್ದರು. ನಾನೂ ಸಹ ಅದನ್ನು ಆಲಿಸುವುದರ ಮೂಲಕ ವೇಗವಾಗಿ ಬರೆದುಕೊಳ್ಳುತ್ತಿದ್ದೆ. ಶಾಲೆಯಲ್ಲಿ ನಡೆಯುವ ಯಾವುದೇ ಸಂಗತಿಗಳನ್ನು ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳುತ್ತಿರಲಿಲ್ಲ. ಎಲ್ಲಿ ನನಗೆ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿಬಿಡುವರೋ ಎಂಬ ಭಯ ಕಾಡುತ್ತಿತ್ತು. ಆಟಕ್ಕೆ ಹೋಗದೆ ಕೇವಲ ಪಾಠಗಳ ಅಭ್ಯಾಸವನ್ನೇ ಮಾಡುತ್ತಿದ್ದೆ. ಜನಪದ ಗೀತೆ, ಭಾವಗೀತೆ, ಪ್ರಬಂಧ ರಚನೆ, ಏಕಪಾತ್ರಾಭಿನಯ ಹೀಗೆ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಶಿಕ್ಷಕರೂ ಸಹ ಪ್ರೋತ್ಸಾಹಿಸುತ್ತಿದ್ದರು. ನನ್ನ ಪೋಷಕರು ಶಾಲೆ ದೂರ ಇದ್ದರೆ ಓಡಾಟ ಕಷ್ಟ ಎಂದು ಮನೆಯ ಹತ್ತಿರವೇ ಇದ್ದ ಅನುದಾನಿತ ಶಾಲೆಗಳಲ್ಲಿ ಓದಿಸಿದರು. ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದೆ. ಕಾಲೇಜು ಶಿಕ್ಷಣಕ್ಕಾಗಿ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿಗೆ ಸೇರಿಸಿದರು. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಬೇಕೆಂದು ನನಗೆ ಆಸೆ ಇತ್ತು. ಆದರೆ ಅಲ್ಲಿನ ಆಡಳಿತಾಧಿಕಾರಿಗಳು ಕೊಡಲು ನಿರಾಕರಿಸಿದರು. ಅವರು ಕೊಡುವ ಕಾರಣ ಹೀಗಿದೆ: “ನೋಡಮ್ಮ, ವಿಜ್ಞಾನÀ ವಿಭಾಗಕ್ಕೆ ಸೇರಿಸಿಕೊಳ್ಳೋದಕ್ಕೆ ನಮಗೇನೂ ತಕರಾರಿಲ್ಲ ನಿನಗೆ ಅರ್ಹತೆಯೂ ಇದೆ. ಆದರೆ ಮಾನವೀಯತೆ ದೃಷ್ಟಿಯಿಂದ ನಾವು ನಿನಗೆ ಕೊಡುವುದಿಲ್ಲ. ದೈಹಿಕವಾಗಿ ಸದೃಢರಾಗಿರುವವರೇ ಕಣ್ಣಿನಲ್ಲಿ ಆಸಿಡ್ ಎಲ್ಲ ಚೆಲ್ಲಿಕೊಂಡ ಉದಾಹರಣೆಗಳಿವೆ. ದಯವಿಟ್ಟು ಕ್ಷಮಿಸು. ನೀನು ಕಲಾವಿಭಾಗ ಆರಿಸಿಕೊಂಡು ಅಧ್ಯಯನ ಮಾಡುವುದೇ ಸರಿ” ಎಂದು ಹೇಳಿದರು. ಬೇರೆ ಬೇರೆ ಖಾಸಗಿ ಶಾಲೆಗಳಿಗೂ ಹೋಗಿ ಕೇಳಿದೆ. ಅಲ್ಲಿಯೂ ನನಗೆ ವಿಜ್ಞಾನ ವಿಭಾಗಕ್ಕೆ ಸೇರಲು ಅವಕಾಶ ಕೊಡಲಿಲ್ಲ. ಕಡೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ ಕಲಾ ವಿಭಾಗದಲ್ಲಿಯೇ ಅಭ್ಯಾಸ ಮಾಡಿದೆ. ಕಾಲೇಜು ಸ್ವಲ್ಪ ದೂರ ಹಾಗಾಗಿ ಮನೆಯ ಹತ್ತಿರವೇ ಇದ್ದ ನನ್ನ ಸಹಪಾಠಿಗಳ ಜೊತೆಯಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದೆ. ಎಲ್ಲವೂ ಥಿಯರಿಯೇ ಇದ್ದಿದ್ದರಿಂದ ನನಗಲ್ಲಿ ಸಮಸ್ಯೆಯಾಗಲಿಲ್ಲ. ಆದರೆ ಇಂಗ್ಲಿಷ್ ವ್ಯಾಕರಣ ಹೇಳಿಸಿಕೊಳ್ಳಲು ನಮ್ಮ ಸಹಪಾಠಿಗಳ ಜೊತೆ ಇಂಗ್ಲಿಷ್ ಉಪನ್ಯಾಸಕರ ಮನೆಗೆ ಹೋಗಿ ಹೇಳಿಸಿಕೊಳ್ಳುತ್ತಿದ್ದೆವು. ಪ್ರೌಢಶಾಲಾ ಹಂತದಲ್ಲೂ ಶಿಕ್ಷಕರ ಮನೆಗೆ ಹೋಗಿ ಹೇಳಿಸಿಕೊಂಡ ಉದಾಹರಣೆಗಳಿವೆ. ಪಿಯುಸಿಯಲ್ಲಿ ನಿರಾತಂಕವಾಗಿ ಓದಿ ದ್ವಿತೀಯ ಪಿ.ಯು.ಸಿ.ಯನ್ನು ಉತ್ತಮ ಅಂಕಗಳೊAದಿಗೆ ಉತ್ತೀರ್ಣವಾದ ನಂತರ ಮುಂದೇನು ಎಂಬ ಚಿಂತೆ ಉಂಟಾಯಿತು. ಆಗ ಅಲ್ಲಿದ್ದ ಒಬ್ಬರು ಉಪನ್ಯಾಸಕರು ಐಚ್ಛಿಕ ಕನ್ನಡ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನಾರಿಸಿಕೊಂಡು ಬಿಎ ಅಭ್ಯಾಸ ಮಾಡಲು ಸಲಹೆ ಕೊಟ್ಟರು ಅದರಂತೆ ಪದವಿ ಕಾಲೇಜಿಗೆ ಸೇರಿದೆ ಅಲ್ಲಿ ನನಗೆ ಮೊದಲು ಪರಿಚಯವಾದವರು ಕನ್ನಡದ ಪ್ರೊಫೆಸರ್. ಎಂಟನೆಯ ತರಗತಿಯಿಂದಲೇ ಕವನ ಬರೆಯುವ ಹವ್ಯಾಸ ಇದ್ದ ನನಗೆ ನನ್ನ ಬರವಣಿಗೆಗೆ ಮತ್ತಷ್ಟು ಪ್ರೋತ್ಸಾಹ ಅಲ್ಲಿ ನನಗೆ ದೊರೆಯಿತು. ಪದವಿ ತರಗತಿಯನ್ನೂ ಸಹ ಪೂರ್ಣಗೊಳಿಸಿದ ನಂತರ ಬಿಎಡ್‌ಗೆ ದಾಖಲಾತಿ ಪಡೆಯಲು ಪ್ರವೇಶ ಪರೀಕ್ಷೆ ಬರೆದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆಯಿತು ವಿವೇಕಾನಂದ ಬಿ.ಎಡ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ದೊರೆಯಿತು. ಇಷ್ಟೇ ಕೋನಮಿತಿಯಲ್ಲಿ ಪುಸ್ತಕ ಹಿಡಿಯಬೇಕು ಓದುಗಾರಿಕೆ ಕೌಶಲದಲ್ಲಿ ಎಂಬುದು ನಿಯಮ. ನನಗೆ ಅದು ಸಾಧ್ಯವಾಗುವುದಿಲ್ಲ ಕಣ್ಣಿಗೆ ತುಂಬಾ ಸಮೀಪ ಹಿಡಿದುಕೊಂಡರಷ್ಟೇ ಕಾಣುವುದು. ಸ್ವಲ್ಪ ಅಂತರವಿದ್ದರೂ ಕಾಣುವುದಿಲ್ಲ. ಕನ್ನಡ ಮೆಥೇಡ್ ಬೋಧಿಸುವ ಶಿಕ್ಷಕರ ಬಳಿ ನನ್ನ ಅಳಲನ್ನು ತೋಡಿಕೊಂಡೆ. ನಿನಗೆ ಆಸಕ್ತಿ ಇದ್ಯಲ್ಲ ಅದು ಮೆಚ್ಚುವಂಥದ್ದೆ. ನಿನ್ನಂತಹ ಕೆಲವು ಪ್ರಕರಣಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಧೈರ್ಯವಾಗಿ ನಿನ್ನ ಅಧ್ಯಯನ ಮುಂದುವರೆಸು ಎಂದು ಹೇಳಿದರು. ನಾನು ಓದಿದ ಪ್ರೌಢಶಾಲೆಗೆ ನನಗೆ ಬೋಧನಾಭ್ಯಾಸಕ್ಕೆ ನಿಯೋಜಿಸಿದರು. ವಿಶಿಷ್ಟವಾದ ಕಲಿಕೋಪಕರಣಗಳನ್ನು ಬಳಸಿ ಪಾಠ ಮಾಡುವ ನನ್ನ ಕಾಯಕ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಯಿತು ಪರಿಸರ ಪಾಠಕ್ಕೆ ಸಂಬAಧಿಸಿದAತೆ ಬೇರೆ ಬೇರೆ ದಿನಪತ್ರಿಕೆಯಲ್ಲಿನ ಪರಿಸರಸಂಬAಧಿ ಭಾವಚಿತ್ರಗಳನ್ನು ಕತ್ತರಿಸಿ ಡ್ರಾಯಿಂಗ್ ಚಾರ್ಟ್ಗೆ ಅಂಟಿಸಿ ಮಾಹಿತಿಗಳನ್ನು ಕೆಳಗೆ ಬರೆದುಕೊಂಡು ಹೋಗಿದ್ದೆ. ಉಪನ್ಯಾಸಕರು ಅದನ್ನು ಮೆಚ್ಚಿಕೊಂಡೇ ಅವರೇ ಸನ್ನಿವೇಶಗಳನ್ನು ವಿವರಿಸಿದರು. ಬಿಎಡ್ ವ್ಯಾಸಂಗ ಮುಗಿದ ನಂತರ ಯಾವ ಖಾಸಗಿ ಶಾಲೆಯವರೂ ನನಗೆ ಬೋಧನೆಗೆ ಅವಕಾಶ ಕೊಟ್ಟಿಲ್ಲ. ಟ್ಯುಟೋರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದೆ ಅಷ್ಟೆ. ನನ್ನ ಪರಿಸ್ಥಿತಿ ನೋಡಿ ಇವಳಿಂದೇನಾಗುತ್ತೆ ಎಂದು ಯಾವ ಖಾಸಗಿ ಶಾಲೆಯವರೂ ಸಹ ನನಗೆ ಬೋಧನೆಗೆ ಅವಕಾಶ ಕೊಡಲು ಸಿದ್ದವಿರಲಿಲ್ಲ. ಹೀಗಿರುವಾಗ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರೆ ಕೊಟ್ಟಿತು. ನಾನು ಸತತವಾಗಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆದೆ. ನಾನು ಬರೆದ ಎಲ್ಲ ಪರೀಕ್ಷೆಗಳು ಸಾಮಾನ್ಯ ವಿದ್ಯಾರ್ಥಿಯಾಗಿಯೇ ಬರೆದದ್ದು.. ನನ್ನ ಶಿಕ್ಷಕರ ಒತ್ತಾಯಕ್ಕೆ ಮಣಿದು ಅಂಗವಿಕಲರ ಪ್ರಮಾಣಪತ್ರವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಲಗತ್ತಿಸಿದ್ದೆ. ಆಯ್ಕೆಯಾದ ನಂತರ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಆದರ್ಶ ವಿದ್ಯಾಲಯ ಆರ್‌ಎಂಎಸ್‌ಎ ಶಾಲೆಗೆ ಕನ್ನಡ ಭಾಷಾ ಶಿಕ್ಷಕಿಯಾಗಿ ವರದಿ ಮಾಡಿಕೊಂಡೆ. ಪ್ರಾರಂಭದಲ್ಲಿ ನನಗೆ ಇಲ್ಲಿಯೂ ಕಷ್ಟವಾಯಿತು. ಇಲ್ಲೂ ಸಹ ಎಲ್ಲರ ಹೀಯಾಳಿಕೆ ಹೀಗಳಿಕೆಗೆ ಗುರಿಯಾಗಬೇಕಾಯಿತು. ವಿದ್ಯಾರ್ಥಿಗಳಾದಿಯಾಗಿ ಎಲ್ಲರ ಅಪಹಾಸ್ಯ ಬೈಗುಳಗಳಿಗೆ ಗುರಿಯಾಗಬೇಕಾಯಿತು. ನಾನು ಪಾಠ ಓದಲು ಪ್ರಾರಂಭಿಸಿದರೆ ಎಲ್ರೂ ನಗಾಡುವುದು ಕಿರುಚುವುದು ನಿತ್ಯದ ಚಟುವಟಿಕೆಯಾಗಿತ್ತು. ನನ್ನ ಕೆಲಸ ನನಗೆ ಎಷ್ಟೇ ಕಷ್ಟವಾದರೂ ನಾನೇ ಅದನ್ನು ಪೂರ್ಣಗೊಳಿಸಬೇಕಿತ್ತು. ಪಾಠ ಬೋಧನೆಯ ಜೊತೆಗೆ ತರಗತಿ ಶಿಕ್ಷಕಿ ಎನ್ನುವ ಜವಾಬ್ದಾರಿಯೂ ಹೆಗಲೇರಿತ್ತು. ಪಾಠ ಮಾಡುವುದೇ ದುಸ್ತರವಾಗಿದ್ದಾಗ ಹೆಚ್ಚುವರಿ ಕೆಲಸಗಳ ಭಾರ ಸಾಕಷ್ಟು ಒತ್ತಡ ಉಂಟು ಮಾಡುತ್ತಿತ್ತು. ಇಲ್ಲಿ ಕನ್ನಡ ಕಲಿಸುವುದು ಸವಾಲಿನ ಕೆಲಸ. ಕಾರಣ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ತೆಲುಗು, ತಮಿಳು ಮಾತೃಭಾಷಿಕರು. ಆಂಗ್ಲ ಮಾಧ್ಯಮ ಶಾಲೆ. ಪಾಠ ಓದುವಾಗ ವಿದ್ಯಾರ್ಥಿಗಳ ನಗು. ಇದರಿಂದ ತಪ್ಪಿಸಿಕೊಳ್ಳಲು ಪಾಠಗಳೆಲ್ಲ ಕಂಠಪಾಠ ಮಾಡಿಕೊಂಡೆ. ಎಲ್ಲಿ ನಿಲಿಸಿದರೆ ಪುಟ ಮುಕ್ತಾಯವಾಗುತ್ತದೆ ಎಂಬುದನ್ನೂ ಸಹ ನೆನಪಿಟ್ಟುಕೊಳ್ಳಬೇಕಿತ್ತು. ಈ ಮಾರ್ಗ ಕಂಡುಕೊAಡ ಮೇಲೆ ವಿದ್ಯಾರ್ಥಿಗಳ ಅಪಹಾಸ್ಯ ನಿಂತು ಹೋಯಿತು. ನಂತರದಲ್ಲಿ ವ್ಯಾಕರಣ ಬೋಧನೆಗೆ ಕಪ್ಪು ಹಲಗೆಯ ಮೇಲೆ ಬರೆಯಲೇಬೇಕಿತ್ತು ಹಾಗಾಗಿ ನಾನು ಪ್ರತಿಯೊಂದು ವ್ಯಾಕರಣಾಂಶಗಳಿಗೂ ಮಾದರಿಗಳನ್ನು ತಯಾರಿಸಿಕೊಂಡೆ ಅದರ ಮೂಲಕ ಬೋಧನೆ ಮಾಡಲು ಪ್ರಾರಂಭಿಸಿದೆ. ಬೋಧನಾ ವಿಧಾನ ಉತ್ತಮ ಫಲಿತಾಂಶ ಉಂಟು ಮಾಡಿದರೆ ಅದನ್ನು ಮುಂದುವರೆಸುತ್ತಿದ್ದೆ ಇಲ್ಲವಾದಲ್ಲಿ ಬೇರೆ ವಿಧಾನ ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದ್ದೆ. ಹೇಗೆ ನಾನು ಸಂದರ್ಶನ ಮಾದರಿ ವಿಧಾನ, ನಾಟಕ ಅಭಿನಯ ವಿಧಾನ, ಮಾದರಿಯೊಂದಿಗೆ ಬೋಧನೆ, ಉಪನ್ಯಾಸ ವಿಧಾನ, ಚರ್ಚಾ ವಿಧಾನ ಹೀಗೆ ಬೇರೆ ಬೇರೆ ವಿಧಾನಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತೇನೆ. ಕಳೆದ ನಾಲ್ಕೂ ಎಸ್‌ಎಸ್‌ಎಲ್‌ಸಿ ಬ್ಯಾಚ್‌ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ೧೦೦ ಫಲಿತಾಂಶ ಬಂದಿರುತ್ತದೆ. ಉಳಿದೆರಡು ಬ್ಯಾಚ್ ೯೮.೫. ಶೇ ಫಲಿತಾಂಶ ಬಂದಿರುತ್ತದೆ. ಕಳೆದ ಬಾರಿ ೧೦೦ಕ್ಕೆ ೧೦೦ ಮೂರು ವಿದ್ಯಾರ್ಥಿನಿಯರು ಪಡೆದಿರುತ್ತಾರೆ. ಅವರಿಗೆ ನನ್ನ ಸ್ವಂತ ಖಾತೆಯಿಂದ ೧೦೦೦ ರೂ. ನಗದು ಹಾಗು ಪದಕವನ್ನಿತ್ತು ಮುಖ್ಯಶಿಕ್ಷಕರ ಮೂಲಕ ಗೌರವಿಸಲಾಯಿತು. ಮಕ್ಕಳಿಗೆ ಬೇರೆ ಬೇರೆ ಪುಸ್ತಕಗಳನ್ನು ಓದಿಸಿ ಬರೆಸುವ ಆಲೋಚನೆ ಇದೆ.. ಇದರಿಂದ ಓದುವ ಹವ್ಯಾಸ ಬೆಳೆಸಬಹುದು.

    ನಮ್ಮ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಂದಿನ ತಿಂಗಳಿAದ ಗೋಡೆ ಪತ್ರಿಕೆ ಹೊರ ತರುವ ಉದ್ದೇಶವಿತ್ತು. ಅವುಗಳನ್ನು ಸಾಕಾರಗೊಳಿಸಬೇಕೆನ್ನುವಷ್ಟರಲ್ಲಿ ನನ್ನ ತವರು ಜಿಲ್ಲೆಯಾದ ಹಾಸನ ಜಿಲ್ಲೆಗೆ ವರ್ಗವಾಯಿತು. ೧೯ ಅಕ್ಟೋಬರ್ ೨೦೧೯ರಲ್ಲಿ ನಾನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳ ಹೋಬಳಿಗೆ ಸೇರಿದ ಜುಟ್ಟನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರದಿ ಮಾಡಿಕೊಂಡೆ. ಇನ್ನೇನು ಮಕ್ಕಳೊಂದಿಗೆ ಬೆರೆಯಬೇಕು ಹೊಂದಿಕೊಳ್ಳಬೇಕು ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕೆನ್ನುವ ಯೋಜನೆಗಳನ್ನು ರೂಪಿಸುವಾಗಲೇ ಕೊರೋನ ಎಂಬ ಪೆಡಂಭೂತ ಅಡ್ಡಿಯಾಯಿತು. ದೇಶದಾದ್ಯಂತ ಲಾಕ್ ಡೌನ್. ಆ ಎರಡು ವರ್ಷಗಳು ಏನೂ ಮಾಡಲಾಗದ ಅಸಹಾಯಕತೆ. ಆನ್ ಲೈನ್ ತರಗತಿಗಳನ್ನು ಮಾಡೋಣ ಎಂದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದರು. ಮೊದಲೇ ಅಲ್ಲಿನ ಶಾಲೆಗೆ ಪ್ರಯಾಣಿಸುವುದೇ ನನಗೆ ಸವಾಲಿನ ಕೆಲಸ. ಅರಸೀಕೆರೆಯಿಂದ ಚನ್ನರಾಯಪಟ್ಟಣ, ಚನ್ನರಾಯಪಟ್ಟಣದಿಂದ ಹಿರೀಸಾವೆ, ಹಿರೀಸಾವೆಯಿಂದ ಜುಟ್ಟನಹಳ್ಳಿ ಹೀಗೆ ಮೂರು ವಾಹನಗಳನ್ನು ಬಳಸಿ ಅರಸೀಕೆರೆಯಿಂದ ನೂರು ಕಿ.ಮೀ ದೂರದಲಿರುವ ಶಾಲೆಗೆ ಹೋಗಿ ಅಧ್ಯಯನ ಅಧ್ಯಾಪನದಲಿ ತೊಡಗಿಸಿಕೊಳ್ಳಬೇಕಿತ್ತು. ನಾವು ಶಾಲೆ ತಲುಪಿ ಅಲ್ಲಿಂದ ಮಕ್ಕಳಿರುವ ಹಳ್ಳಿಗಳಿಗೇ ಹೋಗಿ ಬೋಧನೆ ಮಾಡತೊಡಗಿದೆವು. ಅಲ್ಲಿ ಲಾಕ್ ಡೌನಿದ್ದದ್ರಿಂದ ವಾಹನ ವ್ಯವಸ್ಥೆ ಇರಲಿಲ್ಲ. ದಿನಕೆ ಐನೂರರಿಂದ ಆರು ನೂರು ರೂಪಾಯಿಗಳು ಆಟೊ ಬಾಡಿಗೆ ಕೊಡಬೇಕಿತ್ತು. ಈಗಲೂ ಹಾಗೆಯೇ. ಬೆಳಗಿನ ಜಾವ ಆರು ಗಂಟೆ ಬಸ್ಸಿಗೆ ಹೊರಟರೆ ಮನೆ ತಲುಪುವುದು ಸಂಜೆ ಏಳೂವರೆ ಎಂಟು ಗಂಟೆಯೂ ಆಗಿ ಬಿಡುತ್ತದೆ. ಶಾಲೆಯಲ್ಲಿ ಬಿಡುವಿಲ್ಲದ ತರಗತಿಗಳು. ಹಾಗಾಗಿ ಶಾಲೆಯ ಇತರೆ ಕೆಲಸಗಳನ್ನೆಲ್ಲ ಮನೆಗೇ ಹೊತ್ತು ತಂದು ಮಾಡಿ ಕೊಳ್ಳುವೆ. ಶಾಲೆಯಲ್ಲಿ ನನಗೆ ಸಂಪೂರ್ಣ ಸಹಕಾರವಿದೆ ಆದರೂ ಪ್ರಯಾಣವೇ ನನ್ನ ಪಾಲಿಗೆ ಸವಾಲಿನ ಸಂಗತಿ. ಪ್ರತಿ ದಿನ ಇನ್ನೂರು ಕಿ.ಮೀ ಪ್ರಯಾಣದ ಕಾರಣ ಆರು ಗಂಟೆಗಳು ಪ್ರಯಾಣದಲ್ಲಿಯೇ ಕಳೆದು ಹೋಗುತ್ತದೆ. ಶಾಲೆಯಿಂದ ಅರಸೀಕೆರೆಗೆ ಬಂದ ನಂತರ ಸಂಗೀತ ಹಾಗೂ ವೀಣೆ ತರಗತಿಗೆ ಹೋಗಿ ಮನೆಗೆ ಬರುವುದು ರಾತ್ರಿ ಎಂಟು ಗಂಟೆ. ಮನೆಗೆ ಬಂದ ನಂತರ ಶುಭ್ರವಾಗಿ ಊಟ ಮುಗಿಸಿ ಸಂಗೀತ ಅಭ್ಯಾಸ, ವೀಣೆ ಅಭ್ಯಾಸ, ಮಾರನೆಯ ದಿನ ತೆಗೆದುಕೊಳ್ಳುವ ತರಗತಿಗಳ ಸಿದ್ದತೆ , ಕವನ, ಲೇಖನ ಬರೆವಣಿಗೆ ನಂತರ ಸರಿಯಾಗಿ ಹನ್ನೆರಡು ಗಂಟೆಗೆ ಡೈರಿ ಬರೆದು ಮಲಗಿದರೆ ಪುನಃ ಏಳುವುದು ಬೆಳಗಿನ ಜಾವ ಮೂರು ಗಂಟೆಗೆ. ಹೀಗಿತ್ತು ನನ್ನ ದಿನಚರಿ. ಆದರೆ ಇತ್ತೀಚೆಗೆ ನನಗೆ ಚನ್ನರಾಯಪಟ್ಟಣ ತಾಲೂಕಿನ ಸಾತೇನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದೆ. ಕೇವಲ ಮೂವ್ವತ್ತೆರಡು ಕಿ.ಮೀ. ದೂರ ಇರುವ ಶಾಲೆ. ಒಟ್ಟು ಅರವತ್ನಾಲ್ಕು ಕಿ.ಮೀ. ಪ್ರಯಾಣ. ಒಂದೂವರೆ ಗಂಟೆಯಷ್ಟೆ ಪ್ರಯಾಣದ ಅವಧಿ. ನನ್ನ ಸೃಜನಶೀಲ ಕೆಲಸಗಳಿಗೊಂದಷ್ಟು ಸಮಯ ದೊರಕಿತೆಂದೇ ಹೇಳಬಹುದು. ಹೀಗೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ಮಲಗುವುದು ರಾತ್ರಿ ಹನ್ನೆರಡು ಗಂಟೆಗೆ. ನನಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಹ ಸಾಲದಾಗಿತ್ತು. ಒತ್ತಡದ ನಡುವೆ ಒಂದಿಷ್ಟು ಉಲ್ಲಾಸ ಉತ್ಸಾಹ ತಂದು ಕೊಡುವುದು ನನಗೆ ಸಂಗೀತ ಹಾಗೂ ಸಾಹಿತ್ಯ. ಹಾಗಾಗಿ ಸಪ್ತಸ್ವರ ನಾದ ಮಂದಿರದ ನನ್ನ ಪೂಜ್ಯ ಗುರುಗಳಾದ ವಿದೂಷಿ ಶ್ರೀ ಮತಿ ವೀಣಾ ಮೇಡಮ್ ಬಳಿ ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ವೀಣೆಯನ್ನು ಅಭ್ಯಸಿಸುತಿರುವೆ. ಸಾಹಿತ್ಯ ಸೃಷ್ಟಿಯೂ ಜೊತೆ ಜೊತೆಗೆ ಸಾಗುತ್ತಲಿದೆ. ಹೀಗೆ ವೃತ್ತಿ ಪ್ರವೃತ್ತಿ ಎಂದು ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೂ ನನಗೆ ಅತಿ ಹೆಚ್ಚು ಖುಷಿ ಕೊಡುವ ಕ್ಷಣಗಳೆಂದರೆ ಅದು ನನ್ನ ವಿದ್ಯಾರ್ಥಿಗಳೊಂದಿಗೆ ಕಳೆಯುವ ಕ್ಷಣಗಳು. ಕಲಿತು ಕಲಿಸುವ ತತ್ವವನ್ನು ನನ್ನೊಳಗೆ ಅಳವಡಿಸಿಕೊಂಡಿರುವುದರಿAದ ನಿರಂತರ ಕಲಿಕಾರ್ಥಿಯಾಗಿದ್ದೇನೆ. 

    ವೈದ್ಯೆಯಾಗಬೇಕೆಂಬ ಕನಸು ನನಸಾಗಲಿಲ್ಲವಾದರೂ ಇಂದು ನನ್ನ ವಿದ್ಯಾರ್ಥಿಗಳು ಸಾಕಷ್ಟು ಜನ ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ನನ್ನ ಸಂಪರ್ಕದಲ್ಲಿರುವುದು ಹೆಮ್ಮೆಯ ಸಂಗತಿ.

    “ಹರ ಕೊಲ್ಲಲ್ ಗುರು ಕಾಯ್ವರು” ಎಂಬ ನಾಣ್ಣುಡಿಯಂತೆ ನನ್ನ ಪಾಲಿಗೆ ನನ್ನನ್ನು ಅನವರತ ಪ್ರೋತ್ಸಾಹಿಸುವ ಪ್ರೇರೇಪಿಸುವ ಪ್ರತಿಯೊಬ್ಬರೂ ಕೂಡ ಗುರು ಸಮಾನರೇ ಇವು ಕೇವಲ ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಕಿಯಾಗಿ ನನ್ನ ಅನುಭವ. 

    ಬೋಧನೆಗೆ ಯಾವ ಖಾಸಗೀ ಶಾಲೆಯೂ ಅವಕಾಶ ಕೊಡದಿದ್ದ ಸಂದರ್ಭದಲ್ಲಿ ಸರ್ಕಾರ ನನಗೆ ಇಂಥ ಸುವರ್ಣಾವಕಾಶ ಕೊಟ್ಟಿದೆ. ಶಿಕ್ಷಕಿ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಅಮ್ಮನ ಕನಸು ಸಾಕಾರಗೊಳಿಸಿದ ಖುಷಿ ಇದೆ ನನಗೆ.

    ಧನ್ಯವಾದಗಳು ಮಾನ್ಯರೇ, ಗೌರವಾನ್ವಿತರೇ, ಬಂಧುಗಳೇ.

    ಕು.ಹರ್ಷಿಯಾ ಭಾನು

    ಕನ್ನಡ ಭಾಷಾ ಶಿಕ್ಷಕಿ

    ಸರ್ಕಾರಿ ಪ್ರೌಢಶಾಲೆ

    ಸಾತೇನಹಳ್ಳಿ

    ದಂಡಿಗನಹಳ್ಳಿ ಹೋಬಳಿ

    ಚನ್ನರಾಯಪಟ್ಟಣ ತಾಲೂಕು

    ಹಾಸನ ಜಿಲ್ಲೆಪಿ£: 573111

  • ಗೋಧಿ ಹಿಟ್ಟಿನ ಪಿಝ್ಝಾ

    ಗೋಧಿ ಹಿಟ್ಟಿನ ಪಿಝ್ಝಾ

    ಬೇಕಾಗುವ ಸಾಮಗ್ರಿಗಳು:

    ೧) ಗೋಧಿ ಹುಡಿ- ೧ ಕಪ್, ಮೊಸರು- ೧/೩ ಕಪ್, ಬೇಕಿಂಗ್ ಪೌಡರ್- ೧/೨ ಚಮಚ, ಬೇಕಿಂಗ್ ಸೋಡ- ೧/೪ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಸಕ್ಕರೆ (ಹುಡಿ ಮಾಡಿದ್ದು) – ೨ ಚಮಚ, ಎಣ್ಣೆ- ೨ ಚಮಚ.

    ೨) ಮಖಾನಿ ಸಾಸ್ ತಯಾರಿಸಲು:

    ಬೆಣ್ಣೆ- ೧ ಚಮಚ, ಎಣ್ಣೆ- ೧ ಸ್ಪೂ., ಜೀರಿಗೆ- ೧ ಸ್ಪೂ., ಶುಂಠಿ-  ೧ ಇಂಚು, ಬೆಳ್ಳುಳ್ಳಿ- ೫-೬ ಎಸಳು, ಹಸಿಮೆಣಸು- ೧, ನೀರುಳ್ಳಿ- ೩, ಗೇರುಬೀಜ- ೭-೮, ಟೊಮೆಟೊ- ೪, ಉಪ್ಪು- ೧೧/೨ ಸ್ಪೂ., ಕೆಂಪು ಮೆಣಸಿನ ಹುಡಿ- ೧/೨ ಸ್ಪೂ., ಇಡೀ ಗರಮ್ ಮಸಾಲಾ- ಲವಂಗ, ಕೆತ್ತೆ ದಾಲ್ಚಿನ್ನಿ ಎಲೆ, ಬೆಣ್ಣೆ- ೧ ಸ್ಪೂ., ಎಣ್ಣೆ- ೧/೨ ಸ್ಪೂ., ಕೆಂಪು ಮೆಣಸಿನ ಹುಡಿ- ೧ ಸ್ಪೂ., ಕೊತ್ತಂಬರಿ ಹುಡಿ- ೧/೨ ಸ್ಪೂ., ಗರಮ್ ಮಸಾಲಾ ಹುಡಿ- ೧/೪ ಸ್ಪೂ., ಫ್ರೆಶ್ ಕ್ರೀಮ್- ೨ ಸ್ಪೂ., ಕಸೂರಿ ಮೇತಿ- ೧ ಸ್ಪೂ., ಸಕ್ಕರೆ- ೧ ಸ್ಪೂ.

    ಪಿಝ್ಝಾದ ಮೇಲ್ಗಡೆ ಹಾಕಲು:

    ಕ್ಯಾಪ್ಸಿಕಮ್, ಪನೀರ್ ೫-೬ ತುಂಡು, ನೀರುಳ್ಳಿ, ಓರೆಗ್ಯಾನೋ, ಚಿಲ್ಲಿ ಫ್ಲೇಕ್ಸ್, ಮೊಝರೆಲ್ಲಾ ಚೀಝ್, ಚೀಝ್ ಸ್ಲೆöÊಸ್, ಉಪ್ಪು- ಬಾಣಲೆಯಲ್ಲಿ ಬಿಸಿ ಮಾಡಲು ಹಾಕಲು- ೨ ಕಪ್.

    ಮಾಡುವ ವಿಧಾನ

    ನಂಬರ್ (೧)ರಲ್ಲಿ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ನಾದಿ. ೮-೧೦ ನಿಮಿಷಗಳ ವರೆಗೆ ಎಣ್ಣೆ ಹಾಕಿ ಚೆನ್ನಾಗಿ ನಾದಿರಿ. ಮಧ್ಯೆ ಮಧ್ಯೆ ಕೈಗೆ ಎಣ್ಣೆ ಹಚ್ಚಿ ಚೆನ್ನಾಗಿ ನಾದಿರಿ. ಹಿಟ್ಟನ್ನು ಒಂದು ಬಾಲಿನ ಆಕಾರಕ್ಕೆ ತಂದು ಒಂದು ಬೌಲಿನಲ್ಲಿ ಸ್ವಲ್ಪ ಎಣ್ಣೆ ಹಚ್ಚಿ ಮುಚ್ಚಳ ಮುಚ್ಚಿ ೨ ಗಂಟೆ ಹಾಗೆಯೇ ಇಡಿ.

    ಈಗ ಒಂದು ಪ್ಯಾನ್ ಒಲೆಯ ಮೇಲಿಟ್ಟು ಅದಕ್ಕೆ ಬೆಣ್ಣೆ ಹಾಕಿ, ಜೊತೆಗೆ ಎಣ್ಣೆ ಸ್ವಲ್ಪ ಹಾಕಿ. ಈಗ ಜೀರಿಗೆ ಹಾಕಿ ಹುರಿಯಿರಿ. ನಂತರ ಇಡೀ ಗರಮ್ ಮಸಾಲಾ ಹಾಕಿ ಹುರಿಯಿರಿ. ನಂತರ ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ಈಗ ಕತ್ತರಿಸಿದ ನೀರುಳ್ಳಿ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನೀರುಳ್ಳಿ ನಸು ಕಂದು ಬಣ್ಣ ಬಂದಾಗ ಗೇರುಬೀಜ ಹಾಕಿ ಹುರಿಯಿರಿ. ಈಗ ಕತ್ತರಿಸಿದ ಟೊಮೆಟೊ ಹಾಕಿ ಹುರಿಯಿರಿ. ಬೇಕಾದಷ್ಟು ಉಪ್ಪು ಹಾಕಿ. ಸ್ವಲ್ಪ ಕೆಂಪು ಮೆಣಸಿನ ಹುಡಿ ಸೇರಿಸಿ. ೫ ನಿಮಿಷಗಳ ವರೆಗೆ ಹುರಿದು ಇದಕ್ಕೆ ೧/೨ ಕಪ್ ನೀರು ಸೇರಿಸಿ. ೫-೬ ನಿಮಿಷಗಳ ವರೆಗೆ ಮುಚ್ಚಳ ಮುಚ್ಚಿ ಬೇಯಿಸಿ. ಟೊಮ್ಯಾಟೋ ಬೆಂದ ಬಳಿಕ ಈ ಮಿಶ್ರಣವನ್ನು ಒಲೆಯಿಂದ ತೆಗೆದಿರಿಸಿ ತಣ್ಣಗಾಗಲು ಬಿಡಿ. ಬಳಿಕ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಸೋಸುವ ಜರಡಿಗೆ ಹಾಕಿ, ಅದನ್ನು ಚೆನ್ನಾಗಿ ಜರಡಿ ಹಿಡಿಯಿರಿ. ತುಂಬಾ ನಯವಾದ ಮಿಶ್ರಣ ದೊರೆಯುತ್ತದೆ.

    ಪುನಃ ಒಂದು ಬಾಣಲೆಯನ್ನು ಒಲೆಯಲ್ಲಿಟ್ಟು ಅದಕ್ಕೆ ಬೆಣ್ಣೆ, ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಕೆಂಪು ಮೆಣಸಿನ ಹುಡಿ ಹಾಕಿ ಹುರಿಯಿರಿ. ನಂತರ ಜರಡಿಯಾಡಿಟ್ಟ ಮಿಶ್ರಣ ಹಾಕಿ. ಚೆನ್ನಾಗಿ ಕೈಯಾಡಿಸಿ. ಇದಕ್ಕೆ ಸ್ವಲ್ಪ ಕೊತ್ತಂಬರಿ ಹುಡಿ ಹಾಕಿ. ಈ ಸಮಯದಲ್ಲಿ ಉಪ್ಪು ಸರಿಯಾಗಿದೆಯಾ ನೋಡಿಕೊಂಡು ಹಾಕಿ. ೫-೬ ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಬಳಿಕ ಫ್ರೆಶ್ ಕ್ರೀಮ್ ಹಾಗೂ ಕಸೂರಿ ಮೇತಿ ಹಾಕಿ. ನಂತರ ಒಂದು ಚಮಚ ಹುಡಿ ಮಾಡಿದ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಿಝ್ಝಾದ ಮೇಲೆ ಹಾಕಲು ಸಾಸ್ ರೆಡಿ. ತಣ್ಣಗಾಗಲು ತೆಗೆದಿಡಿ.

    ನಂತರ ಚೆನ್ನಾಗಿ ನಾದಿ ಇಟ್ಟ ಹಿಟ್ಟನ್ನು ಎರಡು ಭಾಗಗಳಾಗಿ ಮಾಡಿ. ಒಂದು ಸ್ಟೀಲಿನ ಬಟ್ಟಲನ್ನು ತೆಗೆದು ಅದಕ್ಕೆ ಚೆನ್ನಾಗಿ ಎಣ್ಣೆ ಹಚ್ಚಿ. ಇದರ ಮಧ್ಯೆ ಒಂದು ದೊಡ್ಡ ಪಾತ್ರೆಯಲ್ಲಿ ಉಪ್ಪು ಹಾಕಿ (೨ ಕಪ್) ಅದರ ಮೇಲೆ ಒಂದು ಸ್ಟೀಲಿನ ಅಥವಾ ಅಲ್ಯೂಮಿನಿಯಂ ಸ್ಟಾö್ಯಂಡ್ ಇಟ್ಟು ಮುಚ್ಚಳ ಮುಚ್ಚಿ ೧೦ ನಿಮಿಷ ಮಂದ ಉರಿಯಲ್ಲಿ ಬಿಸಿಯಾಗಲು ಇಡಿ.

    ಈಗ ಹಿಟ್ಟನ್ನು ಎರಡು ಭಾಗ ಮಾಡಿ ಒಂದು ಭಾಗವನ್ನು ರೌಂಡ್ ಲಟ್ಟಿಸಿ, ಎಣ್ಣೆ ಹಚ್ಚಿದ ಸ್ಟೀಲ್ ಪ್ಲೇಟಿನಲ್ಲಿ ಅಂಟಿನವರೆಗೂ ಕೈಯಿಂದ ಒತ್ತುತ್ತಾ ಹರಡಿ. ಫೋರ್ಕ್ನಿಂದ ಇಡೀ ಹಿಟ್ಟಿನಲ್ಲಿ ಸಣ್ಣ ಸಣ್ಣ ರಂಧ್ರ ಮಾಡಿ. ನಂತರ ಇದರ ಮೇಲೆ ಬೆಣ್ಣೆ ಹಚ್ಚಿ. ಈಗ ತಯಾರಿಸಿಟ್ಟ ಮಖಾನಿ ಸಾಸ್ ಹಚ್ಚಿ ಅದರ ಮೇಲೆ ಚೀಝ್ ಸ್ಲೆöÊಸ್ ತುಂಡು ಮಾಡಿ ಇಡೀ ಪಿಝ್ಝಾದ ಮೇಲೆ ಹರಡಿ. ನಂತರ ಮೊಝರೆಲ್ಲ ಚೀಝ್ ಹಾಕಿ. ಈಗ ಪನೀರ್ ತುಂಡುಗಳನ್ನು ಮಖಾನಿ ಸಾಸ್‌ನಿಂದ ರೋಲ್ ಮಾಡಿ ಪಿಝ್ಝಾದ ಮೇಲೆ ಇಡಿ. ನೀರುಳ್ಳಿ ತುಂಡು, ಕ್ಯಾಪ್ಸಿಕಮ್ ತುಂಡುಗಳನ್ನು ಕೂಡಾ ಪಿಝ್ಝಾದ ಮೇಲೆ ಇಡಿ. ಮೇಲ್ಗಡೆ ಪುನಃ ಮೊಝರೆಲ್ಲ ಚೀಝ್ ಹಾಕಿ. ಓರೆಗ್ಯಾನೋ ಹಾಗೂ ಚಿಲ್ಲಿ ಫ್ಲೇಕ್ಸ್ ಹಾಕಿ. ಇದನ್ನು ಬಿಸಿಯಾಗಲು ಇಟ್ಟ ದೊಡ್ಡ ಪಾತ್ರೆಯ ಸ್ಟಾö್ಯಂಡಿನ ಮೇಲಿಟ್ಟು ಮುಚ್ಚಳ ಮುಚ್ಚಿ. ಮಂದ ಉರಿಯಲ್ಲಿ ೧೫-೨೦ ನಿಮಿಷಗಳ ವರೆಗೆ ಬೇಯಿಸಿ. ಗೋಧಿ ಹಿಟ್ಟಿನ ಮಖಾನಿ ಪಿಝ್ಝಾ ರೆಡಿ.

  • ನರಿಯ ಉಪಾಯ

    ನರಿಯ ಉಪಾಯ

    ನಟ ಕಮಲ್ಅದೊಂದು ಕಾಡಿನಲ್ಲಿ,ಕಾಡಿನ ರಾಜನಾದ `ಸಿಂಹ’ದ ಆಡಳಿತವಿತ್ತು. ಅದು ಕಾಡಿನ ಮೃಗಗಳಿಗೆ ಯಾವುದೇ ಕುಂದು ಕೊರತೆಗಳು ಬರದಂತೆ ನೋಡಿಕೊಳ್ಳುತ್ತಿತ್ತು. ಅವು ಸಹ ಅದರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದವು. ಹೀಗಿರಲು ಒಂದು ಸಲ…

    “ಮೃಗರಾಜ, ನರಿಯು ನನ್ನ ಮರಿಗಳಿಗೆ ಸಂಗ್ರಹಿಸಿಟ್ಟಿದ್ದ ಜೇನುತುಪ್ಪವನ್ನು ಕಬಳಿಸಿದೆ; ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು!” ಎಂದು ಕರಡಿಯೊಂದು ಮೃಗರಾಜನ ಆಸ್ಥಾನಕ್ಕೆ ಬಂದು ದೂರು ಸಲ್ಲಿಸಿತು. ಅದಾದ ಕೆಲವೇ ನಿಮಿಷಗಳಲ್ಲಿ ಮೊಲವೊಂದು ಬಂದು…

    “ಮೃಗರಾಜ ನರಿಯು ನನ್ನ ಮರಿಗಳನ್ನು ಭಕ್ಷಿಸಿದೆ; ನನಗೆ ನ್ಯಾಯ ಕೊಡಿಸಬೇಕು!” ಎಂದು ಅಲವತ್ತುಕೊಂಡಿತು! “ಮೇಲಿಂದ ಮೇಲೆ ನರಿಯ ಮೇಲಿನ ಆರೋಪಗಳನ್ನು ಕೇಳಿಸಿಕೊಂಡ ಮೃಗರಾಜನ ಪಿತ್ತವು ನೆತ್ತಿಗೇರಿತು. ನರಿಯನ್ನು ಕೂಡಲೇ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡಿತು. ನರಿಯು ಇನ್ನು ನನ್ನ ಕಥೆಯು ಮುಗಿಯಿತು; ಎಂದು ಮೃಗರಾಜನ ಆಜ್ಞೆಗೆ ಓಗೊಟ್ಟು ಆಸ್ಥಾನಕ್ಕೆ ಧಾವಿಸಿತು. ಅದು ಯಾವ ಕಾರಣವನ್ನು ನೀಡದೆ ತನ್ನ ತಪ್ಪು ಒಪ್ಪಿಕೊಂಡಿತು. ಅದರಂತೆ ಯಾವ ಶಿಕ್ಷೆಗೂ ಸಿದ್ಧನಿದ್ದೇನೆ! ಎಂದು ತಲೆತಗ್ಗಿಸಿತು! 

    ಮೃಗರಾಜ… “ನಿನಗೆ ಈ ಕಾಡಿನಿಂದ ಬಹಿಷ್ಕಾರವನ್ನು ಹಾಕಿದ್ದೇನೆ!” ಎಂದು ಹಿಂದು ಮುಂದು ಯೋಚಿಸದೆ ತನ್ನ ತೀರ್ಪನ್ನು ಪ್ರಕಟಿಸಿತು. ಅದರ ತೀರ್ಪಿಗೆ ಆಸ್ಥಾನದಲ್ಲಿ ನೆರೆದಿದ್ದ ಕಾಡಿನ ಪ್ರಾಣಿಗಳೂ… ಸಂತ್ರಸ್ತರೂ.. ಖುಷಿಗೊಂಡು ಮೃಗರಾಜನಿಗೆ ಜೈಕಾರವನ್ನು ಹಾಕಿದವು!

    ನರಿಯು ವಿಧಿ ಇಲ್ಲದೆ ಪಕ್ಕದ ಕಾಡಿನಲ್ಲಿ ನುಸುಳಬೇಕೆಂದು ಬಂದಿತು. ಆದರೆ ಪಕ್ಕದ ಕಾಡನ್ನು ಪ್ರವೇಶಿಸಬೇಕಾದರೆ ಕಾಡಿನ ಮಧ್ಯೆದಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ದಾಟಬೇಕಿತ್ತು! ನದಿಯ ವೇಗವು ತಗ್ಗುವವರೆಗೂ ಅದು ದಡದ ಮೇಲೆ ಕುಳಿತಿತು. ಇದೇ ಅವಕಾಶಕ್ಕಾಗಿ ಕಾದು ಕಾದು ಕುಳಿತ ಮೊಸಳೆಯೊಂದು ನರಿಯ ಸನಿಹವೇ ಬಂದಿತು. ಮೊಸಳೆಯ ಆಕಸ್ಮಿಕ ಆಗಮನದಿಂದ ನರಿಯು ಬೆಚ್ಚಿತು. ಅದು ತನ್ನನ್ನೆ ಹೊಂಚು ಹಾಕುತ್ತಿರುವ ಸಂಗತಿ ನರಿಗೆ ಮನದಟ್ಟಾಯಿತು. ನರಿಯನ್ನು ಉಪಾಯದಿಂದ ಕಬಳಿಸಬೇಕು; ಇಲ್ಲದಿದ್ದರೆ ಅದು ತಪ್ಪಿಸಿಕೊಳ್ಳುವ ಸಂಭವವುAಟು! ಎಂದು ಮೊಸಳೆಯು ಲೆಕ್ಕ ಹಾಕಿತು. ಅಷ್ಟರಲ್ಲಿ ನರಿಯು ದೂರ ಸರಿದು ನಿಂತುಕೊAಡಿತು.

    ಮೊಸಳೆ… “ಏನು ತಮ್ಮಾ, ಪಕ್ಕದ ಕಾಡಿಗೆ ಹೋಗಬೇಕೆಂದಿರುವೆಯಾ? ನದಿಯ ವೇಗಕ್ಕೆ ನೀನು ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗಬೇಕಾಗೀತು; ಅದಕ್ಕೆ ನಾನಿಲ್ಲವೇ? ಹಾಗಾದರೆ ತಡವೇಕೆ? ನನ್ನ ಬೆನ್ನ ಮೇಲೆ ಕುಳಿತುಕೋ; ನಿನ್ನನ್ನು ಸುರಕ್ಷಿತವಾಗಿ ದಡ ಮುಟ್ಟಿಸುವೆನು.” ಎಂದು ಕುಹಕ ನೋಟ ಬೀರಿ ನುಡಿಯಿತು.

    ನರಿ… “ಮೊಸಳೆಯಣ್ಣಾ, ನೀನು ಊಹಿಸಿದ್ದು ನಿಜ; ಪಕ್ಕದ ಕಾಡಿನಲ್ಲಿ ನನ್ನ ಪರಿವಾರದವರು ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ! ಹಾಗಾಗಿ ಅವರನ್ನು ಕೆಲವು ವಾರಗಳವರೆಗೆ ನಮ್ಮ ಕಾಡಿಗೆ ಕರೆ ತರಬೇಕೆಂದಿದ್ದೇನೆ; ಆದರೆ ಹಿಂದೊಮ್ಮೆ ಅವರು ನಮ್ಮ ಕಡುವೈರಿಗಳಾಗಿದ್ದರು; ಈಗ ಅವರನ್ನು ಮುಗಿಸುವ ಕಾಲ ಬಂದಿದೆ; ಒಬ್ಬೊಬ್ಬರನ್ನು ಸಾಗಿಸುವ ನೆಪಮಾಡಿ ಕಬಳಿಸಿಬಿಡು!” ಎಂದು ಹುಬ್ಬೇರಿಸಿತು. ನರಿಯ ನುಡಿಗಳಿಗೆ ಮೊಸಳೆಯು ಬಹುಬೇಗನೆ ಮಾರುಹೋಗಿ ಉಬ್ಬಿಹೋಯಿತು.

    ಮೊಸಳೆ… “ಬೇಗ ನನ್ನ ಬೆನ್ನು ಏರಿ ಕುಳಿತುಕೋ!” ಎಂದು ಖುಷಿಯಿಂದ ಹೇಳಿತು. ನರಿಯು ಮೊಸಳೆಯಲ್ಲಾದ ಎಲ್ಲಾ ಬದಲಾವಣೆಗಳನ್ನು ಗಮನಿಸಿ, ಮೆಲ್ಲನೆ ಮೊಸಳೆಯ ಬೆನ್ನು ಏರಿ ಕುಳಿತಿತು. ಕೆಲ ನಿಮಿಷಗಳಲ್ಲಿ ನದಿಯ ದಡವು ಆಗಮಿಸುತ್ತಿದ್ದಂತೆಯೇ ನರಿಯು ಚಂಗನೆ ದಡಕ್ಕೆ ಜಿಗಿಯಿತು.

    ನರಿ… “ಮೊಸಳೆಯಣ್ಣಾ, ನನ್ನ ದಡ ಮುಟ್ಟಿಸಿದ್ದಕ್ಕೆ ಧನ್ಯವಾದಗಳು; ಇಲ್ಲಿ ನನ್ನ ಪರಿವಾರದವರು ಸುರಕ್ಷಿತವಾಗಿದ್ದಾರೆ; ನಿನ್ನ ಬುದ್ಧಿಯು ನನಗೆ ತಿಳಿದಿಲ್ಲವೇ? ಅದಕ್ಕಾಗಿ ನಾನು ಚಿಕ್ಕ ನಾಟಕವಾಡಬೇಕಾಗಿ ಬಂದಿತು!”ಎAದು ಅಲ್ಲಿಂದ ಕಣ್ಮರೆಯಾಯಿತು. 

    ಅದೊಂದು ಕಾಡಿನಲ್ಲಿ,ಕಾಡಿನ ರಾಜನಾದ `ಸಿಂಹ’ದ ಆಡಳಿತವಿತ್ತು. ಅದು ಕಾಡಿನ ಮೃಗಗಳಿಗೆ ಯಾವುದೇ ಕುಂದು ಕೊರತೆಗಳು ಬರದಂತೆ ನೋಡಿಕೊಳ್ಳುತ್ತಿತ್ತು. ಅವು ಸಹ ಅದರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದವು. ಹೀಗಿರಲು ಒಂದು ಸಲ…

    “ಮೃಗರಾಜ, ನರಿಯು ನನ್ನ ಮರಿಗಳಿಗೆ ಸಂಗ್ರಹಿಸಿಟ್ಟಿದ್ದ ಜೇನುತುಪ್ಪವನ್ನು ಕಬಳಿಸಿದೆ; ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು!” ಎಂದು ಕರಡಿಯೊಂದು ಮೃಗರಾಜನ ಆಸ್ಥಾನಕ್ಕೆ ಬಂದು ದೂರು ಸಲ್ಲಿಸಿತು. ಅದಾದ ಕೆಲವೇ ನಿಮಿಷಗಳಲ್ಲಿ ಮೊಲವೊಂದು ಬಂದು…

    “ಮೃಗರಾಜ ನರಿಯು ನನ್ನ ಮರಿಗಳನ್ನು ಭಕ್ಷಿಸಿದೆ; ನನಗೆ ನ್ಯಾಯ ಕೊಡಿಸಬೇಕು!” ಎಂದು ಅಲವತ್ತುಕೊಂಡಿತು! “ಮೇಲಿಂದ ಮೇಲೆ ನರಿಯ ಮೇಲಿನ ಆರೋಪಗಳನ್ನು ಕೇಳಿಸಿಕೊಂಡ ಮೃಗರಾಜನ ಪಿತ್ತವು ನೆತ್ತಿಗೇರಿತು. ನರಿಯನ್ನು ಕೂಡಲೇ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡಿತು. ನರಿಯು ಇನ್ನು ನನ್ನ ಕಥೆಯು ಮುಗಿಯಿತು; ಎಂದು ಮೃಗರಾಜನ ಆಜ್ಞೆಗೆ ಓಗೊಟ್ಟು ಆಸ್ಥಾನಕ್ಕೆ ಧಾವಿಸಿತು. ಅದು ಯಾವ ಕಾರಣವನ್ನು ನೀಡದೆ ತನ್ನ ತಪ್ಪು ಒಪ್ಪಿಕೊಂಡಿತು. ಅದರಂತೆ ಯಾವ ಶಿಕ್ಷೆಗೂ ಸಿದ್ಧನಿದ್ದೇನೆ! ಎಂದು ತಲೆತಗ್ಗಿಸಿತು! 

    ಮೃಗರಾಜ… “ನಿನಗೆ ಈ ಕಾಡಿನಿಂದ ಬಹಿಷ್ಕಾರವನ್ನು ಹಾಕಿದ್ದೇನೆ!” ಎಂದು ಹಿಂದು ಮುಂದು ಯೋಚಿಸದೆ ತನ್ನ ತೀರ್ಪನ್ನು ಪ್ರಕಟಿಸಿತು. ಅದರ ತೀರ್ಪಿಗೆ ಆಸ್ಥಾನದಲ್ಲಿ ನೆರೆದಿದ್ದ ಕಾಡಿನ ಪ್ರಾಣಿಗಳೂ… ಸಂತ್ರಸ್ತರೂ.. ಖುಷಿಗೊಂಡು ಮೃಗರಾಜನಿಗೆ ಜೈಕಾರವನ್ನು ಹಾಕಿದವು!

    ನರಿಯು ವಿಧಿ ಇಲ್ಲದೆ ಪಕ್ಕದ ಕಾಡಿನಲ್ಲಿ ನುಸುಳಬೇಕೆಂದು ಬಂದಿತು. ಆದರೆ ಪಕ್ಕದ ಕಾಡನ್ನು ಪ್ರವೇಶಿಸಬೇಕಾದರೆ ಕಾಡಿನ ಮಧ್ಯೆದಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ದಾಟಬೇಕಿತ್ತು! ನದಿಯ ವೇಗವು ತಗ್ಗುವವರೆಗೂ ಅದು ದಡದ ಮೇಲೆ ಕುಳಿತಿತು. ಇದೇ ಅವಕಾಶಕ್ಕಾಗಿ ಕಾದು ಕಾದು ಕುಳಿತ ಮೊಸಳೆಯೊಂದು ನರಿಯ ಸನಿಹವೇ ಬಂದಿತು. ಮೊಸಳೆಯ ಆಕಸ್ಮಿಕ ಆಗಮನದಿಂದ ನರಿಯು ಬೆಚ್ಚಿತು. ಅದು ತನ್ನನ್ನೆ ಹೊಂಚು ಹಾಕುತ್ತಿರುವ ಸಂಗತಿ ನರಿಗೆ ಮನದಟ್ಟಾಯಿತು. ನರಿಯನ್ನು ಉಪಾಯದಿಂದ ಕಬಳಿಸಬೇಕು; ಇಲ್ಲದಿದ್ದರೆ ಅದು ತಪ್ಪಿಸಿಕೊಳ್ಳುವ ಸಂಭವವುAಟು! ಎಂದು ಮೊಸಳೆಯು ಲೆಕ್ಕ ಹಾಕಿತು. ಅಷ್ಟರಲ್ಲಿ ನರಿಯು ದೂರ ಸರಿದು ನಿಂತುಕೊAಡಿತು.

    ಮೊಸಳೆ… “ಏನು ತಮ್ಮಾ, ಪಕ್ಕದ ಕಾಡಿಗೆ ಹೋಗಬೇಕೆಂದಿರುವೆಯಾ? ನದಿಯ ವೇಗಕ್ಕೆ ನೀನು ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗಬೇಕಾಗೀತು; ಅದಕ್ಕೆ ನಾನಿಲ್ಲವೇ? ಹಾಗಾದರೆ ತಡವೇಕೆ? ನನ್ನ ಬೆನ್ನ ಮೇಲೆ ಕುಳಿತುಕೋ; ನಿನ್ನನ್ನು ಸುರಕ್ಷಿತವಾಗಿ ದಡ ಮುಟ್ಟಿಸುವೆನು.” ಎಂದು ಕುಹಕ ನೋಟ ಬೀರಿ ನುಡಿಯಿತು.

    ನರಿ… “ಮೊಸಳೆಯಣ್ಣಾ, ನೀನು ಊಹಿಸಿದ್ದು ನಿಜ; ಪಕ್ಕದ ಕಾಡಿನಲ್ಲಿ ನನ್ನ ಪರಿವಾರದವರು ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ! ಹಾಗಾಗಿ ಅವರನ್ನು ಕೆಲವು ವಾರಗಳವರೆಗೆ ನಮ್ಮ ಕಾಡಿಗೆ ಕರೆ ತರಬೇಕೆಂದಿದ್ದೇನೆ; ಆದರೆ ಹಿಂದೊಮ್ಮೆ ಅವರು ನಮ್ಮ ಕಡುವೈರಿಗಳಾಗಿದ್ದರು; ಈಗ ಅವರನ್ನು ಮುಗಿಸುವ ಕಾಲ ಬಂದಿದೆ; ಒಬ್ಬೊಬ್ಬರನ್ನು ಸಾಗಿಸುವ ನೆಪಮಾಡಿ ಕಬಳಿಸಿಬಿಡು!” ಎಂದು ಹುಬ್ಬೇರಿಸಿತು. ನರಿಯ ನುಡಿಗಳಿಗೆ ಮೊಸಳೆಯು ಬಹುಬೇಗನೆ ಮಾರುಹೋಗಿ ಉಬ್ಬಿಹೋಯಿತು.

    ಮೊಸಳೆ… “ಬೇಗ ನನ್ನ ಬೆನ್ನು ಏರಿ ಕುಳಿತುಕೋ!” ಎಂದು ಖುಷಿಯಿಂದ ಹೇಳಿತು. ನರಿಯು ಮೊಸಳೆಯಲ್ಲಾದ ಎಲ್ಲಾ ಬದಲಾವಣೆಗಳನ್ನು ಗಮನಿಸಿ, ಮೆಲ್ಲನೆ ಮೊಸಳೆಯ ಬೆನ್ನು ಏರಿ ಕುಳಿತಿತು. ಕೆಲ ನಿಮಿಷಗಳಲ್ಲಿ ನದಿಯ ದಡವು ಆಗಮಿಸುತ್ತಿದ್ದಂತೆಯೇ ನರಿಯು ಚಂಗನೆ ದಡಕ್ಕೆ ಜಿಗಿಯಿತು.

    ನರಿ… “ಮೊಸಳೆಯಣ್ಣಾ, ನನ್ನ ದಡ ಮುಟ್ಟಿಸಿದ್ದಕ್ಕೆ ಧನ್ಯವಾದಗಳು; ಇಲ್ಲಿ ನನ್ನ ಪರಿವಾರದವರು ಸುರಕ್ಷಿತವಾಗಿದ್ದಾರೆ; ನಿನ್ನ ಬುದ್ಧಿಯು ನನಗೆ ತಿಳಿದಿಲ್ಲವೇ? ಅದಕ್ಕಾಗಿ ನಾನು ಚಿಕ್ಕ ನಾಟಕವಾಡಬೇಕಾಗಿ ಬಂದಿತು!”ಎAದು ಅಲ್ಲಿಂದ ಕಣ್ಮರೆಯಾಯಿತು. 

     ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಮೊಸಳೆಯು ತನ್ನನ್ನು ತಾನೇ ಹಳಿದುಕೊಂಡಿತು!

  • ಅಮ್ಮ ಪ್ಲೀಸ್!

    ಅಮ್ಮ ಪ್ಲೀಸ್!

    “ಸಕೀನಾ! ಸಕೀನಾ! ಎಲ್ಲಿದ್ದೀಯಾ? ಇಲ್ಲಿ ನೋಡು ನನ್ನ ಎದೆಯಲ್ಲಿ ಏನೋ ಇದೆ. ಹುಣ್ಣು ಆಗಿರಬಹುದು. ಕೈಗೆ ತಾಗುತ್ತಿದೆ. ಆದರೆ, ಬಚಾವಾದೆನಪ್ಪ ನೋಯುವುದಿಲ್ಲ” ಎಂದು ಹೇಳುತ್ತಾ ಪರ್ವೀನ್, ಸಕೀನಾಳನ್ನು ಮನೆ ಇಡೀ ಹುಡುಕಿದಳು.

    ಸಕೀನ, ಪರ್ವೀನಳ ತಮ್ಮನ ಹೆಂಡತಿ. ಸಕೀನಾ ಸ್ನಾನಕ್ಕೆ ಹೋಗಿದ್ದಾಳೆ ಎಂದು ಅರಿತು ಪರ್ವೀನ್ ಸೋಫಾದಲ್ಲಿ ಕೂತು ಕಾಯುತ್ತಾ ಅಲ್ಲೇ ನಿದ್ದೆಗೆ ಜಾರಿದಳು.

    ಸ್ನಾನ ಮುಗಿಸಿ ಬಂದ ಸಕೀನ ಸೋಫಾದಲ್ಲಿ ತನ್ನ ವಸ್ತçದ ಪರಿವೆ ಇಲ್ಲದೆ ಅಡ್ಡಾದಿಡ್ಡಿಯಾಗಿ ಮಲಗಿರುವ ಪರ್ವೀನ್‌ಳನ್ನು ಎಬ್ಬಿಸಿ “ಹೀಗೆ ಯಾಕೆ ಮಲಗಿದ್ದೀರಾ? ನಿದ್ರಿಸ ಬೇಕೆಂದರೆ ಒಳಗೆ ಕೊಠಡಿಯಲ್ಲಿ ಮಲಗಬಾರದೇ ಯಾರಾದರು ಬಂದವರು ನೋಡಿದರೆ ಎಷ್ಟು ಮುಜುಗರ” ಎಂದು ಹೇಳಿದಳು.

    “ಸಕೀನಾ, ಎಷ್ಟು ಹೊತ್ತಿನಿಂದ ನಾನು ನಿನಗೆ ಕಾಯುತ್ತಿದ್ದೇನೆ! ನಿನಗೆ ವಿಷಯ ಏನೂಂತ ತಿಳಿಯಿತೆ?” ಎಂದು ಕೇಳಿದಳು.

    “ಇಲ್ಲ ಅಕ್ಕ ಏನಾಯಿತು ಹೇಳಿ”

    ಪರ್ವೀನ್, ಸಕೀನಾಳ ಕೈಯನ್ನು ಹಿಡಿದು ತನ್ನ ಎದೆಯ ಮೇಲಿಟ್ಟು, “ಇಲ್ಲಿ ಮುಟ್ಟಿ ನೋಡು. ನನ್ನ ಎದೆಯಲ್ಲಿ ಹುಣ್ಣಾಗಿದೆ. ಇದು ಎಂತಹ ಹುಣ್ಣು ನೋವಿಲ್ಲದ ಹುಣ್ಣು. ನೋವಿಲ್ಲದೆ ಇರುವುದೇ ಸಂತೋಷ” ಎಂದು ಹೇಳಿದಳು.

    ಇವಳ ಮಾತು ಕೇಳುತ್ತಿದ್ದ ಸಕೀನಾಳಿಗೆ ಹೃದಯದಲ್ಲಿ ಒಮ್ಮೆ ಧಸಕ್ಕ್ ಆಯಿತು. ಆಕೆ ಪರ್ವೀನ್‌ಳ ಎದೆಯ ಮೇಲೆ ಕೈ ಆಡಿಸುತ್ತಾ, “ಇದು ಯಾವಾಗದಿಂದ ಇದೆ? ಇಷ್ಟು ದಿನ ಯಾಕೆ ಹೇಳಲಿಲ್ಲ” ಎಂದು ಗಾಬರಿಯಿಂದ ಕೇಳಿದಳು.

    “ಯಾ ಅಲ್ಲಾಹ್! ಪರ್ವೀನ್‌ಗೆ ಆಗಿರುವ ಈ ಹುಣ್ಣು ಎಂತಹ ಹುಣ್ಣಾಗಿರಬಹುದು?” ಎಂದು ಚಿಂತಿಸುತ್ತಾ ತನ್ನ ಮೈದುನ ಅಬ್ದುಲ್ಲಾಗೆ ಕರೆ ಮಾಡಿ ವಿಷಯವನ್ನು ತಿಳಿಸಿದಳು. ಇಂತಹ ಸಮಯ ನನ್ನ ಪತಿ ಜೀವಂತವಾಗಿರುತ್ತಿದ್ದರೆ ಅಕ್ಕನ ಜವಾಬ್ದಾರಿಯನ್ನು ಹೊರುತ್ತಿದ್ದರು. ಏನು ಮಾಡಬೇಕು ಎಂದು ಅವರು ತಿಳಿದಷ್ಟು, ನಮಗೆ ಯಾರಿಗೂ ತಿಳಿದಿಲ್ಲ ಎಂದು ಯೋಚಿಸುತ್ತಾ ತೀರಿ ಹೋದ ತನ್ನ ಪತಿಯನ್ನು ನೆನೆದು ಕಣ್ಣು ಒದ್ದೆ ಮಾಡಿಕೊಂಡಳು.

    ಗಾಬರಿಗೊAಡ ಸಕೀನಾ ಅಬ್ದುಲ್ಲಾಗೆ ಪುನಃ ಕರೆ ಮಾಡಿ ಬೇಗ ಬರುವಂತೆ ಹೇಳಿದಳು. ಅಬ್ದುಲ್ಲಾ ಬಂದ ತಕ್ಷಣ, ವೈದ್ಯರ ಅಪಾಯಿಂಟ್ಮೆAಟ್ ಪಡೆದು ಪರ್ವೀನಳನ್ನು ವೈದ್ಯರಲ್ಲಿ ಕರಕೊಂಡು ಹೋದರು.

    ಪರ್ವೀನಳನ್ನು ಪರೀಕ್ಷಿಸಿದ ವೈದ್ಯರು ಸಕೀನಾಳಿಗೆ ಯಾವುದರ ಬಗೆ ಭಯವಿತ್ತೋ ಅದನ್ನೇ ಹೇಳಿದರು.

    ಪರ್ವೀನಳಿಗೆ ಬ್ರೆಸ್ಟ್ ಕ್ಯಾನ್ಸರ್ ಎಂದು ಹೇಳಿದಾಗ ಸಕೀನ ಮತ್ತು ಅಬ್ದುಲ್ಲಾಗೆ ಕಾಲ ಕೆಳಗಿನಿಂದ ನೆಲ ಕುಸಿದಂತೆ ಆಯಿತು. ಸಕೀನಾ ನಡುಗುತ್ತಾ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ಅಲ್ಲೆ ಕೂತು ಅಳ ತೊಡಗಿದರು. ಈಗ ನಾವೇನು ಮಾಡಲಿ ಎಂಬ ಚಿಂತೆ ಆಕೆಗೆ ಕಾಡ ತೊಡಗಿತು.

    ವೈದ್ಯರು ತಮ್ಮ ಮಾತನ್ನು ಮುಂದುವರಿಸುತ್ತಾ, “ಇವರಿಗೆ ಆದಷ್ಟು ಬೇಗ ಸರ್ಜರಿ ಮಾಡಬೇಕು” ಆಸ್ಪತ್ರೆಯಲ್ಲಿ ಯಾವಾಗ ದಾಖಲಾಗುತ್ತೀರಿ? ಎಂದು ಕೇಳಿದಾಗ, ಸಕೀನ ಅಬ್ದುಲ್ಲಾನ ಮುಖ ನೋಡಿ, ಏನು ಮಾಡುವುದೆಂದು ಸನ್ನೆಯಿಂದ ನೋಡಿದಳು.

    `ಕ್ಯಾನ್ಸರ್’ ಎಂಬ ಪದ ಕೇಳಿದ ತಕ್ಷಣ ಅಬ್ದುಲ್ಲಾ ಕೂಡ ಗಾಬರಿಗೊಂಡರು. ಅಕ್ಕನಿಗೆ ಇಂತಹ ದೊಡ್ಡ ರೋಗ ಹೇಗೆ ಬಂತು? ಇನ್ನು ಏನು ಮಾಡುವುದು ಹಣ ಎಲ್ಲಿಂದ ತರಲಿ ಎಂದೆಲ್ಲಾ ಯೋಚಿಸುತ್ತಾ ಅಬ್ದುಲ್ಲಾಹ್,

    “ಎಷ್ಟು ಖರ್ಚು ಬರಬಹುದು ಡಾಕ್ಟೆçÔ ಎಂದು ಮೆಲುಧ್ವನಿಯಲ್ಲಿ ಕೇಳಿದರು.

    “ಎಲ್ಲಾ ಖರ್ಚು ಸೇರಿಸಿ ೩ ರಿಂದ ೪ ಲಕ್ಷ ಬೇಕಾಗುವುದು” ಎಂದು ವೈದ್ಯರು ಹೇಳಿದಾಗ ಸಕೀನ ಮತ್ತು ಅಬ್ದುಲ್ಲಾರಿಗೆ ಏನು ಮಾಡಬೇಕೆಂದು ತೋಚದಾಯಿತು. ಸಮಸ್ಯೆ ಸರ್ಜರಿಯಲ್ಲಿ ಮುಗಿಯುವುದಿಲ್ಲ. ಕೀಮಿಯೋ ತೆರಪಿ ಮಾಡಬೇಕಾಗುತ್ತದೆ. ಆಗಾಗ ಮಾಡುವಾಗ ಅದಕ್ಕೂ ಹಣದ ಅಗತ್ಯ ಇದೆ. ಏನು ಮಾಡುವುದು ಎಂದು ಇಬ್ಬರೂ ಮಾತನಾಡಿಕೊಂಡರು.

    ಪರ್ವೀನ್, ಅಬ್ದುಲ್ಲಾಹ್ ಮತ್ತು ಲತೀಫ್‌ರ ಏಕೈಕ ಸಹೋದರಿ. ಆಕೆ ವಿಧವೆ. ಮಕ್ಕಳೂ ಇಲ್ಲ. ಅಪ್ಪ-ಅಮ್ಮನೂ ಇಲ್ಲ. ಈಗ ಅಣ್ಣ ಕೂಡ ತೀರಿ ಹೋಗಿದ್ದಾರೆ.

    ಅಷ್ಟು ಹಣ ಎಲ್ಲಿಂದ ತರುವುದು ಎಂಬ ಚಿಂತೆಯೊAದಿಗೆ ಪರ್ವೀನಳ ಸರ್ಜರಿ ಮಾಡುವ ತಯಾರಿಯನ್ನೂ ಅಬ್ದುಲ್ಲಾ ಮತ್ತು ಸಕೀನ ಮಾಡಲು ಅನುವಾದರು.

    ಪರ್ವೀನ್ ವಿವಾಹದ ನಂತರ ಮಾನಸಿಕವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಕೇವಲ ತಿನ್ನುವ ಮತ್ತು ಸುತ್ತಾಡುವ ಶೋಕಿ.

    ಪರ್ವೀನಳ ಪತಿ ಜೀವಂತವಾಗಿದ್ದಾಗ, ಅವರಿಬ್ಬರಲ್ಲಿ ಅನ್ಯೋನ್ಯತೆ ಇರಲಿಲ್ಲ. ಇಬ್ಬರು ಪರಸ್ಪರ ನೋಡುತ್ತಲೇ ಭುಸುಗುಟ್ಟಲು ಆರಂಭಿಸುತ್ತಿದ್ದರು.

    ಪರ್ವೀನ್‌ಳ ಅಪ್ಪ ಹುಸೇನ್ ಓರ್ವ ಶ್ರೀಮಂತ ವ್ಯಕ್ತಿ. ಆತ ಎಮ್‌ಎಸ್‌ಡಬ್ಲೂö್ಯ ಕಲಿತು, ತಾನು ಜನರ ಸೇವೆ ಮಾಡಬೇಕೆಂದು ಬೇರೆ ರಾಜ್ಯದ ಒಂದು ಚಿಕ್ಕ ಹಳ್ಳಿಯಲ್ಲಿ ನೆಲೆಸಿದರು. ಹಳ್ಳಿಗರ ಅಗತ್ಯಗಳಿಗೆ ಕಾಳಜಿವಹಿಸಿ ಸಹಕರಿಸುವವರು ಯಾರೂ ಇರಲಿಲ್ಲ. ಜನರ ಸೇವೆ ಮಾಡುದರೊಂದಿಗೆ ಅವರು ವ್ಯಾಪಾರವನ್ನು ಮಾಡುತ್ತಿದ್ದರು ಮತ್ತು ಹಳ್ಳಿಯ ಜನರಿಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿದ್ದರು. ವಿವಾಹವಾಗಿ ಪತ್ನಿಯನ್ನೂ ಹಳ್ಳಿಗೆ ಕರಕೊಂಡು ಹೋದ ಹುಸೈನ್ ಹಸನ್ಮುಖಿ ಮತ್ತು ಶ್ರೀಮಂತಿಕೆಯೊAದಿಗೆ ಹೃದಯ ಶ್ರೀಮಂತಿಕೆಯೂ ಆಗಿದ್ದ ಪತಿ-ಪತ್ನಿಯರು ಆ ಊರಿನವರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರು. ಹಳ್ಳಿಗರು ತಮ್ಮೆಲ್ಲ ಸುಖ-ದುಃಖಗಳಲ್ಲಿ ಹುಸೈನ್ ಮತ್ತು ಅವರ ಪತ್ನಿಯನ್ನೂ ಮರೆಯುತ್ತಿರಲಿಲ್ಲ.

    ಆ ಹಳ್ಳಿಯಲ್ಲಿ ಸರಿಯಾದ ಶಾಲೆಗಳು ಇರದ ಕಾರಣ, ತಮ್ಮ ಮಕ್ಕಳಿಗೆ ದೂರದ ಊರಿನಲ್ಲಿರುವ ವಸತಿ ಶಾಲೆಗೆ ಸೇರಿಸಿದರು. ಮೂವರು ಅಲ್ಲೇ ಓದುತ್ತಿದ್ದರು.

    ತಂದೆ-ತಾಯಿಯಿAದ ದೂರ ಇದ್ದು ಓದುವುದು ಮಕ್ಕಳಿಗೆ ಇಷ್ಟ ಇರಲಿಲ್ಲದಿದ್ದರೂ ಅಪ್ಪ-ಅಮ್ಮನ ನಿರ್ಧಾರದ ಮುಂದೆ ತಲೆ ಬಾಗುವ ಅನಿವಾರ್ಯ ಇತ್ತು. ಮೂವರಿಗೂ ಅಪ್ಪ-ಅಮ್ಮನಿಗೆ ಎದುರು ಹಾಕುವ ಧೈರ್ಯ ಇರಲಿಲ್ಲ ಮತ್ತು ಅವರಿಂದ ದೂರ ಇರಲು ಇಷ್ಟವೂ ಇರಲಿಲ್ಲ.

    ಪರ್ವೀನ್‌ಗೆ ತಾನು ಡಾಕ್ಟರ್ ಆಗಬೇಕು ಎಂಬ ಹಂಬಲ ಇತ್ತು. ಆದುದರಿಂದ ಆಕೆ ಆ ವಾತಾವರಣಕ್ಕೆ ತನ್ನನ್ನು ಹೊಂದಿಸಿ ಬಹಳ ನಿಷ್ಠೆಯಿಂದ ಕಲಿಯ ತೊಡಗಿದಳು. ಮೂವರು ಮನಸಿಟ್ಟು ಶಿಕ್ಷಣ ಮುಂದುವರಿಸಿದರು.

    ಪರ್ವೀನ್ ತನ್ನ ಕ್ಲಾಸಿನಲ್ಲಿ ಓದುವುದರಿಂದ ಹಿಡಿದು ಎಲ್ಲಾ ಚಟುವಟಿಕೆಯಲ್ಲಿ ಮೊದಲಿಗಳಾಗಿದ್ದಳು. ಹತ್ತನೆಯ ಪರೀಕ್ಷೆಯಲ್ಲಿ ಅವಳು ಅಗ್ರಸ್ಥಾನದಲ್ಲಿದ್ದಳು. ಮುಂದಿನ ಶಿಕ್ಷಣ ಮೆರಿಟ್‌ನಲ್ಲಿ ಕಲಿತು ಹೆಸರುವಾಸಿಯಾದ ಡಾಕ್ಟರ್ ಆಗಿ ಅಪ್ಪ-ಅಮ್ಮನ ಹೆಸರು ಬೆಳಗಿಸಬೇಕು ಎಂಬ ಹಂಬಲ ಪರ್ವೀನಳದ್ದು.

    ಆದರೆ, ಆಕೆಯ ಕನಸು, ಆಶೆ ಎಲ್ಲವೂ ನುಚ್ಚು ನೂರಾಗುವ ಸಮಯ ಬಂತು. ಹೀಗಾಗಬಹುದು ಎಂದು ಪರ್ವೀನ್ ಕನಸು ಮನಸಿನಲ್ಲಿ ಯೋಚಿಸಿರಲಿಲ್ಲ.

    ಅಂದರೆ, ಹುಸೇನ್‌ರವರ ಆಪ್ತ ಮಿತ್ರ, ಪರ್ವೀನ್‌ಳನ್ನು ತನ್ನ ಮಗನೊಂದಿಗೆ ವಿವಾಹ ಮಾಡಿಸಬೇಕು ಎಂದು ವಿನಂತಿಸಿದರು. ಹುಸೇನರಿಗೂ, ಮಿತ್ರನ ಕುಟುಂಬ ಹಾಗೂ ರಾಹಿಲ್ ತುಂಬ ಇಷ್ಟ. ರಾಹಿಲ್ ಪರ್ವೀನಳಿಗಿಂತ ೧೫ ವರ್ಷ ದೊಡ್ಡವನಾದರೂ, ಮಿತ್ರನ ಮಗ ಮತ್ತು ವೈದ್ಯ ಕೂಡ ಮತ್ತು ಮಗಳ ಉಜ್ವಲ ಭವಿಷ್ಯಕ್ಕೆ ಉತ್ತಮ ಎಂದು ಯೋಚಿಸಿ ಸಂತೋಷ ಪಟ್ಟರು. ಪತ್ನಿಯೊಂದಿಗೆ ಈ ಬಗ್ಗೆ ಚರ್ಚಿಸಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು.

    ಉತ್ತಮ ಶಿಕ್ಷಣ ಪಡೆದು ವೈದ್ಯಳಾಗಬೇಕು ಎಂಬ ಕನಸು ಕಂಡ ಪರ್ವೀನ್ ಯಾವ ಕಾರಣಕ್ಕೂ ಮದುವೆಗೆ ಒಪ್ಪಲಿಲ್ಲ. ಆಕೆ ಶಿಕ್ಷಣ ಪಡೆದು ತನ್ನ ಕಾಲಲ್ಲಿ ನಿಲ್ಲಬೇಕು ಎಂಬ ಬಯಕೆಯನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಹಾಗೂ ಆಕೆಗೆ ಆ ಹುಡುಗ ಇಷ್ಟವು ಇರಲಿಲ್ಲ. ಅಪ್ಪ-ಅಮ್ಮನ ಇಚ್ಛೆ ಮತ್ತು ನಿರ್ಧಾರದ ಮುಂದೆ ಅವಳ ನಿರ್ಧಾರ ಮತ್ತು ಇಚ್ಛೆಗೆ ಮನ್ನಣೆ ದೊರಕಲಿಲ್ಲ. “ಅಮ್ಮ ಪ್ಲೀಸ್” ಎಂದು ಗೋಗರೆದರೂ ಅದಕ್ಕೆ ಬೆಲೆ ಇಲ್ಲ.

    ಒಲ್ಲದ ಮನಸ್ಸಿನಿಂದ ವಿವಾಹವಾದ ಪರ್ವೀನ್‌ಳಿಗೆ ಪತಿಯೊಂದಿಗೆ ಹೊಂದಾಣಿಕೆ ಆಗಲು ೧-೨ ವರ್ಷ ತಗಲಿತು. ರಾಹಿಲ್ ಕೂಡ ಪತ್ನಿಯನ್ನು ಸಂತೋಷ ಪಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಆತ ಓರಟು ಸ್ವಭಾವದವನಾಗಿದ್ದ ಹಾಗೂ ಸ್ವಾರ್ಥಿಯೂ ಆಗಿದ್ದ.

    ಪರ್ವೀನ್ ಗರ್ಭಿಣಿ ಆದಳು. ರಾಹಿಲ್‌ನೊಂದಿಗೆ ಆಕೆಗೆ ನೆಮ್ಮದಿ ದೊರೆಯುತ್ತಿರಲಿಲ್ಲದಿದ್ದರೂ ತಾನು ಗರ್ಭಿಣಿ ಎಂಬ ಸಂತೋಷದಿAದ ಆಕೆ ಪತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಗರಿಷ್ಠ ಪ್ರಯತ್ನಿಸಿದಳು. ಆದರೆ ಪತಿಗೆ ಈ ವಿಷಯ ತಿಳಿಸಲು ಎರಡು ತಿಂಗಳು ಕಳೆಯಲಿ ಎಂದು ಆಕೆಯ ಯೋಚನೆ. ಹಗಲಿರುಳು ತನಗೆ ಹುಟ್ಟುವ ಮಗುವಿನ ಬಗ್ಗೆ ಕನಸು ಕಾಣುವುದು ಆಕೆಯ ದಿನ ನಿತ್ಯದ ಕೆಲಸ.

    ಎರಡು ತಿಂಗಳು ಮುಗಿಯುವಷ್ಟರಲ್ಲೇ ಪತಿಯೊಂದಿಗೆ ಹೇಳಬೇಕು ಎಂದು ನಿರ್ಧರಿಸಿದ ಆ ದಿನ ಬಂದೇ ಬಿಟ್ಟಿತು. ನಮಗೆ ಮಗು ಆಗುವ ಸಂತೋಷ ಪತಿಯ ಮುಖದಲ್ಲಿ ನೋಡಬೇಕು. ನಂತರ ಅಮ್ಮನಿಗೆ, ಅತ್ತೆಗೆ ಹೇಳಬೇಕು ಎಂಬ ಲೆಕ್ಕಾಚಾರ ಅವಳದಾಗಿತ್ತು.

    ನಾಳೆ ಹೇಳಬೇಕು ಎಂದು ಯೋಚಿಸಿ ಪರ್ವೀನ್ ರಾತ್ರಿ ನಿದ್ದೆ ಇಲ್ಲದೆ ಹಾಸಿಗೆಯಲ್ಲಿ ಹೊರಲಾಡುತ್ತಾ ಬೆಳಿಗ್ಗೆ ಬೇಗನೆ ಎದ್ದು ತನ್ನನ್ನು ಶೃಂಗರಿಸಿ ಪತಿ ಏಳುವುದನ್ನು ಕಾತರದಿಂದ ಕಾಯುತ್ತಾ, ಪತಿಗಾಗಿ ಬೆಳಗಿನ ಉಪಹಾರವನ್ನು ತಯಾರು ಮಾಡಿದಳು. ಕೆಲಸದ ಮಧ್ಯೆ ಪದೇ ಪದೇ ಕೋಣೆಗೆ ಹೋಗಿ ಪತಿ ಎದ್ದಿರಬಹುದೇ ಎಂದು ನೋಡುವುದರಲ್ಲಿ ಕಳೆಯಿತು ಆಕೆಯ ಸಮಯ.

    ದಿನಾಲೂ ಏಳುವ ಹೊತ್ತಿನಲ್ಲೇ ಎದ್ದ ರಾಹಿಲ್, ಮದುಮಗಳಂತೆ ಶೃಂಗರಿಸಿರುವ ಪತ್ನಿಯ ಕಡೆ ಪ್ರಶ್ನಾರ್ಥಕವಾಗಿ ನೋಡಿದ. “ಏನು ಮದುವೆಗೆ ಹೋಗಲಿಕ್ಕಿದೆಯೇ? ಅಥವಾ ಅಮ್ಮನ ಮನೆಗೆ ಹೋಗುವ ತಯಾರಿಯೇ?” ಎಂದು ಕೇಳಿದ. ಪರ್ವೀನ್ ನಾಚುತ್ತಾ, ಇಲ್ಲ ಎಂದು ತಲೆ ಅಲ್ಲಾಡಿಸಿದಳು.

    “ಮತ್ತೇ?”

    ಪರ್ವೀನ್ ಪತಿಯ ಹತ್ತಿರ ಕೂತು ಪತಿಯ ಕೈಯನ್ನು ತನ್ನ ಕೈಯಲ್ಲಿಟ್ಟು, ಮುಖವನ್ನು ನೋಡುತ್ತಾ, “ತುಂಬಾ ದಿವಸದಿಂದ ಒಂದು ವಿಷಯ ನಿಮ್ಮಲ್ಲಿ ಹಂಚಬೇಕು ಎಂದು ಕಾಯುತ್ತಿದ್ದೆ.”

    “ತುಂಬ ದಿನ ಯಾಕೆ ಕಾದೆ? ಬೇಗನೆ ಹೇಳಬಾರದೆ? ಏನು ವಿಷಯ” ಎಂದು ಒರಟಾಗಿ ಹೇಳಿದ.

    “ನಾನು ಗರ್ಭಿಣಿ. ನಿನ್ನೆಗೆ ಎರಡು ತಿಂಗಳು ಕಳೆಯಿತು. ಮೂರನೇ ತಿಂಗಳು ಆರಂಭಗೊAಡಿತು” ಎಂದು ಸಂತೋಷದಿAದ ಹೇಳಿದಳು.

    ಈ ವಿಷಯವನ್ನು ಕೇಳಿದ ರಾಹಿಲಿನ ಮುಖ ಕಪ್ಪಾಯಿತು. ತನ್ನ ಕೈಯನ್ನು ಆಕೆಯ ಕೈಯಿಂದ ಎಳೆದು, ಒಮ್ಮೆಲೆ ಎದ್ದು ನಿಂತು, 

    “ನಿನಗೆ ತಲೆ ಕೆಟ್ಟಿದೆಯೆ? ವಿವಾಹದ ಎರಡೇ ವರ್ಷದಲ್ಲಿ ಮಗುವಾ! ನಮಗೆ ಐದು ವರ್ಷದ ನಂತರ ಮಗು ಆಗಬೇಕೆಂದು ನಾನು ನಿರ್ಧರಿಸಿದ್ದೆ” ಎಂದು ಅಬ್ಬರಿಸಿದ.

    ಪರ್ವೀನಳ ಇಷ್ಟು ದಿನದ ಉತ್ಸಾಹಕ್ಕೆ ನೀರೆರಚಿದಂತಾಯಿತು. ಆಕೆ ಗಡಗಡನೆ ನಡುಗ ತೊಡಗಿದಳು. ಮನಸ್ಸಿಗಾದ ನೋವನ್ನು ತಡೆಲಾರದೆ ಆಕೆ ಅಳುತ್ತಾ, “ನಿಮಗೆ ಸಂತೋಷ ಆಗಲಿಲ್ಲವೇ? ನಾನು ಈ ಸಂತೋಷವನ್ನು ಮೊದಲು ನಿಮ್ಮೊಂದಿಗೆ ಹಂಚಲು ಇಷ್ಟು ದಿನದಿಂದ ಕಾತರದಿಂದ ಕಾಯುತ್ತಿದ್ದೆ” ಎಂದು ನಡುಗುವ ಧ್ವನಿಯಲ್ಲಿ ಹೇಳಿದಳು.

    ರಾಹಿಲ್ ಚೀರಾಡುತ್ತಾ, “ನಡಿ! ಈಗಲೇ ನಡಿ! ಈ ಗರ್ಭವನ್ನು ಈಗಲೇ ತೆಗೆದು ಬಿಡುವ” ಎಂದು ಪರ್ವೀನಳ ಕೈ ಹಿಡಿದೆಳೆದ. ಪರ್ವೀನ್ ಒಪ್ಪಲಿಲ್ಲ. ಪರ್ವೀನ್ ಕೂಗಾಡಿದಳು. ಕಿರುಚಾಡಿದಳು.

    ರಾಹಿಲ್ ತನ್ನ ಅಮ್ಮನ ಬಳಿ ಹೋಗಿ “ನನಗೆ ಈಗ ಮಗು ಬೇಡ! ಪರ್ವೀನ್‌ಗೆ ಹೇಳಿ. ಈ ಗರ್ಭವನ್ನು ಈಗಲೇ ತೆಗೆಯಬೇಕು. ಐದು ವರ್ಷದ ತನಕ ನನಗೆ ಮಗು ಬೇಡ. ಅಮ್ಮ ಪರ್ವೀನ್‌ಗೆ ಹೇಳಿ” ಅಂತ ಚೀರಾಡಿದ.

    ಪರ್ವೀನ್ ತನ್ನ ಅಮ್ಮನಿಗೆ ಫೋನಾಯಿಸಿ ಎಲ್ಲ ವಿಷಯವನ್ನು ತಿಳಿಸಿದಳು. ಅಮ್ಮ ರಾಹಿಲ್‌ನ ಅಮ್ಮನಿಗೆ ಫೋನಾಯಿಸಿ ಮಾತನಾಡಿದರು. ಆದರೆ ಅವರು ಮಗನ ಪರ ವಹಿಸಿದರು. ಅಮ್ಮ ರಾಹಿಲ್‌ಗೆ ಫೋನಾಯಿಸಿ ಸಮಜಾಯಿಸಲು ಪ್ರಯತ್ನಿಸಿದರು. ಆದರೆ, ರಾಹಿಲ್ ಯಾವ ಕಾರಣಕ್ಕೂ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.

    ಅಂದೇ ಪರ್ವೀನ್‌ಗೆ ಆಸ್ಪತ್ರೆಗೆ ಕೊಂಡು ಹೋಗಲಾಯಿತು. ಅತ್ತು ಅತ್ತು ಪರ್ವೀನ್‌ಳ ಮುಖ ಊದಿ ಕೊಂಡಿತು. ಪರ್ವೀನ್ ಆಸ್ಪತ್ರೆಯಲ್ಲಿ ಪುನಃ ರಾಹಿಲ್ ಮತ್ತು ಅತ್ತೆ-ಮಾವನೊಂದಿಗೆ ಬೇಡಿಕೊಂಡಳು. ತನಗೆ ಈ ಮಗು ಬೇಕು ಎಂದು ಕೂಗಾಡಿದಳು, ಕಿರುಚಿದಳು ಆದರೆ ಯಾರಿಗೂ ಆಕೆಯ ಮೇಲೆ ದಯೆ ಬರಲಿಲ್ಲ.

    ಪರ್ವೀನ್ ಅಮ್ಮನಿಗೆ ಫೋನಾಯಿಸಿ “ನಾನು ಮದುವೆಗೆ ತಯಾರಿರಲಿಲ್ಲ ಎಂದು ಹೇಳಿದಾಗ, ನೀವೆಲ್ಲರೂ ಸೇರಿ ನನ್ನ ಇಚ್ಛೆಯನ್ನು ಗಾಳಿಗೆ ತೂರಿ ನನಗೆ ವಿವಾಹ ಮಾಡಿಸಿದರಿ. ರಾಹಿಲ್ ನನಗೆ ಇಷ್ಟ ಇಲ್ಲ ಎಂದು ಹೇಳಿದಾಗಲೂ ನೀವು ಯಾರೂ ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ಒಲ್ಲದ ಮನಸ್ಸಿನಿಂದ ನಾನು ಅವನೊಂದಿಗೆ ಹೊಂದಿಕೊAಡೆ. ಗರ್ಭಿಣಿ ಆದೆ. ಆದರೆ, ಈಗ ನನಗೆ ಮಗು ಬೇಕು ಎಂದು ಗೋಗರೆದರೂ, ನನ್ನ ಈ ಇಚ್ಛೆಯನ್ನು ಗಾಳಿಗೆ ತೂರಲಾಗುತ್ತಿದೆ. ಸಮಾಜದ ಮುಂದೆ ಈ ಎರಡು ಮನೆಯವರು ಶಿಕ್ಷಿತರು ಎಂದು ಗುರುತಿಸಿಕೊಂಡವರು. ಆದರೆ ಒಂದು ಹೆಣ್ಣಿನ ಬಾಳಿಗೆ, ಹೆಣ್ಣಿನ ಮಾತಿಗೆ, ಹೆಣ್ಣಿನ ನಿರ್ಧಾರಕ್ಕೆ ಈ ಎಜುಕೇಟಡ್ ಜನರ ಮುಂದೆ ಬೆಲೆ ಇಲ್ಲ. ನಾನು ನಿಮ್ಮೆಲ್ಲರನ್ನು ದ್ವೇಷಿಸುತ್ತೇನೆ. ನನ್ನ ಶಿಕ್ಷಣ, ವೈದ್ಯೆ ಆಗುವ ಕನಸು, ತಾಯಿ ಆಗುವ ಕನಸು, ನನ್ನ ಜೀವನ ಎಲ್ಲವನ್ನು ಹಾಳು ಮಾಡಿ ನುಚ್ಚು ನೂರು ಮಾಡಿದ ನಿಮಗೆಲ್ಲರಿಗೂ ನಾನು ದ್ವೇಷಿಸುತ್ತೇನೆ” ಎಂದು ಅಳುತ್ತಾ ಹೇಳಿ, ಅಮ್ಮನ ಉತ್ತರಕ್ಕೆ ಕಾಯದೆ ಫೋನಿಟ್ಟಳು.

    ಪತಿಗೂ ಈ ಎಲ್ಲ ವಿಷಯವನ್ನು ಹೇಳಿದಳು. ಪತಿಯ ಮನಸ್ಸು ಕರಗಬಹುದು ಎಂದು ಯೋಚಿಸಿ ಆತನ ಕಾಲ ಮೇಲೆ ಕೂತು ಗೋಗರೆದಳು. ಆದರೆ ಆ ಕಲ್ಲು ಹೃದಯ ಕರಗಲೇ ಇಲ್ಲ. ಬಲವಂತದಿAದ ಆಕೆಯ ಗರ್ಭ ತೆಗೆಯಲಾಯಿತು.

    ಪರ್ವೀನ್‌ಗೆ ಎಚ್ಚರ ಆದಾಗ ತಾನು ಕತ್ತಲೆಯಲ್ಲಿ ಇರುವಂತೆ, ತನ್ನ ಸುತ್ತ ಮತ್ತು ರಾಕ್ಷಸರು ಕೂತಂತೆಯು, ತನ್ನನ್ನು ಚುಚ್ಚಿ ತಿನ್ನುವಂತೆ ಭಾಸವಾಯಿತು. ಆಕೆ ತಲೆ ಹಿಡಿದು ಕಿರುಚಾಡ ತೊಡಗಿದಳು. ನರ್ಸ್ ಚುಚ್ಚು ಮದ್ದು ಕೊಟ್ಟು ನಿದ್ರೆಗೆ ಹೋಗುವಂತೆ ಮಾಡಿದಳು.

    ಪರ್ವೀನ್‌ಗೆ ಸರಿಯಾಗಿ ಎಚ್ಚರ ಆದಾಗ ಯಾರೊಂದಿಗೂ ಮಾತನಾಡಲಿಲ್ಲ. ಮುಖ ತಿರುಗಿಸಿ ಮಲಗಿದಳು. ಆಕೆ ಎಲ್ಲರನ್ನೂ ದ್ವೇಷಿಸುತ್ತಿದ್ದಳು. ಹೊಟ್ಟೆಗೆ ಕೈ ಆಡಿಸಿದಾಗ ಅಲ್ಲಿ ಶೂನ್ಯ ಕವಿದಿತ್ತು. ಆಕೆ ಹೊಟ್ಟೆಗೆ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತಳು. ಆಕೆಯ ಹಸಿವು ಬಾಯಾರಿಕೆ ಎಲ್ಲವೂ ಬತ್ತಿ ಹೋಗಿತ್ತು.

    ಮನೆಗೆ ಬಂದ ನಂತರವು ಹಗಲಿರುಳು ಅಳುವುದು ಮತ್ತು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅಮ್ಮನ ಮನೆಗೆ ಹೋಗಿ ಸ್ವಲ್ಪ ವಿಶ್ರಾಂತಿ ಮಾಡಿ ಬಾ ಎಂದು ಹೇಳಿದಾಗಲೂ ಆಕೆ ಹೋಗಲಿಲ್ಲ. ಅಮ್ಮ ಬಂದು ಕರೆದಾಗಲು ಪರ್ವೀನ್ ಅಮ್ಮನ ಮುಖವನ್ನು ನೋಡಲು ಇಷ್ಟಪಡಲಿಲ್ಲ. ಬಲವಂತದಿAದ ಪರ್ವೀನಳನ್ನು ಅಮ್ಮ ತನ್ನ ಮನೆಗೆ ಕರೆದುಕೊಂಡು ಬಂದರು.

    ಒAದು ಕಾಲದಲ್ಲಿ ಮಾತಿನ ಮಲ್ಲಿ ಎಂದು ಹೆಸರು ಪಡೆದ ಪರ್ವೀನ್, ಈಗ ಮಾತನಾಡುವುದನ್ನೇ ಮರೆತು ಬಿಟ್ಟಿದ್ದಳು. ಯಾರೊಂದಿಗೂ ಮಾತನಾಡುವುದಿಲ್ಲ. ತನ್ನ ಮಂಚದ ಮೇಲೆ ಮಲಗಿ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ತನ್ನಷ್ಟಕ್ಕೆ ಮಾತನಾಡುವುದು, ಅಳುವುದು, ನಗುವುದು ಆಕೆಯ ದಿನಚರಿ.

    ಕ್ರಮೇಣ ಆಕೆ, ಸಿಕ್ಕ ಎಲ್ಲ ವಸ್ತುಗಳನ್ನು ತನ್ನ ಮಗುವೆಂದು ಬಗೆದು, ಅದರೊಂದಿಗೆ ಮಾತನಾಡುವುದು, ನಗುವುದು, ಹಾಲುಣಿಸುವುದು, ಕುಣಿಯುವುದು ಎಲ್ಲವೂ ಆರಂಭಗೊAಡಿತು. ಆಕೆ ಮಾನಸಿಕವಾಗಿ ಜರ್ಜರಿತಳಾಗಿದ್ದಳು.

    ತನ್ನ ಮಗಳು ಮಾನಸಿಕ ರೋಗಿ ಆಗಿದ್ದಾಳೆ ಎಂದು ತಿಳಿಯಲು ಅಮ್ಮನಿಗೆ ಸಮಯ ಬೇಕಾಗಿರಲಿಲ್ಲ. ಆಕೆಯ ಮೇಲೆ ಆಗಿರುವ ಈ ಅನ್ಯಾಯಕ್ಕೆ ನಾವೆಲ್ಲರು ಕಾರಣ ಎಂದು ತನ್ನೊಳಗೆ ಒಪ್ಪಿಕೊಂಡರು. ಆದರೆ ಈಗ! ಈಗ ಸಮಯ ಕೈ ಮೀರಿದೆ.

    ಪದೇ ಪದೇ ವೈದ್ಯರು ಸಂಪರ್ಕ ದೊಡ್ಡ ತಲೆನೋವಾಗಿ ಪರಿಣಮಿಸಿತು. ವರ್ಷಗಳ ಮೇಲೆ ವರ್ಷಗಳು ಕಳೆದರೂ ಪರ್ವೀನ್ ಸರಿ ಆಗಲಿಲ್ಲ. ಪತಿಗೆ ತನ್ನನ್ನು ಮುಟ್ಟಲು ಬಿಡಲಿಲ್ಲ. ಪತಿಯನ್ನು ದ್ವೇಷಿಸಿದರೂ ಆತನೊಂದಿಗೆ ಬಾಳುತ್ತಿದ್ದಳು.

    ತನ್ನ ಏಕೈಕ ಮಗಳ ಅವಸ್ಥೆ ಕಂಡು ಅಮ್ಮ ಕೊರಗಿ ಕೊರಗಿ ಹಾಸಿಗೆ ಹಿಡಿದರು. ತನ್ನನ್ನು ನೋಡಲೇ ಅಥವಾ ಮಗಳನ್ನು ನೋಡುವುದೇ! ಆದರೆ ಪರ್ವೀನ್‌ಗೆ ಅಮ್ಮನ ಈ ಸ್ಥಿತಿಯಿಂದ ಮನ ನೋಯುತ್ತಿದ್ದರೂ, ಆಕೆ ಅಮ್ಮನ ಹತ್ತಿರ ಸುಳಿಯುತ್ತಿರಲಿಲ್ಲ. ಈಕೆಯ ದುಃಖದಿಂದ ಅಮ್ಮ ತೀರಿಕೊಂಡರು. ಪರ್ವೀನ್ ಪತಿ ಮತ್ತು ತಂದೆಯೊಡನೆ ಹಣಕ್ಕೆ ಜಗಳಾಡುತ್ತಿದ್ದಳು. ತನಗೆ ಇಚ್ಛೆ ಬಂದAತೆ ಹಣವನ್ನು ಪೋಲು ಮಾಡುವುದೇ ಆಕೆಯ ಅತ್ಯಂತ ಆಸಕ್ತಿದಾಯಕ ಕೆಲಸ.

    ಸಂಬAಧಿಕರು, ಪರಿಚಯಸ್ಥರು ಎಲ್ಲರೂ ಆಕೆಯನ್ನು ನೋಡಿ ತಮಾಷೆ ಮಾಡಿ ನಗುವವರೇ ಮತ್ತು ಜರೆಯುವವರೇ ಆದರೆ! ಆಕೆ ಯಾಕೆ ಹೀಗೆ ಆದಳು ಎಂದು ಚಿಂತಿಸುವವರು ಅಥವಾ ಅವಳೊಂದಿಗೆ ಮಾತನಾಡುವವರು ಯಾರೂ ಇಲ್ಲ.

    ಕ್ರಮೇಣ ಅಪ್ಪನನ್ನು ಮತ್ತು ಪತಿಯನ್ನು ಕಳಕೊಂಡರು. ಪರ್ವೀನಳ ಜೀವನದಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ. ಪತಿಯ ಮನೆಯಲ್ಲಿ ಆಕೆಯ ಬಗ್ಗೆ ಕನಿಕರವುಳ್ಳವರು ಯಾರೂ ಇಲ್ಲ. ಪರ್ವೀನ್ ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಇರ ತೊಡಗಿದಳು. ಅತ್ತಿಗೆ ಎಲ್ಲ ರೀತಿಯಲ್ಲಿ ಪರ್ವೀನ್‌ಳ ಆರೈಕೆ ಮಾಡುತ್ತಿದ್ದಳು. ಆದರೆ ಪರ್ವೀನಳಿಗೆ ಅಗತ್ಯವಿರುವ ನೆಮ್ಮದಿ, ಸಂತೋಷ ಅತ್ತಿಗೆಯಿಂದಲು ಕೊಡಲು ಸಾಧ್ಯವಿಲ್ಲ. ಈಗ ಪರ್ವೀನ್ ಅಣ್ಣನನ್ನು ಕಳಕೊಂಡರೂ ಆಕೆಯ ಮೇಲೆ ಯಾವುದೇ ಪರಿಣಾಮ ಬೀಳಲಿಲ್ಲ. ವಿಧಿ ಲಿಖಿತದೊಂದಿಗೆ ಹೋರಾಡಿ ಸೋತು ಹೊಗಿದ್ದಾಳೆ.

    ಯೌವನವನ್ನು ದಾಟಿ ವೃದ್ಧಾಪ್ಯಕ್ಕೆ ಕಾಲಿಡುತ್ತಿರುವ ಪರ್ವೀನ್ ಕ್ಯಾನ್ಸರ್ ಎಂಬ ಭಯಾನಕ ರೋಗಕ್ಕೆ ತುತ್ತಾಗಿದ್ದಾಳೆ. ಆದರೆ ಆಕೆಗೆ ಇದರ ಪರಿವೆಯೂ ಇಲ್ಲ. ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿರುವ ಆಕೆಯ ರೋಗವನ್ನು ವೈದ್ಯರು, ವೈದ್ಯಕೀಯ ವಿಭಾಗ ಅಥವಾ ತಮ್ಮ ಮತ್ತು ಅತ್ತಿಗೆ ಆಕೆಯ ಆರೋಗ್ಯಕ್ಕಾಗಿ ಸುರಿಸುತ್ತಿರುವ ಹಣ ಯಾವುದು ಅವಳಿಗೆ ಉತ್ತಮ ಆರೋಗ್ಯ ದೊರಕಿಸುತ್ತಿಲ್ಲ.

    ಅವಳು ಜೀವಂತ ಶವವಾಗಿ ಉಳಿದಳು.