Tag: #ameer al mahdi

  • ಹುಲಿ ಸಾಗಿದ ದಾರಿ…

    ಹುಲಿ ಸಾಗಿದ ದಾರಿ…

    [ಜುಲೈ 29ರಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ದಿನ. ಹುಲಿಗಳ ತವರೂರಾದ ಭಾರತದಲ್ಲಿ ಹುಲಿಗಳ ಸಂತತಿಯು ಕ್ಷೀಣಿಸುತ್ತಿರುವುದು ಕಳವಳಕಾರಿ ಸುದ್ದಿ. ಅವುಗಳ ಅಭಿವೃದ್ಧಿಗೆ ಐವತ್ತು ವರುಷಗಳ ಹಿಂದೆಯೇ ಪ್ರಾಜೆಕ್ಟ್ ಟೈಗರ್' ಅನ್ನುವ ಯೋಜನೆಯನ್ನು ಜಾರಿಗೆ ತಂದರೂ ಅವು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಇದಕ್ಕೆ ಮೂಲ ಕಾರಣ ಏನು ಅನ್ನುವುದನ್ನು ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ವ್ಯಾಘ್ರನ ಕಾಡಿನಲ್ಲಿ ಸುತ್ತಿ ಬರೋಣ- ಸಂಪಾದಕಿ]

    ಸುಮಾರು ಮುನ್ನೂರು ವರುಷಗಳ ಹಿಂದೆ, ನಮ್ಮ ದೇಶದ ದಟ್ಟ ಅಡವಿಗಳಲ್ಲಿ ಹುಲಿಗಳ ಸಂತತಿ ಸುಮಾರು 60 ಸಾವಿರಕ್ಕೂ ಮಿಕ್ಕಿ ಇದ್ದವು. ಆಗ ಈ ದೇಶದಲ್ಲಿ ಇರುವಷ್ಟು ಹುಲಿಗಳ ಸಂಖ್ಯೆ ಇನ್ನಾವುದೇ ರಾಷ್ಟ್ರಗಳಲ್ಲಿ ಇರಲಿಲ್ಲ. ಹಿಂದೆ ರಾಜ-ಮಹಾರಾಜರು, ಸುಲ್ತಾನ-ನವಾಬರು, ಈ ಹುಲಿ ಬೇಟೆಗೆ ಗುಂಪುಗೂಡಿ ಕಾಡಿಗೆ ಹೋಗುತ್ತಿದ್ದರು. ಅವರಿಗೆ ಈ ಹುಲಿಗಳ ಶಿಕಾರಿ ಅನ್ನುವುದು ಸಾಹಸ-ಪರಾಕ್ರಮದ ಸಂಕೇತ. ಭಾರತಕ್ಕೆ ನುಸುಳಿ ಬಂದ ಆಂಗ್ಲರಿಗೂ ಹುಲಿ ಬೇಟೆಯ ಹುಚ್ಚು. ಹತ್ಯೆ ಮಾಡಿದ ಹುಲಿಯ ಎದುರು ಬಂದೂಕು ಹಿಡಿದು ಫೋಟೋ ಕ್ಲಿಕ್ಕಿಸುವುದೆಂದರೆ ಅವರಿಗೆ ಶೌರ್ಯದ ಸಾಧನೆ. ಯಾರದೋ ಕಾಡು- ಯಾರದೋ ಜಂಗಲ್ ರಾಜ್! ಸ್ವಾತಂತ್ರ್ಯ ಪೂರ್ವದಲ್ಲಿ ಮಧ್ಯ ಪ್ರದೇಶದ ಒಂದು ಪ್ರಾಂತ್ಯವನ್ನು ಸರ್ಗೂಜ್ ಅನ್ನುವ ಮಹಾರಾಜ ಅಳುತ್ತಿದ್ದ. ಆತನಿಗೆ ಹುಲಿಗಳನ್ನು ಕೊಲ್ಲುವ ಮೋಜು. ಆತನ ಈ ಹವ್ಯಾಸಕ್ಕೆ ಅಂದು 1160 ಹುಲಿಗಳು ಕೈಯಾರೆ ಹತ್ಯೆಯಾದವು. ಇದು ಇತಿಹಾಸದ ಪುಟದಲ್ಲಿ ಅಚ್ಚಳಿಯದ ದಾಖಲೆ! ದಂತ ಪೋರ ವೀರಪ್ಪನ್‌ನಂತೆ! ಆತ ಕೊಂದ ಆನೆಗಳು ಇನ್ನೊಂದು ಕಪ್ಪು ಚರಿತ್ರೆ! ಮನುಷ್ಯರ ಈ ದುರಾಶೆಗೆ-ಸಾಹಸಕ್ಕೆ ಕಾಡಿನಲ್ಲಿ ವಾಸವಾಗಿದ್ದ ಸಾವಿರಾರು ಹುಲಿಗಳು ನಶಿಸಿ ಹೋದವು. 1970ರಲ್ಲಿ ಈ ಹುಲಿಗಳ ಗಣತಿ ಕಾರ್ಯ ಆರಂಭಿಸಿದಾಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸುದ್ದಿ ಬಹಿರಂಗವಾಯಿತು. ಆಗ ಕಾಡಿನಲ್ಲಿ ಉಳಿದುಕೊಂಡಿದ್ದ ಹುಲಿಗಳ ಸಂಖ್ಯೆ ಕೇವಲ 1780 ಮಾತ್ರ! ಈ ಕಳವಳಕಾರಿ ವರದಿಯನ್ನು ಅಂದಿನ ಕೇಂದ್ರ ಸರಕಾರವು ಬಹು ಗಂಭೀರವಾಗಿ ಪರಿಗಣಿಸಿತು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಹುಲಿಗಳ ಸಂರಕ್ಷಣೆಗೆಪ್ರಾಜೆಕ್ಟ್ ಟೈಗರ್’ ಅನ್ನುವ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದರು. ಬಹಳಷ್ಟು ದೂರಾದೃಷ್ಟಿಯ ಈ ಕಾರ್ಯ ಕ್ರಮವನ್ನು ಸ್ವಯಂ ಇಂದಿರಾ ಗಾಂಧಿಯವರು ಬಹು ಕಾಳಜಿಯಿಂದ ನಿರ್ವಹಿಸಿದರು. ಕಳ್ಳ ಬೇಟೆಯಾಡುವ ಶೋಕಿಗಳಾಗಲಿ, ಆದಿವಾಸಿ ಜನಾಂಗವಾಗಲಿ ಅಥವಾ ಅರಣ್ಯಾಧಿಕಾರಿಗಳೇ ಆಗಲಿ ಅವರಿಗೆ ಕಠಿಣವಾಗಿ ಶಿಕ್ಷಿಸುವ ಬಿಗಿ ಕಾನೂನನ್ನು ಜಾರಿಗೆ ತಂದರು. ಕಾಡು ಕಾಯುವ ವನ ಪಾಲಕರನ್ನು ಹೆಚ್ಚಿಸಲಾಯಿತು. ಈ ಯೋಜನೆಯನ್ನು ಮೆಚ್ಚಿಕೊಂಡ ವಿಶ್ವ ವನ್ಯ ಮೃಗ ನಿಧಿ'ಯು ಇದರ ಉತ್ತೇಜನಕ್ಕೆ ಒಂದು ಮಿಲಿಯನ್ ಡಾಲರ್ ಮೊತ್ತವನ್ನು ಅನುದಾನವಾಗಿ ನೀಡಿತು. ಒಂದು ದಶಕಗಳ ಬಳಿಕ ಮತ್ತೆ ಹುಲಿಗಳ ಗಣತಿ ಆರಂಭ ಮಾಡಿದರು. ಈ ಯೋಜನೆಯು ಪರಿಣಾಮ ಎಂಬAತೆ ಸುಮಾರು 4,334 ಹುಲಿಗಳು ಹೊಸತಾಗಿ ಕಂಡು ಬಂದವು. ಈ ಪ್ರಗತಿಯನ್ನು ಇಡೀ ವಿಶ್ವವೇ ಕೊಂಡಾಡಿತು. ಅಂತೂ ಈ ಯೋಜನೆಯು ಹುಲಿಗಳ ನಿರ್ಮೂಲವನ್ನು ತಡೆಗಟ್ಟುವಲ್ಲಿ ಬಹುಮುಖ್ಯವಾದ ಪಾತ್ರ ವಹಿಸಿತು. ವಿಶ್ವಸಂಸ್ಥೆಯು ಈ ಸಾಧನೆಗೆ ಭಾರತದ ಬೆನ್ನು ತಟ್ಟಿತು. ಇದಕ್ಕೆ ಸೂಕ್ತ ಸಮಯದಲ್ಲಿ ಕಡಿವಾಣವನ್ನು ಹಾಕದೆ ಇದ್ದಿದ್ದರೆ, ನಮ್ಮ ಮುಂದಿನ ಪೀಳಿಗೆಯು ಇಂತಹ ಹುಲಿಗಳನ್ನು ಬರೇ ಚಿತ್ರಪಟಗಳಲ್ಲಿ ಕಾಣುವ ದಿನಗಳು ಎದುರಾಗುತ್ತಿತ್ತೆಂದು ಸಂತೋಷ ವ್ಯಕ್ತಪಡಿಸಿತು. ಇಂದಿಗೂ ಈ ಹುಲಿ ಯೋಜನೆಯ ಸಂರಕ್ಷಣಾ ಕಾರ್ಯಕ್ರಮವು ಜಾರಿಯಲ್ಲಿದೆ. ಜೊತೆಗೆ ಜುಲಾÊ 29ರ ದಿನವನ್ನು ಅದು ಅಂತರಾಷ್ಟ್ರೀಯ ಹುಲಿ ದಿನಾಚಣೆಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಹುಲಿಯು ನಿಸರ್ಗದ ಅತ್ಯುತ್ತಮ ಸುಂದರ ಹಾಗೂ ಕೆಚ್ಚದೆಯ ಮೃಗ. ಅದು ಭಾರತದ ರಾಷ್ಟಿçÃಯ ಪ್ರಾಣಿಯಾಗಿಯೂ ಗುರುತಿಸಿಕೊಂಡಿದೆ. ಅದರ ರಾಜ ಗಾಂಭೀರ್ಯದ ನಡಿಗೆ, ತೀಕ್ಷ÷್ಣವಾದ ನೋಟ, ವೇಗದ ಓಟ, ಅಸಾಧರಣ ಮೈ ಕಟ್ಟು, ಭೇಟೆಯಾಡುವ ಶೈಲಿ, ಹೆಣ್ಣು ಹುಲಿಯು ಮಕ್ಕಳನ್ನೂ ಪೋಷಣೆ ಮಾಡುವ ರೀತಿ, ಮಕ್ಕಳನ್ನು ಉಳಿಸಿಕೊಳ್ಳಲು ಅದು ನಡೆಸುವ ಹೋರಾಟ ಇತ್ಯಾದಿ ಅದನ್ನು ರಾಷ್ಟಿçÃಯ ಮೃಗವಾಗಿ ಆಯ್ಕೆ ಮಾಡಲಾಗಿದೆ. ಹುಲಿಗಳ ಗುಂಪು ಕಾಡಿನಲ್ಲಿ ತಮ್ಮದೇ ವ್ಯಾಪ್ತಿ ಪ್ರದೇಶವನ್ನು ಗುರುತಿಸಿಕೊಂಡು ಜೀವಿಸುತ್ತವೆ. ತನ್ನ ಕುಟುಂಬದ ಹೆಣ್ಣು ಹುಲಿಯು ಬೇರೆ ವ್ಯಾಪ್ತಿಗೆ ಹೋಗ ಕೂಡದೆಂದು ಅದು ಸದಾ ಕಟ್ಟೆಚ್ಚರ ವಹಿಸುತ್ತದೆ. ಮರಗಳ ತೊಗಟೆಗಳನ್ನು ತನ್ನ ಹರಿತವಾದ ಉಗುರಿನಿಂದ ಕೆರೆದು ಆಗಾಗ ಅದರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತದೆ. ತನ್ನ ಸರ ಹದ್ದಿಗೆ ಬರುವ ಅನೇಕ ಮರಗಳಿಗೆ ಅದು ಈ ರೀತಿಯ ಗುರುತುಗಳನ್ನು ಹಾಕಿಕೊಳ್ಳುತ್ತದೆ. ಇದು ಉಳಿದ ವ್ಯಾಪ್ತಿಯ ಹುಲಿಗಳು ಅತಿಕ್ರಮಣ ಮಾಡಬಾರದೆಂಬ ಸೂಚನೆ. ಈ ಎಚ್ಚರಿಕೆಯನ್ನು ಉಲ್ಲಂಘಿಸಿಯೂ ಕೆಲವು ಹುಲಿಗಳು ಲಕ್ಷö್ಮಣ ರೇಖೆಯನ್ನು ದಾಟುವುದಿದೆ. ಹೀಗೆ ಆಕ್ರಮವಾಗಿ ನುಸುಳಿದಾಗ ಅದು ತೀವ್ರವಾದ ಪ್ರತಿಭಟನೆ ಮಾಡುತ್ತದೆ. ಕಾದಾಟಕ್ಕೆ ನಿಂತು, ಇಡೀ ಕಾಡೇ ನಡುಗುವಂತೆ ಘರ್ಜಿಸುತ್ತದೆ. ತನ್ನ ಬಿಗಿ ಪಂಜದಲ್ಲಿ ಮುಖಮೂತಿಯನ್ನು ಗಮನಿಸದೆ ಹೊಡೆಯುತ್ತದೆ. ಇದನ್ನುಟೆರಿಟರಿ ಪೈಟ್’ ಅನ್ನುತ್ತಾರೆ. ಇಲ್ಲಿ ಒಂದೋ ಎದುರಾಳಿ ಹುಲಿ ತೀವ್ರವಾದ ಗಾಯಗೊಂಡು ಪರಾರಿಯಾಗುತ್ತದೆ ಅಥವಾ ಕಾದಾಟದಲ್ಲಿಯೇ ಹತವಾಗುತ್ತದೆ.
    ಮುಖ್ಯ ವಿಚಾರವೆಂದರೆ ಇಲ್ಲಿಯೇ ಹುಟ್ಟಿ ಬೆಳೆದ ಹುಲಿಯು ತನ್ನ ತವರು ಪ್ರದೇಶವನ್ನು ಯಾರಿಗೂ ಬಿಟ್ಟು ಕೊಡಲು ಸಿದ್ಧವಿರುವುದಿಲ್ಲ. ಅದು ತನ್ನ ವ್ಯಾಪ್ತಿ ಪ್ರದೇಶದಲ್ಲಿಯೇ ತನ್ನ ಜೀವಿತವನ್ನು ಕಳೆಯ ಬಯಸುತ್ತದೆ. ಹೀಗಾಗಿ ಕಾಡ್ಗಿಜ್ಜಿಗೂ, ಸರಕಾರದ ಯೋಜನೆಗಳಿಗೂ ಅಥವಾ ಬೇರೆ ರಾಜ್ಯದ ವಲಸೆಗೂ ಅವುಗಳನ್ನು ಸ್ಥಳಾಂತರ ಮಾಡಿದರೆ ಅವು ಬದುಕಿ ಉಳಿಯುವ ಆಯಸ್ಸು ಬಲು ಕಡಿಮೆಯಾಗಿರುತ್ತದೆ.
    ನಮ್ಮ ರಾಜ್ಯದ ನಾಗರ ಹೊಳೆಯಂತೆ, ಹುಲಿಗಳಿಗೆ ರಾಜಸ್ತಾನದ ಸರಿಸ್ಕಾ' ಮತ್ತು ಮಧ್ಯ ಪ್ರದೇಶದಪನ್ನಾ’ ಅರಣ್ಯಾಧಾಮಗಳು ಬಲು ಪ್ರಸಿದ್ಧ ತಾಣಗಳು. ಇಲ್ಲಿ ನೂರಾರು ಹುಲಿಗಳಿವೆ. ಆದರೆ ಈ ಪ್ರದೇಶದ ಹುಲಿಗಳನ್ನು ಇನ್ನೊಂದು ತಾಣಕ್ಕೆ ಸ್ಥಳಾಂತರ ಗೊಳಿಸಿದರೆ ಅವು ಹೊಸ ಪ್ರದೇಶವನ್ನು ಇಷ್ಟಪಡುವುದಿಲ್ಲ. ಹೇಗಾದರೂ ತಪ್ಪಿಸಿಕೊಂಡು ತಮ್ಮ ಮೂಲ ಸ್ಥಾನಕ್ಕೆ ಬರಲು ಪ್ರಯತ್ನಿಸುತ್ತವೆ. ಇದಕ್ಕಾಗಿಯೇ ಮೃಗಾಲಯಗಳಲ್ಲಿ ಹುಲಿಗಳ ಸಣ್ಣ ಮರಿಗಳನ್ನೇ ತಂದು, ಪೋಷಣೆ ಮಾಡುತ್ತಾರೆ. ಅವು ಅಲ್ಲೇ ಬೆಳೆದು, ಬಾಲ್ಯ ಸವೆದು ಯೌವನಕ್ಕೆ ಕಾಲಿಡುತ್ತವೆ. ಕೊನೆಗೆ ಮೃಗಾಲಯವನ್ನೇ ಮನೆ ಮಾಡಿಕೊಂಡು ಜೀವನ ಪೂರ್ತಿ ಕಳೆಯುತ್ತವೆ. ಇಲ್ಲದಿದ್ದರೆ, ಅದರ ಜಿನ್‌ನಲ್ಲಿ ಹರಿದು ಬಂದ ವಂಶವಾಹಿ ಗುಣವನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಿಲ್ಲ.
    ಇನ್ನು ಮನುಷ್ಯರಾದ ನಾವು ಪ್ರಾಣಿಗಳ ಕಾಡಿನ ವ್ಯಾಪ್ತಿ ಪ್ರದೇಶವನ್ನು ನಿರ್ಮೂಲನ ಮಾಡುತ್ತೇವೆ. ಅವರ ತವರು ಪ್ರದೇಶವನ್ನು ಕಡಿದು ರೈಲು ಮಾರ್ಗ ನಿರ್ಮಿಸುತ್ತೇವೆ. ದೊಡ್ಡ ದೊಡ್ಡ ರಾಷ್ಟಿçÃಯ ಹೆದ್ದಾರಿಗಳನ್ನು ಅಗೆದು ನಗರಗಳಿಗೆ ಜೋಡಿಸುತ್ತೇವೆ. ಸುರಂಗಗಳನ್ನು ಕೊರೆದು, ಹೊಸ ಹೊಸ ಹಾದಿಗಳನ್ನೂ ಹುಡುಕುತ್ತೇವೆ. ಕಾಡ್ಗಿಚ್ಚು' ಅನ್ನುವ ನಾಟಕವನ್ನು ಆಡಿ ಸಾವಿರಾರು ಪ್ರಾಣಿ-ಪಕ್ಷಿಗಳನ್ನು ದೂರಕ್ಕೆ ಅಟ್ಟಿ ಬಿಡುತ್ತೇವೆ. ಆಗ ಅಲ್ಲಿ ಲಕ್ಷಾಂತರ ಕ್ರಿಮಿ-ಕೀಟಗಳು, ಹುಳ-ಹುಪ್ಪಟೆಗಳು, ಹರಿದಾಡುವ ಸರಿಸೃಪಗಳು ಬೆಂಕಿಗೆ ಆಹುತಿಯಾಗುತ್ತವೆ. ಓಡಿ ಹೋಗಲು ಸಾಧ್ಯವಾಗದ ಅದೆಷ್ಟು ಮರಿಗಳು, ಗರ್ಭವತಿ ಪ್ರಾಣಿಗಳು ಸುಡುವ ಅಗ್ನಿಗೆ ಕರಟಿ ಹೋಗುತ್ತವೆ. ಇದರಿಂದ ಕಾಡಿನ ಇಡೀ ಪರಿಸರವೇ ಅಸಮತೋಲನಗೊಳ್ಳುತ್ತದೆ. ಅವು ಮುಂದೆ ಪರಿಸರದ ಮೇಲೆ ಕೆಟ್ಟದಾದ ಪರಿಣಾಮ ಬೀರುತ್ತವೆ. ಇದರಿಂದಲೇ ಪ್ರಕೃತಿ ವಿಕೋಪಗಳು ಸೃಷ್ಟಿಯಾಗುತ್ತವೆ. ಇಲ್ಲಿ ಹುಲಿಯ ಸಮಸ್ಯೆಯೂ ಇದೇ. ಅವು ವ್ಯಾಪ್ತಿ ಪ್ರದೇಶದಿಂದ ತಪ್ಪಿಹೋದರೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತವೆ. ತನ್ನ ಕ್ಷೇತ್ರವನ್ನು ಹುಡುಕಾಡಲು ಓಡಾಡುತ್ತವೆ. ಅದು ಸಿಗದೇ ಹೋದಾಗ ನೇರವಾಗಿ ಹತ್ತಿರದ ಹಳ್ಳಿಗೂ, ಊರಿಗೂ ನುಗ್ಗುತ್ತವೆ. ತಿನ್ನಲು ಆಹಾರವು ಸಿಗದೆ ಹೋದಾಗ ಮೇಯುವ ಜಾನುವಾರಗಳನ್ನೂ, ನಾಯಿಗಳನ್ನೂ ಹಿಡಿದು ಕೊಲ್ಲುತ್ತವೆ. ಮನುಷ್ಯರ ಮೇಲೆ ದಾಳಿ ಮಾಡಿದಾಗನರಭಕ್ಷಕ’ ಅನ್ನುವ ಹಣೆಪಟ್ಟಿಯನ್ನು ಪಡೆಯುತ್ತವೆ. ಈ ದುಷ್ಕೃತ್ಯಕ್ಕೆ ಇಲ್ಲಿ ಮನುಷ್ಯನೇ ಕಾರಣವೇ ಹೊರತು, ಹುಲಿಯಲ್ಲ. ಕಾಡಿನ ರಾಜನಾದ ಹುಲಿಯು ಯಾವತ್ತೂ ರಾಜ ಹುಲಿಯೇ. ಅದಕ್ಕೆ ಮನುಷ್ಯನ ಹಣ, ಬಂಗಾರ ಮನೆ-ಮಠಗಳು ಯಾವುದೂ ಬೇಕಿಲ್ಲ. ಮದ, ಮತ್ಸರ, ಅಸೂಯೆ, ಹಗೆತನ ತುಂಬಿಕೊAಡಿರುವ ಕೊಳಕು ಮನಸ್ಸಿನ ರಕ್ತವೂ ಬೇಕಿಲ್ಲ. ಅದಕ್ಕೆ ಬೇಕಾಗಿರುವುದು ತನ್ನ ವ್ಯಾಪ್ತಿ-ತನ್ನ ವಲಯ. ಅಲ್ಲೇ ಅದು ತನ್ನ ಸಂಸಾರದ ಜೊತೆಗೆ ಸಭ್ಯ ಗೃಹಸ್ಥನಾಗಿ ಸ್ವಚಂದವಾಗಿ ಬದುಕಬಲ್ಲದು. ಅದಕ್ಕೆ ನಾಡಿಗೆ ನುಸುಳಿ ಕಳ್ಳರಂತೆ ಅಡಗಿಕೊಳ್ಳಲು, ಭಯದಲ್ಲಿ ನಡುಗಿಕೊಳ್ಳಲು ಯಾವತ್ತೂ ಇಷ್ಟವಿಲ್ಲ. ಅದು ಸದಾ ಸ್ವಾತಂತ್ರ್ಯವನ್ನೇ ಬಯಸುತ್ತವೆ.
    ಇವತ್ತು ಹುಲಿ ಸಂರಕ್ಷಣಾ ಯೋಜನೆಗೆ 50 ವರ್ಷಗಳು ದಾಟಿದವು. ಆದರೆ ಅದು ಪರಿಪೂರ್ಣವಾಗಿ ಯಶಸ್ವಿಯಾಗಲಿಲ್ಲ. ದುರಂತವೆAದರೆ ನಮ್ಮಲ್ಲಿ ಅದೆಷ್ಟು ಪ್ರಗತಿಪರ ಯೋಜನೆಗಳನ್ನು ರೂಪಿಸಿದರೂ, ಅದನ್ನು ಅಡ್ಡಹಾದಿಯಲ್ಲಿ ಕಬಳಿಸುವವರೇ ಹೆಚ್ಚು. ಇದಕ್ಕೆ ಈ ಪ್ರಾಜೆಕ್ಟ್ ಟೈಗರ್' ಕೂಡ ಹೊರತಲ್ಲ. ಇದರಲ್ಲಿ ಮುಖ್ಯವಾಗಿ ಆದಿವಾಸಿಗಳು, ಶ್ರೀಮಂತರು, ರಾಜಕಾರಣಿಗಳು ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಶಾಮೀಲಾಗಿರುತ್ತಾರೆ. ಇಲ್ಲಿ ಬೇಲಿಯೇ ಹೊಲವನ್ನು ಮೇಯಿದರೆ ಯಾರಿಗೆ ಕಾನೂನಿನ ಕುಣಿಕೆಯೊಳಗೆ ಸಿಕ್ಕಿಸುವುದು? ಮನುಷ್ಯನಿಗೆ ಹಣದ ದಾಹವು ಮಾಡಬಾರದ ಕೆಲಸಗಳನ್ನೂ ಮಾಡಿಸುತ್ತದೆ. ಇವರಿಂದಲೇ ತೆರೆಮರೆಯಲ್ಲಿ ಹುಲಿಗಳ ಮಾರಣ ಹೋಮಗಳು ಜರುಗುತ್ತಲೇ ಇರುತ್ತವೆ. ಇಂದಿಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಲಿಗಳ ಚರ್ಮ, ಮೂಳೆ, ಮಾಂಸ, ಕಣ್ಣುಗಳು, ಉಗುರುಗಳು ಇತ್ಯಾದಿಗಳಿಗೆ ಬಹು ಬೇಡಿಕೆ ಇದೆ. ಇದರಲ್ಲಿ ಅತ್ಯಧಿಕ. ಗ್ರಾಹಕರಿರುವುದು ಥೈಲ್ಯಾಂಡ್ ರಾಷ್ಟçದಲ್ಲಿ. ಹೀಗಾಗಿ ಭಾರತದಿಂದ ಚೀನಾ ಮೂಲಕವಾಗಿ ಹುಲಿಗಳ ದೇಹದ ಭಾಗಗಳು ಅಕ್ರಮವಾಗಿ ರವಾನೆಯಾಗುತ್ತಲೇ ಇರುತ್ತದೆ. ಈ ವ್ಯವಸ್ಥಿತ ಜಾಲದಲ್ಲಿ ಅನೇಕ ಕಾಣದ ಕೈಗಳಿವೆ. ಬಲವಾದ ರಾಜಕೀಯ ಕೈವಾಡವಿರುವ ಕಾರಣ ಅವರನ್ನು ಸುಲಭವಾಗಿ ಬಂಧಿಸುವುದು ಸುಲಭವಲ್ಲ. ಈ ರೀತಿ ಅವ್ಯಾಹಿತವಾಗಿ ಸಾಗುವ ಕಳ್ಳ ಸಾಗಣೆಯಿಂದ ಹುಲಿಗಳ ಸಂತತಿ ಕ್ಷೀಣಿಸುತ್ತಾ ಸಾಗುತ್ತಿದೆ. ದೇಶಕ್ಕೆ ದ್ರೋಹ ಬಗೆಯುವ ಇಂತಹ ನೀಚರೇ ಹುಲಿಗಳ ನಿಜವಾದ ಭಕ್ಷಕರು. ಇವರಿಗೆ ಹಣದಾಶೆಗೆ ಕುಮ್ಮಕ್ಕು ನೀಡುವ ಖಾಕಿ ಅಧಿಕಾರಿಗಳೇ ನಿಜವಾದ ಹುಲಿ ಹಂತಕರು! ಕಳೆದ ಬಾರಿಯ ಹುಲಿ ಗಣತಿಯ ಪಟ್ಟಿಯನ್ನು ಎತ್ತಿ ನೋಡಿದರೆ, ಈಗ ಭಾರತದಲ್ಲಿ ಬದುಕಿ ಉಳಿದಿರುವ ಹುಲಿಗಳ ಸಂಖ್ಯೆ ಕೇವಲ 3,167. ಎಲ್ಲಿಯ ವರೆಗೆ ಸರಕಾರದ ಕಾಯ್ದ-ಕಾನೂನುಗಳು ಸಡಿಲಗೊಳ್ಳುತ್ತವೋ ಅಲ್ಲಿಯವರೆಗೆ ಇಂತಹದ್ದೇ ಫಲಿತಾಂಶಗಳು ಕಾಣಸಿಗುತ್ತದೆ. ಹುಲಿ ಬೇಟೆಯಾಡುವ ಯಾವುದೇ ಹಂತಕನಿರಲಿ, ಆತ ಕಾಡಿಗೆ ಹೊಕ್ಕರೆಕಂಡಲ್ಲಿ ಗುಂಡು’ ಅನ್ನುವ ಕಾನೂನು ಜಾರಿಗೆ ತಂದರೆ ಹುಲಿಗಳ ಸಂತತಿ ಏರ ಬಹುದೋ ಏನೋ?
    ಇರ್ಶಾದ್ ಮೂಡಬಿದ್ರಿ

  • ಆಮಿರ್ ಅಲ್ ಮಹ್ದಿಯ ಪವಾಡ ಸದೃಶವಾದ ಪ್ರಯಾಣ

    ಆಮಿರ್ ಅಲ್ ಮಹ್ದಿಯ ಪವಾಡ ಸದೃಶವಾದ ಪ್ರಯಾಣ

    2025ರ ಹಜ್ಜ್ ಯಾತ್ರೆ ಪೂರ್ಣಗೊಂಡು ಹಾಜಿಗಳೆಲ್ಲರೂ ತಾಯ್ನಾಡಿಗೆ ಮರಳಿದ್ದಾರೆ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ತೀರ್ಥಯಾತ್ರೆಯನ್ನು ಮುಗಿಸಿ ಹೊಸ ಹುರುಪು, ಹೊಸ ಚೈತನ್ಯದೊಂದಿಗೆ ಜೀವನದ ಜಂಜಾಟಕ್ಕೆ ಪುನಃ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
    ಈ ಬಾರಿಯ ಹಜ್ಜ್ ಕರ್ಮವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗರೂಕತೆ ವಹಿಸಿದ್ದರಿಂದ ಬಹಳ ಸುಸೂತ್ರವಾಗಿ ನೆರವೇರಿದೆ. ಈ ನಡುವೆ ಆಮಿರ್ ಮನ್ಸೂರ್ ಮಹ್ದಿ ಅಲ್ ಗದ್ದಾಫಿ ಎಂಬ 38 ರ ಹರೆಯದ ಲಿಬಿಯಾದ ಪೌರ ತನ್ನ ಹಜ್ಜ್ ಪ್ರಯಾಣದಲ್ಲಿ ಸಂಚಲವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲೂ ವಾರ್ತಾ ಮಾಧ್ಯಮಗಳಲ್ಲೂ ವೈರಲ್ ಆಗಿದ್ದರು.
    ಎಲ್ಲರಂತೆ ಆಮಿರ್ ಕೂಡ ಹಜ್ಜ್ ಯಾತ್ರೆಗಾಗಿ ಲಿಬಿಯಾದ ಸಭಾ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಸೌದಿಗೆ ಹಜ್ಜ್ಗಾಗಿ ತೆರಳುವ ಎಲ್ಲ ಪ್ರಯಾಣಿಕರೂ ಬೋರ್ಡಿಂಗ್ ಪಾಸ್ ಪಡೆದು ವಿಮಾನದೊಳಗೆ ಪ್ರವೇಶಿಸಿದ್ದರು. ಆದರೆ ಆಮಿರ್‌ರಿಗೆ ಬೋರ್ಡಿಗೆ ಪಾಸ್ ನಿರಾಕರಿಸಲಾಗಿತ್ತು ಅದಕ್ಕೆ ಕಾರಣ ಪಾಸ್ ಪೋರ್ಟ್ನಲ್ಲಿರುವ ಗದ್ದಾಫಿ ಎಂಬ ಹೆಸರಿನಲ್ಲಿರುವ ಸಮಸ್ಯೆ ಎಂದು ಸೂಚಿಸಲಾಗಿತ್ತು. ಆಮಿರ್‌ನ ಹೊರತಾಗಿ ವಿಮಾನ ಪ್ರಯಾಣ ಹೊರಟಿತು. ಆದರೆ ವಿಧಿಯ ಆಟವನ್ನು ಬಲ್ಲವರಾರು. ವಿಮಾನ ಆಕಾಶದೆತ್ತರಕ್ಕೆ ಹಾರಿ ಸ್ವಲ್ಪದರಲ್ಲೇ ತಾಂತ್ರಿಕ ಸಮಸ್ಯೆಯ ಕಾರಣ ವಿಮಾನವನ್ನು ನಿಲ್ದಾಣಕ್ಕೆ ಮರಳಿಸಬೇಕಾಯಿತು.
    ಆದರೆ ವಿಮಾನ ನಿಲ್ದಾಣದಲ್ಲಿರುವ ಆಮಿರ್ ನಾನು ಹಜ್ಜ್ನ ಸಂಕಲ್ಪ ಮಾಡಿ ತಾಯ್ನಾಡಿನಿಂದ ಹೊರಟಿದ್ದೇನೆ ಮತ್ತು ಇನ್ನು ಸೌದಿಗಲ್ಲದೆ ಮರಳಿ ಮನೆಗೆ ಹೋಗಲಾರೆ ಎಂದು ಹಠ ಹಿಡಿದು ಕುಳಿತಿದ್ದಾರೆ. ನಿಲ್ದಾಣಕ್ಕೆ ಮರಳಿದ ವಿಮಾನದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿದರೂ ಆಮಿರ್ ನನ್ನು ವಿಮಾನದೊಳಗೆ ಪ್ರವೇಶಿಸಲು ಪೈಲಟ್ ಅನುಮತಿ ನೀಡಲೇ ಇಲ್ಲ. ಪ್ರಯಾಣಕ್ಕೆ ಸಜ್ಜಾದ ವಿಮಾನವು ಆಕಾಶದೆತ್ತರಕ್ಕೆ ಹಾರಿ ಮಾಯವಾಯಿತು. ಪುನಃ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಾಗ ಗತ್ಯಂತರವಿಲ್ಲದೆ ನಿಲ್ದಾಣಕ್ಕೆ ಮರಳಬೇಕಾಯಿತು. ಆದರೆ ಈ ಬಾರಿ ಪೈಲಟ್‌ಗೆ ಏನೋ ಸಂಶಯ ಕಾಡತೊಡಗಿತು. ಅವನು ಆಗಲೇ ಸೂಚನೆ ನೀಡಿದ. ಇನ್ನು ವಿಮಾನವು ಲ್ಯಾಂಡಿಗ್ ಮಾಡುವುದಾದರೆ ಆಮಿರ್ ನ ಹೊರತಾಗಿ ವಿಮಾನ ಟೇಕ್ ಆಫ್ ಮಾಡಲಾರದು ಎಂಬ ಸಂಕಲ್ಪದೊAದಿಗೆ ವಿಮಾನವನ್ನು ಕೆಳಗಿಳಿಸಲಾಯಿತು. ಪುನಃ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಆಮಿರ್‌ನಿಗೆ ಪ್ರವೇಶಾನುಮತಿ ನೀಡಿ ವಿಮಾನವು ಹಾರಾಡಿತು ಮತ್ತು ಜೆದ್ದಾ ವಿಮಾನ ನಿಲ್ದಾಣಕ್ಕೆ ತಲುಪಿತು.
    ಆಮಿರ್ ತನ್ನ ಹದಿನಾರನೆಯ ಪ್ರಾಯದಲ್ಲಿ ಹಜ್ಜ್ ಎಂಬ ಪವಿತ್ರ ಕರ್ಮ ನಿರ್ವಹಿಸುವ ಕನಸನ್ನು ಕಂಡಿದ್ದ. ಆದರೆ ಕಾರಣಾಂತರದಿAದ ಅದು ಸಾಧ್ಯವಾಗಲಿಲ್ಲ. ತನ್ನ 38 ನೆಯ ಪ್ರಾಯದಲ್ಲಿ ತನ್ನ ಕನಸು ನೆರವೇರುವ ಸಮಯ ಕೂಡಿ ಬಂದಿತ್ತು. ಅದರ ಸಕಲ ಸಿದ್ಧತೆಗಳನ್ನು ಮಾಡಿ ವಿಮಾನ ನಿಲ್ದಾಣ ತಲುಪಿದಾಗ ಇಂತಹ ಒಂದು ಕಹಿ ಅನುಭವವಾಗಿತ್ತು. ಓರ್ವ ಪ್ರಯಾಣಿಕನು ಪ್ರಯಾಣದ ಸಕಲ ಸಿದ್ಧತೆಗಳನ್ನು ಮಾಡಿ ತನ್ನದಲ್ಲದ ತಪ್ಪಿನಿಂದ ಆ ಪ್ರಯಾಣ ಮೊಟಕುಗೊಳ್ಳುವಾಗ ಅವನು ಅನುಭವಿಸುವ ಮಾನಸಿಕ ಯಾತನೆ, ತಳಮಳ ಮತ್ತು ಸಂಘರ್ಷ ಮಾತಿನಲ್ಲಿ ವರ್ಣಿಸಲು ಅಸಾಧ್ಯ. ಅದನ್ನು ಅನುಭವಿಸುವವರಿಗೆ ಅದರ ಸಂಕಷ್ಟದ ಬಗ್ಗೆ ಅರಿವಿರುತ್ತೆ. ಆಮಿರ್‌ನ ಅನುಭವ ಕೂಡ ಇದಕ್ಕೆ ಭಿನ್ನವಲ್ಲ. ಆದರೆ ಸಾಧಾರಣ ಗತಿಯಲ್ಲಿ ಪ್ರಯಾಣ ಮೊಟಕುಗೊಂಡರೆ ತನ್ನ ವಿಧಿಯನ್ನು ಹಳಿಯುತ್ತಾ ಪ್ರಯಾಣಿಕನು ಮರಳುವುದೇ ಹೆಚ್ಚು. ವಿಮಾನ ನಿಲ್ದಾಣದ ಅಧಿಕಾರಿಗಳು ಆಮಿರ್ ನನ್ನು ಅದೆಷ್ಟೋ ಸಂತೈಸಿರಬಹುದು, ತನ್ನ ಅದೃಷ್ಟ ದಲ್ಲಿ ಈ ಬಾರಿಯ ಹಜ್ಜ್ ಬರೆದಿಲ್ಲ ಎಂಬಿತ್ಯಾದಿ ಮಾತುಗಳಿಂದ ಆಮಿರ್ ನಿಗೆ ಮನವರಿಕೆ ಮಾಡಿಕೊಟ್ಟಿರಲೂಬಹುದು. ಆದರೆ ಆಮಿರ್ ಕುಳಿತಲ್ಲಿಂದ ಕದಲಲೇ ಇಲ್ಲ. ಇಂದಿನ ಹಜ್ಜ್ ವಿಮಾನ ಹೊರಟಿದೆ ಇನ್ನು ಬರುವ ವರ್ಷ ಹೋಗಬಹುದು ಎಂದು ಅವನನ್ನು ಅಧಿಕಾರಿಗಳು ಸಂತೈಸಲು ಪ್ರಯತ್ನಿಸಿದರೂ ಅದ್ಯಾವುದಕ್ಕೂ ಕಿವಿಗೊಡದೆ, ಅಲ್ಲಿ ಸದ್ದು ಗದ್ದಲ ಮಾಡುವುದೋ, ಬೊಬ್ಬೆ ಹೊಡೆಯುವುದೋ ಪ್ರತಿಭಟನೆ ನಡೆಸುವುದೋ ಅಥವಾ ಅಧಿಕಾರಿಗಳನ್ನು ತರಾಟೆಗೆ ತೆಗೆಯುವುದೋ ಇದ್ಯಾವುದರ ಗೋಜಿಗೆ ಹೋಗದೆ ನನ್ನನ್ನು ಬಿಟ್ಟು ಈ ವಿಮಾನ ಹಾರಾಡುವುದಿಲ್ಲ ಎಂದು ಮಾತ್ರ ಹೇಳುತ್ತಾ ಅಲ್ಲಿಯೇ ಉಳಿದುಬಿಡುತ್ತಾನೆ.
    ಓರ್ವ ಪ್ರಯಾಣಿಕನಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದೆ ಇದ್ದರೆ ಇನ್ನೊಂದು ವಿಮಾನದಲ್ಲಿ ಬದಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತೆ. ಆದರೆ ಹಜ್ಜ್ ವಿಮಾನದಲ್ಲಿ ಅಂತಹ ಒಂದು ಬದಲು ವ್ಯವಸ್ಥೆ ಇದೆಯೋ ಎಂದು ತಿಳಿದಿಲ್ಲ. ಆದರೂ ತಾನು ಹಜ್ಜ್ಗಲ್ಲದೆ ಮರಳಿ ತಾಯ್ನಾಡಿಗಿಲ್ಲ ಎಂಬ ಆಮಿರ್‌ನ ದೃಢ ನಿರ್ಧಾರ ಮತ್ತು ಇಚ್ಛಾ ಶಕ್ತಿ ಅದಕ್ಕೂ ಮಿಗಿಲಾದ ದೇವನ ಮೇಲಿರುವ ಭರವಸೆ ಮತ್ತು ಸಂಕಲ್ಪ ನಿಜಕ್ಕೂ ಅದ್ಭುತವಾದುದು. ಏಕೆಂದರೆ ಓರ್ವ ಪ್ರಯಾಣಿಕನನ್ನು ಬಿಟ್ಟು ಹೋದ ಕಾರಣದಿಂದ ವಿಮಾನ ತನ್ನ ನಿರ್ಧೀಷ್ಟ ಸ್ಥಳವನ್ನು ತಲುಪದೆ ತಾಂತ್ರಿಕ ದೋಷ ಕಂಡುಬರುವುದು ಮತ್ತು ಅದಕ್ಕಾಗಿ ಎರಡೆರಡು ಬಾರಿ ಮರಳಿ ಸ್ವನಿಲ್ದಾಣದಲ್ಲಿ ಇಳಿಸುವುದು ಇಂದೊAದು ಅಪರೂಪದ ಘಟನೆಯೇ ಸರಿ. ಇಲ್ಲಿ ಒಂದು ಆಧ್ಯಾತ್ಮಿಕ ಶಕ್ತಿ ಮಧ್ಯಪ್ರವೇಶಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದು ನಮ್ಮ ಕಾಲದ ಆಧ್ಯಾತ್ಮಿಕ ಶೋಷಣೆ ಮಾಡುವಂತಹ ಪವಾಡವೇನಲ್ಲ. ಮಹಾಪುರುಷರ ಜೀವಂತವಿರುವ ಅಥವಾ ಮೃತಶರೀರದ ಪವಾಡದ ವ್ಯಾಪಾರ ನಡೆಸುವ ಇಂದಿನ ಕಾಲದಲ್ಲಿ ಇದನ್ನೊಂದು ಪವಾಡವಾಗಿ ನೋಡುವವರಿದ್ದರೂ ಅತಿಶಯೋಕ್ತಿಯಲ್ಲ. ಆದರೆ ಇದು ಯಾವುದೇ ಕಟ್ಟು ಕತೆಯ ಪವಾಡವಲ್ಲ. ಇದೊಂದು ಬಲವಾದ ದೃಢ ನಂಬಿಕೆ ಮತ್ತು ಇಚ್ಛಾಶಕ್ತಿಯ ಸಂಕೇತವಷ್ಟೆ.
    ಹಿAದೆ ನಾವೆಲ್ಲರೂ ಅಜ್ಜಿ ಕಥೆ ಕೇಳಿದವರಾಗಿದ್ದೇವೆ. ಆ ಕಥೆಗಳಲ್ಲಿ ಒಂದು ಸಂದೇಶ ಇದ್ದೆ ಇರುತ್ತೆ. ಆದರೆ ಇದು ಕಥೆಯಲ್ಲ ವಾಸ್ತವ. ನೂರಾರು ಜನರ ಮುಂದೆಯೇ ನಡೆದ ಘಟನೆ. ಯಾವುದೇ ಒಂದು ಘಟನೆ ಒಂದು ಹತ್ತಿಪ್ಪತ್ತು ವರ್ಷಗಳ ಹಿಂದೆ ನಡೆದದ್ದಾಗಿದ್ದರೆ ಅದು ಕಾಲ್ಪನಿಕ ಕತೆ ಎಂದು ಅಲ್ಲಗಳೆಯುವ ಸಾಧ್ಯತೆಯೇ ಹೆಚ್ಚು.
    ಪ್ರತಿಯೊಂದು ಧರ್ಮಗಳಲ್ಲೂ ವಿಭಿನ್ನ ರೀತಿಯಲ್ಲಿ ಧಾರ್ಮಿಕ ಆರಾಧಾನೆ ಮತ್ತು ಆಧ್ಯಾತ್ಮಿಕ ಚೈತನ್ಯಗಳಿಗೆ ಹೇತುವಾಗಬಲ್ಲ ಆಚಾರಣೆಗಳಿರುತ್ತೆ. ಇವೆಲ್ಲವುಗಳಲ್ಲೂ ಸಂಕಲ್ಪವೆAಬುದು ಬಹಳ ಮುಖ್ಯ ಪಾತ್ರ ವಹಿಸುತ್ತೆ. ಸಂಕಲ್ಪವಿಲ್ಲದ ಯಾವುದೇ ಆರಾಧನೆಗಳು ಫಲಶೂನ್ಯ. ಇಸ್ಲಾಮಿನಲ್ಲೂ ಆರಾಧನೆಗಳ ಸ್ವೀಕಾರ್ಯಕ್ಕೆ ಸಂಕಲ್ಪವು ಅತಿ ಅಗತ್ಯ. ಮತ್ತು ಪ್ರಾರ್ಥನೆಗಳ ಸ್ವೀಕೃತಕ್ಕೆ ಶುದ್ಧ ಸಂಪಾದನೆ ಮಾನದಂಡ ಎಂದು ಹೇಳುತ್ತೆ. ನಮ್ಮ ಸಂಪಾದನೆ ಶುದ್ಧವಲ್ಲದಿದ್ದಲ್ಲಿ ಮತ್ತು ಅದು ಅಕ್ರಮ ಅನೀತಿ ಮತ್ತು ಅನ್ಯಾಯವಾಗಿ ಸಂಪಾದಿಸಿದ್ದರೆ ದೇವನ ಮುಂದೆ ಎಷ್ಟೇ ಬೇಡಿದರೂ, ಎಷ್ಟೇ ಪ್ರಾರ್ಥನೆ ಮಾಡಿದರೂ ಆ ಪ್ರಾರ್ಥನೆಯನ್ನು ತಡೆಹಿಡಿಯಲಾಗುತ್ತೆ ಅಥವಾ ಸ್ವೀಕೃತವಾಗಲಾರದು ಎಂದು ಹೇಳಲಾಗುತ್ತೆ. ಏಕೆಂದರೆ ಪ್ರಾರ್ಥನೆಗೆ ಉತ್ತರ ಸಿಗಬೇಕಿದ್ದರೆ ನಾವು ಉಣ್ಣುವ ಆಹಾರ ಮತ್ತು ಮಾಡುವ ಸಂಪಾದನೆ ಹಲಾಲ್ ಅಥವಾ ಶುದ್ಧವಾಗಿರಬೇಕಾದುದು ಅತಿ ಅಗತ್ಯ. ಅನ್ಯಾಯವಾಗಿ ಸಂಪಾದಿಸಿ ಪ್ರಾರ್ಥನೆ ಮಾಡಿದರೆ ಅದು ಸ್ವೀಕೃತವಾಗಲಾರದು ಎಂಬುದು ಇಸ್ಲಾಮಿನ ತತ್ವ. ಅದೇ ರೀತಿ ಹಜ್ಜ್ ಎಂಬ ಪವಿತ್ರ ಕರ್ಮವು ಇಸ್ಲಾಮಿನ ಬುನಾದಿ ಅಥವಾ ಪಂಚ ಸ್ಥಂಭಗಳಲ್ಲೊAದು. ಆದ್ದರಿಂದಲೇ ಪವಿತ್ರವಾದ ಕರ್ಮಕ್ಕೆ ಖರ್ಚು ಮಾಡುವ ಹಣ ಪವಿತ್ರವಾಗಬೇಕಿರುವುದು ಅನಿವಾರ್ಯ.
    ಓರ್ವ ಹಜ್ಜ್ ಯಾತ್ರಿಕನ ದೇವನ ಮೇಲಿನ ಭರವಸೆ ಮತ್ತು ಸಂಕಲ್ಪವು ವಿಮಾನವನ್ನೇ ಮರಳಿಸುವಷ್ಟರ ಮಟ್ಟಿಗೆ ಪಾತ್ರ ವಹಿಸುತ್ತೆ ಎಂದಾದರೆ ನಾವು ನಮ್ಮ ದೇವ ಭಯ ಮತ್ತು ಸಂಕಲ್ಪ ಶುದ್ಧಿಯನ್ನೊಮ್ಮೆ ಆತ್ಮಾವಲೋಕನಕ್ಕೆ ಒಡ್ಡಬೇಕಿದೆ.
    ಪ್ರವಾದಿ ಮುಹಮ್ಮದ್(ಸ)ರವರ ಶಿಕ್ಷಣ ಪ್ರಕಾರ ತಾನು ಉಡುವುದು, ಕುಡಿಯುವುದು ಮತ್ತು ಉಣ್ಣುವುದು ನ್ಯಾಯವಲ್ಲದ ಸಂಪಾದನೆಯಿAದಾದರೆ ಎಷ್ಟೇ ಪ್ರಾರ್ಥಿಸಿದರೂ ಉತ್ತರ ಸಿಗಲಾರದು. ಓರ್ವನ ಸಂಪಾದನೆ ನ್ಯಾಯಯುತವಾಗಿದ್ದರೆ ಮತ್ತು ಅಕ್ರಮದ ಸಂಪಾದನೆಯಿAದ ತನ್ನ ಹೊಟ್ಟೆ ತುಂಬಿಸಲಾರೆ ಎಂದು ದೃಢ ನಿಶ್ಚಯ ಮಾಡಿದ್ದರೆ ಅವನ ಸಂಕಲ್ಪಕ್ಕನುಸಾರ ದೇವನು ಅವನ ಕರ್ಮಗಳಿಗೆ ಫಲವನ್ನು ನೀಡುವನು. ಒಟ್ಟಿನಲ್ಲಿ ತನ್ನ ಸಂಕಲ್ಪ ಶುದ್ಧಿಯಾಗಿರಬೇಕು. ಪ್ರವಾದಿಯ ಅನುಚರರು ಮುಂಜಾನೆ ಎದ್ದು ದುಡಿಮೆಗಾಗಿ ಮನೆಯಿಂದ ಹೊರಡುವಾಗ ಅವರ ಪತ್ನಿಯರು ಈ ರೀತಿ ತಾಕೀತು ಮಾಡುತ್ತಿದ್ದರಂತೆ, ನೀವು ಅಕ್ರಮ ಸಂಪಾದನೆ ಮಾಡಿ ಮನೆಗೆ ತರಬೇಡಿ.
    ಓರ್ವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಎಷ್ಟೇ ದೊಡ್ಡ ಶ್ರೀಮಂತನಾಗಿದ್ದರೂ ಐಹಿಕ ಜೀವನದಲ್ಲಿ ಅವನಿಗೆ ಮನ್ನಣೆ ದೊರಕೀತು. ಆದರೆ ಅವನ ಸಂಪಾದನೆ ಶುದ್ಧವಲ್ಲದಿದ್ದರೆ ಅವನು ದೇವನ ದೃಷ್ಟಿಯಲ್ಲಿ ನಿಕೃಷ್ಟನೂ ಅಧಮನೂ ಆಗಿರುವನು. ಬಹುಷ ಆಮಿರ್‌ನ ಸಂಕಲ್ಪ ಶುದ್ಧಿಯಿಂದಲೇ ಅವನಿಗೆ ಇಂತಹ ಒಂದು ಸೌಭಾಗ್ಯ ದೊರಕಿದೆ. ಅದಲ್ಲದೆ ಇದ್ದರೆ ನಾನು ಹಜ್ಜ್ ಯಾತ್ರೆಗಾಗಿ ಸಂಕಲ್ಪ ಮಾಡಿ ಬಂದಿದ್ದೇನೆ ಮತ್ತು ಇನ್ನು ಹಜ್ಜ್ಗಲ್ಲದೆ ಇಲ್ಲಿಂದ ಮರಳಲಾರೆ ಎಂದು ದೃಢ ನಿರ್ಧಾರ ಮಾಡಲು ಹೇಗೆ ಸಾಧ್ಯ. ಆಮಿರ್ ಇಲ್ಲದೆ ಈ ವರ್ಷದ ಹಜ್ಜ್ ಅಪೂರ್ಣ ಎಂದು ದೇವನು ನಿರ್ಧರಿಸಿದ್ದರೆ ಅದು ನಡೆದೇ ತೀರುವುದು. ದೇವನ ಇಚ್ಛೆಗೆ ವಿರುದ್ಧವಾದ ಯಾವುದು ಕೂಡ ನಡೆಯುವುದಿಲ್ಲ ಎಂಬುದು ವಾಸ್ತವ. ಪರ್ವತದ ತಪ್ಪಲಿನಲ್ಲಿ ಮರದ ಒಂದು ಎಲೆ ಉದುರಿ ಬೀಳುವುದಿದ್ದರೂ ಅದು ದೇವನ ಆಜ್ಞೆಯಂತೆಯೇ ವಿನಃ ನಮ್ಮ ಆಜ್ಞೆಯಂತಲ್ಲ.
    ಆಮಿರ್ ಕೊನೆಯ ಯಾತ್ರಿಕನಾಗಿ ವಿಮಾನದೊಳಕ್ಕೆ ಪ್ರವೇಶಿಸಿದರೂ ಎಲ್ಲಾ ಪ್ರಯಾಣಿಕರ ಮತ್ತು ಸಿಬ್ಬಂಧಿ ವರ್ಗದ ಗಮನ ಸೆಳೆದು ಮೊದಲಿಗನಾದ. ಜೆದ್ದಾ ವಿಮಾನ ನಿಲ್ದಾಣ ತಲುಪುದ್ದಿಂತೆ ಆಮಿರ್‌ನ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತಿದ್ದಂತೆ ಜಗತ್ತಿನಲ್ಲೇ ಹೀರೊ ಆಗಿ ಎಲ್ಲರ ಪ್ರಶಂಸೆಗೆ ಪಾತ್ರನಾದ.
    ಆಮಿರ್‌ನಂತಹ ದೃಢ ಚಿತ್ತದ, ಇಚ್ಛಾ ಶಕ್ತಿಯ, ಸಂಕಲ್ಪ ಶುದ್ಧಿಯ, ಯಾರೊಂದಿಗೂ ವೈಮನಸ್ಸಿಲ್ಲದ, ಅಸೂಯೆ ಅಹಂಕಾರ ಮತ್ತು ಆಡಂಭರತೆಯನ್ನು ಮೈಗೂಡಿಸಿಕೊಳ್ಳದ ಹಜ್ಜಾಜ್‌ಗಳು ಇನ್ನೂ ವರ್ಷಂಪ್ರತಿ ಹೆಚ್ಚಾಗಲಿ ಮತ್ತು ಅಂತಹ ಮುತ್ತು ರತ್ನಗಳು ಬೆಳೆದು ಬರಲಿ ಎಂದು ಹಾರೈಸೋಣ.
    ಅಬ್ದುಸ್ಸಲಾಮ್, ದೇರಳಕಟ್ಟೆ