Tag: anupamanews

  • “ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” 
ರಾಹುಲ್ ಗಾಂಧಿ Press Meet

    “ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” ರಾಹುಲ್ ಗಾಂಧಿ Press Meet

    ‘ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದ್ದು, ಮತಗಳ್ಳರು ಮತ್ತು ಪ್ರಜಾಪ್ರಭುತ್ವ ನಾಶಪಡಿಸುವವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.

    ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಚುನಾವಣಾ ಆಯೋಗವು ಇದನ್ನು ಮೊದಲು ನಿಲ್ಲಿಸಬೇಕು. ಮತದಾರರ ಹೆಸರು ಅಳಿಸಿಹಾಕಿದ್ದರ ಕುರಿತು ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗವು ತಕ್ಷಣ ಒದಗಿಸಬೇಕು’ ಎಂದು ಆಗ್ರಹಿಸಿದರು.

    ‘ದೇಶದಲ್ಲಿ ಹೇಗೆ ಚುನಾವಣಾ ಅಕ್ರಮಗಳು ನಡೆಯುತ್ತವೆ ಎಂಬುದನ್ನು ಅರಿಯಲು ಇಂದಿನ ಯುವ ಸಮುದಾಯಕ್ಕೆ ಇದೊಂದು ಮಹತ್ವದ ಉದಾಹರಣೆಯಾಗಿದೆ. ನಾನು ಈ ಹಿಂದೆ ಭರವಸೆ ನೀಡಿದ ‘ಹೈಡ್ರೊಜೆನ್ ಬಾಂಬ್’ ಇದಲ್ಲ. ಅದು ಅತಿ ಶೀಘ್ರದಲ್ಲಿ ಬರಲಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ‘ಕರ್ನಾಟಕದ ಅಳಂದದಲ್ಲಿ 2023ರ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಅಳಿಸಿಹಾಕುವ ಯತ್ನ ನಡೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ ಸ್ವಯಂಚಾಲಿತ ತಂತ್ರಾಂಶ ಬಳಸಿ ಕುತಂತ್ರದಿಂದ ಮತಗಳನ್ನು ಸೇರಿಸುವ ಪ್ರಯತ್ನ ನಡೆದಿದೆ. ಈ ಎಲ್ಲಾ ಕೃತ್ಯಗಳಿಗೂ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಾನು ಗಂಭೀರ ಆರೋಪ ಮಾಡುತ್ತಿದ್ದೇನೆ. ಇದನ್ನು ಹಗುರವಾಗಿ ಪರಿಗಣಿಸಬೇಡಿ. ಚುನಾವಣಾ ಆಯೋಗವು ಮತಗಳ್ಳರನ್ನು ರಕ್ಷಿಸುತ್ತಿದೆ. ಈ ಕಳ್ಳರೇ ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.

    CID 18 ಬಾರಿ ಕೇಳಿದ ಐಪಿ ವಿಳಾಸ, ಒಟಿಪಿ ಏಕೆ ನೀಡಿಲ್ಲ…?: ರಾಹುಲ್‘

    ಭಾರತದಲ್ಲಿ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಲು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕನಾಗಿರುವ ನಾನು ಶೇ 100ರಷ್ಟು ಪುರಾವೆಗಳಿಲ್ಲದೆ ಏನನ್ನೂ ಹೇಳುವುದಿಲ್ಲ. ಅಳಂದದಲ್ಲಿ 6,018 ಮತಗಳನ್ನು ಅಳಿಸಿಹಾಕಲು ಯಾರೋ ಪ್ರಯತ್ನಿಸಿದ್ದರು. ಆದರೆ ಕಾಕತಾಳೀಯ ಎಂಬಂತೆ ಸಿಕ್ಕಿಬಿದ್ದರು. ತಮ್ಮ ಚಿಕ್ಕಪ್ಪನ ಹೆಸರೇ ಪಟ್ಟಿಯಲ್ಲಿ ಇಲ್ಲದಿರುವುದನ್ನು ಬೂತ್ ಮಟ್ಟದ ಅಧಿಕಾರಿ ಗಮನಿಸಿದ್ದಾರೆ. ಆದರೆ ಇದರ ಹಿಂದೆ ಬೇರೆ ಯಾವುದೋ ‘ಶಕ್ತಿ’ ಇದೆ’ ಎಂದಿದ್ದಾರೆ.

    ‘ಮತದಾರರಂತೆ ನಟಿಸಿ 6,018 ಅರ್ಜಿಗಳನ್ನು ಸಲ್ಲಿಸಲಾಗಿದೆ. ಕರ್ನಾಟಕಕ್ಕೆ ಸೇರದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಈ ಅರ್ಜಿಗಳು ಸ್ವಯಂಚಾಲಿತ ತಂತ್ರಾಂಶದ ಮೂಲಕ ದಾಖಲಿಸಿಕೊಳ್ಳಲಾಗಿದೆ’ ಎಂದ ರಾಹುಲ್ ಗಾಂಧಿ, ಮತಪಟ್ಟಿಯಿಂದ ಹೆಸರು ಕೈಬಿಟ್ಟವರನ್ನು ವೇದಿಕೆಗೆ ಕರೆದರು.

    ‘ಕಳೆದ 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಸಿಐಡಿಯು 18 ಪತ್ರಗಳನ್ನು ಕಳುಹಿಸಿದೆ. ಯಾವ ಪ್ರದೇಶದಿಂದ ಈ ಮತದಾರರ ಹೆಸರು ನೋಂದಣಿಯಾಗಿದೆ ಎಂಬುದಕ್ಕೆ ಪೂರಕವಾದ ಐಪಿ ವಿಳಾಸ ಹಾಗೂ ಅದಕ್ಕೆ ಬಳಸಿದ ಒಟಿಪಿ ಮಾಹಿತಿ ನೀಡುವಂತೆ ಸಿಐಡಿ ಆಯೋಗವನ್ನು ಕೇಳಿದೆ. ಆದರೆ ಆಯೋಗವು ಅದನ್ನು ಏಕೆ ನೀಡುತ್ತಿಲ್ಲ. ಏಕೆಂದರೆ ಒಂದೊಮ್ಮೆ ಆಯೋಗ ಅದನ್ನು ನೀಡಿದರೆ, ಈ ಕೃತ್ಯದ ಹಿಂದಿರುವ ವ್ಯಕ್ತಿಯ ಮನೆಬಾಗಿಲಿಗೆ ಪೊಲೀಸರನ್ನು ಕರೆದೊಯ್ದು ನಿಲ್ಲಿಸುತ್ತದೆ ಎಂಬುದು ಅವರಿಗೂ ಗೊತ್ತು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ‘ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಅಳಿಸುವುದು ಹಾಗೂ ಸೇರಿಸುವುದನ್ನು ಯಾರು ಮಾಡುತ್ತಿದ್ದಾರೆ ಎಂದು ಆಯೋಗಕ್ಕೆ ಗೊತ್ತಿದೆ. ಭಾರತದ ಪ್ರತಿಯೊಬ್ಬ ಯುವಕರೂ ಇದನ್ನು ತಿಳಿಯಬೇಕು ಎಂದು ನಾನು ಬಯಸುತ್ತೇನೆ. ಕೇಳಿದ ಮಾಹಿತಿಯನ್ನು ಅವರು ನೀಡುತ್ತಿಲ್ಲವೆಂದರೆ ಅವರು ಪ್ರಜಾಪ್ರಭುತ್ವದ ಕೊಲೆಗಾರರನ್ನು ರಕ್ಷಿಸುತ್ತಿದ್ದಾರೆ ಎಂದೇ ಅರ್ಥ’ ಎಂದು ಆರೋಪಿಸಿದ್ದಾರೆ.

  • “ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” 
ರಾಹುಲ್ ಗಾಂಧಿ Press Meet

    “ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” ರಾಹುಲ್ ಗಾಂಧಿ Press Meet

    ‘ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದ್ದು, ಮತಗಳ್ಳರು ಮತ್ತು ಪ್ರಜಾಪ್ರಭುತ್ವ ನಾಶಪಡಿಸುವವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.

    ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಚುನಾವಣಾ ಆಯೋಗವು ಇದನ್ನು ಮೊದಲು ನಿಲ್ಲಿಸಬೇಕು. ಮತದಾರರ ಹೆಸರು ಅಳಿಸಿಹಾಕಿದ್ದರ ಕುರಿತು ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗವು ತಕ್ಷಣ ಒದಗಿಸಬೇಕು’ ಎಂದು ಆಗ್ರಹಿಸಿದರು.

    ‘ದೇಶದಲ್ಲಿ ಹೇಗೆ ಚುನಾವಣಾ ಅಕ್ರಮಗಳು ನಡೆಯುತ್ತವೆ ಎಂಬುದನ್ನು ಅರಿಯಲು ಇಂದಿನ ಯುವ ಸಮುದಾಯಕ್ಕೆ ಇದೊಂದು ಮಹತ್ವದ ಉದಾಹರಣೆಯಾಗಿದೆ. ನಾನು ಈ ಹಿಂದೆ ಭರವಸೆ ನೀಡಿದ ‘ಹೈಡ್ರೊಜೆನ್ ಬಾಂಬ್’ ಇದಲ್ಲ. ಅದು ಅತಿ ಶೀಘ್ರದಲ್ಲಿ ಬರಲಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ‘ಕರ್ನಾಟಕದ ಅಳಂದದಲ್ಲಿ 2023ರ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಅಳಿಸಿಹಾಕುವ ಯತ್ನ ನಡೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ ಸ್ವಯಂಚಾಲಿತ ತಂತ್ರಾಂಶ ಬಳಸಿ ಕುತಂತ್ರದಿಂದ ಮತಗಳನ್ನು ಸೇರಿಸುವ ಪ್ರಯತ್ನ ನಡೆದಿದೆ. ಈ ಎಲ್ಲಾ ಕೃತ್ಯಗಳಿಗೂ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಾನು ಗಂಭೀರ ಆರೋಪ ಮಾಡುತ್ತಿದ್ದೇನೆ. ಇದನ್ನು ಹಗುರವಾಗಿ ಪರಿಗಣಿಸಬೇಡಿ. ಚುನಾವಣಾ ಆಯೋಗವು ಮತಗಳ್ಳರನ್ನು ರಕ್ಷಿಸುತ್ತಿದೆ. ಈ ಕಳ್ಳರೇ ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.

    ಸಿಐಡಿ 18 ಬಾರಿ ಕೇಳಿದ ಐಪಿ ವಿಳಾಸ, ಒಟಿಪಿ ಏಕೆ ನೀಡಿಲ್ಲ…?: ರಾಹುಲ್‘

    ಭಾರತದಲ್ಲಿ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಲು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕನಾಗಿರುವ ನಾನು ಶೇ 100ರಷ್ಟು ಪುರಾವೆಗಳಿಲ್ಲದೆ ಏನನ್ನೂ ಹೇಳುವುದಿಲ್ಲ. ಅಳಂದದಲ್ಲಿ 6,018 ಮತಗಳನ್ನು ಅಳಿಸಿಹಾಕಲು ಯಾರೋ ಪ್ರಯತ್ನಿಸಿದ್ದರು. ಆದರೆ ಕಾಕತಾಳೀಯ ಎಂಬಂತೆ ಸಿಕ್ಕಿಬಿದ್ದರು. ತಮ್ಮ ಚಿಕ್ಕಪ್ಪನ ಹೆಸರೇ ಪಟ್ಟಿಯಲ್ಲಿ ಇಲ್ಲದಿರುವುದನ್ನು ಬೂತ್ ಮಟ್ಟದ ಅಧಿಕಾರಿ ಗಮನಿಸಿದ್ದಾರೆ. ಆದರೆ ಇದರ ಹಿಂದೆ ಬೇರೆ ಯಾವುದೋ ‘ಶಕ್ತಿ’ ಇದೆ’ ಎಂದಿದ್ದಾರೆ.

    ‘ಮತದಾರರಂತೆ ನಟಿಸಿ 6,018 ಅರ್ಜಿಗಳನ್ನು ಸಲ್ಲಿಸಲಾಗಿದೆ. ಕರ್ನಾಟಕಕ್ಕೆ ಸೇರದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಈ ಅರ್ಜಿಗಳು ಸ್ವಯಂಚಾಲಿತ ತಂತ್ರಾಂಶದ ಮೂಲಕ ದಾಖಲಿಸಿಕೊಳ್ಳಲಾಗಿದೆ’ ಎಂದ ರಾಹುಲ್ ಗಾಂಧಿ, ಮತಪಟ್ಟಿಯಿಂದ ಹೆಸರು ಕೈಬಿಟ್ಟವರನ್ನು ವೇದಿಕೆಗೆ ಕರೆದರು.

    ‘ಕಳೆದ 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಸಿಐಡಿಯು 18 ಪತ್ರಗಳನ್ನು ಕಳುಹಿಸಿದೆ. ಯಾವ ಪ್ರದೇಶದಿಂದ ಈ ಮತದಾರರ ಹೆಸರು ನೋಂದಣಿಯಾಗಿದೆ ಎಂಬುದಕ್ಕೆ ಪೂರಕವಾದ ಐಪಿ ವಿಳಾಸ ಹಾಗೂ ಅದಕ್ಕೆ ಬಳಸಿದ ಒಟಿಪಿ ಮಾಹಿತಿ ನೀಡುವಂತೆ ಸಿಐಡಿ ಆಯೋಗವನ್ನು ಕೇಳಿದೆ. ಆದರೆ ಆಯೋಗವು ಅದನ್ನು ಏಕೆ ನೀಡುತ್ತಿಲ್ಲ. ಏಕೆಂದರೆ ಒಂದೊಮ್ಮೆ ಆಯೋಗ ಅದನ್ನು ನೀಡಿದರೆ, ಈ ಕೃತ್ಯದ ಹಿಂದಿರುವ ವ್ಯಕ್ತಿಯ ಮನೆಬಾಗಿಲಿಗೆ ಪೊಲೀಸರನ್ನು ಕರೆದೊಯ್ದು ನಿಲ್ಲಿಸುತ್ತದೆ ಎಂಬುದು ಅವರಿಗೂ ಗೊತ್ತು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ‘ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಅಳಿಸುವುದು ಹಾಗೂ ಸೇರಿಸುವುದನ್ನು ಯಾರು ಮಾಡುತ್ತಿದ್ದಾರೆ ಎಂದು ಆಯೋಗಕ್ಕೆ ಗೊತ್ತಿದೆ. ಭಾರತದ ಪ್ರತಿಯೊಬ್ಬ ಯುವಕರೂ ಇದನ್ನು ತಿಳಿಯಬೇಕು ಎಂದು ನಾನು ಬಯಸುತ್ತೇನೆ. ಕೇಳಿದ ಮಾಹಿತಿಯನ್ನು ಅವರು ನೀಡುತ್ತಿಲ್ಲವೆಂದರೆ ಅವರು ಪ್ರಜಾಪ್ರಭುತ್ವದ ಕೊಲೆಗಾರರನ್ನು ರಕ್ಷಿಸುತ್ತಿದ್ದಾರೆ ಎಂದೇ ಅರ್ಥ’ ಎಂದು ಆರೋಪಿಸಿದ್ದಾರೆ.

  • ಗಾಝದ ಕರಾಳ ಬದುಕಿನಿಂದ ಹಿಡಿದು ಪ್ರವಾದಿ ಮುಹಮ್ಮದ್(ಸ) ಜೀವನ ಸಂದೇಶವರೆಗೆ…

    ಗಾಝದ ಕರಾಳ ಬದುಕಿನಿಂದ ಹಿಡಿದು ಪ್ರವಾದಿ ಮುಹಮ್ಮದ್(ಸ) ಜೀವನ ಸಂದೇಶವರೆಗೆ…

    ಇಂದು ನಮ್ಮನ್ನು ಹೆಚ್ಚು ದುಃಖಿತರನ್ನಾಗಿಸುವ ಸುದ್ಧಿಯೆಂದರೆ ಗಾಝಾ(ಫೆಲೆಸ್ತೀನ್) ಜನರ ಬದುಕಿನ ಕರಾಳ ದೃಶ್ಯ. ಶೈತಾನ್ ನೇತ್ಯಾನಾಹುವಿನ ರಕ್ತದಾಹ ಮಿತಿಮೀರುತ್ತಿದೆ. ಒಂದು ಸಮುದಾಯದ ವಂಶವನ್ನೇ ಭೂಮಿಯಿಂದ ಇಲ್ಲವಾಗಿಸುವ ಅವನ ಪ್ರಯತ್ನಕ್ಕೆ ವಿಶ್ವದಲ್ಲಿ ವಿರೋಧದ ಧ್ವನಿಯೂ ಹೆಚ್ಚುತ್ತಿದೆ. ಇಸ್ರೇಲಿನ ಯಹೂದಿಯರೇ ಯುದ್ಧ ನಿಲ್ಲಿಸಲು ಪ್ರತಿಭಟನೆಗೆ ಇಳಿದಿದ್ದಾರೆ. ಆದ್ರೆ… ಈ ರಾಕ್ಷಸ ಮತ್ತು ಆತನ ಝಿಯೋನಿಸ್ಟ್ ಸಮೂಹಕ್ಕೆ ಗಾಝವನ್ನು ಸ್ಮಶಾನ ಮಾಡುವ ಹುಚ್ಚು ಆವೇಶ ಮೈ ಮೇಲೆ ಉಕ್ಕಿದೆ. ಹಸಿವಿನಿಂದ ಬಳಲುತ್ತಿರುವ ಮಕ್ಕಳು, ಹಿರಿಯರು ಅಲ್ಲಿ ಸಾಯುತ್ತಿದ್ದಾರೆ. ನಮ್ಮ ಪ್ರತೀ ಪ್ರಾರ್ಥನೆಯಲ್ಲೂ ಅವರಿಗಾಗಿ ಪ್ರಾರ್ಥಿಸುತ್ತೇವೆ.

    ಮನುಷ್ಯತ್ವವೇ ಸತ್ತಿದೆ ಇಂದು. ಹಣ, ಅಧಿಕಾರವೇ ಗೆಲ್ಲುತ್ತಿದೆ. ನ್ಯಾಯ, ನೀತಿ ಸೋಲುತ್ತಿದೆ. ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ, ಕಣ್ಮರೆಯ ವಿಷಯ ಎದೆಯನ್ನು ನಡುಗಿಸುವುದಿಲ್ಲ! ಪ್ರತಿಷ್ಠೆಯ ವ್ಯಕ್ತಿ ತನ್ನ ಹಣ ಬಲದಿಂದ ನಿರಪರಾಧಿ’ ಅನಿಸಿಕೊಳ್ಳುತ್ತಿದ್ದಾನೆ. ನ್ಯಾಯಧೀಶರು, ಪೊಲೀಸರು, ನ್ಯಾಯಾಲಯ, ಸುದ್ಧಿ ಮಾಧ್ಯಮಗಳು ಇಂದು ಹಣಕ್ಕೆ ತಲೆಬಾಗುತ್ತಿದೆ. ಮಾರಾಟಕ್ಕೆ ತಮ್ಮ ಆತ್ಮಸಾಕ್ಷಿಯನ್ನೂ ಅಡವಿಡುತ್ತಿದಾರೆ. ಪ್ರಾಮಾಣಿಕವಾಗಿ ನ್ಯಾಯದ ಪರ ಕೆಲಸ ಮಾಡಲು ಬಂದ ಸಜ್ಜನರನ್ನೂ ಈ ಅಧಿಕಾರದ ಭ್ರಷ್ಟಾಚಾರಿಗಳು ಬೆದರಿಸುತ್ತದೆ. ಅಭಿಸಾರ್ ಶರ್ಮಾ, ರವೀಶ್‌ರಂತಹ ಯೂಟ್ಯೂಬ್ ಪತ್ರಕರ್ತರಿಗೂ ಹಣದ ಆಮಿಷ ಹಾಗೂ ಬೆದರಿಕೆಯನ್ನು ನೀಡಲಾಗಿತ್ತು. ಆದ್ರೆ… ಪತ್ರಿಕಾಧರ್ಮ ಪಾಲಕರಾದ ಪ್ರಾಮಾಣಿಕತೆಯ ಈ ಸುದ್ಧಿ ನಿರ್ವಾಹಕರು ಬೆದರಿಕೆ, ಆಮಿಶಕ್ಕೆ ತಲೆಬಾಗಲಿಲ್ಲ. ಸುಳ್ಳು ಇಂದು ವಿಜಯಿಯಾಗಿತ್ತಿದೆ.

    ಈ ನಡುವೆ ರಾಹುಲ್‌ಗಾಂಧಿ ಎಂಬ ನಾಯಕನೂ ಚಕ್ರವ್ಯೂಹದ ಒಳಗೆ ನುಗ್ಗಿದ ಅಭಿಮನ್ಯುವಿನಂತೇ ಒಂಟಿಯಾಗಿ ತನ್ನ ವಿರೋಧಿಗಳೊಂದಿಗೆ ಕಾದಾಡುತ್ತಿದ್ದಾರೆ. ಚುನಾವಣಾ ಆಯೋಗವೂ ಇಂದು ಕುತಂತ್ರದಲ್ಲಿ ಭಾಗಿಯಾಗಿದೆ ಎಂಬ ಧ್ವನಿ ಎದ್ದಿದೆ. ಎಲ್ಲದರಲ್ಲೂ ಭ್ರಷ್ಟಾಚಾರವೇ ತುಂಬಿದೆ. ಆದರಿಂದಲೇ ಈ ದೇಶ ಉದ್ಧಾರ ಆಗಲಾರದು.

    ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಅತ್ಯಾಚಾರಿ, ಕೊಲೆಗಾರರು ಜೈಲಿನಲ್ಲಿಯೂ ಮಸ್ತ್ ಮಜಾದಲ್ಲಿದ್ದಾರೆ. ಬುದ್ಧಿ ಮಾಂದ್ಯ, ಮಾತು ಬಾರದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ಎಲ್ಲಾಡ್ರಗ್ಸ್’ನ ಮಹಿಮೆ. ಅಪರಾಧಿಗಳು ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಕೊಲೆ ಮಾಡಿ ಮೆರೆದಾಡುವಂತಹ ಸ್ವಾತಂತ್ಯ್ರ ಈ ದೇಶದಲ್ಲಿದೆ. ರಾಜಕೀಯ ಪಕ್ಷದ ನಾಯಕರು ಪರಸ್ಪರ ಕಚ್ಚಾಡುವುದರಲ್ಲೇ ಕಾಲ ಕಳೆಯುತ್ತಾರೆ. ಜನರ ಸಮಸ್ಯೆ, ಪರಿಹಾರ, ಕಷ್ಟ ಈ ರಾಜಕಾರಿಣಿಗಳ ಮೆದುಳಿಗೇ ಹೋಗುವುದಿಲ್ಲ. ಜನರಿಗಾಗಿ ಈ ನಾಯಕರು ಇರುವುದಲ್ಲ, ಅವರ ಅಂತಸ್ತು, ಸ್ಥಾನ ಗಟ್ಟಿ ಮಾಡಲೆಂದೇ ಧರ್ಮ ವಿರೋಧಿ ಹೇಳಿಕೆ ಕೊಡುತ್ತಾರೆ.

    ಇಂದು ಧರ್ಮದ್ವೇಷದ ಹೇಳೀಕೆಯಲ್ಲಿ ಬಿಜೆಪಿಯ ಶಾಸಕ ಯತ್ನಾಳ್ ಸ್ವಲ್ಪ ಹೆಚ್ಚೇ ಮುಂದೆ ಹೋಗಿದ್ದಾರೆ. ಮುಸ್ಲಿಮ್ ಮಹಿಳೆಯರನ್ನು ಹಿಂದೂ ಪುರುಷರು ಮದ್ವೆ ಆಗಬೇಕೆಂದು ಹೇಳಿಕೆ ನೀಡಿದ್ದಾರೆ. ಯಾರನ್ನು ಯಾರು ಬೇಕಾದರೂ ಮದ್ವೆ ಆಗುವ ಹಕ್ಕು ಈ ದೇಶದ ಸಂವಿಧಾನವೇ ನೀಡಿದೆ. ಮೊದಲು ಈ ಯತ್ನಾಳ್‌ರವರು ದಲಿತ ಹೆಣ್ಣು ಮಕ್ಕಳನ್ನು ತಮ್ಮ ಸೊಸೆ ಆಗಿ ಮನೆ ತುಂಬಿಕೊಳ್ಳಲಿ. ಮುಸ್ಲಿಮ್ ಹುಡುಗಿಯರಿಗೆ ತಮ್ಮ ಸಮುದಾಯದಲ್ಲಿ ವರ’ಗಳ ಕೊರತೆ ಇಲ್ಲ. ಇಸ್ಲಾಮಿನಲ್ಲಿ ವರದಕ್ಷಿಣೆ ಇಲ್ಲ, ಅಸ್ಪೃಶ್ಯತೆನೂ ಇಲ್ಲ.

    ಈ ತಿಂಗಳಲ್ಲಿ ಶಿಕ್ಷಕರ ದಿನಾಚಣೆಯೂ ಬರುತ್ತಿದೆ. ಒಡಿಶಾದ ವಿದ್ಯಾರ್ಥಿನಿಯೋವಳಿಗೆ ಶಿಕ್ಷಕರೋರ್ವರು ನೀಡಿದ ಲೈಂಗಿಕ ಹಿಂಸೆಯ ವಿರುದ್ಧ ದೂರ ನೀಡಿದ್ದರೂ ಆಕೆಗೆ ನ್ಯಾಯ ಸಿಗದೇ ಆಕೆಯ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಕಿದಾಗ ಅವಳು ಆತ್ಮಹತ್ಯೆ ಮಾಡುತ್ತಾಳೆ. ಅವಳು ಬಿಜೆಪಿಯ ಎಲ್ಲಾ ಸಂಸದ, ಮುಖ್ಯಮಂತ್ರಿಯವರೆಗೂ ನ್ಯಾಯ’ ಬೇಡಿದ್ದಳು. ಆದ್ರೆ… ಆಕೆಯ ಮೊರೆ ಯಾರಿಗೂ ಕೇಳಿಸಲಿಲ್ಲ. ನಮ್ಮ ದ. ಕರಾವಳಿಯ ಕಾಲೇಜೊಂದರಲ್ಲಿ ಇಬ್ಬರು ಕಾಲೇಜ್ ಶಿಕ್ಷಕರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದರು. ಶಿಕ್ಷಕರು ಮಕ್ಕಳ ಭವಿಷ್ಯ ನಿರ್ಮಿಸುವ ಶಿಲ್ಪಿಗಳು ಎಂಬ ಗೌರವ, ಇಂದು ಉಳಿದಿದೆಯೇ?! ಗುರುವೇ ಶಿಷ್ಯರ ಪಾಲಿಗೆ `ಅಪಾಯಕಾರಿ’ ಆಗುತ್ತಿದ್ದಾರೆ. ಕೋಮುದ್ವೇಷವನ್ನು ಹೆಚ್ಚು ಪ್ರಚಾರ ಮಾಡುವಲ್ಲಿಯೂ ಶಿಕ್ಷಕರ ಪಾಲು ಇದೆ. ಅಮಾಯಕ ಮಕ್ಕಳ ಮನಸ್ಸಿಗೆ ಧರ್ಮದ್ವೇಷಿ ಪಾಠ ಮಾಡುವವರ ವರ್ಗ ಹೆಚ್ಚುತ್ತಿದೆ. ಸೌಹಾರ್ದತೆ ಮತ್ತು ಮಾನವೀಯತೆಯನ್ನು ಬೋಧಿಸಬೇಕಾದ ಶಿಕ್ಷಕರು ಇಂದು ಆರ್‌ಎಸ್‌ಎಸ್‌ನ ಮುಖವಾಣಿಯಂತೇ ವರ್ತಿಸುತ್ತಿದ್ದಾರೆ. ಇಂತಹವರಿಂದ ಉತ್ತಮ ಸಮಾಜ ನಿರ್ಮಾಣ ಹೇಗೆ ಸಾಧ್ಯ?

    ಶಿಸ್ತು, ಗೌರವ, ಸೇವೆ, ಮಾನವೀಯತೆಗೆ ಮಾದರೀಯಾಗಿ ನಾನು ಸದಾ ಕ್ರೈಸ್ತರನ್ನು ಅಭಿನಂದಿಸುತ್ತೇನೆ. ಕಾನ್ವೆಂಟ್ ಶಾಲೆಯಲ್ಲಿ ನಾನಂದು ಕಲಿತ ಪಾಠವನ್ನು ಜೀವನದಲ್ಲಿ ಇಂದೂ ಪಾಲಿಸುತ್ತಿದ್ದೇನೆ.

    ಇದು ಮಿಲಾದುನ್ನಬೀ ಪವಿತ್ರ ದಿನದ ತಿಂಗಳು. ನಾವು ಪ್ರವಾದಿಯವರನ್ನು(ಸ) ನಿಜವಾಗಿಯೂ ಪ್ರೀತಿಸುವುದಾದರೆ, ಗೌರವಿಸುವುದಾದರೆ ಅವರ ಜೀವನದ ಆದರ್ಶಗಳನ್ನು ಪಾಲಿಸುವಂತಾಗಬೇಕು. ಇತರ ಧರ್ಮೀಯರನ್ನು ಪ್ರೀತಿಸುವ, ಗೌರವಿಸುವ ವರ್ಗವಾಗಬೇಕು. ಅಶ್ಲೀಲ ಮಾತು, ಪದಗಳು ಉದುರಬಾರದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರಾಗಬೇಕು, ವ್ಯಭಿಚಾರ, ಮೋಸ, ಸುಳ್ಳಿನಿಂದ ಮುಕ್ತವಾಗಿರಬೇಕು.

    ಪ್ರವಾದಿಯವರು(ಸ) ಹೇಳಿದರು, “ವಿಧವೆಯ ಮುಂದೆ ನಿಮ್ಮ ಪತ್ನಿಯೊಂದಿಗೆ ಸರಸವಾಡಬೇಡಿ, ಅನಾಥ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು ಮುದ್ದಿಸ ಬೇಡಿರಿ, ಪರನಿಂದೆಯಿಂದ ದೂರವಿರಿ,” ಇಂತಹ ಮಾಣಿಕ್ಯದಂತಹ ಬೋಧನೆಯನ್ನು ಜನರು ಪಾಲಿಸಿದರೆ ಖಂಡಿತಾ ಒಳ್ಳೆಯವರಾಗಿ ಬದುಕಲು ಸಾಧ್ಯ. ಫೇಸ್‌ಬುಕ್, ವಾಟ್ಸ್ಅಪ್‌ಗಳಲ್ಲಿ ಅಶ್ಲೀಲ ಪದ, ಬೈದು ಕಮೆಂಟ್ ಹಾಕುವ ಯುವಕರಿಗೆ ಪ್ರವಾದಿವರ್ಯರ(ಸ) ಹೆಸರು ಹೇಳುವ ಯೋಗ್ಯತೆ ಕೂಡಾ ಇಲ್ಲ. ಸಮುದಾಯಕ್ಕೆ ಕಳಂಕ ತರುವ ವರ್ತನೆಗಳು ಸಲ್ಲದು. “ಯಾರದೇ ಧರ್ಮ, ಆಚರಣೆಯನ್ನು ಅಪಹಾಸ್ಯ ಮಾಡದಿರಿ” ಎಂದು ಪ್ರವಾದಿವರ್ಯರು(ಸ) ಹೇಳಿರುವುದನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕು.

  • ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? 
ಇಲ್ಲಿದೆ ಪರಿಹಾರ ಸೂತ್ರಗಳು

    ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? ಇಲ್ಲಿದೆ ಪರಿಹಾರ ಸೂತ್ರಗಳು

    ಮಾವಿನ ತೋಪಿನಲ್ಲಿ ಮಕ್ಕಳು ಓಡಾಡುತ್ತಾ ಆಟವಾಡುತ್ತಿದ್ದ ಹಳೆಯ ದಿನಗಳು ಕೇವಲ ನೆನಪು. ಆ ಉತ್ಸಾಹದ ಬದಲಿಗೆ, ಇಂದು ಮನೆಗಳ ನಾಲ್ಕು ಗೋಡೆಗಳ ಒಳಗೆ ಬಂಧಿಯಾಗಿರುವ ಹೊಸ ಪೀಳಿಗೆಯೊಂದು, ರೀಲ್‌ಗಳು ಮತ್ತು ಶಾರ್ಟ್ಗಳ ಅಂತ್ಯವಿಲ್ಲದ ಹರಿವನ್ನು ನೋಡುವುದನ್ನು ನಾವು ನೋಡುತ್ತಿದ್ದೇವೆ.

    ಪ್ರತಿಯೊಂದು ಯುಗದಲ್ಲೂ, ವಿಭಿನ್ನ ವ್ಯಸನಗಳು ಮನುಷ್ಯನನ್ನು ವಶಪಡಿಸಿಕೊಳ್ಳಲು ಬಂದಿವೆ. ಅಫೀಮು ಮತ್ತು ಮದ್ಯದಿಂದ ಕೂಡಿದ ವ್ಯಸನ ಅನೇಕ ಜೀವಗಳನ್ನು ನಾಶಮಾಡಿವೆ. ಇಂದು, ಡಿಜಿಟಲ್ ಹೆರಾಯಿನ್ ಎಂಬ ಸುಂದರ ಹೆಸರಿನ ಮೊಬೈಲ್ ಫೋನ್‌ಗಳು ಅವುಗಳ ಸ್ಥಾನವನ್ನು ಪಡೆದುಕೊಂಡಿವೆ.

    ಮೆದುಳನ್ನು ಹೆಪ್ಪುಗಟ್ಟಿಸುವ ಮಾಂತ್ರಿಕ ದೃಶ್ಯಗಳನ್ನು ಗಂಟೆಗಟ್ಟಲೆ ರೀಲ್‌ಗಳು ಮತ್ತು ಶಾರ್ಟ್ಗಳ ಮೂಲಕ ವೀಕ್ಷಿಸುತ್ತಿರುವ ಮಗುವಿನ ಮೆದುಳಿನಲ್ಲಿ ಏನಾಗುತ್ತದೆ ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೇ? ಪ್ರತಿ ಸೆಕೆಂಡಿಗೆ ಬದಲಾಗುವ ದೃಶ್ಯಗಳಿಗೆ ಅನುಗುಣವಾಗಿ ಅವರ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಮಟ್ಟವು ವೇಗವಾಗಿ ಏರುತ್ತದೆ ಮತ್ತು ಇಳಿಯುತ್ತದೆ. ಅದು ಒದಗಿಸುವ ತಾತ್ಕಾಲಿಕ ಆನಂದವನ್ನು ಮತ್ತೆ ಮತ್ತೆ ಪಡೆಯಲು ಅವರ ಮನಸ್ಸುಗಳು ಹಂಬಲಿಸುತ್ತವೆ. ಪುಸ್ತಕ ಓದುವ ಶಾಂತ ಆನಂದವನ್ನು ಅಥವಾ ನಂತರ ಸ್ನೇಹಿತರೊಂದಿಗೆ ಆಟವಾಡುವಾಗ ಸಿಗುವ ಸಾಮಾಜಿಕ ಮೋಜನ್ನು ಅವರು ಅನುಭವಿಸಲು ಸಾಧ್ಯವಾಗುವುದಿಲ್ಲ. ಏಕಾಗ್ರತೆ ಕಳೆದುಹೋಗುತ್ತದೆ, ಸ್ಮರಣಶಕ್ತಿ ಕಡಿಮೆಯಾಗುತ್ತದೆ ಮತ್ತು ಆಲೋಚನಾ ಸಾಮರ್ಥ್ಯವು ಪಾರ್ಶ್ವವಾಯುವಿಗೆ ಒಳಗಾಗುತ್ತದೆ.

    ಅಜ್ಜ-ಅಜ್ಜಿ ಹೇಳುವ ಕಥೆಗಳು ಮತ್ತು ಬಾಲ್ಯದಲ್ಲಿ ಪೋಷಕರು ತೋರಿಸುವ ಪ್ರಕೃತಿಯ ಅದ್ಭುತಗಳ ಮೂಲಕ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತಿತ್ತು. ಆದರೆ, ಇಂದು, ಕಾರ್ಟೂನ್ ಮತ್ತು ಗೇಮ್‌ಗಳ ಕೃತಕ ಜಗತ್ತಿನಲ್ಲಿ ಅಲೆದಾಡುವ ಮಕ್ಕಳು ತಮ್ಮ ವಿಶಿಷ್ಟ ಕಲ್ಪನೆಗಳನ್ನು ಕಳೆದುಕೊಳ್ಳುತ್ತಾರೆ. ಅವರು ತಾವು ನೋಡುವ ಪಾತ್ರಗಳಂತೆ ಮಾತನಾಡಲು ಮತ್ತು ವರ್ತಿಸಲು ಪ್ರಾರಂಭಿಸುತ್ತಾರೆ. ವಾಸ್ತವ ಮತ್ತು ಭ್ರಮೆಯನ್ನು ಪ್ರತ್ಯೇಕಿಸಲು ಸಾಧ್ಯವಾಗದ ಒಂದು ರೀತಿಯ ಕನಸಿನ ಸ್ಥಿತಿಗೆ ಅವರು ಜಾರುತ್ತಾರೆ.

    ಆರೋಗ್ಯ ಸಮಸ್ಯೆಗಳು
    ಮಾನಸಿಕ ಪರಿಣಾಮಗಳ ಜೊತೆಗೆ, ದೈಹಿಕ ಸವಾಲುಗಳು ಸಹ ಸಣ್ಣದಲ್ಲ. ಫೋನ್ ನೋಡುತ್ತಾ ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳುವುದು ಮಕ್ಕಳ ಕಣ್ಣುಗಳ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. `ಕಂಪ್ಯೂಟರ್ ವಿಷನ್ ಸಿಂಡ್ರೋಮ್’ ಎಂದು ಕರೆಯಲ್ಪಡುವ ರೋಗ ಇಂದಿನ ಮಕ್ಕಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ಕುತ್ತಿಗೆ ನೋವು, ಬೆನ್ನು ನೋವು ಮತ್ತು ಬೊಜ್ಜು ಕೂಡ ಉಳಿದ ಲಕ್ಷಣಗಳಾಗಿವೆ. ಓಡುತ್ತಾ ಆಟವಾಡಬೇಕಾದ ವಯಸ್ಸಿನಲ್ಲಿ, ಆಟದ ಮೈದಾನಗಳಿಂದ ವಂಚಿತರಾದ ಮಕ್ಕಳು ರೋಗಗಳ ಕತ್ತಲಕೋಣೆಯಲ್ಲಿ ಬಂಧಿ ಯಾಗುತ್ತಿದ್ದಾರೆ.

    ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಇದು ಮಕ್ಕಳಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತದೆ. ಸರಿಯಾದ ನಿದ್ರೆ ಸಿಗದ ಮಗು ಅಧ್ಯಯನದತ್ತ ಗಮನಹರಿಸಲು ಮತ್ತು ಆರೋಗ್ಯವಾಗಿರಲು ಹೇಗೆ ಸಾಧ್ಯವಾಗುತ್ತದೆ?

    ನೈತಿಕತೆಯ ಕುಸಿತ
    ಇಂಟರ್‌ನೆಟ್‌ನ ವಿಶಾಲ ಜಗತ್ತು ಮಕ್ಕಳಿಗೆ ತೆರೆದುಕೊಂಡಾಗ, ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಅವರು ವಯಸ್ಸಿಗೆ ಸೂಕ್ತವಲ್ಲದ ವಿಷಯ ಮತ್ತು ಅಪಾಯಕಾರಿ ಆನ್‌ಲೈನ್ ಬಲೆಗಳಿಗೆ ಸುಲಭವಾಗಿ ಆಕರ್ಷಿತರಾಗಬಹುದು. ಹಿಂಸೆ ಮತ್ತು ಅಶ್ಲೀಲತೆಯಿಂದ ತುಂಬಿರುವ ಆಟಗಳು ಮತ್ತು ವೀಡಿಯೊಗಳು ಅವರ ಯುವ ಮನಸ್ಸನ್ನು ವಿಷಪೂರಿತಗೊಳಿಸುತ್ತವೆ. ಅವರು ಸಹಾನುಭೂತಿ, ಪ್ರೀತಿ ಮತ್ತು ಕರುಣೆಯನ್ನು ಕಲಿಯಬೇಕಾದ ವಯಸ್ಸಿನಲ್ಲಿ, ಕೃತಕ ಪ್ರಪಂಚದ ಕ್ರೌರ್ಯವನ್ನು ಕಂಡು ಸಂವೇದನಾ ಶೀಲತೆಯನ್ನು ಕಳೆದುಕೊಳ್ಳುತ್ತಾರೆ.

    ತಮ್ಮ ಮಕ್ಕಳಿಗೆ ಫೋನ್‌ಗಳನ್ನು ನೀಡುವ ಮೂಲಕ ತಮ್ಮ ಕೆಲಸವನ್ನು ಸುಲಭಗೊಳಿಸುವ ಪೋಷಕರು, ನೆನಪಿಡಿ, ನೀವು ಮಾಡುತ್ತಿರುವ ಕೆಲಸಗಳ ದೂರಗಾಮಿ ಪರಿಣಾಮಗಳನ್ನು ನಿಮ್ಮಿಂದ ಅರಗಿಸಿಕೊಳ್ಳಲು ಸಾಧ್ಯವಾಗದಿರಬಹುದು.

    ನಾವು ಏನು ಮಾಡಬಹುದು?
    ನಮ್ಮ ಕಣ್ಣ ಮುಂದೆ ಒಂದು ಪೀಳಿಗೆ ದಾರಿ ತಪ್ಪುತ್ತಿರುವಾಗ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಅದಕ್ಕೆ ಖಂಡಿತಾ ಪರಿಹಾರಬೇಕು.

    ಮಾದರಿಯಾಗಿ:
    ಮಕ್ಕಳಿಗೆ ಫೋನ್ ಬಳಸಬೇಡಿ ಎಂದು ಹೇಳುವ ಮೊದಲು, ನಾವೇ ಅದರ ಬಳಕೆಯನ್ನು ನಿಯಂತ್ರಿಸಬೇಕು. ಕುಟುಂಬದೊAದಿಗೆ ಕಳೆಯುವ ಸಮಯದಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ದೂರವಿಡಿ.

    ಸಮಯ ಮಿತಿಯನ್ನು ನಿಗದಿಪಡಿಸಿ:
    ಮಕ್ಕಳ Screen ನೋಡುವ ಸಮಯಕ್ಕೆ ಸ್ಪಷ್ಟ ಮಿತಿಯನ್ನು ನಿಗದಿಪಡಿಸಿ. ಆ ಸಮಯದ ಕಳೆದ ಬಳಿಕ ರಾಜಿ ಮಾಡಿಕೊಳ್ಳಲು ಸಿದ್ದರಾಗಬಾರದು.

    ಮುಕ್ತವಾಗಿ ಮಾತನಾಡಿ:
    ಆನ್‌ಲೈನ್ ಪ್ರಪಂಚದ ಅಪಾಯಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಅವರಿಗೆ ಕಲಿಸಿ.

    ಹೊಸ ಲೋಕಗಳನ್ನು ತೆರೆಯಿರಿ:
    ಅವರನ್ನು ಕೈ ಹಿಡಿದು ಪುಸ್ತಕಗಳು, ಆಟಗಳು ಮತ್ತು ಪ್ರಕೃತಿಯ ಜಗತ್ತಿಗೆ ತಲುಪಿಸಿ. ಪ್ರವಾಸಗಳಿಗೆ ಕರೆದುಕೊಂಡು ಹೋಗಿ, ಅವರಿಗೆ ಹೊಸ ಅನುಭವಗಳನ್ನು ನೀಡಿ.

    ಕಾಮನಬಿಲ್ಲನ್ನು ನೋಡಲು ಆಕಾಶದತ್ತ ನೋಡಿ, ಚಿಟ್ಟೆಯನ್ನು ನೋಡಲು ತೋಟಕ್ಕೆ ಹೋಗಿ, ಮತ್ತು ಅವರ ಸ್ನೇಹಿತರ ಪ್ರೀತಿಯನ್ನು ಅನುಭವಿಸಲು ಅವರೊಂದಿಗೆ ಆಟವಾಡುವ ಅವಕಾಶ ಕೊಡಿ. ಆಕಾಶ ಮತ್ತು ಭೂಮಿಯ ಸಂಪರ್ಕವನ್ನು ಕಳೆದುಕೊಂಡು ಆರು ಇಂಚಿನ ಪರದೆಗೆ ಕುಗ್ಗುವ ಪೀಳಿಗೆ ನಮಗೆ ಅಗತ್ಯವಿಲ್ಲ.

    “ಉಜ್ವಲ ಬಾಲ್ಯ” ಎಂಬುದು ಪ್ರತಿ ಮಗುವಿನ ಹಕ್ಕು. ಆ ಹಕ್ಕನ್ನು ಅವರಿಗೆ ನಿರಾಕರಿಸುವ ಹಕ್ಕು ನಮಗಿಲ್ಲ. ನೆನಪಿಡಿ, ಇಂದು ನಾವು ಅವರಿಗೆ ನೀಡುವ ಗಮನ ಮತ್ತು ಪ್ರೀತಿ ನಾಳಿನ ಸಮಾಜದ ಶಕ್ತಿ. ಅದಕ್ಕಾಗಿ, ಅವರಿಗೆ ಪ್ರೀತಿ, ಜ್ಞಾನ ಮತ್ತು ಅನುಭವಗಳ ಹೊಸ ಬಾಗಿಲುಗಳನ್ನು ತೆರೆಯೋಣ. ಆ ಮೂಲಕ, ಅವರ ಬೆಳವಣಿಗೆ ಮತ್ತು ಆ ಮೂಲಕ ನಮ್ಮ ದೇಶದ ಭವಿಷ್ಯ ಉಜ್ವಲ ವಾಗಲಿ.

    ಸಮಿಯುಲ್ಲಾ

  • ಗೆಳೆಯನ ಪತ್ನಿಗೆ ರಕ್ತ ನೀಡಲು ಅರ್ಷದ್ ನೊಂದಿಗೆ ಗಲಭೆ ಪೀಡಿತ ಊರಿಗೆ ಹೊರಟ ಲೋಹಿತ್: ಮುಂದೇನಾಯ್ತು?

    ಗೆಳೆಯನ ಪತ್ನಿಗೆ ರಕ್ತ ನೀಡಲು ಅರ್ಷದ್ ನೊಂದಿಗೆ ಗಲಭೆ ಪೀಡಿತ ಊರಿಗೆ ಹೊರಟ ಲೋಹಿತ್: ಮುಂದೇನಾಯ್ತು?

    ಲೋಹಿತ ಅಮೆರಿಕದಿಂದ ಬಂದು ಎರಡು ದಿನಗಳಾಗಿದ್ದವು, ಅವನು ಅಮೆರಿಕದಿಂದ ಹೊರಡುವ ಸಮಯದಲ್ಲೇ ಅವನ ಗೆಳೆಯ ರವೀಂದ್ರ ಫೋನ್ ಮಾಡಿ ತನ್ನ ಹೆಂಡತಿಗೆ ತೀರ ಅರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ಸೇರಿಸಲಾಗಿದೆಯೆಂಬ ವಿಚಾರ ತಿಳಿಸಿದಾಗ “ನಾ ಊರಿಗೆ ಹೊರಡುತ್ತಿದ್ದೇನೆ ಅಲ್ಲಿ ಒಂದು ವಾರ ಇರುತ್ತೇನೆ, ಈ ಮಧ್ಯೆ ಬಿಡುವು ಮಾಡಿಕೊಂಡು ನಿಮ್ಮಲ್ಲಿ ಬರುತ್ತೇನೆ, ಧೈರ್ಯದಿಂದಿರು ಏನು ಆಗುವುದಿಲ್ಲ” ಎಂದು ಸಮಾಧಾನ ಹೇಳಿದ.

    ಸಮಯದ ಎಷ್ಟೇ ಅಭಾವವಿದ್ದರೂ ಅಮೆರಿಕಕ್ಕೆ ಹಿಂತಿರುಗುವುದಕ್ಕೆ ಮುನ್ನ ಅವಕಾಶ ಮಾಡಿಕೊಂಡು ಗೆಳೆಯನನ್ನು ಭೇಟಿ ಮಾಡಲೇ ಬೇಕೆಂದು ತೀರ್ಮಾನಿಸಿದ ಲೋಹಿತ ಅವನು ಸಹ ವೈದ್ಯನಾಗಿರುವುದರಿಂದ ಗೆಳೆಯನ ಮಡದಿಯ ಖಾಯಿಲೆ ಬಗ್ಗೆ ಅಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಏನಾದರೂ ಸಲಹೆ ಕೊಡಬಹುದೆಂದು ಅವನ ಆಲೋಚನೆಯಾಗಿತ್ತು.

    ಅವನ ಊರಿಂದ ರವೀಂದ್ರ ಇರುವ ಶಹರಕ್ಕೆ ಹೆಚ್ಚೆಂದರೆ ಮೂರು ತಾಸಿನ ಹಾದಿ.
    ಅಮೆರಿಕದಿಂದ ಬಂದ ಎರಡು ದಿನ ಬಳಿಕ ಅದೊಂದು ದಿನ ಲೋಹಿತ ಅರ್ಷದ್‌ಗೆ ಫೋನ್ ಮಾಡಿ ನಾಳೆ ಬೆಳೆಗ್ಗೆ ಬರುವುದಕ್ಕಾಗುತ್ತೇನೆಂದು ವಿಚಾರಿಸಿದ ಅವನು ಬರುತ್ತೇನೆಯೆಂದು ಒಪ್ಪಿಕೊಂಡ. ಆ ಮೇಲೆ ಲೋಹಿತ, ರವೀಂದ್ರನಿಗೆ ಫೋನ್ ಮಾಡಿ ನಾಳೆ ಬರುತ್ತಿದ್ದೇನೆ ಎಂಬ ಸಮಾಚಾರ ಮುಟ್ಟಿಸಿದ.

    ಅರ್ಷದ್ ಟ್ಯಾಕ್ಸಿ ಚಾಲಕ, ಲೋಹಿತ ಅಮೆರಿಕದಿಂದ ಬಂದು ಇಲ್ಲಿ ಎಲ್ಲಾದರೂ ಹೋಗುದಿದ್ದರೆ ಅರ್ಷದ್‌ಗೆ ಫೋನ್ ಮಾಡುತ್ತಿದ್ದ, ಅವನು ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಹಿಂದೆ ಹಾಕಿ ಬಂದು ಲೋಹಿತನ ಕಾರು ಓಡಿಸುತ್ತಿದ್ದ.
    ಎರಡು ತಿಂಗಳ ಹಿಂದಷ್ಟೇ ರವೀಂದ್ರನ ಮಗ ಅಪಘಾತವೊಂದರಲ್ಲಿ ಮೃತ ಪಟ್ಟಿದ್ದ ಈ ಸಮಾಚಾರವನ್ನು ಅಳುತ್ತ ಹೇಳಿದಾಗ ಆಗ ಲೋಹಿತ ಅಮೆರಿಕದಲ್ಲಿದ್ದ ಮತ್ತು ಆಸ್ಪತ್ರೆಯಿಂದ ಮನೆಗೆ ಹೊರಡುವ ಸಿದ್ದತೆ ಮಾಡುತ್ತಿದ್ದ. ಅಂದು ಲೋಹಿತ ಸರಿಯಾಗಿ ನಿದ್ದೆ ಮಾಡಲಿಲ್ಲ. ಹತ್ತಾರು ಬಾರಿ ಗೆಳೆಯನಿಗೆ ಫೋನ್ ಮಾಡಿ ಸಮಾಧಾನ ಹೇಳಿದ್ದ.

    ಲೋಹಿತ ಮತ್ತು ರವೀಂದ್ರ ಅನೇಕ ವರ್ಷದವರೆಗೆ ಸಹಪಾಠಿಗಳಾಗಿದ್ದರು.
    ಕೊಟ್ಟ ಮಾತಿನಂತೆ ಅರ್ಷದ್ ಬೆಳಗ್ಗೆಯೇ ಬಂದ ಬಿಟ್ಟ, ಉಪಹಾರದ ಬಳಿಕ ಇಬ್ಬರು ಹೊರಟರು.
    ಮಧ್ಯದಾರಿಯಲ್ಲಿ ಲೋಹಿತನಿಗೆ ಟೀ ಕುಡಿಯಬೇಕೆಂದೆನಿಸಿ ಎಲ್ಲಾದರೊಂದು ಕಡೆ ಕಾರು ನಿಲ್ಲಿಸಲು ಸೂಚಿಸಿದ.
    ಮುಂದೊAದು ಊರಿತ್ತು. ರಸ್ತೆ ಪಕ್ಕದಲ್ಲಿರುವ ದರ್ಶಿನಿ ಮುಂದೆ ನಿಲ್ಲಿಸಿದ ಅರ್ಷದ್ ಅವರಿಬ್ಬರು ಇಳಿದು ಟೀ ಸೇವಿಸಿ ಹಿಂತಿರುಗಿದಾಗ ಕಾರು ಬಳಿ ನಡು ವಯಸ್ಸಿನ ಹಳ್ಳಿ ಮಹಿಳೆಯೊಬ್ಬಳು ಆರೇಳು ವರ್ಷದ ಮಗುವನ್ನು ಎತ್ತಿಕೊಂಡು ನಿಂತಿದ್ದಳು. ಲೋಹಿತ ಕಾರು ಹತ್ತಲು ಹೋದಾಗ ಮಹಿಳೆ ಬಂದು, ಬಸ್ಸುಗಳಲ್ಲಿ ತುಂಬ ರಷ್ ಇದೆ, ಹತ್ತಲು ಸಹ ಸಾಧ್ಯವಿಲ್ಲ, ತಬ್ಬಲಿ ಕೂಸಿಗೆ ಜ್ವರ ಇಲ್ಲಿ ಔಷಧಿಗೆ ಬಂದಿದ್ದೆ. ಮುಂದಿನ ಊರಿನವರೆಗೆ ಕರೆದುಕೊಂಡು ಹೋಗಿ ಎಂದು ವಿನಂತಿಸಿಕೊAಡಳು. “ಪುಣ್ಯ ಬರುತ್ತೆಯಪ್ಪ ಇಲ್ಲ ಎನ್ನ ಬೇಡಿ” ಕೊನೆಯಲ್ಲಿ ಈ ವಾಕ್ಯ ಹೇಳಿದಳು.

    ಹಿಂದಿನ ಆಸನವಂತು ಖಾಲಿಯಿದೆ ಕೂರಿಸಿಕೊಂಡು ಹೋದರಾಯಿತು ಎಂದು ಹಿಂದಿನ ಬಾಗಿಲನ್ನು ತೆರೆದಾಗ ಮಹಿಳೆ ಮೊದಲು ಮಗುವನ್ನು ಜೋಪಾನವಾಗಿ ಕೂರಿಸಿ ಆ ಮೇಲೆ ಅವಳು ಹತ್ತಿಕೊಂಡಳು.

    ಕಾರು ಮುಂದೆ ಹೊರಟಾಗ ಲೋಹಿತ ಹಿಂತಿರುಗಿ ಮಹಿಳೆಯನ್ನು ನೋಡುತ್ತ ಆ ಮಗುವಿನ ತಂದೆ ತಾಯಿ ಎಲ್ಲಿ ಎಂದು ಹೀಗೆ ಸಹಜವಾಗಿ ವಿಚಾರಿಸಿದ, ಮಗುವಿನ ಹಿಂದೆ ಒಂದು ನೋವಿನ ಕಥೆಯೇ ಇತ್ತು.

    ಸುಮಾರು ನಾಲ್ಕು ವರ್ಷದ ಕೆಳಗೆ ಅದೆಲ್ಲಿಂದಲೂ ಮುಸ್ಲಿಂ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಮುಸ್ಲಿಂರ ಒಂದು ಕುಟುಂಬ ಸಹ ಇಲ್ಲದ ಆ ಹಳ್ಳಿಗೆ ಬಂದರು, ಬರಿಕೈಯಲ್ಲಿ ಬಂದ ಅವರು ಆಲೆಮನೆಗಳಲ್ಲಿ ಕೆಲಸ ಮಾಡುತ್ತ ಅಲ್ಲೆ ಬಾಡಿಗೆಗೊಂದು ಕೋಣೆ ಹಿಡಿದು ಜೀವನ ಮಾಡ ತೊಡಗಿದರು, ಯಾರ ತಂಟೆಗೆ ಹೋಗದೆ ತಮ್ಮ ಪಾಡಿಗೆ ತಾವಿದ್ದರು, ಊರಿನ ಹತ್ತಿರವೇ ಹರಿಯುವ ನದಿಗೆ ಅವರು ಮಾಮೂಲಿನಂತೆ ಒಂದು ದಿನ ಹೋದರು. ಮಗುವನ್ನು ಅಂಗನವಾಡಿಯಲ್ಲಿ ಬಿಟ್ಟು ಹೋದಾಗ ನದಿ ತುಂಬಿ ಹರಿಯುತ್ತಿತ್ತು.

    ಬಟ್ಟೆ ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಹೆಂಡತಿ ನದಿಯಲ್ಲಿ ಜಾರಿಕೊಂಡಳು. ಅವಳನ್ನು ಕಾಪಾಡಲು ಗಂಡ ನದಿಗೆ ದುಮುಕಿದ, ನೀರಿನ ಹರಿತ ಜಾಸ್ತಿಯಿತ್ತು, ಹರಿಯುವ ನದಿಯಲ್ಲಿ ಇಬ್ಬರೂ ಕೊಚ್ಚಿಕೊಂಡರು ಆಮೇಲೆ ಊರಿನವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು, ಅವರಿಬ್ಬರ ಹೆಣಗಳು ದೊರೆತವು, ಆಮೇಲೆ ಊರಿನವರು ಸ್ವಲ್ಪ ದೂರದ ಹಳ್ಳಿಯಲ್ಲಿರುವ ಮುಸ್ಲಿಂರನ್ನು ಕರೆಸಿ ಅವರ ಧರ್ಮ ಪದ್ಧತಿಯಂತೆ ಅವರನ್ನು ದಫನ್ ಮಾಡಿಸಿದರು. ಇದಾದ ಬಳಿಕ ಮಗುವನ್ನು ಯಾರು ನೋಡಿ ಕೊಳ್ಳುತ್ತಾರೆಂದು ಪ್ರಶ್ನೆ ಮುಂದೆ ಬಂದಾಗ ಆ ಹಿಂದು ಮಹಿಳೆ ಮುಂದೆ ಬಂದು ಇದರ ಜವಾಬ್ದಾರಿ ನನ್ನ ಮೇಲಿರಲಿ ನನ್ನ ಎರಡು ಮಕ್ಕಳಂತೆ ಇದನ್ನು ಸಹ ಸಾಕುತ್ತೇನೆ ಎಂದು ಊರಿನವರ ಮುಂದೆ ಒಪ್ಪಿಕೊಂಡು ಅಂದಿನಿAದ ಅವಳೇ ಆ ಮಗುವನ್ನು ನೋಡುಕೊಳ್ಳುತ್ತಿದ್ದಳು. ಆ ಮಗುವಿನ ಅಪ್ಪ ಅಮ್ಮ ಏನು ಹೆಸರನ್ನು ಇಟ್ಟಿದ್ದರೂ ಅದನ್ನು ಬದಲಾಯಿಸಲಿಲ್ಲ.

    ಇಷ್ಟ್ಟೆಲ್ಲ ಕಥೆ ಹೇಳಿದ ಬಳಿಕ ಮಹಿಳೆ ಮೌನ ಧರಿಸಿಕೊಂಡು ರಸ್ತೆಯ ಕಡೆಯೇ ಗಮನವಿಟ್ಟು ನೋಡುತ್ತಿದ್ದಳು. ಅವಳು ಇಳಿಯುವ ಸ್ಥಳ ಬಂದ ಕೂಡಲೇ “ಇಲ್ಲೇ ನಿಲ್ಲಿಸಿ” ಎಂದಳು.
    ಅವಸರ ಬೇಡ ಮಹಿಳೆ ನೆಮ್ಮದಿಯಿಂದ ಇಳಿಯಲಿ ಎಂದು ಅರ್ಷದ್ ಇಂಜೀನ್ ಆಫ್ ಮಾಡಿದ.
    ಮಹಿಳೆ ಮೊದಲು ತಾನಿಳಿದು ಆಮೇಲೆ ಮಗುವನ್ನು ಜೋಪಾನವಾಗಿ ಇಳಿಸಿಕೊಂಡಳು.
    “ದೇವರು ನಿಮಗೆ ಒಳ್ಳೆಯದು ಮಾಡಲಿ” ಎಂದು ಹಾರೈಸಿದಳು.
    ಇವಳ ಹಾರೈಕೆ ಖಂಡಿತ ದೇವರು ಒಪ್ಪುತ್ತಾನೆ ಎಂದು ಯೋಚಿಸಿದ ಲೋಹಿತ.

    ಕಾರು ಒಡಿಸುತ್ತಿದ್ದರೂ ತನ್ನ ಇಡೀ ಗಮನವೆಲ್ಲ ಮಹಿಳೆಯ ಕಡೆಯಲಿಟ್ಟಿದ್ದ ಅರ್ಷದ್, ಮಹಿಳೆ ಇಳಿದ ಬಳಿಕ ಅರ್ಷದ್ “ದೇವರು ಯಾವ ಯಾವ ರೂಪದಲ್ಲಿರುತ್ತಾನೆ ಎಂದು ಹೇಳುವುದಕ್ಕಾಗುವುದಿಲ್ಲ.”

    ಲೋಹಿತ ಏನನ್ನು ಹೇಳಲಿಲ್ಲ ಅವನಿಗಂತು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದಂತಾಯಿತು. ಅರ್ಷದ್ ಕಾರು ಸ್ಟಾರ್ಟ್ ಮಾಡುತ್ತಿರುವಾಗ ಲೋಹಿತ ಹೇಳಿದ, “ಅರ್ಷದ್ ಈ ಊರು ನೆನಪಿಡಿ. ಬರುವಾಗ ಆ ಮಹಿಳೆಯನ್ನು ಮತ್ತೆ ಭೇಟಿ ಮಾಡೋಣವಂತೆ ಅವಳಿಗೆ ಏನಾದರೂ ಸಹಾಯ ಮಾಡೋಣ ಎನಿಸುತ್ತಿದೆ.”
    “ಆಯಿತು” ಎಂದ ಅರ್ಷದ್.
    ಕಾರು ಚಲಿಸುತ್ತಿರುವಾಗ ಲೋಹಿತ ನಾಲ್ಕಾರು ಬಾರಿ ಹಿಂತಿರುಗಿ ಮಹಿಳೆ ಕಡೆ ನೋಡಿದ.

    ಅಲ್ಲಿಂದ ಅವರು ಒಂದಿಷ್ಟು ದೂರ ಹೋಗಿರಬೇಕು. ಅಷ್ಟರಲ್ಲೇ ರವೀಂದ್ರ ಫೋನ್ ಮಾಡಿ ಅವರ ಶಹರದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿದೆ. ಶಹರದ ಒಂದೆಡೆ ಹಿಂದು ಮುಸ್ಲಿಂ ದಂಗೆಯಾಗಿದೆ ಎಂದ. ಆಮೇಲೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ, ಶಹರದ ಯಾವುದೂ ಒಂದು ಮೂಲೆಯಲ್ಲಿ ಗಲಾಟಿಯಾಗಿರುವುದು ವಾಹನಗಳು ಓಡಾಡುತ್ತಿವೆ, ಜನ ಸಹ ತಿರುಗಾಡುತ್ತಿದ್ದಾರೆ ಎಂದಾಗ ಲೋಹಿತನಿಗೆ ಸ್ವಲ್ಪ ಧೈರ್ಯ ಬಂತು.
    ಅವನು ಯೋಚನೆ ಮಾಡುತ್ತಿರುವುದನ್ನು ಕಂಡು ಅರ್ಷದ್ ಕಾರಣ ಕೇಳಿದ.
    “ಅಲ್ಲಿ ರಾತ್ರಿ ಹಿಂದು ಮುಸ್ಲಿಂ ದಂಗೆಯಾಗಿದೆಯಲ್ಲ”

    “ಇತ್ತೀಚೆಗೆ ಅಲ್ಲಿ ದಿನನಿತ್ಯ ದಂಗೆಯಾಗುತ್ತಲೆಯಿವೆ. ಎರಡು ಕಡೆಯವರು ಬೇರೆಲ್ಲ ವ್ಯವಹಾರ ಬಿಟ್ಟು ಗಲಾಟೆ ಮಾಡುವುದಕ್ಕೆ ನಿಂತು ಬಿಟ್ಟಿದ್ದಾರೆ. ಮೊನ್ನೆ ನಾನು ಅಲ್ಲಿ ಹೋಗಿದ್ದೆ, ಬಾಡಿಗೆ ಸಿಕ್ಕಿತ್ತು, ರಸ್ತೆಯಲ್ಲಿ ಜನ ಹೆದರಿಸಿದರು, ಆದರೆ ಅಲ್ಲಿ ಹೋದಾಗ ಎಲ್ಲಾ ಸಹಜವಾಗಿತ್ತು. ಯಾವುದೋ ಒಂದು ಏರಿಯದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿರುತ್ತೆ ಆ ಕಡೆ ಹೋಗಬಾರದು, ಅರ್ಷದ್ ಹೇಳಿದ ಧೈರ್ಯದಿಂದ.

    ರಸ್ತೆಯಲ್ಲಿ ಭೇಟಿಯಾದ ಆ ಹಿಂದು ಮಹಿಳೆಯ ಬಗ್ಗೆ ಯೋಚಿಸಿದ ಲೋಹಿತ, ಮುಸ್ಲಿಂರ ಮಗುವನ್ನು ಪೋಷಿಸುತ್ತಿರುವ ಆ ಅವಿದ್ಯಾವಂತೆ ಮಹಿಳೆಯಲ್ಲಿರುವ ಮಾನವೀಯತೆ ವಿದ್ಯಾವಂತರಲಿಲ್ಲ.
    ಅರ್ಷದ್ ಹೇಳಿದ ಮಾತಿನಿಂದ ಅವನಿಗೆ ಸ್ವಲ್ಪ ಸಮಾಧಾನವಾಯಿತು. ಯಾವ ಅನಾಹುತವಿಲ್ಲದೆ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿದರೆ ಸಾಕೆಂದು ಮನದಲ್ಲಂದುಕೊAಡ.

    ಇನ್ನೇನು ಅರ್ಧ ಗಂಟೆಯಲ್ಲಿ ಅವರ ಕಾರು ಶಹರದ ಗಡಿ ದಾಟಬೇಕೆಂದುವಷ್ಟರಲ್ಲೇ ರವೀಂದ್ರ ಫೋನ್ ಮಾಡಿ ಶಹರದ ಎಲ್ಲಾ ಕಡೆ ದಂಗೆ ಎದ್ದಿದೆ, ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿಲ್ಲ, ಅಂಗಡಿ ಮುಂಗಟ್ಟು ಮುಚ್ಚಲಾಗಿವೆ, ರಸ್ತೆಗಳಲ್ಲಿ ವಾಹನಗಳ, ಜನಗಳ ಸಂಚಾರವಿಲ್ಲ, ಹಲವಾರು ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
    “ಏನಂತೆ ಸಾರ್” ಅರ್ಷದ್ ಕೇಳಿದ.
    “ಏನಿಲ್ಲ ನೀವಂತು ಎಚ್ಚರದಿಂದಿರಿ”

    “ನೀವು ಭಯ ಪಡಬೇಡಿ” ಎಂದು ಅರ್ಷದ್ ಹೇಳುತ್ತಿರುವಾಗಲೇ ಎದುರಿಂದ ಒಂದು ಕಾರು ಬಂತು. ಅದರ ಗಾಜು ಹೊಡೆದು ಹೋಗಿದ್ದವು, ಬಾನೇಟ್ ಮೇಲೆ ನಾಲ್ಕಾರು ಕಡೆ ರಕ್ತದ ಕಲೆಗಳಿದ್ದವು, ಕಾರಿನಲ್ಲಿರುವವರು ತುಂಬ ಭಯಭೀತಿಕ್ಕೊಳಗಾಗಿದ್ದರು.

    ಲೋಹಿತನ ಕಾರು ಹೊರವಲಯಲ್ಲಿತ್ತು. ಇನ್ನೇನು ಶಹರದೊಳಗೆ ಪ್ರವೇಶಿಸಬೇಕು ಅಷ್ಟರಲ್ಲಿ ಕಾರನ್ನು ಪೋಲಿಸರು ನಿಲ್ಲಿಸಿದರು. ಪೋಲಿಸರು ಯಾವ ವಾಹನವು ಒಳಗೆ ಹೋಗದಂತೆ ತಡೆಯುತ್ತಿದ್ದರು. ಶಹರದೊಳಗಿನಿಂದ ಬರುವ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದರು.

    ಅರ್ಷದ್ ಒಂದೆಡೆ ಕಾರು ನಿಲ್ಲಿಸಿಬಿಟ್ಟ, ಇನ್ನು ಶಹರದೊಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂದೆನಿಸುತ್ತಿರುವಾಗಲೇ ರವೀಂದ್ರ ಫೋನ್ ಮಾಡಿ ಅವನ ಮಡದಿಗೆ ಕೂಡಲೇ ರಕ್ತ ಬೇಕಾಗಿದೆ. ರಕ್ತದ ಗ್ರೂಪ್ ಎಬಿ ನೆಗೆಟಿವ್, ಇಲ್ಲಿ ಆಸ್ಪತ್ರೆಯಲ್ಲಿ ಆ ಗ್ರೂಪ್‌ನ ರಕ್ತವಿಲ್ಲ. ಈ ಸಮಯದಲ್ಲಿ ಹೊರಗಿನಿಂದ ತರಿಸಲು ಸಹ ಸಾಧ್ಯವಿಲ್ಲ ಎಂದು ನಿರಾಸೆಯಿಂದ ತಿಳಿಸಿದ. ಆ ಗ್ರೂಪ್‌ನ ರಕ್ತ ಸಿಗಬೇಕಾದರೆ ಸ್ವಲ್ಪ ಕಷ್ಟವೇ. ಲೋಹಿತ ಯೋಚಿಸಿದ.

    ಆದಷ್ಟು ಬೇಗ ಬಿಗುವಿನ ವಾತಾವರಣ ಕಡಿಮೆಯಾಗಿ ಆಸ್ಪತ್ರೆಗೆ ತಲುಪಿದರೆ ಸಾಕೆಂದು ಯೋಚಿಸಿದ. ಎಂಥ ಪರೀಕ್ಷೆಯ ಸಮಯ ಎದುರಾಗಿದೆ. ಒಬ್ಬರ ಜೀವ ರಕ್ಷಣೆ ಮಾಡುವ ಅವಕಾಶ ಸಿಕ್ಕಿಯೂ ಸ್ವಲ್ಪದರಲ್ಲಿ ತಪ್ಪಿ ಹೋಗುತ್ತಿದೆಯಲ್ಲ. ಹೀಗೆಲ್ಲ ಯೋಚಿಸಲು ಮುಖ್ಯಕಾರಣವೇನೆಂದರೆ ಲೋಹಿತನ ರಕ್ತದ ಗ್ರೂಪ್ ಸಹ ಎಬಿ ನೆಗೆಟಿವ್ ಆಗಿತ್ತು.

    ತನ್ನ ರಕ್ತದ ಗ್ರೂಪ್ ಯಾವುದೆಂದು ಅವನು ಗೆಳೆಯನಿಗೆ ಹೇಳದೆ ನೇರವಾಗಿ ಹೋಗಿ ಕೊಟ್ಟೆ ಬಿಡೋಣ ಎಂದು ಅವನ ಲೆಕ್ಕಾಚಾರವಾಗಿತ್ತು.

    ಸ್ವಲ್ಪ ಸಮಯದ ಬಳಿಕ ಸುರೇಂದ್ರ ಫೋನ್ ಮಾಡಿ ಅವರೆಲ್ಲಿದ್ದಾರೆಂದು ವಿಚಾರಿಸಿದ, ಶಹರದ ಹೊರವಲಯದಲ್ಲಿದ್ದೇನೆ ಶಹರದೊಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ವಿವರಿಸಿದಾಗ, ಹಿಂತಿರುಗಿ ಹೊರಟು ಹೋಗಿ ಜೀವದ ಹಂಗು ಬಿಟ್ಟು ಒಳ ಬರಬೇಡಿ, ಆಸ್ಪತ್ರೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ವಾಸವಾಗಿದ್ದಾರೆ ಖಂಡಿತವಾಗಿ ಬರಬೇಡಿ ಬೇಡಿಕೊಂಡ ಸುರೇಂದ್ರ.

    ಬೇರೆ ಸಂದರ್ಭವಾಗಿದ್ದರೆ ಅವನು ಹಿಂತಿರುಗಿ ಹೋಗುತ್ತಿದ್ದ. ಆದರೆ ಗೆಳೆಯನ ಮಡದಿಗೆ ರಕ್ತದ ಅವಶ್ಯಕತೆ ಇರುವುದನ್ನು ತಿಳಿದು ಹಿಂತಿರುಗಿ ಹೋಗುವುದು ಸರಿಯಿಲ್ಲ. ಇಲ್ಲೇ ಇದ್ದು ಶಹರದ ಸ್ಥಿತಿ ಸುಧಾರಣೆಯಾಗುವ ವರೆಗೆ ಕಾಯಬೇಕು. ಕಾರು ಶಹರದೊಳಗೆ ಪ್ರವೇಶಿಸಲು ಅವಕಾಶ ಕೊಟ್ಟರೆ ಸಾಕೆಂದು ಯೋಚಿಸಿದ.

    ಶಹರದೊಳಗೆ ಯಾವ ವಾಹನವೂ ಹೋಗದಂತೆ ತಡೆದಿರುವುದರಿಂದ ಅವನ ಕಾರಿನ ಹಿಂದೆ ಮುಂದೆ ಅನೇಕ ವಾಹನಗಳು ನಿಂತುಕೊಳ್ಳಲು ಆರಂಭಿಸಿದವು. ನೋಡುನೋಡುತ್ತಿದ್ದಂತೆ ವಾಹನಗಳ ಸಾಲ ಹೆಚ್ಚಾಗತೊಡಗಿತ್ತು.
    ವಾಹನದೊಳಗೆ ಕುಳುತಿರುವವರು ಪೈಕಿ ಯಾರೊಬ್ಬರು ಹೊರ ಬಾರದೆ ಒಳಒಳಗೆಯೇ ಭಯ ಭೀತಿಕ್ಕೊಳಗಾಗಿ ಮೌನ ಧರಿಸಿಕೊಂಡಿದ್ದರು. ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆದಾಗ ಸಾಲಾಗಿ ನಿಂತಿರುವ ವಾಹನಗಳು ಹಾರನ್‌ಗಳು ನಿರಂತರವಾಗಿ ಮೊಳಗುತ್ತಲೇ ಇರುತ್ತವೇ ಯಾರೊಬ್ಬರು ಇಂಜಿನ್‌ಗಳನ್ನು ಆಫ್ ಮಾಡುವುದಿಲ್ಲ. ಆದರೆ ಈಗ ಇಲ್ಲಿ ಬೇರೆಯೇ ಸನ್ನವೇಶವಿತ್ತು” ನಿಜ ಸಂಗತಿ ಏನೆಂದು ಅರಿತು ಎಲ್ಲರೂ ಇಂಜಿನ್‌ಗಳನ್ನು ಆಫ್ ಮಾಡಿದ್ದರು. ಮೌನವಾಗಿ ಹೋಗಿದ್ದರು ಮತ್ತು ಒಬ್ಬರನೊಬ್ಬರನ್ನು ಸಂದೇಹದಿAದ ನೋಡುತ್ತಿದ್ದರು.

    ರಕ್ತ ಸಿಕ್ಕಿದಿಯೋ ಇಲ್ಲವೋ ಅವನು ಎಷ್ಟೊಂದು ಸಂಕಷ್ಟದಲ್ಲಿದ್ದಾನೆಯೋ ಅವನಿಗೆ ಫೋನ್ ಮಾಡಿದಾಗ ಅವನ ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿತ್ತು. ಲೋಹಿತ ಯಾಕಿಷ್ಟು ಬೇಚೈನಾಗಿದ್ದಾನೆಂದು ಅರ್ಷದ್‌ಗೆ ತಿಳಿಯಲಿಲ್ಲ.
    “ಮನೆಯಿಂದ ಸ್ವಲ್ಪ ಮುಂಚಿತವಾಗಿ ಹೊರಟ್ಟಿದ್ದರೆ ಅಥವಾ ಶಹರದೊಳಗೆ ಪ್ರವೇಶಿಸಲು ಅವಕಾಶ ಸಿಕ್ಕಿದ್ದರೆ ಕಾರು ಅತಿವೇಗದಿಂದ ಚಲಾಯಿಸುತ್ತ ಆಸ್ಪತ್ರೆಗೆ ತಲುಪಿಸಿ ಬಿಡುತ್ತಿದ್ದೆ” ಅರ್ಷದ್ ಹೇಳಿದ.
    ಆದರೆ ಲೋಹಿತ ತನ್ನದೇ ವಿವಾರದಲ್ಲಿ ಮುಳುಗಿದ್ದ.

    ನಾನು ಎಲ್ಲಾ ವಿಷಯದ ಬಗ್ಗೆ ಪಾಸಿಟೀವ್ ಆಗಿ ಯೋಚಿಸುತ್ತೇನೆ. ನನ್ನ ರಕ್ತದ ಗ್ರೂಪ್ ಯಾಕೆ ನೆಗೆಟಿವ್, ಈಗಿನ ಕಾಲದಲ್ಲಿ ಒಳ್ಳೆ ಯೋಚನೆ ಮಾಡುವ ಜನರೇ ಇಲ್ಲವೇನು? ಮನುಷ್ಯ ಯಾಕೆ ಇಷ್ಟೊಂದು ಕ್ರೂರಿಯಾಗಿ ಧರ್ಮದ ಹೆಸರಿನಲ್ಲಿ ಯಾಕೆ ರಕ್ತ ಹರಿಸುತ್ತಿದ್ದಾನೆ. ವಿಜ್ಞಾನಿಗಳು ಆಕಾಶದಿಂದ ಬಾಂಬ್‌ಗಳನ್ನು ಬೀಳುಸುವುದರ ಬದಲು ಆಕಾಶದಿಂದ ಹೂಮಳೆ ಹೊಮ್ಮಿಸುವುದರ ಬಗ್ಗೆ ಯಾಕೆ ಯೋಚಿಸುತ್ತಿಲ್ಲ?

    ಲೋಕೇಶ ಏನೇನೋ ಯೋಚಿಸುತ್ತ ಕ್ಷಣದಿಂದ ಕ್ಷಣಕ್ಕೆ ಕಂಗಾಲಾಗಿ ಹೋಗುತ್ತಿರುವಾಗಲೇ ಫೋನ್ ಮೊಳಗಿತ್ತು. ಸುರೇಂದ್ರನ ಫೋನ್ ಇರುವುದರಿಂದ ಲೋಹಿತ ತನ್ನ ಹೃದಯದ ಬಡಿತದ ಮೇಲೆ ನಿಯಂತ್ರಣ ಪಡೆಯುತ್ತ ಮೊಬೈಲ್ ಆನ್ ಮಾಡಿದ.

    ಬಂತು ಗೆಳೆಯನ ಮಡದಿಗೆ ಸಕಾಲದಲ್ಲಿ ರಕ್ತ ಸಿಕ್ಕಿದೆ ಎಂಬ ಸಂತೋಷದ ಸುದ್ದಿ ದಂಗೆಯಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡಿರುವ ಗಾಯಾಳನೊಬ್ಬ ಜತೆಯಲ್ಲಿ ಬಂದಿದ್ದ ಮುಸ್ಲಿಂ ಯುವಕನೊಬ್ಬನ ರಕ್ತದ ಗ್ರೂಪ್ ಎಬಿ ನೆಗೆಟಿವ್ ಆಗಿದ್ದು, ವೈದ್ಯರು ಅವನಿಗೆ ಒಬ್ಬ ರೋಗಿಗೆ ರಕ್ತದ ಅವಶ್ಯಕತೆಯಿದೆ ಎಂದಾಗ ಅವನು ಯಾರಿಗೆ ಏನೇಂತು ಬಗ್ಗೆ ವಿಚಾರಿಸಿದೆ ರಕ್ತದಾನ ಮಾಡಿದ.

    ಲೋಹಿತ ಇದೆಲ್ಲವನ್ನು ಕೇಳಿದ ಬಳಿಕ ಮೌನ ಧರಿಸಿಕೊಂಡ, ರಸ್ತೆಯಲ್ಲಿ ಸಿಕ್ಕಿದ ಮುಸ್ಲಿಮ್ ಮಗುವನ್ನು ಸಲಹುತ್ತಿರುವ ಮಹಿಳೆ ಮತ್ತು ಇಂಥ ದಂಗೆಯ ಸಮಯದಲ್ಲಿ ಹಿಂದು ಮಹಿಳೆಗೆ ರಕ್ತ ನೀಡಿದ ಮುಸ್ಲಿಂ ಯುವಕ, ಇವರಿಬ್ಬರೂ ಅವನ ಮನಸ್ಸಿನಲ್ಲಿ ತುಂಬಿಕೊAಡಿದ್ದರು.

    ಈಗಿನ ಸ್ಥಿತಿಯಲ್ಲಿ ಇಂಥವರೇ ನಮ್ಮ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಕತ್ತಲೆ ಹರಡಿಕೊಂಡಿರುವ ಈ ಸಮಯದಲ್ಲಿ ಇವರೇ ಮಿನುಗುವ ನಕ್ಷತ್ರಗಳು.

    ಲೋಹಿತನ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿರುವ ಕಣ್ಣೀರನ್ನು ಕಂಡು “ಯಾಕೆ ಸಾರ್ ಕಣ್ಣೀರು ಹಾಕುತ್ತಿದ್ದೀರಾ?”
    ಅರ್ಷದ್ ಕೇಳಿದ.

    ಅದೀಬ್ ಅಖ್ತರ್, ಮೈಸೂರು

  • ಅಡುಗೆ ಮನೆಯೆಂಬ ಔಷಧಾಲಯ: 
ಯಾವ ಮಸಾಲೆ-ತರಕಾರಿ ಯಾವುದಕ್ಕೆ ಪ್ರಯೋಜನಕಾರಿ?

    ಅಡುಗೆ ಮನೆಯೆಂಬ ಔಷಧಾಲಯ: ಯಾವ ಮಸಾಲೆ-ತರಕಾರಿ ಯಾವುದಕ್ಕೆ ಪ್ರಯೋಜನಕಾರಿ?

    ಆಹಾರವು ನಮ್ಮ ಜೀವನಶೈಲಿಯ ಬಹುಮುಖ್ಯ ಪಾತ್ರವಾಗಿದೆ. ಸಾಮಾನ್ಯವಾಗಿ ಅಡುಗೆ ಮನೆ ಎಂದರೆ ಅಮ್ಮ ಹಾಗೂ ರುಚಿಕರ ಅಡುಗೆಗಳು ಅಷ್ಟೆ ನಮಗೆ ನೆನಪಾಗುತವೆ. ಆದರೆ ಅಡುಗೆಯಲ್ಲಿ ಬಳಸುವ ಗಿಡಮೂಲಿಕೆಗಳು, ಹಣ್ಣುಗಳು, ತರಕಾರಿಗಳು ಮಸಾಲೆಗಳು ಪ್ರಥಮ ಚಿಕಿತ್ಸೆಗಾಗಿ ಮತ್ತು ನಿರ್ದಿಷ್ಟ ರೋಗಗಳನ್ನು ಪರಿಹರಿಸಲು ಬಳಸಬಹುದಾದ ಪ್ರಾಯೋಗಿಕ ವರ್ಗವಾಗಿದೆ.

    ನಿಮಗಿದು ಗೊತ್ತೇ?

    ಈ ಕಾಲದಲ್ಲಿ ಕಾಣುತ್ತಿರುವ ರೋಗಗಳಿಗೆ ನಮ್ಮ ಆಹಾರ ಪದ್ಧತಿಯ ಬದಲಾವಣೆಯು ಒಂದು ಕಾರಣವಾಗಿದೆ. ಅದೇಷ್ಟೋ ಕಾಯಿಲೆಗಳಿಗೆ ನಮ್ಮ ಅಡುಗೆ ಮನೆಯಲ್ಲಿಯೇ ಔಷದಿ ಅಡಗಿದ. ನಮ್ಮ ಆಹಾರದ ಪೌಷಕಾಂಶವನ್ನು ತಿಳಿದು ಅದನ್ನು ನಮ್ಮ ದಿನನಿತ್ಯದಲ್ಲಿ ಸರಿಯಾದ ರೀತಿಯಲ್ಲಿ ಅಳವಡಿಸಿದರೆ ನಮ್ಮ ಆರೋಗ್ಯದ ಸಮಸ್ಯೆಯನ್ನು ನಾವು ಸುಧಾರಿಸಬಹುದು.

    ಏನಿದು ಅಡುಗೆ ಮನೆಯ ಔಷದಿಗಳು:

    ನವಧಾನ್ಯ: ಧಾನ್ಯಗಳಲ್ಲಿ ನಾರಿನಾಂಶ ಎಂದರೆ (ಫೈಬರ್) ಅಧಿಕವಾಗಿರುವುದರಿಂದ ನಮ್ಮ ಜೀರ್ಣ ಶಕ್ತಿಯನ್ನು ನಿಧಾನಗೊಳಿಸಿ ನಮ್ಮ ಹಸಿವನ್ನು ಕಡಿಮೆಗೊಳಿಸುತ್ತದೆ. ಪ್ರೋಟೀನ್, ಫೈಬರ್ ಪಮುಖ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.

    ತರಕಾರಿಗಳು ನಮ್ಮ ದಿನ ನಿತ್ಯದಲ್ಲಿ ಸುಲಭವಾಗಿ ಸಿಗುವ ಆರೋಗ್ಯಕರವಾದದ್ದು ಈ ತರಕಾರಿಗಳು, ತರಾಕಾರಿಗಳು ಸಾಕಷ್ಟು ಆಹಾರದ ಫೈಬರ್ ಅನ್ನು ಒದಗಿಸುವ ಮೂಲಕ ನಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಯಾವ ತರಕಾರಿಗಳಲ್ಲಿ ಲಾಭವೇನಿದೆ ಎಂದು ನೋಡಿದರೆ,

    ಹಾಗಲಕಾಯಿ: ಇದು ರುಚಿಯಲ್ಲಿ ಕಹಿಯಿದ್ದರೂ, ಹೊಟ್ಟೆಯಲ್ಲಿರುವ ಜಂತುಹುಳಗಳನ್ನು ನಾಶಮಾಡುತ್ತವೆ. ಸಕ್ಕರೆಕಾಯಿಲೆಗೂ ಒಳ್ಳೆಯ ಔಷಧಿ.

    ಕ್ಯಾರೆಟ್: ಕ್ಯಾರೆಟ್ ವಿಟಮಿನ್ ಎ ಇದರ ಉತ್ತಮ ಮೂಲವಾಗಿದ್ದು ಕಣ್ಣಿನ ಆರೋಗ್ಯವನ್ನು ಸುಧಾರಿಸಿತ್ತದೆ. ಇದರ ವೈಶಿಷ್ಟ್ಯತೆಯೆಂದರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಜೊತೆಗೆ ಬೀಟಾ- ಕ್ಯಾರೋಟಿನ್ ಸೇರಿದಂತೆ ಆಂಟಿ ಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾಗಿದೆ. ಕ್ಯಾರೆಟ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿ ಇರುವ ಖನಿಜ, ಪೊಟ್ಯಾಸಿಯಮ್, ಸೋಡಿಯಂ ಶ್ರೇಣಿಗಳನ್ನು ಸಮತೋಲನಗೊಳಿಸಲು ಮತ್ತು ದೇಹದಿಂದ ಹೊರಹಾಕಲು ಅನುವು ಮಾಡಿಕೊಡುತ್ತದೆ.

    ಬೀಟ್ರೋಟ್: ಬೀಟ್ರೋಟ್ ಸಹ ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪೌಷ್ಠಿಕ ಸತ್ವಗಳು ಹೇರಳವಾಗಿ ಹೊಂದಿದೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿದ್ದು, ಮ್ಯಾಂಗನೀಸ್, ಪೋಟಾಸಿಯಂ ಹೆಚ್ಚಾಗಿ ಹೊಂದಿದೆ. ಬೀಟ್ರೋಟ್ ನಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಹೀಗೆ ಇನ್ನು ಹಲವಾರು ತರಕಾರಿಗಳು ತನ್ನದೇ ಆದ ವೈಪುಲ್ಯತೆಯನ್ನು ಹೊಂದಿದೆ. ಆದರೆ ಈಗಿನ ಜೀವನಶೈಲಿಯಲ್ಲಿ ಯಾವುದು ಆರ್ಗ್ಯಾನಿಕ್ ಇಲ್ಲದಿರುವ ಕಾರಣದಿಂದಾಗಿ ನಾವು ತರಕಾರಿಗಳನ್ನು ಇಪ್ಪತ್ತು ನಿಮಿಷಗಳ ಕಾಲ ಉಪ್ಪಿನ ನೀರಿನಲ್ಲಿ ನೆನಸುವುದರಿಂದ ಅದರ ವಿಷಯಕಾರಿ ರಾಸಾಯನಿಕಗಳ ಪರಿಣಾಮ ವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ನೀರಿನ ಆವಿಯಲ್ಲಿ ಬೇಯಿಸಿದ ತರಕಾರಿಗಳನ್ನು ಸೇವಿಸುವುದರಿಂದ ಅದರ ಪೌಷ್ಟಿಕಾಂಶತೆಯನ್ನು ಹೆಚ್ಚಾಗಿ ಪಡೆಯಬಹುದು.

    ಮಸಾಲೆಗಳು:

    ಮಸಾಲೆಗಳು ರೋಗ ನೀರೊಧಕ ಶಕ್ತಿಯನ್ನು ಹೊಂದಿದ್ದು, ಜೀವಕೋಶಹಾನಿಯಿಂದ ತಡೆಯುತ್ತದೆ. ಅರಿಶಿನ, ದಾಲ್ಚಿನ್ನಿ, ಲವಂಗ, ಮೆಣಸು ಇತ್ಯಾದಿ. ಅರಿಶಿಣದಲ್ಲಿ ಆಂಟಿ ಕ್ಯಾನ್ಸರ್ ಎಂದರೆ ಕ್ಯಾನ್ಸರ್ ತಡೆಗಟ್ಟುವ ಗುಣಲಕ್ಷಣಗಳಿವೆ ಎಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ. ಲವಂಗ ಎಣ್ಣೆಯು ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು, ಬ್ಯಾಕ್ಟಿರಿಯಾದ ಸೋಂಕನ್ನು ಎದುರಿಸಲು ಮತ್ತು ಮೊಡವೆಗಳನ್ನು ಪರಿಹರಿಸಲು ಪ್ರಯೋಜನಕಾರಿಯಾಗಿದೆ.

    ನಮ್ಮ ಮನೆಗಳಲ್ಲಿ ಸಹಜವಾಗಿ ಕೆಮ್ಮು, ನೆಗಡಿ, ಅರ್ಜಿಣವಾದಾಗ ಮಸಾಲೆಗಳಿಂದ ಮಾಡಿದ ಕಷಾಯ ಉಪಯೋಗಿಸುತ್ತೇವೆ. ಅದರಲ್ಲಿ ಬೆಳುಳ್ಳಿಗೆ ವಿಶೇಷವಾದ ಸ್ಥಾನವಿದೆ. ಮೊದಲ ಶತಮಾನದಿಂದಲೂ ಆಯುರ್ವೇದ ಔಷಧದಲ್ಲಿ ಬೆಳ್ಳುಳ್ಳಿ ರಕ್ತದ ದ್ರವತೆಗಳನ್ನು ಕಾಪಾಡಿಕೊಳ್ಳುವ ಮೂಲಕ ಹೃದಯದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ವೈಜ್ಞಾನಿಕವಾಗಿ ಬೆಳ್ಳುಳ್ಳಿಯ ಸೇವನೆಯಿಂದ ಹೃದಯ ಸಂಬAಧಿತ ಕಾಯಿಲೆಗಳನ್ನು ತಡಗಟ್ಟಬಹುದೆಂದು ತಿಳಿಸಿವೆ. ಬೆಳ್ಳುಳಿ ನಮ್ಮ ರಕ್ತದ ಒಳ್ಳೆಯ ಕೊಬ್ಬಿನಾಂಶ (HDL) ವನ್ನು ಹೆಚ್ಚಿಸಿ, ಕೆಟ್ಟ ಕೊಬ್ಬಿನಾಂಶವನ್ನು (LDL) ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಬೆಳುಳ್ಳಿಯ ಸ್ನೇಹಿತನಾದ ಶುಂಠಿಯು ಸಹ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿವೆ. ಶುಂಠಿಯಲ್ಲಿನ ಘಟಕಾಂಶವಾದ ಜಿಂಜರಾಲ್ ಎಂಬ ಅಂಶವು ಇದು ರಕ್ತನಾಳಗಳಲ್ಲಿ ರಕ್ತದ ಸಂಚಲನವನ್ನು ಉತ್ತೇಜಿಸುತ್ತಾ ಅದರಿಂದಾಗಿ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ ಶುಂಠಿಯಲ್ಲಿ ನೋವು ನಿವಾರಕ ಶಕ್ತಿಯಿದೆಯೆಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ.

    ಹೀಗೆ ದಿನನಿತ್ಯದಲ್ಲಿ ಉಪಯೋಗಿಸುವ ಹಲವಾರು ಅಡುಗೆ ಪದಾರ್ಥಗಳ ವೈಶಿಷ್ಟ್ಯತೆಯನ್ನು ತಿಳಿದು ನಮ್ಮ ಊಟದ ಬಳಕೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಅಳವಡಿಸುವುದರಿಂದ ಕೆಲವೊಂದು ರೋಗಗಳು ಸುಧಾರಣೆಯನ್ನು ಕಾಣಬಹುದು.

    ಅದರಲ್ಲಿಯು ಹಸಿರು ತರಕಾರಿಗಳಲ್ಲಿ ರೋಗ ನಿರೋಧಕ ಶಕ್ತಿ, ವಿಟಮಿನ್ ಎ, ಬಿ, ಸಿ, ಖನಿಜಾಂಶಗಳೂ ವಿಪುಲವಾಗಿವೆ.

  • ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

    ಪ್ರವಾದಿ ಮುಹಮ್ಮದ್(ಸ) ಜಗತ್ತು ಕಂಡ ಮಾದರಿ ಶಿಕ್ಷಕ

    ಮುಹಮ್ಮದರು(ಸ) ಪ್ರವಾದಿಯಾಗಿದ್ದರು. ದೇವನು ಇವರನ್ನು ಜನರಿಗೆ ದೇವನ ಆದೇಶ ಮತ್ತು ಸದ್ವಿವೇಕವನ್ನು ಕಲಿಸಿ ಕೊಡಲಿಕ್ಕಾಗಿ ಕಳುಹಿಸಿಕೊಟ್ಟರು. ಇವರು ಜಗತ್ತು ಕಂಡ ಅದ್ವಿತೀಯ ಶಿಕ್ಷಕರಾಗಿದ್ದರು. ಮುಹಮ್ಮದರು ಮೊತ್ತ ಮೊದಲು ಮದೀನಾದ ಮಸೀದಿಯ ಒಂದು ಭಾಗದಲ್ಲಿ ಶಿಕ್ಷಣ ಕೇಂದ್ರವನ್ನು ಆರಂಭಿಸಿದರು. ಅಲ್ಲಿ ಸರಿ ಸುಮಾರು 70ರಿಂದ 80 ವಿದ್ಯಾರ್ಥಿಗಳಿದ್ದರು. ಪ್ರವಾದಿಯವರಿಂದ ನೇರವಾಗಿ ಶಿಕ್ಷಣ ಮತ್ತು ತರಬೇತಿಯನ್ನು ಗಳಿಸಿದವರಿಗೆ ಅವರ ಪ್ರತಿಭೆ ಸಾಮರ್ಥ್ಯಗಳ ಆಧಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಅವರ ಪೈಕಿ ಕೆಲವರು ಶಿಕ್ಷಕರಾಗಿಯೇ ಮುಂದುವರಿದರು. ಕೇವಲ ಮದೀನಾದಲ್ಲಿ ಮಾತ್ರವಲ್ಲ ಜಗತ್ತಿನ ವಿವಿಧೆಡೆಗಳಲ್ಲಿ ಹೆಚ್ಚಾಗಿ ಅವರು ತಮ್ಮ ಶಿಕ್ಷಕ ವೃತ್ತಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು ಮತ್ತು ದೊಡ್ಡ ಸಂಖ್ಯೆಯ ಶಿಕ್ಷಕ ವೃಂದವನ್ನು ಹೊಂದಿದ್ದರು.

    ಶಿಕ್ಷಕ ಎಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದರ(ಸ) ಜೀವನದಿಂದ ನಾವು ಗಳಿಸಬೇಕಾದ ಪಾಠಗಳು ಸಾಕಷ್ಟಿವೆ. ಇವುಗಳ ಪೈಕಿ ಮೊದಲನೆಯದು ಅವರ ಮಾದರಿ ಜೀವನ. ಪ್ರವಾದಿ ಮುಹಮ್ಮದರು(ಸ) ಸದಾ ಹೇಳುತ್ತಿದ್ದುದನ್ನು ಜೀವನದಲ್ಲಿಯೂ ಪಾಲಿಸಿ ತೋರಿಸುತ್ತಿದ್ದರು. ಇದರಿಂದಾಗಿ ಜನರಿಗೆ ಅವರನ್ನು ಅನುಸರಿಸಲು ಸುಲಭವಾಯಿತು. ಇತರರಿಗೆ ಬೋಧಿಸುತ್ತಾ ಎಲ್ಲ ವಿಷಯಗಳನ್ನು ಚಾಚು ತಪ್ಪದೆ ಸ್ವಂತ ಪಾಲಿಸಿದಾಗ ಜನರಿಗೆ ಅವರ ಆಜ್ಞೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಸರಿಸಲು ಸುಲಭವಾಗುತ್ತದೆ. ಇದರ ಕಾರಣದಿಂದಾಗಿ ಅವರಿಂದ ಶಿಕ್ಷಣವನ್ನು ಗಳಿಸಿದವರ ಜೀವನದಲ್ಲಿಯೂ ಅವರ ಶಿಕ್ಷಣ ತರಬೇತಿಯ ಪ್ರತಿಫಲನವು ಕಂಡುಬರುತ್ತಿತ್ತು. ನಮ್ಮ ಶಿಕ್ಷಕ ವೃಂದವು ಈ ಆದರ್ಶವನ್ನು ಅಳವಡಿಸಿಕೊಂಡರೆ ಮಾದರಿ ಸಮಾಜವನ್ನು ಕಟ್ಟಿ ಬೆಳೆಸಲು ಖಂಡಿತ ಸಹಾಯಕವಾಗಬಹುದು.

    ಯಾರನ್ನು ಸುಶಿಕ್ಷಿತರನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದರೋ ಅವರೊಂದಿಗೆ ಪ್ರವಾದಿಯವರು(ಸ) ಆತ್ಮೀಯವಾಗಿ ಒಡನಾಟ ಇಟ್ಟುಕೊಂಡಿದ್ದರು. ಪ್ರವಾದಿಯವರ ಒಡನಾಟದಿಂದಾಗಿ ಅನೇಕ ಜನರು ಶೂನ್ಯದಿಂದ ಎತ್ತರಕ್ಕೆ ಬೆಳೆದರು. ಜೀತದಾಳು ಆಗಿದ್ದ ಬಿಲಾಲ್ ಆಪ್ತ ಸಂಗಾತಿಯಾಗಿ ಮಾರ್ಪಟ್ಟರು. ಜಗಳಗಂಟಿಯಾಗಿದ್ದ ಝುಬೇರ್ ಸೇನಾನಿಯಾಗಿ ಮಾರ್ಪಟ್ಟರು. ಮಿತಬಾಷಿಯಾಗಿದ್ದ ಮಿಸ್‌ಅಬ್ ಬಿನ್ ಉಮೈರ್ ಪ್ರವಚನಕಾರರಾದರು. ಬೇಟೆಗಾರರಾಗಿದ್ದ ಹಂಝ ಸೇನಾ ಪಡೆಯ ನಾಯಕರಾದರು. ಮುಂಗೋಪಿಯಾಗಿದ್ದ ಉಮರ್ ನಾಯಕರಾಗಿ ಮಾರ್ಪಟ್ಟರು. ಗೃಹಿಣಿ ಯಾಗಿದ್ದ ಆಯಿಷ ಉಪದೇಶಕಿ ,ವೈದ್ಯಕೀಯ ಮತ್ತು ಸಂಖ್ಯಾಶಾಸ್ತ್ರದ ತಜ್ಞೆಯಾಗಿ ಬೆಳೆದು ನಿಂತರು. ನಮ್ಮ ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅವರ ಆಗುಹೋಗುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅವರೊಂದಿಗೆ ಒಡನಾಡಿದ್ದೆ ಆದರೆ ಖಂಡಿತವಾಗಿಯೂ ಮಕ್ಕಳ ಪ್ರತಿಭೆಗಳನ್ನು ಸಕಾರಾತ್ಮಕಾಗಿ ಬೆಳೆಸಬಹುದಾಗಿದೆ.

    ಪ್ರವಾದಿಯವರು(ಸ) ಶಿಕ್ಷಣ ನೀಡುತ್ತಿದ್ದ ವಿಧಾನವೇ ಬಹಳ ಸುಂದರ .ವಿವಿಧ ರೀತಿಯ ಪರಿಕಲ್ಪನೆಗಳನ್ನು ವಿವರಿಸಲು ಹಲವಾರು ಉದಾಹರಣೆಗಳನ್ನು ಅವರು ಬಳಸುತ್ತಿದ್ದರು. ಸಾಮಾನ್ಯ ಮನುಷ್ಯನ ಮೆದುಳು ವಿಷಯವನ್ನು ಅರ್ಥಮಾಡಿಕೊಳ್ಳಲು ಹಲವಾರು ಮಿತಿಗಳನ್ನು ಹೊಂದಿರುತ್ತದೆ .ಆದುದರಿಂದ ಉದಾಹರಣೆಗಳ ಮೂಲಕ ವಿಷಯಗಳನ್ನು ತುಂಬಾ ಸರಳವಾಗಿ ಅರ್ಥ ಮಾಡಿಸಿಕೊಡಬಹುದಾಗಿದೆ.
    ಪ್ರವಾದಿ ಮುಹಮ್ಮದರು(ಸ) ಹೇಳಿದರು: “ಯಾರ ಕೈಯಲ್ಲಿ ನನ್ನ ಆತ್ಮ ಇದೆಯೋ ಅವನ ಆಣೆ .ಸತ್ಯ ವಿಶ್ವಾಸಿಯ ಉದಾಹರಣೆಯು ಜೇನುನೊಣದಂತಿದೆ. ಅದು ಶುದ್ಧ ಮತ್ತು ಆರೋಗ್ಯಕರವಾದದನ್ನು ಮಾತ್ರ ತಿನ್ನುತ್ತದೆ. ಶುದ್ಧವಾದದನ್ನು ಮತ್ತು ಉಪಯುಕ್ತವಾದದ್ದನ್ನೇ ನೀಡುತ್ತದೆ.”

    “ಮರುಭೂಮಿಯಲ್ಲಿ ತನ್ನ ಒಂಟೆಯನ್ನು ಕಳೆದುಕೊಂಡು ವ್ಯಥೆಪಡುವಂತಹ ವ್ಯಕ್ತಿಗೆ ಅನಿರೀಕ್ಷಿತವಾಗಿ ಆ ಒಂಟೆ ಮರಳಿ ಸಿಗುವಾಗ ಆಗುವ ಖುಷಿಗಿಂತಲೂ ತನ್ನ ಪಾಪಗಳಿಗೆ ಪ್ರಾಯಶ್ಚಿತಪಟ್ಟು ಮರಳುವ ದಾಸನ ಬಗ್ಗೆ ದೇವನು ಹೆಚ್ಚು ಸಂತೋಷಗೊಳ್ಳುತ್ತಾನೆ” ಈ ರೀತಿಯ ಮನಮುಟ್ಟುವ ಉದಾಹರಣೆಗಳನ್ನು ಯಾರು ಸುಲಭದಲ್ಲಿ ಮರೆತುಬಿಡುವುದಿಲ್ಲ .ನಮ್ಮ ಶಿಕ್ಷಕರು ಈ ಉದಾಹರಣೆಗಳ ಮೂಲಕ ಮಕ್ಕಳಿಗೆ ಪಾಠ ಮನದಟ್ಟು ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು.

    ಕೆಲವರಿಗೆ ತಮ್ಮ ವಿದ್ವತ್ತನ್ನು ಅತಿಯಾಗಿ ಪ್ರದರ್ಶಿಸುವ ಅಭ್ಯಾಸವಿರುತ್ತದೆ. ಅಂತಹವರು ಕಠಿಣ ಪದಗಳನ್ನು ಬಳಸುವ ಮೂಲಕ ವಿಷಯಗಳನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಇದು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ಏಕೆಂದರೆ ವ್ಯಕ್ತಿಗೆ ವಿಷಯ ಅರ್ಥವಾಗಬೇಕೆಂದರೆ ಅದು ಸರಳವಾಗಿರಬೇಕು. ಸಂಕ್ಷಿಪ್ತವಾಗಿರಬೇಕು ಮತ್ತು ನೇರವಾದ ನುಡಿಯಾಗಿರಬೇಕು. ಪ್ರವಾದಿ ಮುಹಮ್ಮದರ(ಸ) ಜೀವನದುದ್ದಕ್ಕೂ ಅವರು ಬಳಸಿದಂತಹ ಕೆಲವು ವಚನಗಳು ನಮ್ಮ ಗಮನವನ್ನು ಸೆಳೆಯುತ್ತದೆ. ಎಷ್ಟು ಸಣ್ಣ ಮತ್ತು ನೇರವಾದ ನುಡಿಗಳ ಮೂಲಕ ಒಂದು ದೊಡ್ಡ ವಿಷಯವನ್ನು ಪ್ರಸ್ತುತಪಡಿಸಬಹುದು ಎಂಬ ಕಲೆಯನ್ನು ನಾವು ಪ್ರವಾದಿಯವರ ಶಿಕ್ಷಣ ರೀತಿಯಿಂದ ಅರ್ಥಮಾಡಿಕೊಳ್ಳಬಹುದು. ಸ್ವಚ್ಛತೆಯು ವಿಶ್ವಾಸದ ಅರ್ಧಾಂಶವಾಗಿದೆ. ಕುಡಿಯುವ ನೀರನ್ನು ಮೊದಲು ಗಮನಿಸಿ ನೋಡಿ. ವಿನಮ್ರತೆಯು ವಿಶ್ವಾಸದ ಒಂದು ಭಾಗವಾಗಿದೆ .ಸ್ವರ್ಗವು ತಾಯಿಯ ಪಾದದಡಿಯಲ್ಲಿದೆ. ನಿಮ್ಮ ನೆರೆಹೊರೆಯವರಿಗೂ ನಿಮ್ಮ ಮೇಲೆ ಹಕ್ಕಿದೆ. ಸಭ್ಯತೆ ವಿಶ್ವಾಸದ ಅರ್ಧಾಂಶವಾಗಿದೆ. ಅನುಚಿತ ವರ್ತನೆಯು ಅನ್ಯಾಯವಾಗಿದೆ. ಈ ರೀತಿಯ ಸುಲಭವಾದ ನೇರವಾದ ಸಂದೇಶಗಳು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆನಪಿಟ್ಟುಕೊಳ್ಳಲು ಮತ್ತು ಅನುಸರಿಸಲು ಸಾಧ್ಯವಾಗುತ್ತದೆ.

    ಕಲಿಕೆಯ ಮಧ್ಯೆ ವಿರಾಮ ನೀಡುವುದು ಬಹಳ ಮುಖ್ಯ. ಪ್ರವಾದಿಯವರು ಇದನ್ನು ಚೆನ್ನಾಗಿ ಬಳಸುತ್ತಿದ್ದರು. ಜನರಿಗೆ ಬೇಸರವಾಗದಂತೆ ಸೂಕ್ತ ಸಮಯವನ್ನು ಉಪದೇಶ ನೀಡಲು ಆರಿಸಿಕೊಳ್ಳುತ್ತಿದ್ದರು. ಧರ್ಮೋಪದೇಶ ಮತ್ತು ಜ್ಞಾನ ಸಂಪಾದನೆ ಸಹಚರರಿಗೆ ಬೇಸರ ಮತ್ತು ಹೊರೆಯಾಗದಂತೆ ನೋಡಿಕೊಂಡರು. ಕೆಲವೊಮ್ಮೆ ಅವರು ಸಹಚರರಿಗೆ ಹೊಸದಾಗಿ ಏನನ್ನು ಕಲಿಸುತ್ತಿರಲಿಲ್ಲ. ಅದಕ್ಕೆ ಅವರೊಡನೆ ಕಾರಣವನ್ನು ಕೇಳಿದಾಗ ಹೆಚ್ಚು ಹೊರೆ ಮಾಡಲು ಬಯಸುವುದಿಲ್ಲ ಎಂದು ಉತ್ತರಿಸಿದರು. ಪ್ರವಾದಿಯವರು ತರಬೇತಿಗಳ ನಡುವೆ ಮನಸ್ಸನ್ನು ಉಲ್ಲಾಸಗೊಳಿಸುವಂತೆ ವಿರಾಮ ನೀಡುವುದರಲ್ಲಿ ನಂಬಿಕೆಯನ್ನು ಹೊಂದಿದ್ದರು. ಆಧುನಿಕ ಶಿಕ್ಷಣ ವ್ಯವಸ್ಥೆಯು ಕೇವಲ ಅಂಕಿಗಳ ಸುತ್ತ ಗಿರಕಿ ಹೊಡೆಯುತ್ತಿರುವುದರಿಂದ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿನ ಶಾಲೆಗಳು ಮರೆತಿವೆ. ಪಠ್ಯೇತರ ಚಟುವಟಿಕೆಗಳಿಗಾಗಿ ಆ ತೋಟಗಳಿಗಾಗಿ ಮೀಸಲಾಗಿರುವ ತರಗತಿಗಳನ್ನು ಇತರ ವಿಷಯಗಳನ್ನು ಕಲಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಈ ಮೂಲಕ ಮಕ್ಕಳಿಗೆ ವಿರಾಮ ಮತ್ತು ಮನಸ್ಸಿಗೆ ಉಲ್ಲಾಸ ಸಿಗುವ ಅವಕಾಶದಿಂದಲೂ ವಂಚಿತಗೊಳಿಸಲಾಗುತ್ತಿದೆ. ಈ ಬಗ್ಗೆ ಶಿಕ್ಷಕರು ವಿಶೇಷ ಗಮನವನ್ನು ಹರಿಸಬೇಕು.

    ಪ್ರವಾದಿಯವರು(ಸ) ಎಂದೂ ಸುದೀರ್ಘವಾಗಿ ವಿಷಯ ಮಂಡನೆ ಮಾಡುತ್ತಿರಲಿಲ್ಲ. ಕೇಳುಗರು ಆಲಿಸಲು ಬಯಸಿದ್ದಾರೆ ಎಂಬAತಹ ಪರಿಸ್ಥಿತಿ ಇದ್ದ ಸ್ಥಳದಲ್ಲಿ ಮಾತ್ರ ಅವರು ಮಾತನಾಡುತ್ತಿದ್ದರು. ಕೇಳುಗರನ್ನು ದಣಿಯುವಂತೆ ಮಾಡುವುದು ಪ್ರವಾದಿಯವರಿಗೆ ಇಷ್ಟವಿರಲಿಲ್ಲ .ಆದುದರಿಂದ ಕಲಿಯುವ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಹಂತ ತಲುಪದ ಹಾಗೆ ಶಿಕ್ಷಕರು ನೋಡಿಕೊಳ್ಳಬೇಕು ಮತ್ತು ಕಲಿಕೆಯನ್ನು ಮಕ್ಕಳು ಆಸ್ವಾದಿಸಿ ಕಲಿಯುವಂತಹ ವಾತಾವರಣವನ್ನು ತರಗತಿಯಲ್ಲಿ ಉಂಟು ಮಾಡಬೇಕು.

    ಪ್ರವಾದಿಯವರು(ಸ) ಯಾವುದಾದರೂ ಪ್ರಮುಖ ವಿಷಯವನ್ನು ಪ್ರಸ್ತಾಪಿಸುವಾಗ ಅದನ್ನು ಮೂರು ಬಾರಿ ಪುನರಾವರ್ತಿಸುತ್ತಿದ್ದರು. ಇದರಿಂದ ವಿಷಯವು ಸರಿಯಾಗಿ ಅರ್ಥವಾಗುತ್ತಿತ್ತು. ವಿವರಣೆಗಾಗಿ ಚಿತ್ರಗಳನ್ನು ಬಳಸುವುದು ಪ್ರವಾದಿಯವರ ಶಿಕ್ಷಣದ ಒಂದು ಪ್ರಮುಖ ಮಾಧ್ಯಮವಾಗಿತ್ತು. ಚಿಕ್ಕ ಆಕೃತಿಯ ಮೂಲಕ ವಿಷಯಕ್ಕೆ ಯಾವ ರೀತಿಯಲ್ಲಿ ಅದನ್ನು ಜೋಡಿಸಬಹುದು ಎಂಬುದನ್ನು ಅವರು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ರಸಪ್ರಶ್ನೆಗಳನ್ನು ಕೇಳುವುದು ಪ್ರವಾದಿಯವರಿಗೆ ಇಷ್ಟವಾದಂತಹ ಒಂದು ವಿಧಾನವಾಗಿತ್ತು. ಜನರಿಗೆ ಪ್ರಶ್ನೆಯನ್ನು ಕೇಳಿ, ಅವರು ಯೋಚಿಸುವಂತೆ ಮಾಡಿ ಜೀವನಕ್ಕೆ ಸಂಬAಧಿಸಿದ ವಿವಿಧ ಅಂಶಗಳನ್ನು ಅವರು ಅರಿತುಕೊಳ್ಳುವಂತೆ ಮಾಡುತ್ತಿದ್ದರು. ಇದೇ ವಿಧಾನವನ್ನು ನಮ್ಮ ಶಿಕ್ಷಕರು ಅಳವಡಿಸಿಕೊಳ್ಳಬಹುದು.
    ಕಥೆಗಳಿಗೆ ಎಲ್ಲ ಕಾಲಗಳಲ್ಲೂ ತನ್ನದೇ ಆದ ಮಹತ್ವವಿರುತ್ತದೆ.

    ಪ್ರವಾದಿಯವರು ಸಣ್ಣ ಸಣ್ಣ ಕಥೆಗಳನ್ನು ಹೇಳುವ ಮೂಲಕ ಸಂಗಾತಿಗಳಲ್ಲಿ ಜ್ಞಾನದ ಹಣತೆಯನ್ನು ಹಚ್ಚುತ್ತಿದ್ದರು. ಪ್ರವಾದಿಯವರು(ಸ) ಹೇಳಿದ ಕಥೆಯೊಂದು ಹೀಗಿದೆ: ನಾಯಿಯೊಂದು ಬಾವಿಯ ಸುತ್ತಲೂ ಓಡಾಡುತ್ತಿತ್ತು. ಅದು ಬಾಯಾರಿಕೆಯಿಂದ ಬಳಲಿತ್ತು. ಬನೀ ಇಸ್ರಾಈಲರಿಗೆ ಸೇರಿದ್ದ ದುರಾಚಾರಿ ಒಬ್ಬಳು ಈ ಸ್ಥಿತಿಯಲ್ಲಿ ನಾಯಿಯನ್ನು ನೋಡಿದಳು. ಅವಳು ತನ್ನ ಚರ್ಮದ ಕಾಲು ಚೀಲವನ್ನು ತೆಗೆದು ತಾನು ಧರಿಸಿದ್ದ ಮೇಲು ಹೊದಿಕೆಗೆ ಕಟ್ಟಿದಳು. ಅದನ್ನು ಇಳಿಬಿಟ್ಟು ಬಿಟ್ಟು ಬಾವಿಯಿಂದ ನೀರು ಸೇರಿದಳು. ನಂತರ ಅದನ್ನು ನಾಯಿಗೆ ಕುಡಿಯಲು ಕೊಟ್ಟಳು. ಈ ಕೃತ್ಯದಿಂದಾಗಿ ಆಕೆಯ ಹಿಂದಿನ ಪಾಪಗಳನ್ನು ಕ್ಷಮಿಸಲಾಯಿತು.

    ಆಧುನಿಕ ತಂತ್ರಜ್ಞಾನದ ಮಧ್ಯೆ ಬೆಳೆಯುತ್ತಿರುವ ಮಕ್ಕಳೂ, ನಮ್ಮ ಶಿಕ್ಷಕರ ಬಾಯಿಂದ ಕಥೆಗಳನ್ನು ಕೇಳುವುದನ್ನು ಇಷ್ಟಪಡುತ್ತಾರೆ. ಆದುದರಿಂದ ನೀತಿ ಬೋಧಕ ಕಥೆಗಳನ್ನು ಮಕ್ಕಳಿಗೆ ಹೇಳಲು ಶಿಕ್ಷಕರು ಆಸಕ್ತಿ ತೋರಬೇಕು.
    ಇತರರನ್ನು ತೆಗಳದಿರುವುದು ಅವಮಾನಿಸದಿರುವುದು ಪ್ರವಾದಿಯವರ(ಸ) ವಿಶೇಷ ಗುಣವಾಗಿತ್ತು. ತಪ್ಪುಗಳು ಯಾರಿಂದಲೂ ಸಂಭವಿಸಬಹುದು. ಆದರೆ ಸಾರ್ವಜನಿಕವಾಗಿ ವ್ಯಕ್ತಿಯನ್ನು ಅವನ ತಪ್ಪಿಗಾಗಿ ಅವಹೇಳನ ಮಾಡುವುದು ಸರಿಯಲ್ಲ. ಪ್ರವಾದಿಯವರು(ಸ) ಎಂದೂ ಈ ವಿಧಾನವನ್ನು ಬಳಸಲಿಲ್ಲ. ಅವರು ವೈಯಕ್ತಿಕವಾಗಿ ಅವರನ್ನು ಕರೆಸಿ ವಿಷಯವನ್ನು ಮನವರಿಕೆ ಮಾಡಿಸಿ ನಯವಾಗಿ ಇನ್ನು ಮುಂದೆ ಹೀಗೆ ಮಾಡಬಾರದು ಎಂದು ತಿಳಿಸುತ್ತಿದ್ದರು. ಸಹನೆಯಿಂದ ತಪ್ಪನ್ನು ತಿದ್ದಿ ಹೇಳುತ್ತಿದ್ದರು. ಈ ಅಭ್ಯಾಸವನ್ನು ಕೂಡ ನಮ್ಮ ಶಿಕ್ಷಕರು ತಮ್ಮ ಜೀವನದ ಭಾಗವಾಗಿಸಬೇಕು. ಸಣ್ಣಪುಟ್ಟ ವಿಷಯಗಳಿಗೂ ಜೀವನವನ್ನೇ ಮುಗಿಸಬೇಕು ಎಂಬ ಒತ್ತಡದೊಂದಿಗೆ ಬದುಕುತ್ತಿರುವ ಆಧುನಿಕ ಯುಗದ ಮಕ್ಕಳ ಮಧ್ಯೆ ಅವರಿಗೆ ಶಿಕ್ಷಣವನ್ನು ನೀಡುವ ಶಿಕ್ಷಕರು ಸಹನೆಯ ಮೂರ್ತಿಗಳಾಗಿ ವರ್ತಿಸಬೇಕು .ಎಂದೂ ಯಾವ ಮಕ್ಕಳನ್ನು ಅವಮಾನಿಸುವುದು ತೆಗಳುವುದು ಸಲ್ಲದು. ಒಂದು ವೇಳೆ ಈ ಅಭ್ಯಾಸ ನಮ್ಮಲ್ಲಿದ್ದರೆ ಅದನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು.

    ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಅತ್ಯುತ್ತಮ ರೀತಿಯಲ್ಲಿ ಶಿಕ್ಷಣ ತರಬೇತಿ ನೀಡಲು ಪ್ರವಾದಿ ಮುಹಮ್ಮದರು(ಸ) ತಾಕೀತು ಮಾಡಿರುವರು. ನೀವು ನಿಮ್ಮ ಮಕ್ಕಳಿಗೆ ಕೊಡುವ ಅತ್ಯುತ್ತಮವಾದಂತಹ ಉಡುಗೊರೆ ಅದು ಉತ್ತಮ ತರಬೇತಿ ಮತ್ತು ಶಿಕ್ಷಣವಾಗಿದೆ ಎಂಬ ಪ್ರವಾದಿ ವಚನ ಬಹಳ ಮಾರ್ಮಿಕವಾದುದಾಗಿದೆ. ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡುವ ಓಟದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿಯನ್ನು ನೀಡಲು ವಿಫಲರಾಗುವ ಹೆತ್ತವರು ಜೀವಿಸುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ .ಪ್ರವಾದಿ ಮುಹಮ್ಮದರ(ಸ) ಈ ಶಿಕ್ಷಣ ರೀತಿಯನ್ನು ಹೆತ್ತವರು ಮತ್ತು ಶಿಕ್ಷಕರು ಅಳವಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಬದಲಾವಣೆ ಗೋಚರಿಸಬಹುದು.

    ಸಬೀಹ ಫಾತಿಮ, ಮಂಗಳೂರು

  • ವಿದ್ಯಾರ್ಥಿಗಳ ಗೌರವ ಗಳಿಸಲು ವಿಫಲರಾಗುತ್ತಿರುವರೇ ಅಧ್ಯಾಪಕರು? 
ಇಲ್ಲಿವೆ ಡಾ| ಸಿ.ಜೆ. ಜೋನ್ ರ 10 ಸೂತ್ರಗಳು

    ವಿದ್ಯಾರ್ಥಿಗಳ ಗೌರವ ಗಳಿಸಲು ವಿಫಲರಾಗುತ್ತಿರುವರೇ ಅಧ್ಯಾಪಕರು? ಇಲ್ಲಿವೆ ಡಾ| ಸಿ.ಜೆ. ಜೋನ್ ರ 10 ಸೂತ್ರಗಳು

    ವಿದ್ಯಾರ್ಥಿಗಳೊಂದಿಗೆ ಸ್ವಲ್ಪ ಜೋರಾಗಿ ಮಾತನಾಡಿದರೂ ಶಿಕ್ಷಕರ ವಿರುದ್ಧ ದೂರು ನೀಡಲು ಹಿಂದೆ ಮುಂದೆ ನೋಡದ ಹೆತ್ತವರು ಇರುವ ಕಾಲವಿದು. ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿ ವ್ಯವಹರಿಸುವ ವಿದ್ಯಾರ್ಥಿಗಳೂ ಇರುತ್ತಾರೆ. ಇವೆಲ್ಲವುಗಳು ಅಧ್ಯಾಪಕರ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುತ್ತದೆ.

    ಮಕ್ಕಳು ಅತಿಯಾದ ತುಂಟಾಟವನ್ನು ತೋರಿಸಿದರೆ ಅಧ್ಯಾಪಕರು ಜೋರು ಮಾಡಿದರೆ ಅಥವಾ ಶಬ್ದವನ್ನು ಎತ್ತರಿಸಿ ಮಾತನಾಡಿದರೆ ಕಣ್ಣು ದೊಡ್ಡದು ಮಾಡಿ ನೋಡಿದರೆ ಮಕ್ಕಳ ಮನಸ್ಸಿನಲ್ಲಿ ಗಾಯ ಉಂಟಾಗುತ್ತದೆ. ಆದರೆ ತಪ್ಪುಗಳನ್ನು ಪುನರಾವರ್ತಿಸದೆ ಇರುವ ರೀತಿಯಲ್ಲಿ ವಿಷಯಗಳನ್ನು ಪ್ರೀತಿಯೊಂದಿಗೆ ಮನವರಿಕೆ ಮಾಡಿ ಹೃದಯದಲ್ಲಿ ಬೆಳಕನ್ನು ಹಚ್ಚುವ ಒಳ್ಳೆಯ ಅಧ್ಯಾಪಕರು ಇಂದಿಗೂ ಇದ್ದಾರೆ .ಅವರು ಕೂಡ ನಿಷ್ಕ್ರಿಯರಾಗಿ ಮಾರ್ಪಡುವ ರೀತಿಯಲ್ಲಿ ಇಂದಿನ ಹಲವು ವಿದ್ಯಾಸಂಸ್ಥೆಗಳ ಪರಿಸ್ಥಿತಿ ಬದಲಾಗಿದೆ. “ನನ್ನ ಮಗನನ್ನು ಶಿಕ್ಷಿಸುವ ಅಧಿಕಾರವನ್ನು ನಾನು ಯಾರಿಗೂ ನೀಡಿಲ್ಲ” ಎಂಬ ರೀತಿಯ ಹೇಳಿಕೆಗಳು. `ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ವಿಧಾನವನ್ನು ಸ್ವೀಕರಿಸಿದ ಅಹಂಕಾರದಿAದ ವರ್ತಿಸುವ ಹೆತ್ತವರ ಸಂಖ್ಯೆ ಇಂದು ಹೆಚ್ಚುತ್ತಿದೆ.

    ವಿದ್ಯಾರ್ಥಿಗಳ ಗೌರವವನ್ನು ಗಳಿಸಲು ವಿಫಲರಾದ ಶಿಕ್ಷಕರು
    ಕಲಿಕೆಯ ಜೊತೆಗೆ ವ್ಯಕ್ತಿತ್ವವನ್ನು ರೂಪಿಸುವಂತಹ ಕೆಲಸದಲ್ಲಿ ಅಧ್ಯಾಪಕರ ಪಾತ್ರವನ್ನು ಇಂದಿನ ಶೈಕ್ಷಣಿಕ ವ್ಯವಸ್ಥೆ ಕಡಿಮೆ ಮಾಡುತ್ತಿದೆ ಎಂಬುದರ ಸೂಚನೆಗಳು ಲಭಿಸುತ್ತಿವೆ. ಮಾದರಿ ಯೋಗ್ಯವಾದಂತಹ ವ್ಯವಹಾರ ಮತ್ತು ಶೈಲಿಗಳ ಅಭಾವ, ಜೊತೆಗೆ ಅಧ್ಯಾಪಕ ವೃತ್ತಿಯಲ್ಲಿ ವಿಶಿಷ್ಟತೆಯನ್ನು ತೋರ್ಪಡಿಸಲು ಸಾಧ್ಯವಾಗದೆ ಇರುವ ಕಾರಣ ವಿದ್ಯಾರ್ಥಿಗಳಿಂದ ಗೌರವವನ್ನು ಗಳಿಸಲು ಸಾಧ್ಯವಾಗದ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ.

    ಹೆತ್ತವರು ವಿದ್ಯಾರ್ಥಿಗಳು ಅಧ್ಯಾಪಕರು ಮುಂತಾದವರೆಲ್ಲ ಸೇರಿ ಉಂಟಾಗುವ ವಿದ್ಯಾಲಯದ ಪರಿಸರದ ಬಗ್ಗೆ ಅನೇಕ ಪ್ರಶ್ನೆಗಳು ಏಳುತ್ತಿವೆ. ತಾಂತ್ರಿಕತೆಯ ಡಿಜಿಟಲ್ ಯುಗವು ಮಕ್ಕಳ ಸ್ವಭಾವವನ್ನು ಉಂಟು ಮಾಡುವುದರಲ್ಲಿ, ಅವರ ಸಾಮಾಜಿಕ ವರ್ತನೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಮಲು ಪದಾರ್ಥಗಳ ವ್ಯಾಪಕವಾದ ಬಳಕೆಯು ಇನ್ನೊಂದು ಮುಖ್ಯ ಸಮಸ್ಯೆಯಾಗಿದೆ. ಕಾಲಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ಪಾತ್ರವು ಪುನರ್ನವೀಕರಿಸಲ್ಪಡುತ್ತಿದೆ. ಅರ್ಥಪೂರ್ಣವಾಗಿ ಎಲ್ಲರೂ ಜೊತೆಗೂಡಿ ವಿಷಯಗಳನ್ನು ಗಮನಿಸದೇ ಹೋದರೆ, ಕ್ರಮಗಳನ್ನು ಕೈಗೊಳ್ಳದಿದ್ದರೆ ಮಕ್ಕಳು ನಮ್ಮ ಕೈಯಿಂದ ಹೊರಟು ಹೋಗಬಹುದು.

    ಸರ್ ಸ್ವಲ್ಪ ಬದಲಾಗೋಣ
    ಯಾವುದೇ ವಿಷಯದಲ್ಲಾದರೂ ಒಂದಕ್ಕಿಂತ ಒಂದು ಉತ್ತಮವಾದಂತಹ ಆನ್‌ಲೈನ್ ಕ್ಲಾಸುಗಳು ಇಂದು ಲಭ್ಯವಿದೆ. ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಎಲ್ಲ ರೀತಿಯ ಮಾಹಿತಿಗಳು ಒಳ್ಳೆಯ ರೀತಿಯಲ್ಲಿ ಸಿಗುತ್ತದೆ. ಅದೇ ರೀತಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿಯ ಸಹಾಯವು ಇದೆ. ಜ್ಞಾನವನ್ನು ಗಳಿಸಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಅಪಾರವಾದಂತಹ ಸಾಧ್ಯತೆಗಳು ಮುಂದಿವೆ. ಅವರಿಗೆ ಅಧ್ಯಾಪಕರನ್ನು ಆಶ್ರಯಿಸದೆಯೇ ಜ್ಞಾನವನ್ನು ಗಳಿಸಬಹುದಾಗಿದೆ. ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಬಹುದಾಗಿದೆ. ಆದರೆ ತರಗತಿಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜೊತೆಗೂಡಿ ಗಳಿಸುವ ವಿದ್ಯೆಯಲ್ಲಿ ಅದರದ್ದೇ ಆದ ವಿಶೇಷತೆ ಇದೆ.

    ಇದರಲ್ಲಿ ವೀಕ್ಷಣಾ ಸಾಮರ್ಥ್ಯವು ಶಕ್ತಿಯುತವಾಗುತ್ತದೆ. ಇದೆಲ್ಲಾ ಸಾಧ್ಯವಾಗಬೇಕಾದರೆ ಇಂದಿನ ಕಾಲದಲ್ಲಿ ಅಧ್ಯಾಪಕರು ಹೆಚ್ಚು ಪಕ್ವತೆಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಆ ರೀತಿಯಲ್ಲಿ ನಮ್ಮ ಬೋಧನಾ ರೀತಿಯನ್ನು ನವೀಕರಿಸಲು ಅಧ್ಯಾಪಕರಿಗೆ ಸಾಧ್ಯವಾಗಬೇಕು. ತಾವು ಬೋಧಿಸುತ್ತಿರುವ ವಿಷಯಗಳು ಯಾವ ಮೂಲದಿಂದೆಲ್ಲ ಗಳಿಸಿ ಜ್ಞಾನದ ಪರಿಪೂರ್ಣತೆಯೆಡೆಗೆ ತಲುಪಲು ಸಾಧ್ಯ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಲು ಅಧ್ಯಾಪಕರಿಗೆ ಸಾಧ್ಯವಾಗಬೇಕು.

    ಪ್ರತಿ ವರ್ಷ ಮೊದಲೇ ಸಿದ್ದಪಡಿಸುತ್ತಿರುವ ಒಂದು ನೋಟ್ಸ್ ನ ಭಾಗಗಳನ್ನು ಹಿಡಿದುಕೊಂಡು ಪ್ರತಿ ವರ್ಷವೂ ಅದನ್ನೇ ಪುನರಾವರ್ತಿಸುತ್ತಿದ್ದ ಅದೇ ಹಳೆಯ ಕಥೆಗಳನ್ನು ಹೇಳುತ್ತಾ ಮುಂದೆ ಸಾಗುವುದು ಈ ವೈಜ್ಞಾನಿಕ ಕ್ರಾಂತಿಯ ಯುಗದಲ್ಲಿ ಇರುವಂತಹ ಅಧ್ಯಾಪಕರಿಗೆ ಸೂಕ್ತವಾದ ವಿಧಾನವಲ್ಲ. ವಿಷಯಗಳ ಸಂಗ್ರಹ ಮತ್ತು ಕಲಿಸುವಂತಹ ಶೈಲಿಯನ್ನು ನವೀಕರಿಸುತ್ತಲೇ ಇರಬೇಕಾಗುತ್ತದೆ. ಗುರುಗಳಿಗಿಂತ ಹೆಚ್ಚು ಅರಿವನ್ನು ಹೊಂದಿರುವ ಬಹಳ ಬುದ್ಧಿವಂತರಾದ ಮಕ್ಕಳನ್ನು ಹೊಂದಿದ ತರಗತಿಗಳು ಇರುತ್ತವೆ. ಅವರ ಸಂಶಯಗಳಿಗೆ ಸರಿಯಾದ ಉತ್ತರವನ್ನು ನೀಡಲು, ಅದು ಎಲ್ಲಿಂದ ಸಿಗುತ್ತದೆ ಎಂಬುದನ್ನು ಗುರುತಿಸಿ ಹೇಳಲು ಶಿಕ್ಷಕರಿಗೆ ಸಾಧ್ಯವಾಗಬೇಕು.

    ವಿವಿಧ ಕಾರಣಗಳಿಂದಾಗಿ ಕುಟುಂಬದಲ್ಲಿ ಮಕ್ಕಳಿಗೆ ಸಿಗಬೇಕಾದಂತಹ ಗಮನ ಸಿಗದೇ ಹೋದ ಪರಿಸ್ಥಿತಿಯಲ್ಲಿ ಅಧ್ಯಾಪಕರ ಹೊಣೆಗಾರಿಕೆ ಬಹಳ ಹೆಚ್ಚಿದೆ. ವಿದ್ಯಾರ್ಥಿಗಳನ್ನು ಒಳ್ಳೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು, ಉತ್ತಮವಾದಂತಹ ಮಾರ್ಗದಲ್ಲಿ ಅವರನ್ನು ಮುಂದೆ ಕೊಂಡು ಹೋಗುವಂತಹ ಮಾರ್ಗದರ್ಶನವನ್ನು ನೀಡಲು ಓರ್ವ ಮಾರ್ಗದರ್ಶಕನ ವೇಷವನ್ನು ಅವರು ಧರಿಸಬೇಕಾಗಿ ಬರುತ್ತದೆ. ಈ ಪಾತ್ರವನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾದರೆ ಖಂಡಿತವಾಗಿಯೂ ಅಂತಹ ಅಧ್ಯಾಪಕರಿಗೆ ಉತ್ತಮ ಗೌರವ ಲಭಿಸುತ್ತದೆ.

    ಮಾದರಿ ಅಧ್ಯಾಪಕರಾಗೋಣ
    ಯಾರು ಅತ್ಯುತ್ತಮ ಅಧ್ಯಾಪಕರು ಎಂಬ ವಿಷಯದಲ್ಲಿ ಈ ಹಿಂದೆ ಶಾಲೆಗಳಲ್ಲಿ ನಡೆಸಿದಂತಹ ಒಂದು ಅಧ್ಯಯನವಿದೆ. ಅದು ಇಂದಿಗೂ ಪ್ರಸಕ್ತವಾಗಿದೆ. ಯಾರು ವಿದ್ಯಾರ್ಥಿಗಳೊಂದಿಗೆ ಬಹಳ ಆತ್ಮೀಯತೆಯೊಂದಿಗೆ, ಸಹಕಾರ ನೀಡಿ, ಪ್ರಜಾಪ್ರಭುತ್ವ ಶೈಲಿಯಲ್ಲಿ ವರ್ತಿಸುತ್ತಾರೋ ಅಂತಹ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರೀತಿ ಪಾತ್ರ ಎನಿಸಿಕೊಳ್ಳುತ್ತಾರೆ. ಪ್ರೀತಿಯ ಮನಸ್ಸುಳ್ಳ, ಸಣ್ಣವರನ್ನು ಅಂಗೀಕರಿಸುವAತಹ, ಕ್ಷಮೆಯೊಂದಿಗೆ ವರ್ತಿಸುವಂತಹ, ಅನುಭವಿಗಳಾಗಿ ವ್ಯವಹರಿಸುವಂತಹ ಮನೋಭಾವವನ್ನು ಮತ್ತು ವಿದ್ಯಾರ್ಥಿಗಳ ಹಿತವನ್ನು ಬಯಸುವಂತಹ ಶಿಕ್ಷಕರನ್ನು ಮಕ್ಕಳು ಸದಾ ಇಷ್ಟಪಡುತ್ತಾರೆ. ಮೃದುಮನಸ್ಕರಾದ, ಎಲ್ಲರನ್ನೂ ಪರಿಗಣಿಸುವ ಸಹನೆಯೊಂದಿಗೆ ಸಹಾನುಭೂತಿಯೊಂದಿಗೆ ವರ್ತಿಸುವ ಅಧ್ಯಾಪಕರನ್ನು ಎಲ್ಲ ವಿದ್ಯಾರ್ಥಿಗಳು ಇಷ್ಟಪಡುತ್ತಾರೆ.

    ಯಾರಾದರೂ ಒಂದಿಬ್ಬರು ವಿದ್ಯಾರ್ಥಿಗಳ ಹಿಂದೆ ಬಿದ್ದು ಅವರನ್ನೇ ಇಷ್ಟಪಡುವ ಇತರ ವಿದ್ಯಾರ್ಥಿಗಳೊಂದಿಗೆ ತಾರತಮ್ಯವನ್ನು ತೋರುವ ಅಧ್ಯಾಪಕರನ್ನು ಯಾರೂ ಇಷ್ಟಪಡುವುದಿಲ್ಲ. ಬದಲಾಗಿ ಪಕ್ಷಪಾತ ರಹಿತವಾಗಿ ಎಲ್ಲರೊಂದಿಗೂ ವ್ಯವಹರಿಸುವ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ಶ್ರೇಷ್ಠ ಅಧ್ಯಾಪಕರು.

    ಏನಾದರೂ ಸಮಸ್ಯೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಾಧ್ಯವಿರುವ ಮತ್ತು ಅದರಲ್ಲಿ ಆಸಕ್ತಿಯನ್ನು ತೋರಿಸುವ ಶಿಕ್ಷಕರು ಒಳ್ಳೆಯ ಮನಸ್ಸುಳ್ಳ ಶಿಕ್ಷಕರಾಗಿರುತ್ತಾರೆ. ವಿದ್ಯಾರ್ಥಿಗಳ ಮಧ್ಯೆ ಇರುವ ವೈಮನಸನ್ನು ತಮ್ಮ ಹಾಸ್ಯ ಮಿಶ್ರಿತ ರೀತಿಯಲ್ಲಿ ಹೋಗಲಾಡಿಸಿ ಅವರ ಹೃದಯವನ್ನು ಗೆಲ್ಲಲು ಸಾಧ್ಯವಾದರೆ ಅದು ಬಹಳಷ್ಟು ಉಪಯುಕ್ತ.

    ಆಹ್ಲಾದಕರವಾದ ವ್ಯಕ್ತಿತ್ವ, ವರ್ತನೆಗಳು, ಶರೀರ ಭಾಷೆ ಮುಂತಾದವುಗಳನ್ನು ಹೊಂದಿರುವ ಅಧ್ಯಾಪಕರು ವಿದ್ಯಾರ್ಥಿಗಳ ಪ್ರೀತಿಯನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದುಬಂದಿದೆ. ಪರಿಸ್ಥಿತಿಗೆ ಅನುಗುಣವಾಗಿ ಬೋಧನಾ ಶೈಲಿಯಲ್ಲಿ ಬದಲಾವಣೆಯನ್ನು ಮಾಡುವ, ಹೊಸ ವಿಧಾನಗಳನ್ನು ಸ್ವೀಕರಿಸುವ ಅರ್ಥಪೂರ್ಣವಾದ ಬದಲಾವಣೆಗಳನ್ನು ಮಾಡುವ ಸಾಮರ್ಥ್ಯ, ಉತ್ತಮ ಅಧ್ಯಾಪಕನಿಗೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ವಿದ್ಯಾರ್ಥಿಗಳಲ್ಲಿ ಕಂಡು ಬರುವ ಸಣ್ಣ ವಿಶೇಷತೆಯನ್ನು ಗಮನಿಸಿ ಅದನ್ನು ಗೌರವಿಸಿ ಪ್ರೋತ್ಸಾಹಿಸುವ ಸಾಮರ್ಥ್ಯವಿರುವ ಅಧ್ಯಾಪಕರು ಸದಾ ವಿದ್ಯಾರ್ಥಿಗಳ ಮನಸ್ಸಿನಾಳದಲ್ಲಿ ಉಳಿಯುತ್ತಾರೆ. ಕಲಿಸುವ ವಿಷಯದ ಬಗ್ಗೆ ಆಳವಾದ ಅರಿವು ಉತ್ತಮ ಅಧ್ಯಾಪಕನ ಗುಣಗಳ ಪೈಕಿ ಒಂದಾಗಿದೆ.

    ಕಠೋರವಾಗಿ ವರ್ತಿಸಿ ಶಿಸ್ತನ್ನು ಪಾಲಿಸುವಂತೆ ಮಾಡಲು ಸಾಧ್ಯವಿಲ್ಲ
    ವಿದ್ಯಾರ್ಥಿಗಳು ತಮಗೆ ವಿಧೇಯರಾಗಿರಬೇಕು ಮತ್ತು ಅವರು ಸದಾ ಶಿಸ್ತಿನೊಂದಿಗೆ ವರ್ತಿಸಬೇಕು ಎಂಬುದು ಎಲ್ಲ ಶಿಕ್ಷಕರ ಕನಸಾಗಿರುತ್ತದೆ. ಇದು ಪಠ್ಯ ಪಠ್ಯೇತರ ಚಟುವಟಿಕೆಗಳು ಸುಗಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಅತ್ಯಂತ ಅಗತ್ಯವಾದ ವಿಷಯವಾಗಿದೆ. ಅನುಚಿತವಾದಂತಹ ವರ್ತನೆಗಳನ್ನು ನಡವಳಿಕೆಗಳನ್ನು ಇಲ್ಲವಾಗಿಸಲು ಶಿಸ್ತು ಬಹಳ ಅಗತ್ಯವಾಗಿದೆ. ಶಿಸ್ತನ್ನು ಉಲ್ಲಂಘಿಸಿದರೆ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಇದು ಒಂದು ವಿದ್ಯಾಸಂಸ್ಥೆಯು ಸಮಾಧಾನಪೂರ್ವಕವಾದಂತಹ ವಾತಾವರಣದಲ್ಲಿ ಮುಂದುವರಿಯಲು ಬಹಳ ಅಗತ್ಯವಾದಂತಹ ವಿಷಯವಾಗಿದೆ ಎಂಬುದು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಚೆನ್ನಾಗಿ ತಿಳಿದಿರಬೇಕು. ಶಾಲಾ ನಿಯಮಗಳಿಗೆ ಬದ್ಧರಾಗಿ ವರ್ತಿಸಲು ಮತ್ತು ಇತರರನ್ನು ಗೌರವಿಸಿ ಜೀವಿಸುವುದನ್ನು, ತಮ್ಮ ಮೇಲೆ ಸ್ವಯಂ ನಿಯಂತ್ರಣವನ್ನು ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡುವುದು ವಿದ್ಯಾರ್ಥಿಗಳಿಗೂ ಪಾಲಕರಿಗೂ ಅತ್ಯಂತ ಅಗತ್ಯದ ವಿಷಯವಾಗಿದೆ. ನಿಯಮಗಳನ್ನು ಪಾಲಿಸಲು ಮಾನಸಿಕವಾಗಿಯೂ ಸಿದ್ಧತೆಯ ಅಗತ್ಯವಿರುತ್ತದೆ. ಅದಕ್ಕಾಗಿ ಕೆಲವು ತತ್ವಗಳನ್ನು ಪಾಲಿಸಬೇಕು.

    1. ಯಾವ ರೀತಿಯಲ್ಲಿ ವ್ಯವಹರಿಸಬೇಕು ಯಾವ ನಿಯಮಗಳನ್ನೆಲ್ಲ ಪಾಲಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ಅದೇ ರೀತಿ ಇವುಗಳನ್ನು ಉಲ್ಲಂಘಿಸಿದರೆ ಉಂಟಾಗುವAತಹ ಪರಿಣಾಮಗಳ ಬಗ್ಗೆಯೂ ಕೂಡ ಮುನ್ನೆಚ್ಚರಿಕೆಯನ್ನು ನೀಡಬೇಕು. ಶಾಲಾ ದಿನಚರಿಯಯಲ್ಲಿ ಇವುಗಳನ್ನೆಲ್ಲ ಹೇಗೆ ಅಳವಡಿಸಬಹುದು ಎಂಬುದರ ಬಗ್ಗೆ ಪ್ರೇರಣೆಯನ್ನು ನೀಡಬೇಕು.

    2. ಶಿಸ್ತನ್ನು ಪಾಲಿಸಿದರೆ ಮಾದರಿ ಯೋಗ್ಯವಾಗಿ ವರ್ತಿಸಿದರೆ ಅಂತಹ ವಿದ್ಯಾರ್ಥಿಗಳು ಪ್ರೋತ್ಸಾಹಿಸಲ್ಪಡಬೇಕು. ಅದರ ಬಗ್ಗೆ ಹೆತ್ತವರಿಗೆ ತಿಳಿಸಬೇಕು.

    3. ವಿದ್ಯಾರ್ಥಿಗಳು ಶಿಸ್ತನ್ನು ಉಲ್ಲಂಘಿಸಿದರೆ, ಅನುಚಿತ ರೀತಿಯಲ್ಲಿ ವರ್ತಿಸಿದರೆ ಶಿಕ್ಷಕರು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಬ್ದವನ್ನು ಎತ್ತರಿಸದೆ ಶಾಂತ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಬೇಕು. ನಾವು ಅವರಿಗೆ ಶಿಸ್ತನ್ನು ಕಲಿಸುವವರು ಶಿಸ್ತನ್ನು ಉಲ್ಲಂಘಿಸದಂತೆ ನೋಡಿಕೊಂಡು ಅವರಿಗೆ ಅವರ ತಪ್ಪಿನ ಮನವರಿಕೆಯಾಗುವಂತೆ ಮಾಡಬೇಕು. ಪ್ರಥಮವಾಗಿ ಮಾಡುವ ಶಿಸ್ತಿನ ಉಲ್ಲಂಘನಿಗೆ ಕೇವಲ ಬಾಯಿ ಮಾತಿನ ಎಚ್ಚರಿಕೆ ಸಾಕು. ಪುನಃ ಪುನಃ ಅದು ಆವರ್ತನೆಯಾಗುತ್ತಿದ್ದರೆ ಶಿಸ್ತುಕ್ರಮವನ್ನು ಕೈಗೊಳ್ಳಬಹುದು. ಪೆಟ್ಟು ಕೊಡುವುದಕ್ಕಿಂತ, ದೈಹಿಕ ದಂಡನೆಗಿAತ ಹೆಚ್ಚಾಗಿ ಮನಶಾಸ್ತ್ರ ತಿಳಿಸಿ ಕೊಡುವ ವಿಧಾನವನ್ನು ಬಳಸಬಹುದು. ಶಿಕ್ಷೆಯ ರೂಪದಲ್ಲಿ ಅವರು ಇಷ್ಟಪಡುವ ಆಟೋಟ ಚಟುವಟಿಕೆಗಳಿಂದ ತಾತ್ಕಾಲಿಕವಾಗಿ ಅವರನ್ನು ದೂರವಿರಿಸಬಹುದು. ಹೆಚ್ಚು ಹೊಣೆಗಾರಿಕೆಗಳನ್ನು ವಹಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಇಷ್ಟವಿಲ್ಲದ್ದು ಏನು ಎಂಬುದನ್ನು ಕಂಡುಹಿಡಿಯುವ ಸಾಮರ್ಥ್ಯ ಅಧ್ಯಾಪಕರಿಗೆ ಇರಬೇಕು. ಮಾಡಿದ ತಪ್ಪನ್ನು ನೆನಪಿಸಲಿಕ್ಕಾಗಿ ಈ ರೀತಿಯಲ್ಲಿ ನಿನ್ನನ್ನು ಶಿಕ್ಷಿಸಲಾಗುತ್ತಿದೆ ಎಂಬುದು ಅವರಿಗೆ ಮನವರಿಕೆಯಾಗಬೇಕು. ಯಾವ ರೀತಿಯ ಶಿಸ್ತಿನ ಉಲ್ಲಂಘನೆ ಆಗಿದೆಯೋ ಅದಕ್ಕೆ ತಕ್ಕುದಾದ ಶಿಕ್ಷೆಯನ್ನು ಮಾತ್ರ ನೀಡತಕ್ಕದ್ದು .ಹೆಚ್ಚು ಕ್ಲಿಷ್ಟಕರವಾದ ಪರಿಸ್ಥಿತಿ ಎದುರಾದರೆ ಮಕ್ಕಳ ಸ್ವಭಾವವನ್ನು ತಿದ್ದಲು ಹೆತ್ತವರ ಸಹಾಯವನ್ನು ಪಡೆಯಬೇಕು.

    4. ತಪ್ಪು ಮಾಡಿದರೂ ಕೆಲವು ವಿದ್ಯಾರ್ಥಿಗಳನ್ನು ಸುಮ್ಮನೆ ಬಿಟ್ಟು ಬಿಡುವುದು ಉಚಿತವಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿ ಕಾನೂನನ್ನು ಅನ್ವಯಿಸಬೇಕು. ಅಚ್ಚುಕಟ್ಟುತನ, ಒಳ್ಳೆಯ ವರ್ತನೆ ಮುಂತಾದವುಗಳ ಬಗ್ಗೆ ಮಕ್ಕಳಿಗೆ ಕಾಳಜಿ ಉಂಟಾಗಬೇಕಿದ್ದರೆ ಈ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಶಿಕ್ಷೆಯನ್ನು ನೀಡುತ್ತೇನೆ ಅಥವಾ ತರಗತಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿ ಮಕ್ಕಳನ್ನು ಸರಿಪಡಿಸಲು ಪ್ರಯತ್ನಿಸಬಾರದು. ಅದಕ್ಕೆ ಹೆಚ್ಚು ಬೆಲೆ ಇರುವುದಿಲ್ಲ. ಮಕ್ಕಳನ್ನು ಕಾಳಜಿಯೊಂದಿಗೆ ಪರಿಗಣಿಸುವುದು ಮತ್ತು ಪ್ರೀತಿಯೊಂದಿಗೆ ಅವರಿಗೆ ಬೆಂಬಲವಾಗಿ ನಿಂತು ಅವರನ್ನು ತಿದ್ದಲು ಪ್ರಯತ್ನಿಸಿದರೆ ಖಂಡಿತವಾಗಿಯೂ ಅದು ಮಕ್ಕಳ ಮನಸ್ಸನ್ನು ತಟ್ಟುತ್ತದೆ .ಈ ರೀತಿ ಅವರೊಳಗಿಂದಲೇ ತಾವು ಬದಲಾಗಬೇಕು, ಒಳ್ಳೆಯವರಾಗಬೇಕು ಎಂಬ ಪ್ರೇರಣೆ ಬರುವಂತೆ ಅವರಲ್ಲಿ ಪ್ರೀತಿಯ ವರ್ತನೆ ತೋರುವ ಶಿಕ್ಷಕರು ನಾವಾಗಬೇಕು.

    ವಿದ್ಯಾರ್ಥಿಗಳು ದ್ವೇಷಿಸುವ ಅಧ್ಯಾಪಕರು

    ವಿದ್ಯಾರ್ಥಿಗಳು ದ್ವೇಷಿಸುವ ಅಧ್ಯಾಪಕರ ಕುರಿತು ಅಧ್ಯಯನಗಳು ನಡೆದಿವೆ. ಮುಂಗೋಪ, ಅಸಹಿಷ್ಣುತೆ ಇರುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ಇಷ್ಟಪಟ್ಟಿಲ್ಲ. ಕೇವಲ ತಮಗಿಷ್ಟ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಮಹತ್ವವನ್ನು ನೀಡುವ, ಇತರ ವಿದ್ಯಾರ್ಥಿಗಳನ್ನು ಕಡೆಗಣಿಸುವ ಭೇದಭಾವ ತೋರಿಸುವ ಅಧ್ಯಾಪಕರನ್ನು ವಿದ್ಯಾರ್ಥಿಗಳು ದ್ವೇಷಿಸುತ್ತಾರೆ. ವಿದ್ಯಾರ್ಥಿಗಳನ್ನು ಬಹಿರಂಗವಾಗಿ ತಮಾಷೆ ಮಾಡುವ, ಕೀಳಾಗಿ ತೋರಿಸುವ ಸಾಮಾನ್ಯವಾಗಿ ಗೆಳೆತನವಿಲ್ಲದ ರೀತಿಯಲ್ಲಿ ವ್ಯವಹರಿಸುವ ಅಧ್ಯಾಪಕರನ್ನು ಕೂಡ ವಿದ್ಯಾರ್ಥಿಗಳು ದ್ವೇಷಿಸುತ್ತಾರೆ ಎಂಬುದಾಗಿ ಅಧ್ಯಯನಗಳು ಸೂಚಿಸುತ್ತವೆ.

    ಅಧ್ಯಾಪಕರ ಅತಿಯಾದ ಶಿಸ್ತು ಮತ್ತು ಸಹನೆಯ ಕೊರತೆಯು ತರಗತಿಗಳಲ್ಲಿ ಸಂಘರ್ಷವನ್ನು ಉಂಟುಮಾಡುತ್ತದೆ. ವಿದ್ಯಾರ್ಥಿಗಳೊಂದಿಗೆ ಆಗಲಿ ಅಧ್ಯಾಪಕ ವೃತ್ತಿಯೊಂದಿಗೆ ಬದ್ಧತೆ ಇಲ್ಲದ ರೀತಿಯಲ್ಲಿ ಶರೀರಭಾಷೆಯನ್ನು ತೋರಿಸುವ ಅನಾಕರ್ಷಕವಾದ ಶೈಲಿಯನ್ನು ಹೊಂದಿರುವುದು ಒಳ್ಳೆಯ ಅಧ್ಯಾಪಕರ ಲಕ್ಷಣವಲ್ಲ.


    ವಿದ್ಯಾರ್ಥಿಗಳಿಗಾಗಿ ಅಧ್ಯಾಪಕರು ಮಾಡಬೇಕಾದುದು

    ತರಗತಿಯ ಎಲ್ಲ ವಿದ್ಯಾರ್ಥಿಗಳ ಸ್ವಭಾವ, ಅವರ ವಿಶೇಷತೆಗಳು, ಅವರ ಹಿನ್ನೆಲೆ, ಅವರ ಸಾಮರ್ಥ್ಯ, ಅಸಾಮರ್ಥ್ಯ ಇವುಗಳನ್ನು ಕೃತ್ಯವಾಗಿ ಅರಿಯಲು ಪ್ರಯತ್ನಿಸಿ. ಅವರ ಸಂತೋಷ ಮತ್ತು ದುಃಖದಲ್ಲಿ ಅಧ್ಯಾಪಕರು ಜೊತೆಗಿರುತ್ತಾರೆ ಎಂಬ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ. ನಿಮಗೆ ಅವರ ಬಗ್ಗೆ ಕಾಳಜಿ ಇದೆ ಮತ್ತು ವಿಶ್ವಾಸವಿದೆ ಎಂಬುದು ಅವರಿಗೆ ಮನವರಿಕೆಯಾದರೆ ಹಲವು ರೀತಿಯ ಸ್ವಭಾವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗುತ್ತದೆ.

    ಯಾವುದೇ ರೀತಿಯ ನಾಟಕೀಯತೆ ಇಲ್ಲದೆ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವುದು ಒಳ್ಳೆಯದು. ಮೃದು ಮನಸ್ಸಿಗೆ ಗಾಯ ಉಂಟಾಗುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಆಕ್ಷೇಪಿಸಬಾರದು ಮತ್ತು ಅವರ ಬಗ್ಗೆ ತೀರ್ಮಾನವನ್ನು ಹೇಳಿಬಿಡಬಾರದು. ಒಳ್ಳೆಯ ಅಭ್ಯಾಸಗಳ ಬಗ್ಗೆ ಇರುವಂತಹ ಮಾರ್ಗದರ್ಶನಗಳು ಮುಕ್ತ ಮಾತುಕತೆಗಳ ಮೂಲಕ ಅವರಿಗೆ ಮನವರಿಕೆಯಾಗಬೇಕು. ಉಪದೇಶಗಳನ್ನು ನೀಡುವ ಮೂಲಕ ಅವರನ್ನು ಬೋರು ಹೊಡೆಸಬಾರದು.

    ವಿದ್ಯಾರ್ಥಿಯ ಭಾವನೆಗಳನ್ನು ಅವನ ವಿಚಾರಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೊರಗೆಡಹಲು ಅವಕಾಶ ನೀಡಬೇಕು .ಅಧ್ಯಾಪಕರು ಒಳ್ಳೆಯ ಕೇಳುಗರಾಗಬೇಕು .ಎಲ್ಲರನ್ನೂ ಒಂದೇ ರೀತಿಯಲ್ಲಿ ಸಮಾನತೆಯೊಂದಿಗೆ ನೋಡಬೇಕು. ಕೆಲವು ನಿರ್ದಿಷ್ಟ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಒಲವನ್ನು ಹೊಂದಿರಬಾರದು.

    ವಿದ್ಯಾರ್ಥಿಗಳಿಗೆ ಉತ್ತರ ತಿಳಿದಿಲ್ಲದ ಪ್ರಶ್ನೆಗಳನ್ನು ಕೇವಲ ಅವರನ್ನು ಕೀಳಾಗಿಸಲಿಕ್ಕಾಗಿ ಕೇಳಬಾರದು. ಅವರಿಗೆ ತಿಳಿದಿರುವ ವಿಷಯಗಳನ್ನೇ ಪ್ರಶ್ನೆಗಳ ರೂಪದಲ್ಲಿ ಕೇಳಿ ಅವರಿಂದ ಉತ್ತರ ಹೇಳಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಈ ಆತ್ಮವಿಶ್ವಾಸದೊಂದಿಗೆ ಅವರು ತಮಗೆ ತಿಳಿದಿಲ್ಲದ ವಿಷಯಗಳನ್ನು ಕಲಿತು ಮುಂದೆ ಬರಲು ಸಹಾಯವಾಗುತ್ತದೆ.

    ತರಗತಿಯನ್ನು ನಡೆಸುವ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಸಾಧ್ಯವಾದ ರೀತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅವರು ನಿಮಗಾಗಿ ಏನಾದರೂ ಸಹಾಯ ಮಾಡಿದರೆ ಅದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿ ಪ್ರೋತ್ಸಾಹಿಸಬೇಕು.

    ಒಳ್ಳೆಯ ಕಥೆಗಳನ್ನು ,ಜೀವನದ ಅನುಭವ ಪಾಠಗಳನ್ನು, ವೈಯಕ್ತಿಕವಾದ ಅನುಭವಗಳನ್ನು, ದಿನಪತ್ರಿಕೆಗಳಲ್ಲಿ ಬರುವಂತಹ ವಾರ್ತೆಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ತರಗತಿಗಳನ್ನು ಉತ್ತಮಪಡಿಸಬಹುದು. ವಿದ್ಯಾರ್ಥಿಗಳು ಅಂತಹ ಅಧ್ಯಾಪಕರ ತರಗತಿಗಳನ್ನು ಕಾದಿರುತ್ತಾರೆ. ಇಂತಹ ತರಗತಿಗಳಲ್ಲಿ ಅವರು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ.

    ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಡಿಜಿಟಲ್ ಅಭ್ಯಾಸಗಳು ಯಾವುದು ಎಂಬುದರ ಕುರಿತು ಸರಿಯಾದ ಅರಿವು ಗಳಿಸಲು ಅಧ್ಯಾಪಕರು ಶ್ರಮಿಸುವುದು ಒಳ್ಳೆಯದು .ಡಿಜಿಟಲ್ ಲೋಕದಲ್ಲಿ ಪಾಲಿಸಬೇಕಾದ ಶಿಸ್ತಿನ ಕುರಿತು, ಸುರಕ್ಷಾ ಕ್ರಮಗಳ ಕುರಿತು ತರಗತಿಯಲ್ಲಿ ನೆನಪಿಸುತ್ತಿರಬೇಕು.

    ಓದುವುದರಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹೊಸ ಪುಸ್ತಕಗಳನ್ನು ನೀವಾಗಿಯೇ ನೀಡಬಹುದು. ಅದರ ಸಾರಾಂಶವನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ಪ್ರಸ್ತುತಪಡಿಸಲಿ.

    ಮನೆಯಲ್ಲಿ ಉತ್ತಮ ಕೌಟುಂಬಿಕ ಪರಿಸ್ಥಿತಿ ಇಲ್ಲದೆ ಇರುವಂತಹ ವಿದ್ಯಾರ್ಥಿಗಳ ಪಾಲಿಗೆ ನೀವು ಉತ್ತಮ ರಕ್ಷಕರ ಪಾತ್ರವನ್ನು ವಹಿಸಬೇಕು. ಅವರು ಆ ಕಾರಣದಿಂದ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಬೆಂಬಲಕ್ಕೆ ಸದಾ ನೀವು ನಿಲ್ಲಬೇಕು.

    ಅಧ್ಯಾಪಕರು ಮತ್ತು ಹೆತ್ತವರ ಒಂದು ಸಂಘ ಇರಬೇಕು
    ಮಕ್ಕಳು ಚೆನ್ನಾಗಿ ಕಲಿಯಬೇಕು ಮತ್ತು ಯುವ ಪ್ರಾಯಕ್ಕೆ ತಲುಪಿದರೆ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಸಂಬಳದ ಕೆಲಸ ಸಿಗಬೇಕು ಎಂದು ಬಯಸುವ ಹೆತ್ತವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಇದಕ್ಕಾಗಿ ಅವರನ್ನು ಆಕ್ಷೇಪಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಒಳ್ಳೆಯ ರೀತಿಯಲ್ಲಿ ಬೆಳೆಯಬೇಕಾದರೆ ಜೀವನದ ಮೌಲ್ಯಗಳನ್ನು ಅಭ್ಯಾಸ ಮಾಡಿಕೊಳ್ಳಬೇಕಾದರೆ ಪಕ್ವತೆಯುಳ್ಳ ವ್ಯಕ್ತಿತ್ವ ಉಂಟಾಗಬೇಕಾದರೆ ಯಾವುದಕ್ಕೆ ಮಹತ್ವ ನೀಡಬೇಕು ಮತ್ತು ನಮ್ಮ ಜೀವನದ ಗುರಿ ಏನಾಗಿರಬೇಕು ಎಂಬುದನ್ನು ಮರೆತುಬಿಡುತ್ತೇವೆ. ಮಕ್ಕಳಿಗೆ ಮೀಸಲಾಗಿರುವ ಸಮಯದಲ್ಲಿ ಹೋಂವರ್ಕ್ ಮಾಡಿಸಲು ಮಾರ್ಕ್ ಮತ್ತು ಗ್ರೇಡ್‌ಗಳನ್ನು ಹೆಚ್ಚಿಸಬೇಕಾದ ಅವಶ್ಯಕತೆಯ ಬಗ್ಗೆ ಅವರಿಗೆ ತಿಳಿಹೇಳಲು ಹೆತ್ತವರು ಸೀಮಿತರಾಗಿ ಬಿಡುತ್ತಾರೆ.

    ನನ್ನ ಹೆತ್ತವರೊಂದಿಗೆ ಯಾವುದೇ ವಿಷಯವನ್ನು ತೆರೆದು ಹೇಳಬಹುದು ಮತ್ತು ನಾನು ಏನು ಹೇಳಿದರೂ ಅದನ್ನು ಪೂರ್ವಗ್ರಹದೊಂದಿಗೆ ನೋಡುವುದಿಲ್ಲ ಎಂದು ಧೈರ್ಯವಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ದೈನಂದಿನ ದಿನಚರಿಯನ್ನು ಡಿಜಿಟಲ್ ಮಾಧ್ಯಮಗಳು ನುಂಗಿ ಹಾಕಲು ಆರಂಭಿಸಿದ ಬಳಿಕ ಎಲ್ಲರೂ ಜೊತೆ ಸೇರಿ ಸಾಮೂಹಿಕತೆಯನ್ನು ಬೆಳೆಸಲು ಸಾಧ್ಯವಿರುವ ಆಟೋಟಗಳ ಸಂಖ್ಯೆ ಕಡಿಮೆಯಾಯಿತು. ಇವುಗಳಿಂದಾಗಿ ಭಾವನಾತ್ಮಕ ಶುಷ್ಕತೆಯನ್ನು ಅನುಭವಿಸುವಂತೆ ಆಗಿದೆ. ವಿವಿಧ ರೀತಿಯ ಸ್ವಭಾವ ಸಂಬAಧಿ ನ್ಯೂನತೆಗಳಿಂದ ಮಕ್ಕಳು ಬಳಲುತ್ತಿದ್ದಾರೆ.

    ಮಕ್ಕಳು ಇಂದು ಯಾವುದನ್ನು ನೋಡಬಾರದು ಅದನ್ನು ನೋಡುತ್ತಿದ್ದಾರೆ. ಯಾವುದರ ಬಗ್ಗೆ ಆಲೋಚಿಸುವ ಅಗತ್ಯವಿಲ್ಲವೋ ಅವುಗಳನ್ನು ಆಲೋಚಿಸುತ್ತಿದ್ದಾರೆ. ಸಣ್ಣ ಮೆದುಳಿನಲ್ಲಿ ಹಲವು ಅನಗತ್ಯ ವಸ್ತುಗಳು ಸೇರಿಸಲ್ಪಡುತ್ತಿವೆ. ಈ ವಾಸ್ತವಿಕತೆಗಳನ್ನು ಹೆತ್ತವರು ಚರ್ಚಿಸುವುದಿಲ್ಲ. ಅದರಲ್ಲಿ ಲೈಂಗಿಕತೆ ಇದೆ. ಅಕ್ರಮವಿದೆ .ಅಪರಾಧಿ ಕೃತ್ಯಗಳಿವೆ. “ಯಾಕೆ ಈ ಮಗು ಹೀಗಿದೆ” ಎಂದು ಏನಾದರೂ ಸಂಭವಿಸಿದ ಬಳಿಕ ಚಿಂತಿಸುವುದಕ್ಕಿಂತ ಮೊದಲೇ ಮಕ್ಕಳಿಗಾಗಿ ಏನನ್ನು ಮಾಡಲಿಕ್ಕೆ ಸಾಧ್ಯವಿದೆ ಎಂಬುದರ ಬಗ್ಗೆ ಹೆತ್ತವರು ಅಧ್ಯಾಪಕರು ಜೊತೆ ಸೇರಿ ಆಲೋಚಿಸಬೇಕು. ಎಳೆಯ ಮನಸ್ಸುಗಳನ್ನು ಅರಿಯಲು ಸಾಧ್ಯವಾಗದೆ ಹೋದಾಗ ಹೆತ್ತವರು ಮತ್ತು ಮಕ್ಕಳು ಅದೇ ರೀತಿ ಅಧ್ಯಾಪಕರು ಮತ್ತು ಮಕ್ಕಳ ಮಧ್ಯೆ ಅಂತರವು ಹೆಚ್ಚುತ್ತಲೇ ಸಾಗುತ್ತದೆ.

    ಇಂದಿನ ಪರಿಸ್ಥಿತಿಯಲ್ಲಿ ಹೆತ್ತವರು ಮತ್ತು ಅಧ್ಯಾಪಕರ ಮಧ್ಯೆ ಕ್ರಿಯಾತ್ಮಕವಾದ ಸಂಘಟನೆ ಅನಿವಾರ್ಯವಾಗಿದೆ. ಅಧ್ಯಾಪಕರನ್ನು ಅಪರಾಧಿಗಳನ್ನಾಗಿಸುವ, ಅವರ ಆತ್ಮಸ್ಥೆöÊರ್ಯವನ್ನು ಕುಂದಿಸುವ ಕೆಲಸಗಳನ್ನು ಮಾಡಬಾರದು. ಏನಾದರೂ ತಪ್ಪುಗಳು ಸಂಭವಿಸಿದರೆ ಮಾನವೀಯ ದೃಷ್ಟಿಯಿಂದ ವಿದ್ಯಾಲಯದೊಳಗೆ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹೆತ್ತವರು ಅರ್ಥಪೂರ್ಣವಾಗಿ ಇಂತಹ ರಕ್ಷಕ ಶಿಕ್ಷಕರ ಸಂಘದ ಭಾಗವಾಗಲು ಪ್ರಯತ್ನಿಸಬೇಕು. ಈ ಬಗ್ಗೆ ಕೆಲವು ಮಾರ್ಗ ನಿರ್ದೇಶನಗಳು ಈ ಕೆಳಗಿವೆ.

    1. ಮಕ್ಕಳನ್ನು ನೋಡಿಕೊಳ್ಳುವ ವಿಷಯದಲ್ಲಿ ಶೈಲಿಯಲ್ಲಿ ಹೆತ್ತವರಿಂದ ತಪ್ಪುಗಳು ಸಂಭವಿಸಬಹುದು. ಆದರೆ ಅವರ ಉದ್ದೇಶವು ಒಳ್ಳೆಯದಾಗಿರುತ್ತದೆ. ಮಾಡಿದ ರೀತಿಯಲ್ಲಿ ತೊಂದರೆ ಸಂಭವಿಸಿರುತ್ತದೆ. ಆದುದರಿಂದ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ ಅವರಿಗೆ ಮಾರ್ಗ ನಿರ್ದೇಶನಗಳನ್ನು ನೀಡಬೇಕು. ನಾವು ಅವರ ಮೇಲೆ ಆರೋಪಿಸಿದರೆ, ಅವರು ಅಧ್ಯಾಪಕರ ಮೇಲೆ ಆರೋಪವನ್ನು ಹೊರಿಸಲಾರಂಭಿಸುತ್ತಾರೆ. ಅದು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಉಪಕಾರವನ್ನು ಮಾಡುವುದಿಲ್ಲ.

    2. ಉಪದೇಶ ನೀಡುವ, ಕಲಿಸುವ ವಿಷಯದಲ್ಲಿ ಇರುವ ಪ್ರೇರಣೆಯಲ್ಲಿ ಯಾವುದೇ ಬದಲಾವಣೆಯನ್ನು ಉಂಟು ಮಾಡದೆ, ಹೆತ್ತವರೊಂದಿಗೆ ಅಧ್ಯಾಪಕರು ಶಾಂತ ರೀತಿಯಲ್ಲಿ ಅವರ ಮಾತುಗಳನ್ನು ಆಲಿಸುವವರಾಗಬೇಕು. ಮನಬಿಚ್ಚಿ ಮಾತನಾಡಲು ಅವರು ತಯಾರಿರಬೇಕು.

    3. ಒಂದು ಮಗುವಿನ ವರ್ತನೆಯಲ್ಲಿ ನ್ಯೂನತೆ ಇದ್ದರೆ ಅದು ಕಲಿಕೆಯಲ್ಲಿ ಹಿಂದುಳುವಿಕೆ ಆಗಿದ್ದರೆ ಅಧ್ಯಾಪಕರು ಅದಕ್ಕಾಗಿ ಕೆಲವು ಕಾರಣಗಳನ್ನು ಗುರುತಿಸಿರಬಹುದು. ಅದೇ ರೀತಿ ಹೆತ್ತವರು ಕೂಡ ಈ ಬಗ್ಗೆ ಭಿನ್ನವಾದ ವೀಕ್ಷಣೆಯನ್ನು ಹೊಂದಿರಬಹುದು. ಅಧ್ಯಾಪಕರು ಮತ್ತು ಹೆತ್ತವರ ಕಾರಣಗಳನ್ನು ಜೊತೆಗೂಡಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬರಬಹುದು. ಆಗ ಒಂದು ಸರಿಯಾದ ಪರಿಹಾರವನ್ನು ಸೂಚಿಸಲು ಸಾಧ್ಯವಾಗಬಹುದು.

    4. ಮಕ್ಕಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಒಳಿತು ಮತ್ತು ತುಂಟತನಗಳ ಬಗ್ಗೆ ಹೆತ್ತವರು ಮನಬಿಚ್ಚಿ ಮಾತನಾಡಲು ಪ್ರೇರೇಪಿಸಬಹುದು.
    ಅವರ ವರ್ತನೆಯಲ್ಲಿರುವ ಒಳ್ಳೆಯ ವಿಷಯಗಳನ್ನು ಎತ್ತಿ ತೋರಿಸಿ ಪ್ರೋತ್ಸಾಹಿಸಬೇಕು.

    5. ಹೆತ್ತವರ ಮಾತುಗಳನ್ನು ಆಲಿಸಿದ ಬಳಿಕ ಆ ವಿದ್ಯಾರ್ಥಿಯು ಶಾಲೆಯಲ್ಲಿ ಮಾಡುವ ಉತ್ತಮ ವಿಷಯಗಳ ಕುರಿತು ಪ್ರಸ್ತಾಪಿಸಬೇಕು. ಅದು ಎಷ್ಟರವರೆಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಸಬಹುದು. ಯಾಕೆ ಮಗು ಈ ಸಾಮರ್ಥ್ಯವನ್ನು ಎಲ್ಲ ವಿಷಯಗಳಲ್ಲಿಯೂ ಬಳಸುತ್ತಿಲ್ಲ ಎಂಬುದರ ಕುರಿತು ಒಟ್ಟಿಗೆ ಚರ್ಚಿಸಬಹುದು. ಯಾವುದನ್ನು ಅಧ್ಯಾಪಕರಿಂದ ಮಾಡಬಹುದು ಮತ್ತು ಯಾವುದನ್ನು ಹೆತ್ತವರು ಮಾಡಬೇಕು ಎಂಬುದರ ಬಗ್ಗೆ ಒಂದು ತೀರ್ಮಾನಕ್ಕೆ ಬರಬಹುದು. ವರ್ತನೆಯಲ್ಲಿರುವ ವೈಕಲ್ಯಗಳನ್ನು ಪರಿಹರಿಸುವುದಕ್ಕೆ ಮತ್ತು ಡಿಜಿಟಲ್ ಅಡಿಕ್ಷನ್ ಅನ್ನು ನಿವಾರಿಸಲು ಈ ರೀತಿಯ ಹೆತ್ತವರ ಮತ್ತು ಅಧ್ಯಾಪಕರ ಪರಸ್ಪರ ಚರ್ಚೆಯು ಸಹಕಾರಿಯಾಗಬಹುದು.

    6. ಶಿಕ್ಷಕ-ರಕ್ಷಕ ಸಂಘದ ಕುರಿತು ಹೆತ್ತವರು ಇಟ್ಟುಕೊಂಡಿರುವ ನಿರೀಕ್ಷೆ ಬಗ್ಗೆ ಹೆತ್ತವರು ಹೇಳಬೇಕು. ವಿದ್ಯಾರ್ಥಿಗಳ ಪಠ್ಯ ಪಠ್ಯೇತರ ಸಾಮರ್ಥ್ಯಗಳ ಬಗ್ಗೆ ಹೆತ್ತವರಿಗೆ ಶಿಕ್ಷಕರು ಹೇಳಿಕೊಡಬಹುದು. ಅವನ ಭವಿಷ್ಯವನ್ನು ರೂಪಿಸಲಿಕ್ಕೆ ಪ್ರೇರಣೆಯನ್ನು ನೀಡಬಹುದು. ವಿದ್ಯಾರ್ಥಿಗಳ ಕೆಲಸಗಳನ್ನು ವಿವರಿಸಿದ ಬಳಿಕ ಹೀಗೆ ಮಾಡಬಹುದು. ಜೊತೆಗೆ ಸ್ವಲ್ಪ ಸಮಯ ಕಳೆದ ಬಳಿಕ ಬದಲಾಗಬಹುದು ಎಂಬುದನ್ನು ನೆನಪಿಸಿಕೊಡಬೇಕು.

    7. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ತರಗತಿಯಲ್ಲಿ, ಅದೇ ರೀತಿಯಲ್ಲಿ ಆಯಾಸ ರಹಿತವಾಗಿ ಮನೆಗೆ ಬಂದ ಬಳಿಕವು ಶಿಕ್ಷಣದ ಬಗ್ಗೆ ಒಲವುಂಟಾಗಿ ಕಲಿಯುವಂತಾಗಲು ಏನು ಮಾಡಬೇಕು? ಯಾವ ವಿಧಾನವನ್ನು ಅಳವಡಿಸಬಹುದು ಎಂಬುದರ ಕುರಿತು ಹೆತ್ತವರು ಮತ್ತು ಶಿಕ್ಷಕರು ಜೊತೆಗೂಡಿ ಏನಾದರೂ ತೀರ್ಮಾನಕ್ಕೆ ಬರಬೇಕು. ಮತ್ತು ಅದನ್ನು ಹಂತ ಹಂತವಾಗಿ ಜಾರಿಗೊಳಿಸಲು ಪ್ರಯತ್ನಿಸಬೇಕು.

    8. ವಿದ್ಯಾರ್ಥಿಯ ಒಂದು ಅಥವಾ ಎರಡು ವಿಷಯಗಳ ಮೇಲೆ ಒತ್ತು ನೀಡುವ ಮೂಲಕ ಸಹಕಾರ ಆರಂಭಿಸಬಹುದು. ಅದು ಯಶಸ್ವಿಯಾದಾಗ ಇತರ ಕ್ಷೇತ್ರಗಳಿಗೂ ಪ್ರೇರಣೆಯಾಗುತ್ತದೆ. ಸಹಕಾರದ ಫಲಿತಾಂಶ ಲಭಿಸುತ್ತಿದೆಯೇ ಎಂಬುದನ್ನು ನಿರ್ದಿಷ್ಟ ಸಮಯದ ಅವಧಿಯಲ್ಲಿ ಮರುಪರಿಶೀಲಿಸಬೇಕು. ಯಶಸ್ಸು ಕಂಡರೆ ಸಹಕರಿಸಿದ ಪೋಷಕರನ್ನು ಪ್ರಶಂಸಿಸಲು ಲೋಭ ತೋರಬಾರದು. ವಿದ್ಯಾರ್ಥಿಗೆ ಶ್ರೇಯಸ್ಸು ಸಲ್ಲಿಸುವಂತೆ ಪೋಷಕರನ್ನು ಪ್ರೇರೇಪಿಸಬೇಕು. ಶಿಕ್ಷಕರೂ ಕೂಡ ಶಾಲೆಯಲ್ಲಿ ಇದನ್ನು ಪಾಲಿಸಬೇಕು.

    9. ಸಹಕಾರದ ಫಲಿತಾಂಶ ತೃಪ್ತಿಕರವಾಗಿಲ್ಲದಿದ್ದರೂ ನಿರಾಶರಾಗಬಾರದು. ಪೋಷಕರ ಮೇಲೆ ಒತ್ತಡ ಹಾಕಬಾರದು. ಇದು ಪರಸ್ಪರ ದೋಷಾರೋಪಣೆಗೆ ದಾರಿ ನೀಡಬಹುದು. ಬದಲಾವಣೆಯನ್ನು ತರಲು ಸಾಧ್ಯವೆಂಬ ಆತ್ಮವಿಶ್ವಾಸವನ್ನು ಪೋಷಕರಿಗೆ ಸದಾ ನೀಡಬೇಕು. ಶಿಕ್ಷಕರೂ ಕೂಡ ಅದನ್ನು ಬೆಳೆಸಿಕೊಳ್ಳಬೇಕು. ಇದರ ಪರಿಣಾಮ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂಬAಧದಲ್ಲಿರುವಾಗ ಕಾಣಿಸುತ್ತದೆ.

    10. ಗುರಿಯಾಗಿಟ್ಟುಕೊಂಡ ಕಾರ್ಯಗಳಲ್ಲಿ ಸಹಕರಿಸುವ ಮೂಲಕ ವಿದ್ಯಾರ್ಥಿ ಪ್ರಗತಿ ಸಾಧಿಸಿದರೂ ಕೆಲವು ಪೋಷಕರು ಶಿಕ್ಷಕರಿಗೆ ಧನ್ಯವಾದ ಹೇಳದಿರಬಹುದು. ಹತಾಶರಾಗಬೇಡಿ. ನಿಮ್ಮನ್ನು ನೀವು ‘ವೆರಿ ಗುಡ್’ ಎಂದು ಶ್ಲಾಘಿಸಿಕೊಳ್ಳಿ.

    ಡಾ. ಸಿ.ಜೆ. ಜೋನ್
    ಸೀನಿಯರ್ ಸೈಕಿಯಾ ಟ್ರಿಸ್ಟ್

  • ಪತ್ನಿಗೆ ಆರ್ಥಿಕ ಸ್ಥಿತಿ ತಿಳಿಸಿದರೆ ಏನಾಗಬಹುದು..?

    ಪತ್ನಿಗೆ ಆರ್ಥಿಕ ಸ್ಥಿತಿ ತಿಳಿಸಿದರೆ ಏನಾಗಬಹುದು..?

    ಪತಿ-ಪತ್ನಿಯರ ಸಂಬಂಧ ಕೇವಲ ಶಾರೀರಿಕ ಸುಖಕ್ಕೆ ಮಾತ್ರ ಮೀಸಲು ಎಂಬ ನಂಬಿಕೆ ಕೆಲವರಿಗೆ, ವಂಶ ಬೆಳೆಸುವುದೇ ಮದುವೆಯ ಉದ್ದೇಶ ಎಂದು ಭಾವಿಸುವವರೂ ಇದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ಪತಿ-ಪತ್ನಿಯು ಪರಸ್ಪರರ ಹಿತಚಿಂತಕರಾಗಿರುತ್ತಾರೆ.

    ಆದ್ದರಿಂದಲೇ ಕುರ್‌ಆನ್‌ನಲ್ಲಿ ಪತಿ-ಪತ್ನಿಯನ್ನು ಪರಸ್ಪರರ ಉಡುಪು ಎನ್ನಲಾಗಿದೆ. ಅವರನ್ನು ಜೋಡಿ’ ಎನ್ನಲಾಗಿದೆ.ಉಡುಪು’ ಯಾವ ರೀತಿ ಒಂದು ಶರೀರದ ನಗ್ನತೆಯನ್ನು ಮರೆಮಾಡುವ ಮೂಲಕ ಗೌರವಕ್ಕೆ ಪಾತ್ರವಾಗಿರುತ್ತದೋ… ಅದೇ ರೀತಿ ದಂಪತಿಗಳು ಪರಸ್ಪರರ ಗೌರವ ಉಳಿಸುವ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಪತಿಯು ಆರ್ಥಿಕ ಸ್ತಂಭವಾಗಿದ್ದರೆ, ಪತ್ನಿಯು ಮನೆಯ ಜವಾಬ್ದಾರಿಯನ್ನು ಹೊರುವವಳಾಗಿರುತ್ತಾಳೆ. ಅಂತಹದರಲ್ಲಿ ಪತಿಯು ತನ್ನ ಎಲ್ಲಾ ವ್ಯವಹಾರಗಳ ಬಗ್ಗೆ ತನ್ನ ಸಂಗಾತಿಯೊAದಿಗೆ ಸಮಾಲೋಚನೆ ಮಾಡಬೇಕು. ಇಂದು ಕೆಲವು ಪುರುಷರು ಮಾಡುವ ತಪ್ಪು ಏನೆಂದರೆ ತನ್ನ ಕಾರುಬಾರು ವ್ಯವಹಾರದ ಬಗ್ಗೆ, ತನ್ನ ದುಡಿಮೆಯ ಸ್ಥಿತಿಗತಿ ಬಗ್ಗೆ ಹೆಂಡತಿಗೆ ಯಾವುದೇ ವಿಷಯ ತಿಳಿಸುವುದಿಲ್ಲ. ತಾನು ಸಂಪಾದಿಸುವ ಹಣ ಯಾವ ರೀತಿಯದು, ಹೇಗೆ ಸಂಪಾದಿಸುತ್ತಿದ್ದೇನೆAಬ ವಿವರವನ್ನು ರಹಸ್ಯ ಆಗಿ ಇಡುತ್ತಾರೆ.

    ಒಂದು ಘಟನೆ ಹೀಗಿದೆ. ಇಕ್ಬಾಲ್ ದೊಡ್ಡ ಉದ್ಯಮಿ. ನಗರದಲ್ಲಿ ಅವನು ಎಲ್ಲರ ಗೌರವಕ್ಕೆ ಪಾತ್ರನಾದ ದೊಡ್ಡ ಶ್ರೀಮಂತ ಸಾಲಿಗೆ ಸೇರಿದವನು. ಮನೆಯಲ್ಲಿ ಐದಾರು ಅದ್ಧೂರಿ ಕಾರುಗಳು, ಹೆಂಡತಿ ಮಕ್ಕಳೊಂದಿಗೆ ವಿದೇಶ ತಿರುಗಾಟ, ಹಲವು ಪಾರ್ಟಿಗಳನ್ನು ಅಯೋಜಿಸುತ್ತಾ ಆಡಂಬರದ ಜೀವನದಲ್ಲಿ ಮಜಾದಲ್ಲಿದ್ದ. ಹೆಂಡತಿಗೆ ತನ್ನ ಪತಿಯು ಇಷ್ಟೊಂದು ಹಣ ಎಲ್ಲಿಂದ ತರುತ್ತಿದ್ದಾನೆಂಬ ಚಿಂತೆ ಬಂದಾಗ ಆಕೆ ಪ್ರಶ್ನಿಸುತ್ತಾಳೆ. ಅವನು ಹೇಳಿದ ನನಗೆ ಈ ಸಲ ಉದ್ಯಮದಲ್ಲಿ ಕೋಟಿಗಟ್ಟಲೇ ಲಾಭ ಬಂತು… ನಿನಗೆ ಅದೆಲ್ಲಾ ವಿಷಯ ಬೇಡಾ, ನಿನಗೆ ಏನು ಬೇಕೋ ಅದನ್ನು ಖರೀದಿಸು, ಎಂಜಾಯ್ ಮಾಡು… ಎಂದ. ಒಂದಿನ ಪತಿಯನ್ನು ಪೊಲೀಸರು ಬಂದು ಕರೆದೊಯ್ದಾಗ ಹೆಂಡತಿಗೆ ಅರಿವಾಯಿತು ತಾನಿರುವ ಮನೆ, ತನ್ನ ಸಂಪತ್ತು ಎಲ್ಲವೂ ಮುಳುಗಿ ಹೋಗಿದೆ ಬ್ಯಾಂಕ್‌ನವರು ಅವರ ಅದ್ಧೂರಿ ಮನೆ, ಕಾರು ಎಲ್ಲವನ್ನೂ ಸೀಝ್’ ಮಾಡಿದ್ದರು. ವಿಷಯ ಏನೆಂದರೆ ಈ ಉದ್ಯಮಿ ಪತಿರಾಯ ಬ್ಯಾಂಕ್‌ನಿAದ ಕೋಟಿಗಟ್ಟಲೇ ಲೋನ್ ತೆಗೆದು, ಜನರಿಂದ ಲಕ್ಷಗಟ್ಟಲೇ ಹೂಡಿಕೆಯನ್ನು ಮಾಡಿಸಿ ಎಲ್ಲರಿಗೂ ಪಂಗನಾಮ ಹಾಕಿದ್ದ. ಜನರು ತಾವು ಈ ವ್ಯಕ್ತಿಯನ್ನು ನಂಬಿ ಕೊಟ್ಟ ಕೋಟಿಗಟ್ಟಲೇ ಹಣದಿಂದ ಆತ ಆಡಂಬರದ ಜೀವನ ನಡೆಸುತ್ತಿದ್ದ. ಜನರ ಬೆವರಿನ, ಶ್ರಮದ ಹಣದಲ್ಲಿ ಬೆಲೆಬಾಳುವ ಕಾರುಗಳಲ್ಲಿ ವಿದೇಶಿ ಪ್ರಯಾಣದಲ್ಲಿ ಮಜಾವಾಗಿದ್ದ. ಅರಮನೆಯಿಂದ ಸೀದಾ ಬೀದಿಗೆ ಬಿದ್ದ ಮನೆ ಒಡತಿಗೆ ಸತ್ಯ ತಿಳಿದಾಗ ಆಕೆ ಎಲ್ಲವನ್ನೂ ಕಳೆದುಕೊಂಡು ಬರಿಗೈ ಆಗಿದ್ದಳು. ಪತಿಯು ತನಗೆ ಹೆಚ್ಚು ಆದಾಯ ಬರುತ್ತಿದೆ, ತನ್ನ ಉದ್ಯಮದಲ್ಲಿ ತುಂಬಾ ಲಾಭ ಆಗಿದೆ ಎಂದು ಸದಾ ಅವಳ ಬಳಿ ಹೇಳುತ್ತಿದ್ದ. ಆಕೆ ಅದನ್ನು ನಂಬಿದ್ದಳು. ಇಂದು ಆ ಉದ್ಯಮಿ ಎಲ್ಲಾ ಸಂಪತ್ತು ಕಳೆದುಕಂಡು ಮೂಲೆ ಸೇರಿದ್ದಾನೆ. ಇಲ್ಲಿ ನಮಗೆ ತಿಳಿಯುವ ಒಂದು ಪಾಠ ಏನೆಂದರೆ… ಮನೆಯ ಯಜಮಾನಿ (ಪತ್ನಿ) ತನ್ನ ಪತಿಯ ಸಂಪಾದನೆಯ ಬಗ್ಗೆ ಅಲಕ್ಷö್ಯದಿಂದ ಇರುವುದು, ಅವಳಿಗೆ ಬೇಕಾದಷ್ಟು ಹಣ ಕೈಗೆ ನೀಡಿದಾಗ ಅವಳೂ ಖುಶಿಪಟ್ಟಳು. ಪತಿಯು ಯಾವ ರೀತಿ ಸಂಪಾದಿಸುತ್ತಿದ್ದಾನೆAಬ ಚಿಂತನೆ ಅವಳಿಗೆ ಇರಬೇಕಾಗಿತ್ತು. ಬೆಲೆಬಾಳುವ ವಸ್ತç, ಬಂಗಾರ, ಫರ್ನಿರ‍್ಸ್, ವಿದೇಶ ಯಾತ್ರೆ ಇತ್ಯಾದಿಗಳಲ್ಲಿ ಮೈಮರೆತ ಪತ್ನಿಗೆ ಒಂದು ದಿನ ಇದೆಲ್ಲಾ ನ್ಯಾಯದ ಹಣ ಅಲ್ಲ ಎಂದು ತಿಳಿದಾಗ ಆಕೆ ಕುಸಿದು ಬಿದ್ದಳು.

    ಇಂದು ಹೃದಯಾಘಾತ ಹೆಚ್ಚುತ್ತಿದೆ. ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನು ಅಪ್ಪುತ್ತಿದ್ದಾರೆ. ದಿಢೀರನೇ ಬಂದು ಎರಗುವ ಸಾವಿಗೆ ಪತಿಯನ್ನು ಕಳೆದುಕೊಂಡಾಗ ಪತಿಯು ಎಷ್ಟು ಜನರಿಗೆ ಸಾಲ’ ನೀಡಲು ಬಾಕಿ ಇದೆ? ಎಷ್ಟು ಕಡೆ ಅದನ್ನು ಬಿಸಿನೆಸ್‌ಗೆ ಹಣ ಹೂಡಿಕೆ ಮಾಡಿರುತ್ತಾನೇ ಎಷ್ಟು ಹಣ ಆತನಿಗೆ ಬರಬೇಕಾಗಿದೆ, ಆತನ ವ್ಯವಹಾರ ಏನೂ… ಇತ್ಯಾದಿ ಏನೂ ಪತ್ನಿಗೆ ತಿಳಿಯದೇ ಹೋದಾಗ ನಷ್ಟ’ ಉಂಟಾಗುತ್ತದೆ. ಆದರಿಂದಲೇ ಪತಿ-ಪತ್ನಿಯ ನಡುವೆ ಸಮಾಲೋಚನೆ ಇರಬೇಕು. ತಮ್ಮ ವ್ಯವಹಾರ, ಹಣ, ಬಿಸಿನೆಸ್ ವಿಷಯ ಇತ್ಯಾದಿ ವಿಷಯವನ್ನು ಪತ್ನಿಗೆ ತಿಳಿಸಬೇಕು. ಹೆಂಡತಿಗೆ ಹೇಳುವುದರಿಂದ ತಮ್ಮ ಗಂಡಸುತನಕ್ಕೆ ಪೆಟ್ಟಾಗುವುದಿಲ್ಲ. ಯಾಕೆ ಹೆಂಗಸರಿಗೆ ಹೇಳಬೇಕೆಂದು ಚಿಂತಿಸುವುದೇ ದೊಡ್ಡ ತಪ್ಪು. ಪ್ರತೀಯೊಬ್ಬರೂ ತಮ್ಮ ವ್ಯವಹಾರದ ಸಂಗತಿಯನ್ನು ಪತ್ನಿಗೆ ತಿಳಿಸಬೇಕು. ಅವಳು ನಿಮ್ಮ ಬಾಳಸಂಗಾತಿ. ಭವಿಷ್ಯದ ಲಾಭ, ನಷ್ಟಕ್ಕೆ ಅವಳೂ ಭಾಗಿಯಾಗುತ್ತಾಳೆ. ನನ್ನ ಪತಿ ಈ ರೀತಿ ಜನರಿಗೆ ಮೋಸ ಮಾಡಿ ಹಣ ಸಂಪಾದಿಸುತಿದ್ದ ಎಂದು ಗೊತ್ತಿದ್ದರೆ… ನಾನು ದುಂದುವೆಚ್ಚ ಮಾಡದೇ ಬದುಕುತ್ತಿದ್ದೆ. ನಾನು ಆತನನ್ನು ಅನ್ಯಾಯದ ಗಳಿಕೆಯಿಂದ ತಡೆಯುತ್ತಾ ಇದ್ದೆ… ಎಂದು ನಂತರ ಪಶ್ಚಾತ್ತಾಪ ಪಡುವುದು ಬೇಡ.

    ಇಂದು ಪತಿ ಸಾಲ ಮಾಡಿ ಮಕ್ಕಳ ಬರ್ತ್ಡೇ ಮಾಡುವುದು, ಸಾಲಮಾಡಿ ಪ್ರವಾಸಕ್ಕೆ ಹೋಗುವುದು, ಮದುವೆಗೆ ಗಿಫ್ಟ್ ಖರೀದಿಸುವುದು, ಬಸುರಿಯ ಸೀಮಂತ ಮಾಡುವುದೂ… ಎಲ್ಲವೂ ಮಹಿಳೆಯರ ಒತ್ತಾಯದಿಂದಲೇ ಆಗಿರುತ್ತದೆ. ಗಂಡಸರು ಹಣ ಸಾಲ ಮಾಡಿ ಖರ್ಚು ಮಾಡುವುದು ಕೇವಲ ಮಹಿಳೆಯರಿಗೆ ನೆಮ್ಮದಿ ಸಿಗಲಿ ಎಂದಾಗಿದೆ. ಒಡವೆ, ಸೀರೆ, ಪಾತ್ರೆ… ಸ್ಕೀಮ್‌ನಲ್ಲಿ ಖರೀದಿಸಿ, ತಿಂಗಳ ಹಣ ಕಟ್ಟಲು ಗಂಡಸರನ್ನು ಒತ್ತಾಯಿಸುವುದು ಅವರು ಎಲ್ಲಿಂದಲಾದರೂ ತರಲಿ ಎಂದು ಸುಮ್ಮನಿರುವುದು ತಪ್ಪು.ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆ ಮಾತಿದೆ. ಪತಿಯು ತನ್ನ ಕುಟುಂಬದ ಖುಶಿಗಾಗಿ ಸಾಲಗಾರನಾಗುತ್ತಾನೆ.

    ಗಲ್ಫ್ನಲ್ಲಿ ಬೆವರು ಸುರಿಸಿ ಶ್ರಮವಹಿಸಿ ದುಡಿದು ಕಳಿಸುವ ಪತಿಯ ಹಣವನ್ನು ಇಲ್ಲಿ ಶಾಪಿಂಗ್‌ಗಾಗಿ, ಬಗೆ ಬಗೆಯ ತಿಂಡಿ, ಪಾರ್ಟಿಗಾಗಿ ಖರ್ಚು ಮಾಡುವ ಮಹಿಳೆಯರಿಗೆ ಭರವಿಲ್ಲ. ಹಣ ಇರುವಾಗ ಮಾತ್ರ ಪತಿಗೆ ಗೌರವ, ಮನ್ನಣೆ ನೀಡುವ ಆತನು ಬರಿಕೈಯವನಾದಾಗ ಆತನನ್ನು ದೂರ ಮಾಡುವ ಪತ್ನಿಯರೂ ಇದ್ದಾರೆ. ಇಂತಹ ಪತ್ನಿಯರನ್ನು ಕೃತಜ್ಞತೆ ಇಲ್ಲದ ವರ್ಗಕ್ಕೆ ಸೇರಿಸಬಹುದು. ಪತಿ-ಪತ್ನಿಯ ನಡುವೆ ಯಾವುದೇ ವಿಷಯಕ್ಕೂ ರಹಸ್ಯ ಇರಬಾರದು. ಅವರಿಬ್ಬರು ತೆರೆದ ಪುಸ್ತಕದಂತೇ ಪ್ರತೀ ಒಂದು ವ್ಯವಹಾರ, ವಿಷಯ ಪರಸ್ಪರರ ನಡುವೆ ಚರ್ಚೆ ಆಗಬೇಕು. ಪತಿಯನ್ನು ವಿನಾಶದಿಂದ ರಕ್ಷಿಸುವುದು ಪತ್ನಿಯ ಧರ್ಮವಾಗಿದೆ.

    ಕೆಲವು ಪತಿಯಂದಿರು ಊರಲ್ಲಿ ತುಂಬಾ ಸಾಲ ಮಾಡಿ ನಂತರ ವಿದೇಶಕ್ಕೆ ಪರಾರಿಯಾಗಿ ಬಿಡುತ್ತಾರೆ. ಊರಲ್ಲಿ ಸಾಲಗಾರರು ಪತ್ನಿಯನ್ನು ಬದುಕಲೂ ಬಿಡುವುದಿಲ್ಲ. ಅವಳಿಗೆ ಕಿರುಕುಳ ನೀಡುತ್ತಾರೆ. ಇಂತಹ ಹಲವು ಕೇಸ್‌ಗಳು ನಮ್ಮ ಕೌನ್ಸಿಲಿಂಗ್‌ಗೆ ಬಂದಿದೆ. ಇದರಿಂದ ಬಚಾವ್ ಆಗಲು ಹೆಂಡತಿ ಪತಿಗೆ ತಲಾಕ್ ಕೇಳುತ್ತಾಳೆ. ಆತನ ಹೆಂಡತಿ ಆಗಿ ತಾನು ಈಗ ಇಲ್ಲ ಎಂದು ಸಾಲಗಾರರಿಗೆ ಹೇಳಿ ಆಕೆ ಬಚಾವ್ ಆಗಲು ನೋಡುತ್ತಾಳೆ. ಸಾಲ ಮಾಡಿ ಪರಾರಿ ಆಗುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಅವರ ಕುಟುಂಬ ಜೀವನವೂ ನಷ್ಟ ಆಗುತ್ತದೆ. ಪತ್ನಿಯ ಆತಿ ಆಶೆ, ಬೇಕಾಬಿಟ್ಟಿ ಖರ್ಚು, ಪತಿಯನ್ನು ಸಾಲಗಾರನನ್ನಾಗಿ ಮಾಡುವುದೇ ಸತ್ಯ. ಆದುದರಿಂದ ಪತಿ-ಪತ್ನಿಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಸಾಲ' ಬದುಕನ್ನು ನರಕ ಮಾಡುತ್ತದೆ.ಸಾಲ’ ಬದುಕನ್ನೇ ಅಂತ್ಯ’ ಮಾಡುತ್ತದೆ. ಪತ್ನಿಯ ಬಳಿ ತಮ್ಮ ವ್ಯವಹಾರವನ್ನು, ಹಣಕಾಸು ವಿಷಯವನ್ನು ಹೇಳುವುದು ತಮ್ಮ ಪುರುಷತ್ವ(ಅಹಂಕಾರ)ಕ್ಕೆ ಅಡ್ಡಿ ಎಂದು ಭಾವಿಸುವುದು ಮೂರ್ಖತನ.

    ಪತ್ನಿಯು ಪತಿಯ ಹಿತವನ್ನೇ ಬಯಸುವವಳು. ಅವಳು ಪತಿಯನ್ನುಹರಾಮ್’ ದಾರಿಗೆ ಸಾಗಲು ಅವಕಾಶ ನೀಡಲಾರಳು. ಹರಾಮ್ ಅಥವಾ ವಂಚನೆಯ ಸಂಪಾದನೆಗೆ ಹೆಂಡತಿ, ಮಕ್ಕಳು ಭಾಗೀದಾರರಾಗಿರಲು ಆಶಿಸುವುದಿಲ್ಲ. ಜೀವನ ನ್ಯಾಯದ ಸಂಪಾದನೆಯಲ್ಲಿರಲಿ. ನಾಳೆ ದೇವನ ಬಳಿ ಅಪರಾಧಿ ಆಗಿ ನಿಲ್ಲುವ ಹೀನ ಸ್ಥಿತಿ ಬಾರದಿರಲಿ.

    ಶಮು

  • 40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

    40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

    ಈಗೀಗ ನನಗೆ ಅತೀವ ಮರೆವು,
    ಫ್ರಿಜ್ಜು ತೆರೆಯುತ್ತೇನೆ,
    ಯಾಕೆ ತೆರೆದೆ ಎಂದು ಮರೆಯುತ್ತೇನೆ.

    ಬಟ್ಟೆ ಬರೆಗಳನ್ನು ಮಡಚಲೆಂದು
    ಕೋಣೆಗೆ ತೆರಳುತ್ತೇನೆ.
    ಅಲ್ಲಿ ಮತ್ತೇನೋ ಕೆಲಸ ಕಂಡೊಡನೆ
    ಈ ಕೆಲಸ ಮರೆಯುತ್ತೇನೆ.

    ವಿಶೇಷ ಅಡುಗೆ ಮಾಡಲೆಂದು
    ಹೊರಟಾಗಲೂ ಅಷ್ಟೇ,
    ಕೆಲವೊಂದು ಸಾಮಗ್ರಿಗಳನ್ನು
    ಹಾಕಲೂ ಮರೆಯುತ್ತೇನೆ.

    ಏನೋ ಹೇಳಲೆಂದು
    ಬಾಯಿ ತೆರೆಯುತ್ತೇನೆ,
    ಮಧ್ಯದಲ್ಲಿ ಮತ್ತೇನೋ ಮಾತು ಬಂದರೆ ಸಾಕು
    ಈ ವಿಷಯ ಮರೆತೇಹೋಗುತ್ತೇನೆ.

    ಇದು ನನ್ನ ಸಮಸ್ಯೆ ಮಾತ್ರವೇ
    ಪ್ರಶ್ನಿಸುವೆ ಹಲವು ಬಾರಿ
    ಇಲ್ಲ ನಮ್ಮದೂ ಕೂಡಾ
    ಅನ್ನುತ್ತಾರೆ ಗೆಳತಿಯರು ಸಾರಿ.

    ಬಹುಷಃ ನಲ್ವತ್ತರ ಅಂಚಿನಲ್ಲಿರುವ
    ನಮಗೆ ಇದು ಸಾಮಾನ್ಯ
    ಆದರೂ ಈ ಬಗ್ಗೆ
    ಮುಗಿಯದು ತಲ್ಲಣ

    ಮತ್ತೊಮ್ಮೆ ನನ್ನಲ್ಲೇ ಪ್ರಶ್ನಿಸುತ್ತೇನೆ.
    ಅದೇಕೆ ನನಗೆ ನನ್ನ
    ಸಮಸ್ಯೆಗಳು ಮರೆಯುವುದಿಲ್ಲ,
    ಹಿಂದೊಮ್ಮೆ ಘಟಿಸಿದ ಕಹಿಘಟನೆ
    ಮರೆತುಹೋಗುವುದಿಲ್ಲ,

    ಬದುಕಿಗೆ ವಿದಾಯ ಹೇಳಿದ
    ಅಪ್ಪನ ಅಗಲಿಕೆಯ ನೋವೇಕೆ
    ಮರೆತು ಹೋಗುವುದಿಲ್ಲ,
    ಜವಾಬ್ದಾರಿಗಳೂ ಮರೆತು ಹೋಗುವುದಿಲ್ಲ.

    ನಾನು ಮರೆಯುವುದು ಅತ್ಯಂತ ಕ್ಷುಲ್ಲಕ ವಿಷಯಗಳನ್ನು.
    ಮನೆಯನ್ನು ನಡೆಸುವುದಾಗಲಿ,
    ಮಕ್ಕಳಿಗೆ ಉಣಿಸುವುದಾಗಲಿ ನಾನು ಮರೆಯುವುದಿಲ್ಲ.
    ಆದರೂ ನನಗೀಗ ಹೆಸರು
    ಮಹಾನ್ ಮರೆಗುಳಿ.

    ಹೌದು ಕೆಲವೊಮ್ಮೆ ಅನಿಸುವುದು
    ಮರೆಯಬೇಕು ಎಲ್ಲವನ್ನು,
    ತಿಂಗಳು ತಿಂಗಳು ಅನುಭವಿಸುವ ನೋವನ್ನು,
    ಎಂದೋ ಅನುಭವಿಸಿದ,
    ಇಂದಿಗೂ ಚುಚ್ಚುವ ಅವಮಾನವನ್ನು,
    ಮನದಲ್ಲಿ ಅದುಮಿಟ್ಟುಕೊಂಡಿರುವ ಆಸೆಯನ್ನು,

    ನಾಳೆ ಎನ್ನುವುದನ್ನು
    ಮರೆಯಬೇಕು, ಮರೆತು ಬದುಕಬೇಕು.
    ಬದುಕಲ್ಲಿ ಒಂದು ದಿನವನ್ನು ನನಗಾಗಿ ಬದುಕಬೇಕು.
    ಯಾವುದೇ ಧಾವಂತವಿಲ್ಲದೆ,
    ಯಾವುದೇ ಒತ್ತಡವಿಲ್ಲದೆ,
    ಯಾವ ಜವಾಬ್ದಾರಿಯ ಹಂಗೂ ಇಲ್ಲದೇ.
    ನಾನಾಗಿ, ನನಗಾಗಿ.

    ಅಸ್ಮತ್ ವಗ್ಗ