Tag: #womens problem

  • ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? 
ಇಲ್ಲಿದೆ ಪರಿಹಾರ ಸೂತ್ರಗಳು

    ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? ಇಲ್ಲಿದೆ ಪರಿಹಾರ ಸೂತ್ರಗಳು

    ಮಾವಿನ ತೋಪಿನಲ್ಲಿ ಮಕ್ಕಳು ಓಡಾಡುತ್ತಾ ಆಟವಾಡುತ್ತಿದ್ದ ಹಳೆಯ ದಿನಗಳು ಕೇವಲ ನೆನಪು. ಆ ಉತ್ಸಾಹದ ಬದಲಿಗೆ, ಇಂದು ಮನೆಗಳ ನಾಲ್ಕು ಗೋಡೆಗಳ ಒಳಗೆ ಬಂಧಿಯಾಗಿರುವ ಹೊಸ ಪೀಳಿಗೆಯೊಂದು, ರೀಲ್‌ಗಳು ಮತ್ತು ಶಾರ್ಟ್ಗಳ ಅಂತ್ಯವಿಲ್ಲದ ಹರಿವನ್ನು ನೋಡುವುದನ್ನು ನಾವು ನೋಡುತ್ತಿದ್ದೇವೆ.

    ಪ್ರತಿಯೊಂದು ಯುಗದಲ್ಲೂ, ವಿಭಿನ್ನ ವ್ಯಸನಗಳು ಮನುಷ್ಯನನ್ನು ವಶಪಡಿಸಿಕೊಳ್ಳಲು ಬಂದಿವೆ. ಅಫೀಮು ಮತ್ತು ಮದ್ಯದಿಂದ ಕೂಡಿದ ವ್ಯಸನ ಅನೇಕ ಜೀವಗಳನ್ನು ನಾಶಮಾಡಿವೆ. ಇಂದು, ಡಿಜಿಟಲ್ ಹೆರಾಯಿನ್ ಎಂಬ ಸುಂದರ ಹೆಸರಿನ ಮೊಬೈಲ್ ಫೋನ್‌ಗಳು ಅವುಗಳ ಸ್ಥಾನವನ್ನು ಪಡೆದುಕೊಂಡಿವೆ.

    ಮೆದುಳನ್ನು ಹೆಪ್ಪುಗಟ್ಟಿಸುವ ಮಾಂತ್ರಿಕ ದೃಶ್ಯಗಳನ್ನು ಗಂಟೆಗಟ್ಟಲೆ ರೀಲ್‌ಗಳು ಮತ್ತು ಶಾರ್ಟ್ಗಳ ಮೂಲಕ ವೀಕ್ಷಿಸುತ್ತಿರುವ ಮಗುವಿನ ಮೆದುಳಿನಲ್ಲಿ ಏನಾಗುತ್ತದೆ ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೇ? ಪ್ರತಿ ಸೆಕೆಂಡಿಗೆ ಬದಲಾಗುವ ದೃಶ್ಯಗಳಿಗೆ ಅನುಗುಣವಾಗಿ ಅವರ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಮಟ್ಟವು ವೇಗವಾಗಿ ಏರುತ್ತದೆ ಮತ್ತು ಇಳಿಯುತ್ತದೆ. ಅದು ಒದಗಿಸುವ ತಾತ್ಕಾಲಿಕ ಆನಂದವನ್ನು ಮತ್ತೆ ಮತ್ತೆ ಪಡೆಯಲು ಅವರ ಮನಸ್ಸುಗಳು ಹಂಬಲಿಸುತ್ತವೆ. ಪುಸ್ತಕ ಓದುವ ಶಾಂತ ಆನಂದವನ್ನು ಅಥವಾ ನಂತರ ಸ್ನೇಹಿತರೊಂದಿಗೆ ಆಟವಾಡುವಾಗ ಸಿಗುವ ಸಾಮಾಜಿಕ ಮೋಜನ್ನು ಅವರು ಅನುಭವಿಸಲು ಸಾಧ್ಯವಾಗುವುದಿಲ್ಲ. ಏಕಾಗ್ರತೆ ಕಳೆದುಹೋಗುತ್ತದೆ, ಸ್ಮರಣಶಕ್ತಿ ಕಡಿಮೆಯಾಗುತ್ತದೆ ಮತ್ತು ಆಲೋಚನಾ ಸಾಮರ್ಥ್ಯವು ಪಾರ್ಶ್ವವಾಯುವಿಗೆ ಒಳಗಾಗುತ್ತದೆ.

    ಅಜ್ಜ-ಅಜ್ಜಿ ಹೇಳುವ ಕಥೆಗಳು ಮತ್ತು ಬಾಲ್ಯದಲ್ಲಿ ಪೋಷಕರು ತೋರಿಸುವ ಪ್ರಕೃತಿಯ ಅದ್ಭುತಗಳ ಮೂಲಕ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತಿತ್ತು. ಆದರೆ, ಇಂದು, ಕಾರ್ಟೂನ್ ಮತ್ತು ಗೇಮ್‌ಗಳ ಕೃತಕ ಜಗತ್ತಿನಲ್ಲಿ ಅಲೆದಾಡುವ ಮಕ್ಕಳು ತಮ್ಮ ವಿಶಿಷ್ಟ ಕಲ್ಪನೆಗಳನ್ನು ಕಳೆದುಕೊಳ್ಳುತ್ತಾರೆ. ಅವರು ತಾವು ನೋಡುವ ಪಾತ್ರಗಳಂತೆ ಮಾತನಾಡಲು ಮತ್ತು ವರ್ತಿಸಲು ಪ್ರಾರಂಭಿಸುತ್ತಾರೆ. ವಾಸ್ತವ ಮತ್ತು ಭ್ರಮೆಯನ್ನು ಪ್ರತ್ಯೇಕಿಸಲು ಸಾಧ್ಯವಾಗದ ಒಂದು ರೀತಿಯ ಕನಸಿನ ಸ್ಥಿತಿಗೆ ಅವರು ಜಾರುತ್ತಾರೆ.

    ಆರೋಗ್ಯ ಸಮಸ್ಯೆಗಳು
    ಮಾನಸಿಕ ಪರಿಣಾಮಗಳ ಜೊತೆಗೆ, ದೈಹಿಕ ಸವಾಲುಗಳು ಸಹ ಸಣ್ಣದಲ್ಲ. ಫೋನ್ ನೋಡುತ್ತಾ ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳುವುದು ಮಕ್ಕಳ ಕಣ್ಣುಗಳ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. `ಕಂಪ್ಯೂಟರ್ ವಿಷನ್ ಸಿಂಡ್ರೋಮ್’ ಎಂದು ಕರೆಯಲ್ಪಡುವ ರೋಗ ಇಂದಿನ ಮಕ್ಕಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ಕುತ್ತಿಗೆ ನೋವು, ಬೆನ್ನು ನೋವು ಮತ್ತು ಬೊಜ್ಜು ಕೂಡ ಉಳಿದ ಲಕ್ಷಣಗಳಾಗಿವೆ. ಓಡುತ್ತಾ ಆಟವಾಡಬೇಕಾದ ವಯಸ್ಸಿನಲ್ಲಿ, ಆಟದ ಮೈದಾನಗಳಿಂದ ವಂಚಿತರಾದ ಮಕ್ಕಳು ರೋಗಗಳ ಕತ್ತಲಕೋಣೆಯಲ್ಲಿ ಬಂಧಿ ಯಾಗುತ್ತಿದ್ದಾರೆ.

    ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಇದು ಮಕ್ಕಳಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತದೆ. ಸರಿಯಾದ ನಿದ್ರೆ ಸಿಗದ ಮಗು ಅಧ್ಯಯನದತ್ತ ಗಮನಹರಿಸಲು ಮತ್ತು ಆರೋಗ್ಯವಾಗಿರಲು ಹೇಗೆ ಸಾಧ್ಯವಾಗುತ್ತದೆ?

    ನೈತಿಕತೆಯ ಕುಸಿತ
    ಇಂಟರ್‌ನೆಟ್‌ನ ವಿಶಾಲ ಜಗತ್ತು ಮಕ್ಕಳಿಗೆ ತೆರೆದುಕೊಂಡಾಗ, ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಅವರು ವಯಸ್ಸಿಗೆ ಸೂಕ್ತವಲ್ಲದ ವಿಷಯ ಮತ್ತು ಅಪಾಯಕಾರಿ ಆನ್‌ಲೈನ್ ಬಲೆಗಳಿಗೆ ಸುಲಭವಾಗಿ ಆಕರ್ಷಿತರಾಗಬಹುದು. ಹಿಂಸೆ ಮತ್ತು ಅಶ್ಲೀಲತೆಯಿಂದ ತುಂಬಿರುವ ಆಟಗಳು ಮತ್ತು ವೀಡಿಯೊಗಳು ಅವರ ಯುವ ಮನಸ್ಸನ್ನು ವಿಷಪೂರಿತಗೊಳಿಸುತ್ತವೆ. ಅವರು ಸಹಾನುಭೂತಿ, ಪ್ರೀತಿ ಮತ್ತು ಕರುಣೆಯನ್ನು ಕಲಿಯಬೇಕಾದ ವಯಸ್ಸಿನಲ್ಲಿ, ಕೃತಕ ಪ್ರಪಂಚದ ಕ್ರೌರ್ಯವನ್ನು ಕಂಡು ಸಂವೇದನಾ ಶೀಲತೆಯನ್ನು ಕಳೆದುಕೊಳ್ಳುತ್ತಾರೆ.

    ತಮ್ಮ ಮಕ್ಕಳಿಗೆ ಫೋನ್‌ಗಳನ್ನು ನೀಡುವ ಮೂಲಕ ತಮ್ಮ ಕೆಲಸವನ್ನು ಸುಲಭಗೊಳಿಸುವ ಪೋಷಕರು, ನೆನಪಿಡಿ, ನೀವು ಮಾಡುತ್ತಿರುವ ಕೆಲಸಗಳ ದೂರಗಾಮಿ ಪರಿಣಾಮಗಳನ್ನು ನಿಮ್ಮಿಂದ ಅರಗಿಸಿಕೊಳ್ಳಲು ಸಾಧ್ಯವಾಗದಿರಬಹುದು.

    ನಾವು ಏನು ಮಾಡಬಹುದು?
    ನಮ್ಮ ಕಣ್ಣ ಮುಂದೆ ಒಂದು ಪೀಳಿಗೆ ದಾರಿ ತಪ್ಪುತ್ತಿರುವಾಗ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಅದಕ್ಕೆ ಖಂಡಿತಾ ಪರಿಹಾರಬೇಕು.

    ಮಾದರಿಯಾಗಿ:
    ಮಕ್ಕಳಿಗೆ ಫೋನ್ ಬಳಸಬೇಡಿ ಎಂದು ಹೇಳುವ ಮೊದಲು, ನಾವೇ ಅದರ ಬಳಕೆಯನ್ನು ನಿಯಂತ್ರಿಸಬೇಕು. ಕುಟುಂಬದೊAದಿಗೆ ಕಳೆಯುವ ಸಮಯದಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ದೂರವಿಡಿ.

    ಸಮಯ ಮಿತಿಯನ್ನು ನಿಗದಿಪಡಿಸಿ:
    ಮಕ್ಕಳ Screen ನೋಡುವ ಸಮಯಕ್ಕೆ ಸ್ಪಷ್ಟ ಮಿತಿಯನ್ನು ನಿಗದಿಪಡಿಸಿ. ಆ ಸಮಯದ ಕಳೆದ ಬಳಿಕ ರಾಜಿ ಮಾಡಿಕೊಳ್ಳಲು ಸಿದ್ದರಾಗಬಾರದು.

    ಮುಕ್ತವಾಗಿ ಮಾತನಾಡಿ:
    ಆನ್‌ಲೈನ್ ಪ್ರಪಂಚದ ಅಪಾಯಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಅವರಿಗೆ ಕಲಿಸಿ.

    ಹೊಸ ಲೋಕಗಳನ್ನು ತೆರೆಯಿರಿ:
    ಅವರನ್ನು ಕೈ ಹಿಡಿದು ಪುಸ್ತಕಗಳು, ಆಟಗಳು ಮತ್ತು ಪ್ರಕೃತಿಯ ಜಗತ್ತಿಗೆ ತಲುಪಿಸಿ. ಪ್ರವಾಸಗಳಿಗೆ ಕರೆದುಕೊಂಡು ಹೋಗಿ, ಅವರಿಗೆ ಹೊಸ ಅನುಭವಗಳನ್ನು ನೀಡಿ.

    ಕಾಮನಬಿಲ್ಲನ್ನು ನೋಡಲು ಆಕಾಶದತ್ತ ನೋಡಿ, ಚಿಟ್ಟೆಯನ್ನು ನೋಡಲು ತೋಟಕ್ಕೆ ಹೋಗಿ, ಮತ್ತು ಅವರ ಸ್ನೇಹಿತರ ಪ್ರೀತಿಯನ್ನು ಅನುಭವಿಸಲು ಅವರೊಂದಿಗೆ ಆಟವಾಡುವ ಅವಕಾಶ ಕೊಡಿ. ಆಕಾಶ ಮತ್ತು ಭೂಮಿಯ ಸಂಪರ್ಕವನ್ನು ಕಳೆದುಕೊಂಡು ಆರು ಇಂಚಿನ ಪರದೆಗೆ ಕುಗ್ಗುವ ಪೀಳಿಗೆ ನಮಗೆ ಅಗತ್ಯವಿಲ್ಲ.

    “ಉಜ್ವಲ ಬಾಲ್ಯ” ಎಂಬುದು ಪ್ರತಿ ಮಗುವಿನ ಹಕ್ಕು. ಆ ಹಕ್ಕನ್ನು ಅವರಿಗೆ ನಿರಾಕರಿಸುವ ಹಕ್ಕು ನಮಗಿಲ್ಲ. ನೆನಪಿಡಿ, ಇಂದು ನಾವು ಅವರಿಗೆ ನೀಡುವ ಗಮನ ಮತ್ತು ಪ್ರೀತಿ ನಾಳಿನ ಸಮಾಜದ ಶಕ್ತಿ. ಅದಕ್ಕಾಗಿ, ಅವರಿಗೆ ಪ್ರೀತಿ, ಜ್ಞಾನ ಮತ್ತು ಅನುಭವಗಳ ಹೊಸ ಬಾಗಿಲುಗಳನ್ನು ತೆರೆಯೋಣ. ಆ ಮೂಲಕ, ಅವರ ಬೆಳವಣಿಗೆ ಮತ್ತು ಆ ಮೂಲಕ ನಮ್ಮ ದೇಶದ ಭವಿಷ್ಯ ಉಜ್ವಲ ವಾಗಲಿ.

    ಸಮಿಯುಲ್ಲಾ

  • ಅಡುಗೆ ಮನೆಯೆಂಬ ಔಷಧಾಲಯ: 
ಯಾವ ಮಸಾಲೆ-ತರಕಾರಿ ಯಾವುದಕ್ಕೆ ಪ್ರಯೋಜನಕಾರಿ?

    ಅಡುಗೆ ಮನೆಯೆಂಬ ಔಷಧಾಲಯ: ಯಾವ ಮಸಾಲೆ-ತರಕಾರಿ ಯಾವುದಕ್ಕೆ ಪ್ರಯೋಜನಕಾರಿ?

    ಆಹಾರವು ನಮ್ಮ ಜೀವನಶೈಲಿಯ ಬಹುಮುಖ್ಯ ಪಾತ್ರವಾಗಿದೆ. ಸಾಮಾನ್ಯವಾಗಿ ಅಡುಗೆ ಮನೆ ಎಂದರೆ ಅಮ್ಮ ಹಾಗೂ ರುಚಿಕರ ಅಡುಗೆಗಳು ಅಷ್ಟೆ ನಮಗೆ ನೆನಪಾಗುತವೆ. ಆದರೆ ಅಡುಗೆಯಲ್ಲಿ ಬಳಸುವ ಗಿಡಮೂಲಿಕೆಗಳು, ಹಣ್ಣುಗಳು, ತರಕಾರಿಗಳು ಮಸಾಲೆಗಳು ಪ್ರಥಮ ಚಿಕಿತ್ಸೆಗಾಗಿ ಮತ್ತು ನಿರ್ದಿಷ್ಟ ರೋಗಗಳನ್ನು ಪರಿಹರಿಸಲು ಬಳಸಬಹುದಾದ ಪ್ರಾಯೋಗಿಕ ವರ್ಗವಾಗಿದೆ.

    ನಿಮಗಿದು ಗೊತ್ತೇ?

    ಈ ಕಾಲದಲ್ಲಿ ಕಾಣುತ್ತಿರುವ ರೋಗಗಳಿಗೆ ನಮ್ಮ ಆಹಾರ ಪದ್ಧತಿಯ ಬದಲಾವಣೆಯು ಒಂದು ಕಾರಣವಾಗಿದೆ. ಅದೇಷ್ಟೋ ಕಾಯಿಲೆಗಳಿಗೆ ನಮ್ಮ ಅಡುಗೆ ಮನೆಯಲ್ಲಿಯೇ ಔಷದಿ ಅಡಗಿದ. ನಮ್ಮ ಆಹಾರದ ಪೌಷಕಾಂಶವನ್ನು ತಿಳಿದು ಅದನ್ನು ನಮ್ಮ ದಿನನಿತ್ಯದಲ್ಲಿ ಸರಿಯಾದ ರೀತಿಯಲ್ಲಿ ಅಳವಡಿಸಿದರೆ ನಮ್ಮ ಆರೋಗ್ಯದ ಸಮಸ್ಯೆಯನ್ನು ನಾವು ಸುಧಾರಿಸಬಹುದು.

    ಏನಿದು ಅಡುಗೆ ಮನೆಯ ಔಷದಿಗಳು:

    ನವಧಾನ್ಯ: ಧಾನ್ಯಗಳಲ್ಲಿ ನಾರಿನಾಂಶ ಎಂದರೆ (ಫೈಬರ್) ಅಧಿಕವಾಗಿರುವುದರಿಂದ ನಮ್ಮ ಜೀರ್ಣ ಶಕ್ತಿಯನ್ನು ನಿಧಾನಗೊಳಿಸಿ ನಮ್ಮ ಹಸಿವನ್ನು ಕಡಿಮೆಗೊಳಿಸುತ್ತದೆ. ಪ್ರೋಟೀನ್, ಫೈಬರ್ ಪಮುಖ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.

    ತರಕಾರಿಗಳು ನಮ್ಮ ದಿನ ನಿತ್ಯದಲ್ಲಿ ಸುಲಭವಾಗಿ ಸಿಗುವ ಆರೋಗ್ಯಕರವಾದದ್ದು ಈ ತರಕಾರಿಗಳು, ತರಾಕಾರಿಗಳು ಸಾಕಷ್ಟು ಆಹಾರದ ಫೈಬರ್ ಅನ್ನು ಒದಗಿಸುವ ಮೂಲಕ ನಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಯಾವ ತರಕಾರಿಗಳಲ್ಲಿ ಲಾಭವೇನಿದೆ ಎಂದು ನೋಡಿದರೆ,

    ಹಾಗಲಕಾಯಿ: ಇದು ರುಚಿಯಲ್ಲಿ ಕಹಿಯಿದ್ದರೂ, ಹೊಟ್ಟೆಯಲ್ಲಿರುವ ಜಂತುಹುಳಗಳನ್ನು ನಾಶಮಾಡುತ್ತವೆ. ಸಕ್ಕರೆಕಾಯಿಲೆಗೂ ಒಳ್ಳೆಯ ಔಷಧಿ.

    ಕ್ಯಾರೆಟ್: ಕ್ಯಾರೆಟ್ ವಿಟಮಿನ್ ಎ ಇದರ ಉತ್ತಮ ಮೂಲವಾಗಿದ್ದು ಕಣ್ಣಿನ ಆರೋಗ್ಯವನ್ನು ಸುಧಾರಿಸಿತ್ತದೆ. ಇದರ ವೈಶಿಷ್ಟ್ಯತೆಯೆಂದರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಜೊತೆಗೆ ಬೀಟಾ- ಕ್ಯಾರೋಟಿನ್ ಸೇರಿದಂತೆ ಆಂಟಿ ಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾಗಿದೆ. ಕ್ಯಾರೆಟ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿ ಇರುವ ಖನಿಜ, ಪೊಟ್ಯಾಸಿಯಮ್, ಸೋಡಿಯಂ ಶ್ರೇಣಿಗಳನ್ನು ಸಮತೋಲನಗೊಳಿಸಲು ಮತ್ತು ದೇಹದಿಂದ ಹೊರಹಾಕಲು ಅನುವು ಮಾಡಿಕೊಡುತ್ತದೆ.

    ಬೀಟ್ರೋಟ್: ಬೀಟ್ರೋಟ್ ಸಹ ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪೌಷ್ಠಿಕ ಸತ್ವಗಳು ಹೇರಳವಾಗಿ ಹೊಂದಿದೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿದ್ದು, ಮ್ಯಾಂಗನೀಸ್, ಪೋಟಾಸಿಯಂ ಹೆಚ್ಚಾಗಿ ಹೊಂದಿದೆ. ಬೀಟ್ರೋಟ್ ನಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಹೀಗೆ ಇನ್ನು ಹಲವಾರು ತರಕಾರಿಗಳು ತನ್ನದೇ ಆದ ವೈಪುಲ್ಯತೆಯನ್ನು ಹೊಂದಿದೆ. ಆದರೆ ಈಗಿನ ಜೀವನಶೈಲಿಯಲ್ಲಿ ಯಾವುದು ಆರ್ಗ್ಯಾನಿಕ್ ಇಲ್ಲದಿರುವ ಕಾರಣದಿಂದಾಗಿ ನಾವು ತರಕಾರಿಗಳನ್ನು ಇಪ್ಪತ್ತು ನಿಮಿಷಗಳ ಕಾಲ ಉಪ್ಪಿನ ನೀರಿನಲ್ಲಿ ನೆನಸುವುದರಿಂದ ಅದರ ವಿಷಯಕಾರಿ ರಾಸಾಯನಿಕಗಳ ಪರಿಣಾಮ ವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ನೀರಿನ ಆವಿಯಲ್ಲಿ ಬೇಯಿಸಿದ ತರಕಾರಿಗಳನ್ನು ಸೇವಿಸುವುದರಿಂದ ಅದರ ಪೌಷ್ಟಿಕಾಂಶತೆಯನ್ನು ಹೆಚ್ಚಾಗಿ ಪಡೆಯಬಹುದು.

    ಮಸಾಲೆಗಳು:

    ಮಸಾಲೆಗಳು ರೋಗ ನೀರೊಧಕ ಶಕ್ತಿಯನ್ನು ಹೊಂದಿದ್ದು, ಜೀವಕೋಶಹಾನಿಯಿಂದ ತಡೆಯುತ್ತದೆ. ಅರಿಶಿನ, ದಾಲ್ಚಿನ್ನಿ, ಲವಂಗ, ಮೆಣಸು ಇತ್ಯಾದಿ. ಅರಿಶಿಣದಲ್ಲಿ ಆಂಟಿ ಕ್ಯಾನ್ಸರ್ ಎಂದರೆ ಕ್ಯಾನ್ಸರ್ ತಡೆಗಟ್ಟುವ ಗುಣಲಕ್ಷಣಗಳಿವೆ ಎಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ. ಲವಂಗ ಎಣ್ಣೆಯು ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು, ಬ್ಯಾಕ್ಟಿರಿಯಾದ ಸೋಂಕನ್ನು ಎದುರಿಸಲು ಮತ್ತು ಮೊಡವೆಗಳನ್ನು ಪರಿಹರಿಸಲು ಪ್ರಯೋಜನಕಾರಿಯಾಗಿದೆ.

    ನಮ್ಮ ಮನೆಗಳಲ್ಲಿ ಸಹಜವಾಗಿ ಕೆಮ್ಮು, ನೆಗಡಿ, ಅರ್ಜಿಣವಾದಾಗ ಮಸಾಲೆಗಳಿಂದ ಮಾಡಿದ ಕಷಾಯ ಉಪಯೋಗಿಸುತ್ತೇವೆ. ಅದರಲ್ಲಿ ಬೆಳುಳ್ಳಿಗೆ ವಿಶೇಷವಾದ ಸ್ಥಾನವಿದೆ. ಮೊದಲ ಶತಮಾನದಿಂದಲೂ ಆಯುರ್ವೇದ ಔಷಧದಲ್ಲಿ ಬೆಳ್ಳುಳ್ಳಿ ರಕ್ತದ ದ್ರವತೆಗಳನ್ನು ಕಾಪಾಡಿಕೊಳ್ಳುವ ಮೂಲಕ ಹೃದಯದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ವೈಜ್ಞಾನಿಕವಾಗಿ ಬೆಳ್ಳುಳ್ಳಿಯ ಸೇವನೆಯಿಂದ ಹೃದಯ ಸಂಬAಧಿತ ಕಾಯಿಲೆಗಳನ್ನು ತಡಗಟ್ಟಬಹುದೆಂದು ತಿಳಿಸಿವೆ. ಬೆಳ್ಳುಳಿ ನಮ್ಮ ರಕ್ತದ ಒಳ್ಳೆಯ ಕೊಬ್ಬಿನಾಂಶ (HDL) ವನ್ನು ಹೆಚ್ಚಿಸಿ, ಕೆಟ್ಟ ಕೊಬ್ಬಿನಾಂಶವನ್ನು (LDL) ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಬೆಳುಳ್ಳಿಯ ಸ್ನೇಹಿತನಾದ ಶುಂಠಿಯು ಸಹ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿವೆ. ಶುಂಠಿಯಲ್ಲಿನ ಘಟಕಾಂಶವಾದ ಜಿಂಜರಾಲ್ ಎಂಬ ಅಂಶವು ಇದು ರಕ್ತನಾಳಗಳಲ್ಲಿ ರಕ್ತದ ಸಂಚಲನವನ್ನು ಉತ್ತೇಜಿಸುತ್ತಾ ಅದರಿಂದಾಗಿ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ ಶುಂಠಿಯಲ್ಲಿ ನೋವು ನಿವಾರಕ ಶಕ್ತಿಯಿದೆಯೆಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ.

    ಹೀಗೆ ದಿನನಿತ್ಯದಲ್ಲಿ ಉಪಯೋಗಿಸುವ ಹಲವಾರು ಅಡುಗೆ ಪದಾರ್ಥಗಳ ವೈಶಿಷ್ಟ್ಯತೆಯನ್ನು ತಿಳಿದು ನಮ್ಮ ಊಟದ ಬಳಕೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಅಳವಡಿಸುವುದರಿಂದ ಕೆಲವೊಂದು ರೋಗಗಳು ಸುಧಾರಣೆಯನ್ನು ಕಾಣಬಹುದು.

    ಅದರಲ್ಲಿಯು ಹಸಿರು ತರಕಾರಿಗಳಲ್ಲಿ ರೋಗ ನಿರೋಧಕ ಶಕ್ತಿ, ವಿಟಮಿನ್ ಎ, ಬಿ, ಸಿ, ಖನಿಜಾಂಶಗಳೂ ವಿಪುಲವಾಗಿವೆ.

  • ಪತ್ನಿಗೆ ಆರ್ಥಿಕ ಸ್ಥಿತಿ ತಿಳಿಸಿದರೆ ಏನಾಗಬಹುದು..?

    ಪತ್ನಿಗೆ ಆರ್ಥಿಕ ಸ್ಥಿತಿ ತಿಳಿಸಿದರೆ ಏನಾಗಬಹುದು..?

    ಪತಿ-ಪತ್ನಿಯರ ಸಂಬಂಧ ಕೇವಲ ಶಾರೀರಿಕ ಸುಖಕ್ಕೆ ಮಾತ್ರ ಮೀಸಲು ಎಂಬ ನಂಬಿಕೆ ಕೆಲವರಿಗೆ, ವಂಶ ಬೆಳೆಸುವುದೇ ಮದುವೆಯ ಉದ್ದೇಶ ಎಂದು ಭಾವಿಸುವವರೂ ಇದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ಪತಿ-ಪತ್ನಿಯು ಪರಸ್ಪರರ ಹಿತಚಿಂತಕರಾಗಿರುತ್ತಾರೆ.

    ಆದ್ದರಿಂದಲೇ ಕುರ್‌ಆನ್‌ನಲ್ಲಿ ಪತಿ-ಪತ್ನಿಯನ್ನು ಪರಸ್ಪರರ ಉಡುಪು ಎನ್ನಲಾಗಿದೆ. ಅವರನ್ನು ಜೋಡಿ’ ಎನ್ನಲಾಗಿದೆ.ಉಡುಪು’ ಯಾವ ರೀತಿ ಒಂದು ಶರೀರದ ನಗ್ನತೆಯನ್ನು ಮರೆಮಾಡುವ ಮೂಲಕ ಗೌರವಕ್ಕೆ ಪಾತ್ರವಾಗಿರುತ್ತದೋ… ಅದೇ ರೀತಿ ದಂಪತಿಗಳು ಪರಸ್ಪರರ ಗೌರವ ಉಳಿಸುವ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಪತಿಯು ಆರ್ಥಿಕ ಸ್ತಂಭವಾಗಿದ್ದರೆ, ಪತ್ನಿಯು ಮನೆಯ ಜವಾಬ್ದಾರಿಯನ್ನು ಹೊರುವವಳಾಗಿರುತ್ತಾಳೆ. ಅಂತಹದರಲ್ಲಿ ಪತಿಯು ತನ್ನ ಎಲ್ಲಾ ವ್ಯವಹಾರಗಳ ಬಗ್ಗೆ ತನ್ನ ಸಂಗಾತಿಯೊAದಿಗೆ ಸಮಾಲೋಚನೆ ಮಾಡಬೇಕು. ಇಂದು ಕೆಲವು ಪುರುಷರು ಮಾಡುವ ತಪ್ಪು ಏನೆಂದರೆ ತನ್ನ ಕಾರುಬಾರು ವ್ಯವಹಾರದ ಬಗ್ಗೆ, ತನ್ನ ದುಡಿಮೆಯ ಸ್ಥಿತಿಗತಿ ಬಗ್ಗೆ ಹೆಂಡತಿಗೆ ಯಾವುದೇ ವಿಷಯ ತಿಳಿಸುವುದಿಲ್ಲ. ತಾನು ಸಂಪಾದಿಸುವ ಹಣ ಯಾವ ರೀತಿಯದು, ಹೇಗೆ ಸಂಪಾದಿಸುತ್ತಿದ್ದೇನೆAಬ ವಿವರವನ್ನು ರಹಸ್ಯ ಆಗಿ ಇಡುತ್ತಾರೆ.

    ಒಂದು ಘಟನೆ ಹೀಗಿದೆ. ಇಕ್ಬಾಲ್ ದೊಡ್ಡ ಉದ್ಯಮಿ. ನಗರದಲ್ಲಿ ಅವನು ಎಲ್ಲರ ಗೌರವಕ್ಕೆ ಪಾತ್ರನಾದ ದೊಡ್ಡ ಶ್ರೀಮಂತ ಸಾಲಿಗೆ ಸೇರಿದವನು. ಮನೆಯಲ್ಲಿ ಐದಾರು ಅದ್ಧೂರಿ ಕಾರುಗಳು, ಹೆಂಡತಿ ಮಕ್ಕಳೊಂದಿಗೆ ವಿದೇಶ ತಿರುಗಾಟ, ಹಲವು ಪಾರ್ಟಿಗಳನ್ನು ಅಯೋಜಿಸುತ್ತಾ ಆಡಂಬರದ ಜೀವನದಲ್ಲಿ ಮಜಾದಲ್ಲಿದ್ದ. ಹೆಂಡತಿಗೆ ತನ್ನ ಪತಿಯು ಇಷ್ಟೊಂದು ಹಣ ಎಲ್ಲಿಂದ ತರುತ್ತಿದ್ದಾನೆಂಬ ಚಿಂತೆ ಬಂದಾಗ ಆಕೆ ಪ್ರಶ್ನಿಸುತ್ತಾಳೆ. ಅವನು ಹೇಳಿದ ನನಗೆ ಈ ಸಲ ಉದ್ಯಮದಲ್ಲಿ ಕೋಟಿಗಟ್ಟಲೇ ಲಾಭ ಬಂತು… ನಿನಗೆ ಅದೆಲ್ಲಾ ವಿಷಯ ಬೇಡಾ, ನಿನಗೆ ಏನು ಬೇಕೋ ಅದನ್ನು ಖರೀದಿಸು, ಎಂಜಾಯ್ ಮಾಡು… ಎಂದ. ಒಂದಿನ ಪತಿಯನ್ನು ಪೊಲೀಸರು ಬಂದು ಕರೆದೊಯ್ದಾಗ ಹೆಂಡತಿಗೆ ಅರಿವಾಯಿತು ತಾನಿರುವ ಮನೆ, ತನ್ನ ಸಂಪತ್ತು ಎಲ್ಲವೂ ಮುಳುಗಿ ಹೋಗಿದೆ ಬ್ಯಾಂಕ್‌ನವರು ಅವರ ಅದ್ಧೂರಿ ಮನೆ, ಕಾರು ಎಲ್ಲವನ್ನೂ ಸೀಝ್’ ಮಾಡಿದ್ದರು. ವಿಷಯ ಏನೆಂದರೆ ಈ ಉದ್ಯಮಿ ಪತಿರಾಯ ಬ್ಯಾಂಕ್‌ನಿAದ ಕೋಟಿಗಟ್ಟಲೇ ಲೋನ್ ತೆಗೆದು, ಜನರಿಂದ ಲಕ್ಷಗಟ್ಟಲೇ ಹೂಡಿಕೆಯನ್ನು ಮಾಡಿಸಿ ಎಲ್ಲರಿಗೂ ಪಂಗನಾಮ ಹಾಕಿದ್ದ. ಜನರು ತಾವು ಈ ವ್ಯಕ್ತಿಯನ್ನು ನಂಬಿ ಕೊಟ್ಟ ಕೋಟಿಗಟ್ಟಲೇ ಹಣದಿಂದ ಆತ ಆಡಂಬರದ ಜೀವನ ನಡೆಸುತ್ತಿದ್ದ. ಜನರ ಬೆವರಿನ, ಶ್ರಮದ ಹಣದಲ್ಲಿ ಬೆಲೆಬಾಳುವ ಕಾರುಗಳಲ್ಲಿ ವಿದೇಶಿ ಪ್ರಯಾಣದಲ್ಲಿ ಮಜಾವಾಗಿದ್ದ. ಅರಮನೆಯಿಂದ ಸೀದಾ ಬೀದಿಗೆ ಬಿದ್ದ ಮನೆ ಒಡತಿಗೆ ಸತ್ಯ ತಿಳಿದಾಗ ಆಕೆ ಎಲ್ಲವನ್ನೂ ಕಳೆದುಕೊಂಡು ಬರಿಗೈ ಆಗಿದ್ದಳು. ಪತಿಯು ತನಗೆ ಹೆಚ್ಚು ಆದಾಯ ಬರುತ್ತಿದೆ, ತನ್ನ ಉದ್ಯಮದಲ್ಲಿ ತುಂಬಾ ಲಾಭ ಆಗಿದೆ ಎಂದು ಸದಾ ಅವಳ ಬಳಿ ಹೇಳುತ್ತಿದ್ದ. ಆಕೆ ಅದನ್ನು ನಂಬಿದ್ದಳು. ಇಂದು ಆ ಉದ್ಯಮಿ ಎಲ್ಲಾ ಸಂಪತ್ತು ಕಳೆದುಕಂಡು ಮೂಲೆ ಸೇರಿದ್ದಾನೆ. ಇಲ್ಲಿ ನಮಗೆ ತಿಳಿಯುವ ಒಂದು ಪಾಠ ಏನೆಂದರೆ… ಮನೆಯ ಯಜಮಾನಿ (ಪತ್ನಿ) ತನ್ನ ಪತಿಯ ಸಂಪಾದನೆಯ ಬಗ್ಗೆ ಅಲಕ್ಷö್ಯದಿಂದ ಇರುವುದು, ಅವಳಿಗೆ ಬೇಕಾದಷ್ಟು ಹಣ ಕೈಗೆ ನೀಡಿದಾಗ ಅವಳೂ ಖುಶಿಪಟ್ಟಳು. ಪತಿಯು ಯಾವ ರೀತಿ ಸಂಪಾದಿಸುತ್ತಿದ್ದಾನೆAಬ ಚಿಂತನೆ ಅವಳಿಗೆ ಇರಬೇಕಾಗಿತ್ತು. ಬೆಲೆಬಾಳುವ ವಸ್ತç, ಬಂಗಾರ, ಫರ್ನಿರ‍್ಸ್, ವಿದೇಶ ಯಾತ್ರೆ ಇತ್ಯಾದಿಗಳಲ್ಲಿ ಮೈಮರೆತ ಪತ್ನಿಗೆ ಒಂದು ದಿನ ಇದೆಲ್ಲಾ ನ್ಯಾಯದ ಹಣ ಅಲ್ಲ ಎಂದು ತಿಳಿದಾಗ ಆಕೆ ಕುಸಿದು ಬಿದ್ದಳು.

    ಇಂದು ಹೃದಯಾಘಾತ ಹೆಚ್ಚುತ್ತಿದೆ. ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನು ಅಪ್ಪುತ್ತಿದ್ದಾರೆ. ದಿಢೀರನೇ ಬಂದು ಎರಗುವ ಸಾವಿಗೆ ಪತಿಯನ್ನು ಕಳೆದುಕೊಂಡಾಗ ಪತಿಯು ಎಷ್ಟು ಜನರಿಗೆ ಸಾಲ’ ನೀಡಲು ಬಾಕಿ ಇದೆ? ಎಷ್ಟು ಕಡೆ ಅದನ್ನು ಬಿಸಿನೆಸ್‌ಗೆ ಹಣ ಹೂಡಿಕೆ ಮಾಡಿರುತ್ತಾನೇ ಎಷ್ಟು ಹಣ ಆತನಿಗೆ ಬರಬೇಕಾಗಿದೆ, ಆತನ ವ್ಯವಹಾರ ಏನೂ… ಇತ್ಯಾದಿ ಏನೂ ಪತ್ನಿಗೆ ತಿಳಿಯದೇ ಹೋದಾಗ ನಷ್ಟ’ ಉಂಟಾಗುತ್ತದೆ. ಆದರಿಂದಲೇ ಪತಿ-ಪತ್ನಿಯ ನಡುವೆ ಸಮಾಲೋಚನೆ ಇರಬೇಕು. ತಮ್ಮ ವ್ಯವಹಾರ, ಹಣ, ಬಿಸಿನೆಸ್ ವಿಷಯ ಇತ್ಯಾದಿ ವಿಷಯವನ್ನು ಪತ್ನಿಗೆ ತಿಳಿಸಬೇಕು. ಹೆಂಡತಿಗೆ ಹೇಳುವುದರಿಂದ ತಮ್ಮ ಗಂಡಸುತನಕ್ಕೆ ಪೆಟ್ಟಾಗುವುದಿಲ್ಲ. ಯಾಕೆ ಹೆಂಗಸರಿಗೆ ಹೇಳಬೇಕೆಂದು ಚಿಂತಿಸುವುದೇ ದೊಡ್ಡ ತಪ್ಪು. ಪ್ರತೀಯೊಬ್ಬರೂ ತಮ್ಮ ವ್ಯವಹಾರದ ಸಂಗತಿಯನ್ನು ಪತ್ನಿಗೆ ತಿಳಿಸಬೇಕು. ಅವಳು ನಿಮ್ಮ ಬಾಳಸಂಗಾತಿ. ಭವಿಷ್ಯದ ಲಾಭ, ನಷ್ಟಕ್ಕೆ ಅವಳೂ ಭಾಗಿಯಾಗುತ್ತಾಳೆ. ನನ್ನ ಪತಿ ಈ ರೀತಿ ಜನರಿಗೆ ಮೋಸ ಮಾಡಿ ಹಣ ಸಂಪಾದಿಸುತಿದ್ದ ಎಂದು ಗೊತ್ತಿದ್ದರೆ… ನಾನು ದುಂದುವೆಚ್ಚ ಮಾಡದೇ ಬದುಕುತ್ತಿದ್ದೆ. ನಾನು ಆತನನ್ನು ಅನ್ಯಾಯದ ಗಳಿಕೆಯಿಂದ ತಡೆಯುತ್ತಾ ಇದ್ದೆ… ಎಂದು ನಂತರ ಪಶ್ಚಾತ್ತಾಪ ಪಡುವುದು ಬೇಡ.

    ಇಂದು ಪತಿ ಸಾಲ ಮಾಡಿ ಮಕ್ಕಳ ಬರ್ತ್ಡೇ ಮಾಡುವುದು, ಸಾಲಮಾಡಿ ಪ್ರವಾಸಕ್ಕೆ ಹೋಗುವುದು, ಮದುವೆಗೆ ಗಿಫ್ಟ್ ಖರೀದಿಸುವುದು, ಬಸುರಿಯ ಸೀಮಂತ ಮಾಡುವುದೂ… ಎಲ್ಲವೂ ಮಹಿಳೆಯರ ಒತ್ತಾಯದಿಂದಲೇ ಆಗಿರುತ್ತದೆ. ಗಂಡಸರು ಹಣ ಸಾಲ ಮಾಡಿ ಖರ್ಚು ಮಾಡುವುದು ಕೇವಲ ಮಹಿಳೆಯರಿಗೆ ನೆಮ್ಮದಿ ಸಿಗಲಿ ಎಂದಾಗಿದೆ. ಒಡವೆ, ಸೀರೆ, ಪಾತ್ರೆ… ಸ್ಕೀಮ್‌ನಲ್ಲಿ ಖರೀದಿಸಿ, ತಿಂಗಳ ಹಣ ಕಟ್ಟಲು ಗಂಡಸರನ್ನು ಒತ್ತಾಯಿಸುವುದು ಅವರು ಎಲ್ಲಿಂದಲಾದರೂ ತರಲಿ ಎಂದು ಸುಮ್ಮನಿರುವುದು ತಪ್ಪು.ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ಗಾದೆ ಮಾತಿದೆ. ಪತಿಯು ತನ್ನ ಕುಟುಂಬದ ಖುಶಿಗಾಗಿ ಸಾಲಗಾರನಾಗುತ್ತಾನೆ.

    ಗಲ್ಫ್ನಲ್ಲಿ ಬೆವರು ಸುರಿಸಿ ಶ್ರಮವಹಿಸಿ ದುಡಿದು ಕಳಿಸುವ ಪತಿಯ ಹಣವನ್ನು ಇಲ್ಲಿ ಶಾಪಿಂಗ್‌ಗಾಗಿ, ಬಗೆ ಬಗೆಯ ತಿಂಡಿ, ಪಾರ್ಟಿಗಾಗಿ ಖರ್ಚು ಮಾಡುವ ಮಹಿಳೆಯರಿಗೆ ಭರವಿಲ್ಲ. ಹಣ ಇರುವಾಗ ಮಾತ್ರ ಪತಿಗೆ ಗೌರವ, ಮನ್ನಣೆ ನೀಡುವ ಆತನು ಬರಿಕೈಯವನಾದಾಗ ಆತನನ್ನು ದೂರ ಮಾಡುವ ಪತ್ನಿಯರೂ ಇದ್ದಾರೆ. ಇಂತಹ ಪತ್ನಿಯರನ್ನು ಕೃತಜ್ಞತೆ ಇಲ್ಲದ ವರ್ಗಕ್ಕೆ ಸೇರಿಸಬಹುದು. ಪತಿ-ಪತ್ನಿಯ ನಡುವೆ ಯಾವುದೇ ವಿಷಯಕ್ಕೂ ರಹಸ್ಯ ಇರಬಾರದು. ಅವರಿಬ್ಬರು ತೆರೆದ ಪುಸ್ತಕದಂತೇ ಪ್ರತೀ ಒಂದು ವ್ಯವಹಾರ, ವಿಷಯ ಪರಸ್ಪರರ ನಡುವೆ ಚರ್ಚೆ ಆಗಬೇಕು. ಪತಿಯನ್ನು ವಿನಾಶದಿಂದ ರಕ್ಷಿಸುವುದು ಪತ್ನಿಯ ಧರ್ಮವಾಗಿದೆ.

    ಕೆಲವು ಪತಿಯಂದಿರು ಊರಲ್ಲಿ ತುಂಬಾ ಸಾಲ ಮಾಡಿ ನಂತರ ವಿದೇಶಕ್ಕೆ ಪರಾರಿಯಾಗಿ ಬಿಡುತ್ತಾರೆ. ಊರಲ್ಲಿ ಸಾಲಗಾರರು ಪತ್ನಿಯನ್ನು ಬದುಕಲೂ ಬಿಡುವುದಿಲ್ಲ. ಅವಳಿಗೆ ಕಿರುಕುಳ ನೀಡುತ್ತಾರೆ. ಇಂತಹ ಹಲವು ಕೇಸ್‌ಗಳು ನಮ್ಮ ಕೌನ್ಸಿಲಿಂಗ್‌ಗೆ ಬಂದಿದೆ. ಇದರಿಂದ ಬಚಾವ್ ಆಗಲು ಹೆಂಡತಿ ಪತಿಗೆ ತಲಾಕ್ ಕೇಳುತ್ತಾಳೆ. ಆತನ ಹೆಂಡತಿ ಆಗಿ ತಾನು ಈಗ ಇಲ್ಲ ಎಂದು ಸಾಲಗಾರರಿಗೆ ಹೇಳಿ ಆಕೆ ಬಚಾವ್ ಆಗಲು ನೋಡುತ್ತಾಳೆ. ಸಾಲ ಮಾಡಿ ಪರಾರಿ ಆಗುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಅವರ ಕುಟುಂಬ ಜೀವನವೂ ನಷ್ಟ ಆಗುತ್ತದೆ. ಪತ್ನಿಯ ಆತಿ ಆಶೆ, ಬೇಕಾಬಿಟ್ಟಿ ಖರ್ಚು, ಪತಿಯನ್ನು ಸಾಲಗಾರನನ್ನಾಗಿ ಮಾಡುವುದೇ ಸತ್ಯ. ಆದುದರಿಂದ ಪತಿ-ಪತ್ನಿಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಸಾಲ' ಬದುಕನ್ನು ನರಕ ಮಾಡುತ್ತದೆ.ಸಾಲ’ ಬದುಕನ್ನೇ ಅಂತ್ಯ’ ಮಾಡುತ್ತದೆ. ಪತ್ನಿಯ ಬಳಿ ತಮ್ಮ ವ್ಯವಹಾರವನ್ನು, ಹಣಕಾಸು ವಿಷಯವನ್ನು ಹೇಳುವುದು ತಮ್ಮ ಪುರುಷತ್ವ(ಅಹಂಕಾರ)ಕ್ಕೆ ಅಡ್ಡಿ ಎಂದು ಭಾವಿಸುವುದು ಮೂರ್ಖತನ.

    ಪತ್ನಿಯು ಪತಿಯ ಹಿತವನ್ನೇ ಬಯಸುವವಳು. ಅವಳು ಪತಿಯನ್ನುಹರಾಮ್’ ದಾರಿಗೆ ಸಾಗಲು ಅವಕಾಶ ನೀಡಲಾರಳು. ಹರಾಮ್ ಅಥವಾ ವಂಚನೆಯ ಸಂಪಾದನೆಗೆ ಹೆಂಡತಿ, ಮಕ್ಕಳು ಭಾಗೀದಾರರಾಗಿರಲು ಆಶಿಸುವುದಿಲ್ಲ. ಜೀವನ ನ್ಯಾಯದ ಸಂಪಾದನೆಯಲ್ಲಿರಲಿ. ನಾಳೆ ದೇವನ ಬಳಿ ಅಪರಾಧಿ ಆಗಿ ನಿಲ್ಲುವ ಹೀನ ಸ್ಥಿತಿ ಬಾರದಿರಲಿ.

    ಶಮು

  • 40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

    40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

    ಈಗೀಗ ನನಗೆ ಅತೀವ ಮರೆವು,
    ಫ್ರಿಜ್ಜು ತೆರೆಯುತ್ತೇನೆ,
    ಯಾಕೆ ತೆರೆದೆ ಎಂದು ಮರೆಯುತ್ತೇನೆ.

    ಬಟ್ಟೆ ಬರೆಗಳನ್ನು ಮಡಚಲೆಂದು
    ಕೋಣೆಗೆ ತೆರಳುತ್ತೇನೆ.
    ಅಲ್ಲಿ ಮತ್ತೇನೋ ಕೆಲಸ ಕಂಡೊಡನೆ
    ಈ ಕೆಲಸ ಮರೆಯುತ್ತೇನೆ.

    ವಿಶೇಷ ಅಡುಗೆ ಮಾಡಲೆಂದು
    ಹೊರಟಾಗಲೂ ಅಷ್ಟೇ,
    ಕೆಲವೊಂದು ಸಾಮಗ್ರಿಗಳನ್ನು
    ಹಾಕಲೂ ಮರೆಯುತ್ತೇನೆ.

    ಏನೋ ಹೇಳಲೆಂದು
    ಬಾಯಿ ತೆರೆಯುತ್ತೇನೆ,
    ಮಧ್ಯದಲ್ಲಿ ಮತ್ತೇನೋ ಮಾತು ಬಂದರೆ ಸಾಕು
    ಈ ವಿಷಯ ಮರೆತೇಹೋಗುತ್ತೇನೆ.

    ಇದು ನನ್ನ ಸಮಸ್ಯೆ ಮಾತ್ರವೇ
    ಪ್ರಶ್ನಿಸುವೆ ಹಲವು ಬಾರಿ
    ಇಲ್ಲ ನಮ್ಮದೂ ಕೂಡಾ
    ಅನ್ನುತ್ತಾರೆ ಗೆಳತಿಯರು ಸಾರಿ.

    ಬಹುಷಃ ನಲ್ವತ್ತರ ಅಂಚಿನಲ್ಲಿರುವ
    ನಮಗೆ ಇದು ಸಾಮಾನ್ಯ
    ಆದರೂ ಈ ಬಗ್ಗೆ
    ಮುಗಿಯದು ತಲ್ಲಣ

    ಮತ್ತೊಮ್ಮೆ ನನ್ನಲ್ಲೇ ಪ್ರಶ್ನಿಸುತ್ತೇನೆ.
    ಅದೇಕೆ ನನಗೆ ನನ್ನ
    ಸಮಸ್ಯೆಗಳು ಮರೆಯುವುದಿಲ್ಲ,
    ಹಿಂದೊಮ್ಮೆ ಘಟಿಸಿದ ಕಹಿಘಟನೆ
    ಮರೆತುಹೋಗುವುದಿಲ್ಲ,

    ಬದುಕಿಗೆ ವಿದಾಯ ಹೇಳಿದ
    ಅಪ್ಪನ ಅಗಲಿಕೆಯ ನೋವೇಕೆ
    ಮರೆತು ಹೋಗುವುದಿಲ್ಲ,
    ಜವಾಬ್ದಾರಿಗಳೂ ಮರೆತು ಹೋಗುವುದಿಲ್ಲ.

    ನಾನು ಮರೆಯುವುದು ಅತ್ಯಂತ ಕ್ಷುಲ್ಲಕ ವಿಷಯಗಳನ್ನು.
    ಮನೆಯನ್ನು ನಡೆಸುವುದಾಗಲಿ,
    ಮಕ್ಕಳಿಗೆ ಉಣಿಸುವುದಾಗಲಿ ನಾನು ಮರೆಯುವುದಿಲ್ಲ.
    ಆದರೂ ನನಗೀಗ ಹೆಸರು
    ಮಹಾನ್ ಮರೆಗುಳಿ.

    ಹೌದು ಕೆಲವೊಮ್ಮೆ ಅನಿಸುವುದು
    ಮರೆಯಬೇಕು ಎಲ್ಲವನ್ನು,
    ತಿಂಗಳು ತಿಂಗಳು ಅನುಭವಿಸುವ ನೋವನ್ನು,
    ಎಂದೋ ಅನುಭವಿಸಿದ,
    ಇಂದಿಗೂ ಚುಚ್ಚುವ ಅವಮಾನವನ್ನು,
    ಮನದಲ್ಲಿ ಅದುಮಿಟ್ಟುಕೊಂಡಿರುವ ಆಸೆಯನ್ನು,

    ನಾಳೆ ಎನ್ನುವುದನ್ನು
    ಮರೆಯಬೇಕು, ಮರೆತು ಬದುಕಬೇಕು.
    ಬದುಕಲ್ಲಿ ಒಂದು ದಿನವನ್ನು ನನಗಾಗಿ ಬದುಕಬೇಕು.
    ಯಾವುದೇ ಧಾವಂತವಿಲ್ಲದೆ,
    ಯಾವುದೇ ಒತ್ತಡವಿಲ್ಲದೆ,
    ಯಾವ ಜವಾಬ್ದಾರಿಯ ಹಂಗೂ ಇಲ್ಲದೇ.
    ನಾನಾಗಿ, ನನಗಾಗಿ.

    ಅಸ್ಮತ್ ವಗ್ಗ

  • ಹೃದಯದ ಮಾತು: 
ಶಹನಾಝ್ ಎಂ.

    ಹೃದಯದ ಮಾತು: ಶಹನಾಝ್ ಎಂ.

    ಇಂದಿನ ಆಧುನಿಕ ಶೈಕ್ಷಣಿಕವಾಗಿ ಮುಂದುವರಿದ ಸಮಾಜದಲ್ಲೂ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮೌಢ್ಯಗಳು ನೆಲೆಸಿದೆ ಎಂದರೆ ನಾಚಿಗೆಕೇಡು. ನಮ್ಮ ಮಹಾರಾಷ್ಟçದಲ್ಲಿ ಶಾಲೆಯ ಶೌಚಾಲಯದಲ್ಲಿ ಹೆಣ್ಣಿನ ಮಾಸಿಕ ಮುಟ್ಟುವಿನ ರಕ್ತದ ಕಲೆಗಳು ಕಾಣಿಸಿದಕ್ಕಾಗಿ ಶಿಕ್ಷಕನೋರ್ವ ವಿದ್ಯಾರ್ಥಿನಿಯರ ವಸ್ತç ಬಿಚ್ಚಿಸಿ ತನಿಖೆ ಮಾಡಿದರಂತೆ! ಮಹಿಳಾ ಸಮೂಹಕ್ಕೇ ಇದು ಅವಮಾನದ ಸಂಗತಿ. ಹೆಣ್ಣಿಗೆ ತಾನು ಯಾವ ದಿನಕ್ಕೆ ಮುಟ್ಟಾಗುತ್ತೇನೆಂದು ಸರಿಯಾಗಿ ತಿಳಿಯದೇ ಇರುವ ಪರಿಸ್ಥಿತಿಯಲ್ಲಿರುವಾಗ ಶಾಲೆಯಲ್ಲಿ ರಕ್ತಸ್ರಾವ ಆದಾಗ ಏನು ಮಾಡಬೇಕು? ಹಾರ್ಮೋನಿನ ಏರುಪೇರಿನಿಂದ ಯಾವಾಗಬೇಕಾದರೂ ರಕ್ತ ಕಾಣಿಸಬಹುದು. ಅಂತಹ ಸಮಯದಲ್ಲಿ ಈ ಹೆಣ್ಣಿಗೆ ಸಾಂತ್ವನ, ನೆರವು ನೀಡಬೇಕಾದದ್ದು ಹತ್ತಿರ ಇರುವವರ ಧರ್ಮ. ಶಾಲೆಗಳಲ್ಲಿ, ಕಾಲೇಜಿನಲ್ಲಿ, ಆಫೀಸ್, ಕಚೇರಿಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ, ಬಸ್‌ಸ್ಟಾಂಡ್‌ಗಳಲ್ಲಿ ಇಂತಹ ತುರ್ತು ಸಮಯಕ್ಕಾಗಿ ಅಲ್ಪದರದಲ್ಲಿ ಕೈಗೆಟುಕುವಂತೆಪ್ಯಾಡ್’ಗಳು ಸುಲಭವಾಗಿ ಸಿಗುವಂತೆ ಏರ್ಪಾಡು ಇರಬೇಕು. ಶಾಲೆಯಲ್ಲಿ ಇದು ಬಹಳ ಮುಖ್ಯ. ಆ ಸಮಯದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಪಡುವ ಹದಿಹರೆಯದ ಹುಡುಗಿಯರಿಗೆ ಶಿಕ್ಷಕರಿಂದ ಸಾಂತ್ವನ ಮುಖ್ಯ. ಇಂತಹ ಮೂರ್ಖ ಶಿಕ್ಷಕನಿಗೆ ಅಮಾನತು ಮಾಡುವುದೇ ಉತ್ತಮ ಶಿಕ್ಷೆ.

    ಭಾರತದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ, ಅವಮಾನಗಳ ಬಗ್ಗೆ ಪತ್ರಿಕೆಯಲ್ಲಿ ಓದುವಾಗ ಮೈ ಉರಿಯುತ್ತದೆ. ಯಾಕೆ ದಲಿತರು ಇನ್ನೂ ಮೌನ ಆಗಿದ್ದಾರೆ! ಒಗ್ಗಟ್ಟಾಗಿ ಈ ಅನ್ಯಾಯ, ಅಸ್ಪೃಶ್ಯತೆಯ ವಿರುದ್ಧ ಬೀದಿಗೆ ಇಳಿದು ಹೋರಾಟ ನಡೆಸಬಾರದೇಕೆ! ಮೌನ'ವೇ ಇವರ ದುರಂತಕ್ಕೆ ಕಾರಣವಲ್ಲವೇ? ಮೈಸೂರಿನ ಶಾಲೆ ಒಂದರಲ್ಲಿ ಬಿಸಿ ಊಟಕ್ಕೆ ಓರ್ವ ದಲಿತ ಮಹಿಳೆಯನ್ನು ನೇಮಿಸಿದಕ್ಕೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಗೈರು ಹಾಜರಿಯಾಗಿ ಒಬ್ಬನೇ ವಿದ್ಯಾರ್ಥಿ ಉಳಿದನೆಂದು ಸುದ್ದಿ ಓದಿದೆ. ಇದೆಂತಹಾ ಮನಃಸ್ಥಿತಿ! ಕರುವನ್ನು ಮಾರಲು ಬಂದ ದಲಿತರಿಬ್ಬರ ತಲೆ ಬೋಳಿಸಿ ಅವರ ಬಾಯಲ್ಲಿ ಹುಲ್ಲು ತುಂಬಿ ಮೊಣಕಾಲಿನಲ್ಲಿ ತೆವಳಿಸಿಕೊಂಡು ದೌರ್ಜನ್ಯ ನಡೆಸಿದರು ಮೇಲು ಜಾತಿಯವರು. ದಲಿತರ ಓಟು ಈ ದೇಶದ ರಾಜಕೀಯ ಪಕ್ಷಕ್ಕೆ ಅತೀ ಮುಖ್ಯ. ಅವರ ಸಹವಾಸ ಬೇಡ. ಇವರನ್ನು ಉ. ಭಾರತದಲ್ಲಿ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಾರೆಂದರೆ ದಲಿತ ಯುವತಿಯರನ್ನು ಅತ್ಯಾಚಾರ ಮಾಡಿ ಕೊಂದು ಮರಗಳಲ್ಲಿ ನೇತು ಹಾಕುತ್ತಾರೆ. ಅವರೂ ಮನುಷ್ಯರೇ ಅಲ್ಲವೇ? ಮಾನವರೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳೆಂದು ಹೇಳುತ್ತದೆ ಧರ್ಮ. ಬಿಳಿಯನೂ-ಕರಿಯನೂ ಸಮಾನರೆಂದು, ಶ್ರೀಮಂತ-ಬಡನೂ ಸಮಾನರೆಂದೂ ಬೋಧಿಸುತ್ತದೆ ಇಸ್ಲಾಮ್. ಅನ್ಯಾಯವನ್ನು ಮೌನವಾಗಿ ಸಹಿಸುವುದೂ ಒಂದು ಅಪರಾಧವೇ ಆಗಿದೆ. ಇನ್ನಾದರೂ ದಲಿತರು ಧ್ವನಿ ಎತ್ತುವಂತಾಗಲಿ. ಭಾರತಕ್ಕೆ ಸ್ವಾತಂತ್ರö್ಯ ಲಭಿಸಿ ಎಪ್ಪತ್ತೆಂಟನೇ ವರ್ಷ. ದಲಿತರಿಗೆ, ಅಲ್ಪಸಂಖ್ಯಾತರಿಗೆ ಸ್ವಾತಂತ್ರö್ಯ ಲಭಿಸಿದೆಯೇ?! ಕೋಮುದ್ವೇಷಿ ರಾಜಕೀಯ ನಮ್ಮನ್ನು ಇಂದು ಬ್ರಿಟಿಷರ ಕಾಲಕ್ಕೆ ದೂಡಿ ಬಿಟ್ಟಿದೆ. ನಾವಿಂದು ಹೋರಾಡ ಬೇಕಾಗಿದೆ ಈಶತ್ರು’ಗಳ ವಿರುದ್ಧ.

  • ಶೀಘ್ರ ತೂಕ ಇಳಿಸುವ ಡಯೆಟ್ ಆರೋಗ್ಯಕ್ಕೆ ಅಪಾಯಕಾರಿ: 
ಅಡ್ಡ ಪರಿಣಾಮಗಳೇನು? 
ಡಾ। ಲೀನಾ ಸಾಜು

    ಶೀಘ್ರ ತೂಕ ಇಳಿಸುವ ಡಯೆಟ್ ಆರೋಗ್ಯಕ್ಕೆ ಅಪಾಯಕಾರಿ: ಅಡ್ಡ ಪರಿಣಾಮಗಳೇನು? ಡಾ। ಲೀನಾ ಸಾಜು

    ಸಮೀಕೃತ ಆಹಾರವನ್ನು ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳು

    ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಶಕ್ತಿ ಸಿಗುತ್ತದೆ.

    ಶರೀರ ಭಾರವನ್ನು ನಿಯಂತ್ರಿಸುವುದಕ್ಕೆ ಹೆಚ್ಚು ಸುಲಭವಾಗುತ್ತದೆ.

    ಮಧುಮೇಹ, ಹೃದ್ರೋಗ ಮುಂತಾದ ಜೀವನಶೈಲಿ ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ.

    ಮನಸ್ಸಿಗೆ ಹೆಚ್ಚು ಉಲ್ಲಾಸ ಉಂಟಾಗುತ್ತದೆ.

    ಪಥ್ಯದ (ಡಯಟ್) ಅಡ್ಡಪರಿಣಾಮಗಳು:

    ಅನಾರೋಗ್ಯಕರವಾದ ಆಹಾರಕ್ರಮಗಳು ಅಥವಾ ಕೊಬ್ಬಿರುವ ಆಹಾರವು ದೇಹಭಾರವು ಹೆಚ್ಚಾಗಲು ಮತ್ತು ದೀರ್ಘಕಾಲ ರೋಗಗಳಿಗೆ ಕಾರಣವಾಗುತ್ತದೆ. ಜನರು ತ್ವರಿತ. ಫಲಿತಾಂಶ ಬಯಸುವವರಾಗಿರುತ್ತಾರೆ. ಹೊಸ ಡಯಟ್ ಪ್ಲಾನ್‌ಗಳು ಅವರನ್ನು ಶೀಘ್ರ ಆಕರ್ಷಿಸುತ್ತದೆ. ಅವರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುವುದಿಲ್ಲ. ಆದುದರಿಂದ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳಲ್ಲಿ, ಆನ್‌ಲೈನ್ ಫ್ಲಾಟ್‌ಫಾರ್ಮ್ಗಳಲ್ಲಿ ಕಾಣಿಸುವ ಆಹಾರ ಪಥ್ಯಗಳನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಇದು ಪ್ರಯೋಜನಕ್ಕಿಂತ ಹೆಚ್ಚು ದುಷ್ಪರಿಣಾಮಗಳನ್ನುಂಟು ಮಾಡುತ್ತದೆ.

    ವೇಗವಾಗಿ ಶರೀರ ಭಾರತವನ್ನು ಇಳಿಸಲಿಕ್ಕಿರುವ ಪಥ್ಯಗಳು ದೇಹದ ಆರೋಗ್ಯಕ್ಕೆ ಬಹಳ ಹಾನಿಕರ. ವೇಗವಾಗಿ ಶರೀರ ಭಾರವನ್ನು ಕಡಿಮೆ ಮಾಡಲು ಹೊರಟರೆ ಪಿತ್ತಕೋಶದಲ್ಲಿ ಕಲ್ಲುಗಳುಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಧಾನ್ಯಗಳು, ಹಸಿರು ತರಕಾರಿಗಳು, ಹಣ್ಣುಗಳು, ಹಾಲು ಮುಂತಾದ ಕಾರ್ಬೋ ಹೈಡ್ರೇಡ್‌ಗಳು ಇರುವ ಆಹಾರವನ್ನು ಬಿಟ್ಟು ಬಿಟ್ಟರೆ ಮಲಬದ್ಧತೆ, ಬಲಹೀನತೆ, ಆಯಾಸ, ಕೂದಲು ಉದುರುವುದು, ಎಲುಬಿನ ಸಾಂಧ್ಯತೆಯು ಕಡಿಮೆಯಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಮುಂತಾದವುಗಳ ಸಾಧ್ಯತೆ ಹೆಚ್ಚುತ್ತದೆ.

    ಒಬ್ಬರಿಗೆ ಸೂಕ್ತವಾದ ಆಹಾರ ಪದ್ಧತಿ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರು ತಮ್ಮ ವೈಯಕ್ತಿಕ ದೇಹ ಪ್ರಕೃತಿ ಮತ್ತು ರೋಗಗಳಿಗೆ ಅನುಗುಣವಾಗಿ ಯಾವ ರೀತಿಯ ಆಹಾರವನ್ನು ತಿನ್ನಬೇಕೆಂದು ಡಯಟೀಶಿಯನ್‌ಗಳನ್ನು ಸಮೀಪಿಸಿ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.

    ಸಸ್ಯಾಹಾರಿ ಮತ್ತು ಮಾಂಸಹಾರಿ ಡಯಟ್‌ಗಳು (ಪಥ್ಯ)

    ಶರೀರದ ತೂಕ ಕಡಿಮೆ ಮಾಡಲು ಏನು ಒಳ್ಳೆಯದು?

    ಸಸ್ಯಾಹಾರವಾದರೂ, ಮಾಂಸಾಹಾರವಾದರೂ ಎಲ್ಲರ ಮುಖ್ಯ ಉದ್ದೇಶ ದೇಹದ ತೂಕವನ್ನು ಕಡಿಮೆ ಮಾಡುವುದೇ ಆಗಿರುತ್ತದೆ. ಸಸ್ಯಾಹಾರ ಮಾಂಸಾಹಾರ ಮನುಷ್ಯನ ವೈಯಕ್ತಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯಿಂದ ಬರುತ್ತದೆ. ಪೋಷಕಾಂಶ ಭರಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

    ಸಸ್ಯಾಹಾರದ ಪ್ರಯೋಜನ ಮತ್ತು ಕೆಡುಕುಗಳು

    ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ ಲಭ್ಯವಾಗುವುದರಿಂದ ಸಸ್ಯಾಹಾರ ಸೇವಿಸುವುದರಿಂದ ಪೋಷಕಾಂಶಗಳು ಲಭಿಸಲು ಮತ್ತು ಹಸಿವು ನೀಗಲು, ಸಂತೃಪ್ತಿ ಸಿಗಲು ಕಾರಣವಾಗುತ್ತದೆ. ವಿಟಮಿನ್ ಸಿ. ವಿಟಮಿನ್ ಇ. ಫಾರಿಕ್ ಆಸಿಡ್, ಪೊಟಾಶಿಯಮ್, ಮೆಗ್ನೇಶಯಿಮ್, ಕಾರೇಡಿನೋಯ್ಡಾ, ಫ್ಲೋವನೋಯ್ಡ್ ಮುಂತಾದವುಗಳು ಸಸ್ಯಾಹಾರದಿಂದಲೇ ಲಭಿಸುತ್ತವೆ.

    ಬೇಳೆಕಾಳುಗಳು, ದಾನ್ಯಗಳು, ಕಡಲೆ ಅಪೂರ್ಣವಾದುದಾಗಿದೆ. ಇದರಲ್ಲಿ ಒಂದೋ ಅದಕ್ಕಿಂತ ಹೆಚ್ಚು ಅಮಿನೊ ಆ್ಯಸಿಡ್‌ಗಳು ಇರುವುದಿಲ್ಲ. ಧಾನ್ಯಗಳಲ್ಲಿ ಲೈಸಿನ್, ಪ್ರೆಯೋನಿಸ್, ಟ್ರಿಸ್ಟೋಪೆನ್ ಮುಂತಾದವುಗಳ ಕೊರತೆ ಇದೆ. ಬೇಳೆಕಾಳುಗಳಲ್ಲಿ ಮೆಥಿಯೋನಿಲ್, ಲೈಸಿಲ್ ಮುಂತಾದ ಅಮಿನೋ ಆಸಿಡ್‌ಗಳು ಇರುವುದಿಲ್ಲ. ಸಸ್ಯಾಹಾರಿಗಳಲ್ಲಿ ವಿಟಮಿನ್ ಬಿ12 ಕೊರತೆ ಮತ್ತು ಒಮೆಗಾ- 3ರ ಕೊರತೆಯು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

    ಮಾಂಸಾಹಾರದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು

    ಬಿ12, ಕಬ್ಬಿಣ, ಸತು ಮತ್ತು ಒಮೆಗಾ- 3 ಕೊಲ್ಸಿನಾಮ್ಲಗಳಂತಹ ಜೈವಿಕ ಮೂಲಕ ಪ್ರೊಟೀನ್‌ಗಳು ಪ್ರಾಣಿ ಉತ್ಪನ್ನಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ. ಈ ಪೋಷಕಾಂಶಗಳು ಸ್ನಾಯುಗಳ ಚಟುವಟಿಕೆ, ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಒಟ್ಟು ಆರೋಗ್ಯವನ್ನು ಉತ್ತಮಪಡಿಸುತ್ತದೆ. ಜೊತೆಗೆ ಲೀನ್ ಮಾಂಸವನ್ನು ಸೇವಿಸುವುದರಿಂದ ಶರೀರ ಭಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಆದರೆ ಮಾಂಸಹಾರದಲ್ಲಿ ಸೇರಿಕೊಂಡಿರುವ ಕೊಬ್ಬಿನಾಂಶ ದೇಹತೂಕವನ್ನು ಹೆಚ್ಚಿಸುತ್ತದೆ. ಹೃದ್ರೋಗ ಸಾಧ್ಯತೆಗಳು, ಬೊಜ್ಜು, ರಕ್ತದೊತ್ತಡ ಹೆಚ್ಚಲು, ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆರೋಗ್ಯವನ್ನು ಚೆನ್ನಾಗಿರಿಸಲು ಸಸ್ಯಾಹಾರಿಗಳಾದರೂ, ಮಾಂಸಾಹಾರಿಗಳಾದರೂ ನಿಯಂತ್ರಿತ ರೀತಿಯಲ್ಲಿ ಆಹಾರವನ್ನು ಕ್ರಮಬದ್ಧಗೊಳಿಸುವುದು ಬಹಳ ಮುಖ್ಯ.

    ಅತ್ಯುತ್ತಮ ಆಹಾರ ಯೋಜನೆಯನ್ನು ಆರಿಸುವುದು ಹೇಗೆ?

    ನಿಮ್ಮ ಆಹಾರದಲ್ಲಿ ಈ ಕೆಳಗಿನ ಆಹಾರಗಳು ಸೇರಿವೆಯೇ ಎಂದು ನಿರ್ಣಯಿಸಿ.

    ಸ್ಥಿರವಾಗಿ ಸೇವಿಸಲು ಮತ್ತು ರೂಢಿಗೊಳಿಸಲು ಸಾಧ್ಯವಾಗುವ ಆಹಾರ ಕ್ರಮ.

    ದೈಹಿಕ ಸ್ಥಿತಿ ಮತ್ತು ಆದ್ಯತೆಯ ಆಹಾರ ಪದಾರ್ಥಗಳನ್ನು ಪರಿಗಣಿಸಿ ಆಹಾರ ಪದ್ಧತಿ ರೂಪಿಸುವುದು.

    ಆಹಾರ ಗುಂಪುಗಳು (ತರಕಾರಿ, ಹಣ್ಣುಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಮಾಂಸ, ಮೀನು ಮತ್ತು ಡೈರಿ

    ಉತ್ಪನ್ನಗಳು ಮತ್ತು ಬೀಜಗಳು) ಸೇರಿದಂತೆ ಸಮತೋಲಿತ ಮತ್ತು ವೈವಿದ್ಯಮಯ ಆಹಾರ

    ಶರೀರಕ್ಕೆ ಅಗತ್ಯವಾದ ಶಕ್ತಿಗೆ ಬೇಕಾದ ಪ್ರೊಟೀನ್, ಪಿಷ್ಠ ಮತ್ತು ಉತ್ತಮ ಕೊಬ್ಬುಗಳು ಇರುವಂತಹ ಆಹಾರ.

    ಆರೋಗ್ಯಪೂರ್ಣವಾದ ಆಹಾರ ಕ್ರಮವನ್ನು ಕರಾರುವಾಕ್ಕಾಗಿ ಸೂಚಿಸುವ ಶಿಫಾರಸುಗಳನ್ನು ಆಧರಿಸಿದ ಆಹಾರ

    ಕ್ರಮ.

    ಶರೀರವನ್ನು ಆರೋಗ್ಯದಿಂದಿರಿಸಲು ಕೆಲವು ಸಲಹೆಗಳು

    ನೀವು ಸೇವಿಸುತ್ತಿರುವ ಆಹಾರದಲ್ಲಿ ಯಾವ ಪೋಷಕಾಂಶಗಳಿವೆ ಎಂಬುವುದರ ಬಗ್ಗೆ ಅರಿವಿರಲಿ.

    ಆಸ್ವಾದಿಸುತ್ತಾ ತಿನ್ನುವುದು ಮುಖ್ಯ. ಆಹಾರ ಪದ್ಧತಿ ಶಿಕ್ಷೆಯಂತೆ ಭಾಸವಾದರೆ ಅದನ್ನು ಹೆಚ್ಚು ಕಾಲ

    ಮುಂದುವರಿಸಿಕೊAಡು ಹೋಗಲು ಸಾಧ್ಯವಾಗುವುದಿಲ್ಲ.

    ಯಾವುದೇ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದಕ್ಕಿಂತ ಮಿತವಾದ ಪ್ರಮಾಣದಲ್ಲಿ ಪೌಷ್ಠಿಕ ಆಹಾರವನ್ನು

    ಅನುಸರಿಸುವುದು ಉತ್ತಮ.

    ಉಗುರು ಬೆಚ್ಚಗಿನ ನೀರಿನಿಂದ ದಿನವನ್ನು ಆರಂಭಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

    ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಬೆಳಿಗ್ಗೆ 9 ಗಂಟೆಯ ಮೊದಲು ಉಪಹಾರ. ಮಧ್ಯಾಹ್ನ 1.30ಕ್ಕೆ ಮೊದಲು

    ಮಧ್ಯಾಹ್ನದ ಊಟ ಮತ್ತು ರಾತ್ರಿ 8.30ಕ್ಕಿಂತ ಮೊದಲು ರಾತ್ರಿಯ ಊಟ ಮುಗಿಸಲು ಪ್ರಯತ್ನಿಸಿ.

    ಮಲಗುವುದಕ್ಕಿಂತ ಕನಿಷ್ಟ ಎರಡು ಗಂಟೆಗಳ ಮೊದಲು ಊಟ ಮುಗಿಸಿ.

    ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ತಿನ್ನಿರಿ.

    ವ್ಯಾಯಾಮ, ನಿದ್ರೆ ಮತ್ತು ನೀರಿನ ಸೇವನೆಯನ್ನು ಸರಿಯಾದ ಮಟ್ಟದಲ್ಲಿ ಕಾಪಾಡಿಕೊಳ್ಳಬೇಕು. ದಿನಕ್ಕೆ ಕನಿಷ್ಟ

    8-12 ಗ್ಲಾಸ್ ನೀರು ಕುಡಿಯಬೇಕು.

    ಹೊರಗಿನ ಆಹಾರವನ್ನು ಸಾಧ್ಯವಾದಷ್ಟು ತಪ್ಪಿಸಿ.

    ಆಹಾರವನ್ನು ನಿಧಾನವಾಗಿ ಸೇವಿಸಬೇಕು ಮತ್ತು ಚೆನ್ನಾಗಿ ಅಗಿಯಬೇಕು. ಇದು ಹೆಚ್ಚು ತಿನ್ನುವುದರಿಂದ

    ತಡೆಯುತ್ತದೆ ಮತ್ತು ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.

    ಟಿ.ವಿ. ಮೊಬೈಲ್ ನೋಡುತ್ತಾ ಊಟ ಮಾಡುವ ಅಭ್ಯಾಸವನ್ನು ತೊರೆಯಿರಿ.

    ಇಂದು ಪ್ರಚಾರದಲ್ಲಿರುವ ವಿವಿಧ ರೀತಿಯ ಡಯಟ್ ಪ್ಲಾನ್‌ಗಳು

    1. ಕಿಟೋ ಡಯಟ್‌

    ಇದು ಕಡಿಮೆ ಪ್ರಮಾಣದಲ್ಲಿ ಪಿಷ್ಟ ಸೇವಿಸುವ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಹೊಂದಿರುವ ಆಹಾರ ಕ್ರಮ.

    ಕೀಟೋ ಡಯಟ್‌ನ ಪ್ರಯೋಜನಗಳು:

    ಔಷಧಗಳಿಗೆ ಪ್ರತಿಕ್ರಿಯಿಸದ ಅಪಸ್ಮಾರ ರೋಗಿಗಳಿಗೆ ಅನುಕೂಲಕರ ಡಯಟ್.

    ಹಸಿವನ್ನು ನಿಯಂತ್ರಿಸುತ್ತದೆ.

    ಶೀಘ್ರವಾಗಿ ದೇಹತೂಕ ಕಡಿಮೆ ಮಾಡಲು ಸಹಾಯಕ.

    ಕಿಟೋ ಡಯಟ್‌ನ ದುಷ್ಪರಿಣಾಮಗಳು

    ಯೂರಿಕ್ ಆ್ಯಸಿಡ್, ಎಲ್.ಡಿ.ಎಲ್. ಕೊಲೆಸ್ಟಾçಲ್, ಹೃದ್ರೋಗದ ಹೆಚ್ಚಳಕ್ಕೆ ಕಾರಣವಾಗುತ್ತದೆ.

    ಆಸ್ಟಿಯೇ ಪೊರೋಸಿಸ್, ಮೂತ್ರಪಿಂಡದ ಕಾಯಿಲೆಗಳಂತಹ ರೋಗಗಳಿಗೆ ಕಾರಣವಾಗುತ್ತದೆ.

    ದೀರ್ಘಕಾಲ ಇದನ್ನು ಅನುಸರಿಸುವುದು ಒಳ್ಳೆಯದಲ್ಲ.

    2. ಮೆಡಿಟರೇನಿಯನ್ ಡಯಟ್:

    ನ್ಯಾಚುರೇಟೆಡ್ ಕೊಬ್ಬುಗಳ (ಕೆಂಪು ಮಾಂಸ, ಬೆಣ್ಣೆ) ಬದಲಾಗಿ ಅಪರ್ಯಾಪ್ತ ಕೊಬ್ಬುಗಳನ್ನು (ಆಲಿವ್ ಎಣ್ಣೆ, ಬೀಜಗಳು, ಮೀನುಗಳು) ಬಳಸಲಾಗುತ್ತದೆ. ಹಣ್ಣುಗಳು, ಹಸಿರು ತರಕಾರಿಗಳು, ದಾನ್ಯಗಳು, ಬೀಜಗಳು ಮುಂತಾದವುಗಳನ್ನು ಒಳಗೊಂಡ ಪೋಷಕಾಂಶಗಳಿರುವ ಆಹಾರ ಕ್ರಮ.

    ಮೆಡಿಟರೇನಿಯನ್ ಡಯಟ್‌ನ ಪ್ರಯೋಜನಗಳು:

    ಎದೆಯುರಿ ಕಡಿಮೆ ಮಾಡುತ್ತದೆ.

    ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

    ಹೃದ್ರೋಗ, ಪಾರ್ಶ್ವವಾಯು ಮುಂತಾದವುಗಳನ್ನು ತಡೆಯುತ್ತದೆ.

    ಬೊಜ್ಜು, ಮಧುಮೇಹ, ಕೊಲೆಸ್ಟಾçಲ್ ಹೆಚ್ಚುವುದು, ರಕ್ತದೊತ್ತಡ ಹೆಚ್ಚುವುದು ಮುಂತಾದವುಗಳ ಸಾಧ್ಯತೆಯನ್ನು

    ಕಡಿಮೆ ಮಾಡುತ್ತದೆ.

    ಇದರ ದುಷ್ಪರಿಣಾಮಗಳು

    ಪ್ಯಾಂಕ್ರಿಯಾಟೈಸಿಸ್, ಗ್ಯಾಸ್ಟೊçÃ, ಈಸೋ ಫೇಜಿಯಲ್ ರಿಫ್ಲೆಕ್ಟ್ ಡಿಸೀಸ್ ಮುಂತಾದ ಕಾಯಿಲೆಗಳು ಇರುವವರಿಗೆ ಸೂಕ್ತವಲ್ಲ.

    3. ವೀಗನ್ ಡಯಟ್: ಮಾಂಸದ

    ಜೊತೆಗೆ ಡೈರಿ ಉತ್ಪನ್ನಗಳು, ಮೊಟ್ಟೆಗಳು, ಜಿಲಾಟಿನ್ ಮತ್ತು ಜೇನು ತುಪ್ಪಂದAತಹ ಪ್ರಾಣಿ ಉತ್ಪನ್ನಗಳನ್ನು ಸಂಪೂರ್ಣ ತ್ಯಜಿಸಲಾಗುತ್ತದೆ. ಇದಕ್ಕೆ ಬದಲಾಗಿ ಸೋಯಾ ಉತ್ಪನ್ನಗಳು, ಬೀಜಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು, ಹಣ್ಣುಗಳನ್ನು ಈ ಆಹಾರದಲ್ಲಿ ಸೇರಿಸಲಾಗುತ್ತದೆ.

    ವೀಗನ್ ಡಯಟ್‌ನ ಪ್ರಯೋಜನಗಳು:

    ಸಸ್ಯಾಹಾರಿ ಆಹಾರ ಕ್ರಮವು ಹೃದ್ರೋಗ ಮತ್ತು ಮಧುಮೇಹದ ಟೈಪ್ 2 ಅಪಾಯವನ್ನು ಕಡಿಮೆ ಮಾಡುತ್ತದೆ.

    ವೀಗನ್ ಡಯಟ್‌ನ ದುಷ್ಪರಿಣಾಮಗಳು

    ವಿಟಮಿನ್ ಬಿ12 ಮತ್ತು ಕಬ್ಬಿಣಾಂಶದAತಹ ಪೋಷಕಾಂಶಗಳ ಕೊರತೆ ಸಂಭವಿಸಬಹುದು.

    4. ಮಧ್ಯಂತರ ಉಪವಾಸ (ಇಂಟರ್ ಮೀಡಿಯೇಟ್ ಫಾಸ್ಟಿಂಗ್).

    ಇದು ನಿರ್ದಿಷ್ಟ ಸಮಯದಲ್ಲಿ ಊಟ ಮಾಡಿ ಉಳಿದ ಸಮಯವನ್ನು ಉಪವಾಸದಲ್ಲಿ ಕಳೆಯುವ ವಿಧಾನವಾಗಿದೆ. ಇದನ್ನು ಎರಡು ರೀತಿಯಲ್ಲಿ ಮಾಡಬಹುದು. ಪ್ರತಿದಿನ ಸಮಯ ನಿರ್ಬಂಧಿತ ಆಹಾರ ಸೇವನೆ. ನಿದ್ರೆ ಸೇರಿದಂತೆ ದಿನಕ್ಕೆ 16-18 ಗಂಟೆಗಳ ಕಾಲ ಉಪವಾಸ. ಉಳಿದ 6-8 ಗಂಟೆಗಳ ಕಾಲ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಪ್ರೋಟೀನ್ ಒಳಗೊಂಡ ಆಹಾರವನ್ನು ಸೇವಿಸಲಾಗುತ್ತದೆ. ವಾರದಲ್ಲಿ ಕೆಲವು ದಿನ ಉಪವಾಸ. ವಾರದಲ್ಲಿ ಎರಡು ದಿನ ಉಪವಾಸ. ಉಳಿದ 5 ದಿನ ಸಾಮಾನ್ಯ ಆಹಾರ ಸೇವನೆ.

    ಇದರ ಪ್ರಯೋಜನಗಳು:

    ದೇಹದ ತೂಕ ಕಡಿಮೆ ಮಾಡಲು ಸಹಾಯಕ

    ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.

    ಉರಿಯೂತವನ್ನು ಕಡಿಮೆ ಮಾಡುತ್ತದೆ.

    ಇನ್ಸುಲಿನ್, ಸಂವೇದನಾಶೀಲತೆ, ಜೀರ್ಣಕ್ರಿಯೆ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

    ಇದರ ದುಷ್ಪರಿಣಾಮಗಳು:

    ಇದು ಉತ್ತಮ ಪೋಷಣೆ ಮತ್ತು ಆರೋಗ್ಯವಂತ ಜನರಿಗೆ ಸುರಕ್ಷಿತವಾಗಿದ್ದರೂ ಎಲ್ಲರಿಗೂ ಸೂಕ್ತವಲ್ಲ. ಇದು ತಲೆನೋವು ಮತ್ತು ಆಯಾಸ ನಿದ್ರಾಹೀನತೆಗೆ ಕಾರಣವಾಗಬಲ್ಲದು.

  • “ಅಪ್ಪಾ ನನ್ನನ್ನು ಕ್ಷಮಿಸಿ” 
Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ ನನ್ನನ್ನು ಕ್ಷಮಿಸಿ” Whatsapp Voice ಮಾಡಿ ಆತ್ಮಹತ್ಯೆಗೈದ ಮಗಳು…

    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಬದುಕು ಮುಂದುವರಿಸಲು ಸಾಧ್ಯವಿಲ್ಲ” ಇದು ನವ ವಿವಾಹಿತೆ ರಿಧನ್ಯಾ ತನ್ನ ಸಾವಿನ ಮೊದಲು ತಂದೆಗೆ ಕಳಿಸಿದ ಧ್ವನಿ ಸಂದೇಶದ ಚುಟುಕು.

    ತಮಿಳುನಾಡಿನ ತಿರುಪುರ ಜಿಲ್ಲೆಯ 27 ವರ್ಷದ ನವವಿವಾಹಿತೆ ರಿಧನ್ಯಾ ಜೂನ್ 28 ರಂದು ದಾಂಪತ್ಯದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಘಟನೆ ತಮಿಳುನಾಡಿನೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಅವಳು ತನ್ನ ಸಾವಿಗೆ ಮೊದಲು ತಂದೆಗೆ ಕಳಿಸಿದ್ದ ಹೃದಯವೇ ಒಡೆಯುವಂತಹ ಧ್ವನಿ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಮೃತರಾದ ರಿಧನ್ಯಾ, 2025ರ ಏಪ್ರಿಲ್ 11ರಂದು ಕವಿನ್ ಕುಮಾರ್ (28) ಎಂಬವರೊಂದಿಗೆ ವಿವಾಹವಾಗಿದ್ದರು. ವಿವಾಹಕ್ಕಾಗಿ ಅವರ ಕುಟುಂಬವು ಸುಮಾರು 100 ಪವನ್ ಚಿನ್ನ (800 ಗ್ರಾಂ) ಹಾಗೂ 70 ಲಕ್ಷ ಮೌಲ್ಯದ ವೋಲ್ವೋ ಕಾರ್ ವರದಕ್ಷಿಣೆ ರೂಪದಲ್ಲಿ ನೀಡಿದ್ದರೂ, ಪುನಹ 500 ಪವನ್ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಅವರ ಪತಿಯ ಕುಟುಂಬದವರು ನಿರಂತರ ಕಿರುಕುಳಗಳು ನೀಡುತ್ತಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ.

    “ಅವಳನ್ನು ಗಂಟೆಗಟ್ಟಲೇ ನಿಲ್ಲಿಸಿಟ್ಟು, ಊಟ ಕೊಡದೆ ಕೋಣೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.” “ವಿವಾಹವು ಅವಳಿಗೆ ಸಂತೋಷ ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಅದು ಅವಳಿಗೆ ಹಿಂಸೆಯೊಂದಿಗೆ ಅಂತ್ಯಕ್ಕೆ ಕಾರಣವಾಯಿತು” ಎಂದು ಆಕೆಯ ತಂದೆ ದಿ ಇಂಡಿಯನ್ ಎಕ್ಸ್ಪ್ರೆಸ್‌ಗೆ ತಿಳಿಸಿದ್ದಾರೆ.
    ಜೂನ್ 28ರಂದು ರಿಧನ್ಯಾ ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂದು ಹೇಳಿ ಹೊರಟು, ಕಾರನ್ನು ಮಂಡಿಪಾಳ್ಯಮ್ನಲ್ಲಿ ನಿಲ್ಲಿಸಿ ಸಾಮಾನ್ಯವಾಗಿ ಗ್ರಾಮೀಣ ಜನರು ಆತ್ಮಹತ್ಯೆಗೆ ಬಳಸುವ ವಿಷ ಪದಾರ್ಥವನ್ನು ಖರೀದಿಸಿದಳು ಎಂದು
    ದಿ ನ್ಯೂಸ್ ಮಿನಿಟ್‌ನಲ್ಲಿ ವರದಿಯಾಗಿದೆ.

    ವಿಷ ಸೇವಿಸಿ ಅರೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಆಕೆಯನ್ನು ದಾರಿಹೋಕರು ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಆಕೆ ಮೃತಪಟ್ಟಿದ್ದಳು.
    ಸಾವಿಗೆ ಮುನ್ನ ಆ ಹೆಣ್ಣು ಮಗಳು ತಂದೆಗೆ ವಾಟ್ಸಾಪ್ ಮೂಲಕ ಏಳು ಧ್ವನಿಸಂದೇಶಗಳನ್ನು ಕಳಿಸಿದ್ದಳು.. ಅವುಗಳಲ್ಲಿ ಒಂದು
    “ಅಪ್ಪಾ, ನನ್ನನ್ನು ಕ್ಷಮಿಸಿ. ನಾನೀ ಚಿತ್ರಹಿಂಸೆಯನ್ನು ಸಹಿಸಬಹುದು ಎಂದು ಭಾವಿಸಿದ್ದೆ. ಆದರೆ ಅವರು ಮನುಷ್ಯರಲ್ಲ, ಕ್ರೂರಿಗಳು. ನನಗೆ ಹೀಗೆಯೇ ಮುಂದುವರಿಸಿ ಬದುಕುವುದು ಸಾಧ್ಯವಿಲ್ಲ” ಎಂದು ರಿಧನ್ಯಾಳ ರೋದನ.”

    ಸಾರ್ವಜನಿಕರ ಪ್ರತಿಭಟನೆ ಹಾಗೂ ಮಾಧ್ಯಮದ ಒತ್ತಡದಿಂದಾಗಿ, ಸೇವೂರು ಪೊಲೀಸರು ಆಕೆಯ ಪತಿ ಕವಿನ್ ಕುಮಾರ್, ಮಾವ ಈಶ್ವರಮೂರ್ತಿ ಮತ್ತು ಅತ್ತೆ ಚಿತ್ರಾದೇವಿ ಅವರ ಮೇಲೆ IPಅ ಸೆಕ್ಷನ್ 498 A, 304 B ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961ರ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ (ಹಿಂದುಸ್ತಾನ್ ಟೈಮ್ಸ್).ವಿವಾಹದ ಸಮಯದಲ್ಲಿ ನಡೆದ ಹಣಕಾಸು ಮತ್ತು ವಸ್ತು ವಿನಿಮಯಗಳ ಕುರಿತು ಆದಾಯ ವಿಭಾಗ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ವರದಕ್ಷಿಣೆ ನಿಷೇಧ ಕಾನೂನು 1961ರಲ್ಲಿ ಜಾರಿಗೆ ಬಂದರೂ ಭಾರತದಲ್ಲಿ ಪ್ರತಿ ವರ್ಷ ಸರಾಸರಿ 6,500 ವರದಕ್ಷಿಣೆ ಸಂಬಂಧಿತ ಸಾವುಗಳ ವರದಿಯಾಗುತ್ತಿವೆ. (ದಿ ನ್ಯೂಸ್ ಮಿನಿಟ್). 2022ರಲ್ಲಿ ಕೇವಲ ತಮಿಳುನಾಡಿನಲ್ಲಿ ಮಾತ್ರ 29 ಪ್ರಕರಣಗಳು ದಾಖಲಾಗಿವೆ (The CSR Journal)

    “ಇದು ಬರೇ ಚಿನ್ನ ಅಥವಾ ಐಶಾರಾಮಿ ಕಾರಿನ ವಿಷಯವಲ್ಲ” ಎನ್ನುತ್ತಾರೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ರಾಜನ್. “ಎಷ್ಟೇ ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳಿಗಾದರೂ ಶೋಷಣೆಯಿಂದ ರಕ್ಷಣೆ ಸಿಗುವುದಿಲ್ಲ. ರಿಧನ್ಯಾಳ ಅಂತಿಮ ಧ್ವನಿ ಸಂದೇಶಗಳು- ಕ್ಷಮಾಪಣೆಯ ನೋವಿನ ಧ್ವನಿ- ಈ ರಾಷ್ಟ್ರವನ್ನು ಎಚ್ಚರಿಸಬೇಕು” (ದಿ ಇಂಡಿಯನ್ ಎಕ್ಸ್ಪ್ರೆಸ್).

    ಮಹಿಳಾ ಹಕ್ಕು ಹೋರಾಟಗಾರರು ಅಧಿಕಾರಿಗಳ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ವಿಧಿಸಬೇಕೆಂದು ಹಾಗೂ ಮಹಿಳೆಯರಿಗಾಗಿ ಜಿಲ್ಲಾಮಟ್ಟದ ದೂರು ಸ್ವೀಕಾರ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ..
    ಈ ಘಟನೆ ಭಾರತದೆಲ್ಲೆಡೆ ಭಾವನಾತ್ಮಕ, ನೋವಿನ ಹಾಗೂ ಚೀತ್ಕಾರದ ಪ್ರತಿಧ್ವನಿಯನ್ನು ಉಂಟುಮಾಡಿದೆ. ಹಣವಿರುವ ಕುಟುಂಬದಿಂದ ಬಂದಿದ್ದರೂ ರಿಧನ್ಯಾಳಿಗೆ ವರದಕ್ಷಿಣೆಯ ಶಾಪದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಪ್ರಕರಣವು ಎಲ್ಲ ವರ್ಗಗಳಲ್ಲಿಯೂ ಶೋಷಣೆಯ ಆಳವನ್ನು ತೋರಿಸುವ ಸಂಕೇತವಾಗಿದೆ.

    ಸಾಮಾಜಿಕ ಮಾಧ್ಯಮಗಳಲ್ಲಿ Justice For Ridhanya ಮತ್ತು End Dowry Deaths ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ನಟರು, ಹಕ್ಕು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಎಲ್ಲರೂ ನ್ಯಾಯ ಮತ್ತು ಸಕಾರಾತ್ಮಕ ಬದಲಾವಣೆಗೆ ಬೊಬ್ಬಿಡುತ್ತಿದ್ದಾರೆ.

    ವರದಕ್ಷಿಣೆ ಸಂಬಂಧಿಸಿದ ಸಾವುಗಳು ಭಾರತದಲ್ಲಿ ಬೃಹತ್ ಸಮಸ್ಯೆಯಾಗಿ ಉಳಿದಿವೆ. ಪಿತೃಪ್ರಧಾನ ರೂಢಿಗಳು, ಕಳಪೆ ಕಾನೂನು ಜಾರಿ ಮತ್ತು ಆಳವಾಗಿ ಬೇರೂರಿರುವ ದುರಾಸೆಯಿಂದಾಗಿ ಇದಕ್ಕೆ ಕಾರಣವಾಗಿವೆ
    ಅವಿನಾಶಿಯಲ್ಲಿ ರಿಧನ್ಯಾಳ ಅಂತ್ಯಕ್ರಿಯೆಯ ವೇಳೆ ತಂದೆ ಕಣ್ಣೀರಿಡುತ್ತಾ ಹೇಳಿದರು: “ನಮಗೆ ಅವಳ ಸಂತೋಷ ಬೇಕಿತ್ತು. ಆದರೆ ನಮ್ಮ ಹೃದಯದಲ್ಲಿ ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳೊಂದಿಗೆ ಸಹಿಸಲಾಗದ ನೋವಿನೊಂದಿಗೆ ಈಗ ಅವಳ ಸಮಾಧಿಯ ಮುಂದೆ ನಿಂತಿದ್ದೇವೆ.”

    ಭವಿಷ್ಯದಲ್ಲಿ ಆಶೆ ಮತ್ತು ಆಕಾಂಕ್ಷೆಗಳೊಂದಿಗೆ ಪತಿಯ ಮನೆಯಲ್ಲಿ ಬದುಕಬೇಕು ಎಂಬ ಮಗಳ ಕನಸುಗಳು ಬಾಲ್ಯದಿಂದ ಯೌವನದವರೆಗೆ ಯಾವುದೆ ನೋವೂ ಸಂಕಷ್ಟವೂ ಆಗದಂತೆ ತೊಟ್ಟಿಲಿನಿಂದ ಜೀವರಕ್ಷೆ ಮಾಡಿದ ತಂದೆ-ತಾಯಿಯ ಮಮತೆಯನ್ನೂ ಕೊನೆಗೆ ಬೆಂಕಿಗೆ ಆಹುತಿಯಾಗುತ್ತವೆಂದರೆ, ಅದನ್ನು ಹೇಗೆ ಸಹಿಸಬೇಕು?
    ನಮ್ಮ ಕಾನೂನು ವ್ಯವಸ್ಥೆ ಎಲ್ಲಿ ತಪ್ಪುತ್ತಿದೆ? ಮಾನವೀಯ ಮೌಲ್ಯಗಳು ಎಲ್ಲಿ ಕುಸಿದುಹೋಗಿವೆ? ಇವು ಚಿಂತನೆಗೆ ಗಂಭೀರ ಕಾರಣಗಳಾಗಿವೆ.

    ಉತ್ತಮ ನಾಗರಿಕರೆಂಬ ನಿಟ್ಟಿನಲ್ಲಿ, ಗೃಹಹಿಂಸೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಯಾರಾದರೂ ಕಂಡಾಗ, ತಕ್ಷಣವೇ ಸಂಬAಧಿತ ಸಹಾಯವಾಣಿಗೆ ಕರೆಮಾಡುವುದು ಅಥವಾ ಸ್ಥಳೀಯ ಮಾನಸಿಕ ಆರೋಗ್ಯ ತಜ್ಞರ ಬಳಿ ಮಾಹಿತಿ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
    ಕುಲ್ಸೂಮ್ ಅಬೂಬಕರ್

  • ಒಂದೇ ಮನೆಯಲ್ಲಿ ವಾಸಿಸುವ ಕ್ರಿಶ್ಚಿಯನ್-ಮುಸ್ಲಿಮ್ ಮಾದರೀ ಕುಟುಂಬ: 
ಇವರ ಮಧ್ಯವಿರುವ ಸಂಬಂಧವೇನು..?

    ಒಂದೇ ಮನೆಯಲ್ಲಿ ವಾಸಿಸುವ ಕ್ರಿಶ್ಚಿಯನ್-ಮುಸ್ಲಿಮ್ ಮಾದರೀ ಕುಟುಂಬ: ಇವರ ಮಧ್ಯವಿರುವ ಸಂಬಂಧವೇನು..?

    ಓದುಗರೇ! ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಧರ್ಮ ಎಂದು ಕಚ್ಚಾಡುತ್ತಿರುವ ಈ ಸಮಾಜದಲ್ಲಿ ಎರಡು ಬೇರೆ ಧರ್ಮಗಳಿಗೆ ಸೇರಿದ ಕುಟುಂಬಗಳು ಅನ್ಯೋನ್ಯವಾಗಿ ಬಾಳುತ್ತಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚುತ್ತಿದ್ದೇನೆ. ಬಳಗವು ಜಸಿಂತ ಮತ್ತು ನಸೀಮ್ ಎಂಬ ಇಬ್ಬರು ಮಹಿಳೆಯರಿಗೆ ಭೇಟಿ ಮಾಡಿತು.

    ಬಳಗ : ಜಸಿಂತ, ನೀವು ಮತ್ತು ನಸೀಮ್ ಬೇರೆ ಧರ್ಮಕ್ಕೆ ಸೇರಿದವರಾಗಿ ಇಷ್ಟು ಪ್ರೀತಿ ಮತ್ತು ಅನ್ಯೋನ್ಯವಾಗಿ ಬಾಳಲು ಹೇಗೆ ಸಾಧ್ಯ?

    ಜಸಿಂತ : ನನ್ನ ಅತ್ತಿಗೆ ನಸೀಮ ತುಂಬ ಒಳ್ಳೆಯವರು. ಅವರು ಅತ್ತಿಗೆ ಮಾತ್ರವಾಗಿರದೆ ನನ್ನ ತಂಗಿಯೂ ಆಗಿದ್ದಾರೆ. ತಂಗಿಗಿಂತಲೂ ಆಪ್ತಳು ಎಂದು ಹೇಳಿದರೆ ತಪ್ಪಾಗಲಾರದು. ಅವಳ ಒಳ್ಳೆಯತನ ನಮಗೆ ಪ್ರೀತಿ ಮತ್ತು ಅನ್ಯೋನ್ಯವಾಗಿರಲು ಸಹಕರಿಸುತ್ತದೆ.

    ಬಳಗ : ನಿಮ್ಮ ಅಣ್ಣ ಬೇರೆ ಧರ್ಮದ ಹುಡುಗಿಯನ್ನು ವಿವಾಹ ಆದಾಗ ಮನೆಯಲ್ಲಿ ಸಮಸ್ಯೆ ಆಗಲಿಲ್ಲವೇ?

    ಜಸಿಂತ : ಅಪ್ಪ-ಅಮ್ಮ ಮತ್ತು ನಮಗೆಲ್ಲರಿಗೂ ವಿರೋಧವಿತ್ತು. ಇಂತಹ ವಿವಾಹಕ್ಕೆ ಯಾರು ಒಪ್ಪುತ್ತಾರೆ? ಆದರೆ ಅಣ್ಣ ತನ್ನಿಷ್ಟದಿಂದ ತನ್ನ ಧರ್ಮವನ್ನು ಬದಲಿಸಿರುವುದರಿಂದ ನಾವು ಏನು ಮಾಡಲು ಸಾಧ್ಯ? ಈ ಬಗ್ಗೆ ಮಾತನಾಡಿದರೆ ಎಲ್ಲರೂ ಬೇಸರ ಪಡುತ್ತಾರೆ ಎಂದು ಅಮ್ಮ ವಿರೋಧಿಸಿದಾಗ, ನಾವು ಯಾರು ವಿರೋಧಿಸಲಿಲ್ಲ. ಆದರೆ ಅಪ್ಪನಿಗೆ ಬಹಳ ಸಮಯದ ತನಕ ಬೇಸರವಿತ್ತು.

    ಬಳಗ : ಅಣ್ಣ ತನ್ನ ಧರ್ಮ ಬದಲಾಯಿಸಿದ ನಂತರ ಮೊದಲಿನಂತೆಯೇ ಇದ್ದಾರೆಯೆ? ಅಥವಾ ಬದಲಾಗಿದ್ದಾರೆಯೇ?

    ಜಸಿಂತ : ಇಲ್ಲಿ ಅಣ್ಣನು ಸ್ವಲ್ಪವೂ ಬದಲಾಗಲಿಲ್ಲ. ಮೊದಲಿಗಿಂತಲೂ ಹೆಚ್ಚು ನಿಕಟವಾದರು. ಅಪ್ಪ-ಅಮ್ಮನನ್ನು ನೋಡುವುದರಲ್ಲಿರಲಿ ಅಥವಾ ನಮ್ಮೊಂದಿಗಿನ ಸಂಬಂಧವು ಮೊದಲಿಗಿಂತ ಗಟ್ಟಿಯಾಯಿತು.

    ಬಳಗ : ನಸೀಮ, ನೀವು ಮತ್ತು ಬಿಲಾಲ್ ಪ್ರೀತಿಸಿ ಮದುವೆಯಾದದ್ದೇ?

    ನಸೀಮ : ಇಲ್ಲ. ನಮ್ಮದು ಅರೆಂಜ್ ಮ್ಯಾರೇಜ್. ನನ್ನ ಸಂಬಂಧಿಕರೊಬ್ಬರು ಬಿಲಾಲ್‌ರ ಸ್ನೇಹಿತರಾಗಿದ್ದರು. ಅವರು ಈ ಸಂಬಂಧವನ್ನು ಮಾಡಿಸಿದರು. ಅಮ್ಮ ಹುಡುಗಿಯನ್ನು ನೋಡಿ ಒಪ್ಪಿದರೆ, ನಾನು ವಿವಾಹ ಆಗುವುದು ಎಂದು ಬಿಲಾಲ್ ಹೇಳಿದರಿಂದ, ಅಮ್ಮ ನನ್ನನ್ನು ನೋಡಲು ಬಂದಿದ್ದರು.

    ಬಳಗ : ವಿವಾಹದ ನಂತರ ಅತ್ತೆ ಮನೆಗೆ ಹೋಗಿದ್ದೀರಾ?

    ನಸೀಮ : ಹೌದು, ಅಪ್ಪ-ಅಮ್ಮ ಮತ್ತು ಮನೆವರೆಲ್ಲರು ಬಹಳ ಸಂತೋಷದಿಂದ ಬರಮಾಡಿಕೊಂಡರು. ನಾನು ಅಮ್ಮನಿಲ್ಲದ ಹೆಣ್ಣು ಎಂದು ಅತ್ತೆ ನನ್ನನ್ನು, ನನ್ನ ಸಹೋದರ, ಸಹೋದರಿಯರನ್ನೂ ಪ್ರೀತಿಸುತ್ತಿದ್ದರು.

    ಬಳಗ: ನಿಮ್ಮ ಮತ್ತು ನಿಮ್ಮ ಅತ್ತೆ ಮನೆಯವರ ಸಂಬಂಧ ಹೇಗಿದೆ?

    ನಸೀಮ : ಅಲ್‌ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿಗಳು) ಬಹಳ ಉತ್ತಮ ಸಂಬಂಧ. ನಾದಿನಿ ಮೈದುನನವರೊಂದಿಗೂ ಉತ್ತಮ ಸಂಬಂಧindu ವಿದೆ. ನನ್ನ ಮನೆಯವರೊಂದಿಗೂ ಅವರ ಸಂಬಂಧ ಒಳ್ಳೆದಿದೆ. ನಮ್ಮ ಧರ್ಮ ಯಾವುತ್ತೂ ನಮ್ಮ ಅನ್ಯೋನ್ಯತೆಗೆ ಅಡ್ಡಿ ಬರಲಿಲ್ಲ.

    ಬಳಗ : ಜಸಿಂತ, ನಿಮ್ಮ ಅಣ್ಣ ಹಾಗೂ ಅತ್ತಿಗೆಯ ಸಂಬಂಧ ನಿಮ್ಮೊಂದಿಗೆ ಹೇಗಿದೆ?

    ಜಸಿಂತ : ಪ್ರೀತಿಯ ಸಂಬಂಧ. ಅಮ್ಮ ಜೀವಂತವಾಗಿರುವ ವರೆಗೆ ಅಮ್ಮನಿಗೆ ಎಲ್ಲ ರೀತಿಯಲ್ಲಿ ಸಹಕರಿಸಿದ್ದಾರೆ. ಅಮ್ಮನ ಯಾವುದೇ ಅಗತ್ಯದ ವಿಷಯದಲ್ಲಿ ಬೇಸರ ಪಡಿಸಲಿಲ್ಲ. ಮಾತ್ರವಲ್ಲದೇ ನಮ್ಮೆಲ್ಲರ ಅಗತ್ಯವನ್ನು ಕೇಳುವ ಮೊದಲೇ ಪೂರೈಸುತ್ತಾರೆ. ನನ್ನ ಆರೋಗ್ಯ ಸರಿ ಇಲ್ಲದಾಗಲೂ ಅಣ್ಣ ಅತ್ತಿಗೆ ನನ್ನನ್ನು ಬಿಡಲಿಲ್ಲ. ಈ ವಿಷಯದಲ್ಲಿ ನಸೀಮ ಎತ್ತಿದ ಕೈ. ನಸೀಮ ನಮಗೆ ಯಾರಿಗೂ ದೂರ ಮಾಡಲಿಲ್ಲ. ನಾವು, ಅವರು ಪರಸ್ಪರ ನಮ್ಮ ಮನೆಗಳಿಗೆ ಭೇಟಿ ಕೊಡುತ್ತೇವೆ.

    ಬಳಗ : ನಸೀಮ, ಬಿಲಾಲ್‌ರ ಸಹೋದರ ಸಹೋದರಿಯರೊಂದಿಗೆ ನಿಮ್ಮ ಸಂಬಂಧ ಹೇಗಿದೆ?

    ನಸೀಮ : ಒಂದು ಕುಟುಂಬ ಹೇಗಿರಬೇಕೋ ಹಾಗೆಯೇ ಇದೆ. ಕೆಲವು ತಿಂಗಳ ಹಿಂದೆ, ಅವರ ಓರ್ವ ಹಿರಿಯ ಸಹೋದರಿ ಗಲ್ಫ್ನಲ್ಲಿ 15 ದಿನ ನಮ್ಮೊಂದಿಗೆ ನಿಲ್ಲಲು ಬಂದವರು ಒಂದೂವರೆ ತಿಂಗಳು ನಮ್ಮೊಂದಿಗೆ ಇದ್ದು ಹೋದರು. ನಮ್ಮ ಮಕ್ಕಳು ಮತ್ತು ಅವರೆಲ್ಲರ ಮಕ್ಕಳೊಂದಿಗೆ ಉತ್ತಮ ಸಂಬಂಧ ಇದೆ. ಸುಖ-ದುಃಖಗಳಲ್ಲೆಲ್ಲ ಇಡೀ ಕುಟುಂಬ ಸೇರುತ್ತೇವೆ. ಪರಸ್ಪರ ಉಡುಗೊರೆ ಹಂಚುತ್ತೇವೆ ಮತ್ತು ಪರಸ್ಪರ ಸಹಕರಿಸುತ್ತೇವೆ ಕೂಡ.

    ಬಳಗ :ವಿವಾಹದ ಮೊದ ಮೊದಲು ಬಿಲಾಲ್ ತನ್ನ ಮನೆಯವರಿಗೆ ಸಹಕರಿಸುವಾಗ ನಿಮಗೆ ಬೇಸರ ಆಗುತ್ತಿತ್ತೇ

    ನಸೀಮ : ಇಲ್ಲ. ಸ್ವಲ್ಪನೂ ಇಲ್ಲ. ಕೆಲಸದ ನಿಬಿಢತೆಯಿಂದ ಬಿಲಾಲ್‌ಗೆ ಕೆಲವೊಮ್ಮೆ ಅಮ್ಮನಿಗೆ ಫೋನಾಯಿಸಲು ಅಥವಾ ಹಣ ಕಳುಹಿಸಲು ನೆನಪಿಲ್ಲದಾಗ, ನಾನು ಅವರಿಗೆ ನೆನಪಿಸುತ್ತೇನೆ. ಬಿಲಾಲ್ ಫೋನಾಯಿಸದಿದ್ದರೂ ನಾನು ಫೋನಾಯಿಸುತ್ತಾ ಇರುತ್ತೇನೆ. ಹಣ ಕಳುಹಿಸಲು ಬಿಲಾಲ್‌ಗೆ ಸಮಯ ಇರುವುದಿಲ್ಲವೆಂದು ನಾನೇ ಕಳುಹಿಸಲು ಆರಂಭಿಸಿದೆ. ಕ್ರಮೇಣ ಆ ಜವಾಬ್ದಾರಿಯನ್ನು ಬಿಲಾಲ್ ನನಗೆನೇ ವಹಿಸಿಕೊಟ್ಟರು. ಅವರ ಸಹೋದರ ಸಹೋದರಿಯರಿಗೆ ಹಣದ ಅಗತ್ಯ ಇದ್ದರೆ, ಅವರ ಮೊಬೈಲ್ ನೋಡಿ ನಾನೇ ಕಳುಹಿಸಿಕೊಡುತ್ತೇನೆ. ಅಮ್ಮನಿಗೆ ಕಳುಹಿಸುವ ಹಣ ನಾನು ವಹಿಸಿಕೊಂಡ ನಂತರ ಒಂದು ದಿನ ಕೂಡ ಲೇಟ್ ಮಾಡಲಿಲ್ಲ.

    ಬಳಗ : ಅಮ್ಮನ ನಿಧನದ ಸಮಯ ಅಣ್ಣ ಅತ್ತಿಗೆ ಬಂದಿದ್ದರೆ?

    ಜಸಿಂತ : ಅಮ್ಮ ಅನಾರೋಗ್ಯಗೊಂಡಾಗ ಅಣ್ಣ ಮತ್ತು ಅತ್ತಿಗೆಯನ್ನೇ ನೆನೆಯುತ್ತಿದ್ದರು. ಅಣ್ಣನಿಗೆ ಕೆಲಸದ ನಿಬಿಢತೆಯಿಂದ ಬರಲು ಆಗುತ್ತಿರದಿದ್ದರೂ ಅತ್ತಿಗೆ ಬರುತ್ತಿದ್ದರು. ನಿಧನದ ಸಮಯ ಕೂಡ ಅಮ್ಮ ಇವರಿಬ್ಬರನ್ನು ಕಾಯುತ್ತಿದ್ದರು. ನಸೀಮ- ಅಮ್ಮನ ಆರೋಗ್ಯ ಸರಿಯಿಲ್ಲ ಎಂದು ಕೇಳಿದ ತಕ್ಷಣ ನಾವು ಹೊರಟೆವು. ಆದರೆ… ಪ್ರಯಾಣ… ನಾವು ಮುಟ್ಟುವಷ್ಟರಲ್ಲಿ ಅಮ್ಮ ನಿಧನ ಹೊಂದಿದ್ದರು. ಬಿಲಾಲ್ ಹೆಚ್ಚಾಗಿ ಗಲ್ಫ್ನಲ್ಲಿರುವುದರಿಂದ ಇಲ್ಲಿಯ ವಿಷಯ ಅವರಿಗೆ ಗೊತ್ತಿಲ್ಲ. ಆದ್ದರಿಂದ ಅಮ್ಮನ ದೇಹವನ್ನು ಶವಾಗಾರದಲ್ಲಿಡುವ ವ್ಯವಸ್ಥೆ, ಅವರಿಗೆ ಉಡಿಸಲು ಸೀರೆ ಮತ್ತು ಹೂವು ಎಲ್ಲದರ ವ್ಯವಸ್ಥೆ ನಾನು ಮಾಡಿಕೊಂಡು ಮರುದಿನ ಮರಣವನ್ನು ಊರಿಗೆ ಕಳುಹಿಸಿದೆ. ಮತ್ತು ಹಿಂದಿನಿಂದ ನಾವು ಕೂಡ ಹೋದೆವು. ಜಸಿಂತ- ಅಮ್ಮ ಮರಣದ ತನಕ ನಮ್ಮೆಲ್ಲರೊಂದಿಗೆ ಹೇಳುತ್ತಿದ್ದರು ಏನೆಂದರೆ ನೀವೆಲ್ಲ ಸಹೋದರ-ಸಹೋದರಿಯರು ಒಂದಾಗಿ ಇರಬೇಕು. ಬೇರೆ ಬೇರೆ ಆಗಬಾರದು. ಈ ಅಣ್ಣ ಅತ್ತಿಗೆಯನ್ನು ದೂರ ಮಾಡಬಾರದು. ನಸೀಮ- ಬಿಲಾಲ್‌ರ ತಮ್ಮ ಜೋಸೆಫ್ ಅಂದರೆ ನಮ್ಮ ಮಕ್ಕಳಿಗೆ ಪಂಚ ಪ್ರಾಣ. ಅವರಿಗೂ ನಮ್ಮ ಮಕ್ಕಳೊಂದಿಗೆ ತುಂಬಾ ಪ್ರೀತಿ. ನಮ್ಮ ಊರಿಗೆ ಬಂದಾಗ, ನಮ್ಮ ಹೆಚ್ಚಿನ ಕೆಲಸ ಕಾರ್ಯಗಳಿಗೆ ಅವರು ನಮಗೆ ಸಹಕರಿಸುತ್ತಾರೆ. ಬಿಲಾಲ್ ನಮ್ಮೊಂದಿಗೆ ಬಾರದಿದ್ದರೂ ಅವರು ನಮ್ಮೊಂದಿಗೆ ಇರುತ್ತಾರೆ.

    ಬಳಗ : ಬಿಲಾಲ್‌ರೊಂದಿಗೆ ವಿವಾಹದ ನಂತರ ನಿಮ್ಮ ಜೀವನ ಹೇಗೆ ಸಾಗುತ್ತಿದೆ?

    ನಸೀಮ : ಅಲ್‌ಹಮ್ದುಲಿಲ್ಲಾಹ್ (ದೇವನಿಗೆ ಸ್ತುತಿ) ತುಂಬ ಒಳ್ಳೆಯ ಜೀವನ ಸಾಗಿಸುತ್ತಿದ್ದೇವೆ. ಅವರು ತುಂಬ ಶ್ರಮ ಜೀವಿ. ವಿವಾಹದ ಮೊದಲು ಇದ್ದ ಜೀವನ, ವಿವಾಹದ ನಂತರ ಸಂಪೂರ್ಣ ಬದಲಾಗಿದೆ. ನಾವು ಮಾತ್ರವಲ್ಲಿ ನಮ್ಮೊಂದಿಗೆ ನನ್ನ ಕುಟುಂಬ ಹಾಗೂ ಬಿಲಾಲ್‌ರ ಕುಟುಂಬವು ಉತ್ತಮ ಜೀವನ ಜೀವಿಸುತ್ತಿದ್ದೇವೆ.ind

  • ಕೈಬರಹದ ಕುರ್‌ಆನ್ ಅನಾವರಣಗೊಳಿಸಿದ ಪುತ್ತೂರಿನ ವಿದ್ಯಾರ್ಥಿನಿ: 
ಪೂರ್ಣಗೊಳಿಸಲು ತೆಗೆದುಕೊಂಡ ವರ್ಷಗಳೆಷ್ಟು..?

    ಕೈಬರಹದ ಕುರ್‌ಆನ್ ಅನಾವರಣಗೊಳಿಸಿದ ಪುತ್ತೂರಿನ ವಿದ್ಯಾರ್ಥಿನಿ: ಪೂರ್ಣಗೊಳಿಸಲು ತೆಗೆದುಕೊಂಡ ವರ್ಷಗಳೆಷ್ಟು..?

    ಪುತ್ತೂರು (ದಕ್ಷಿಣ ಕನ್ನಡ): ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್‌ ಆನ್‌ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ.

    ಕುಂಬ್ರ ಮರ್ಕಝುಲ್‌ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್‌ ಅವರು ಪವಿತ್ರ ಕುರ್‌ಆನ್‌ನ 30 ಕಾಂಡಗಳನ್ನು ಕೈಯಲ್ಲಿ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಈ ಸಾಧನೆಯ ಹಿಂದೆ ಸುಮಾರು 5 ವರ್ಷಗಳ ನಿರಂತರ ಪರಿಶ್ರಮವಿದೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್‌ ಹಾಜಿ ಮತ್ತು ಝಹ್‌ರಾ ಜಾಸ್ಮಿನ್‌ ದಂಪತಿಯ ಪುತ್ರಿಯಾಗಿರುವ ಸಜ್‌ಲ ಅವರು ಕುರ್‌ಆನ್‌ ಬರವಣಿಗೆಯನ್ನು 2021ರ ಜನವರಿಯಲ್ಲಿ ಆರಂಭಿಸಿದ್ದರು. ಆಗ ಅವರು ಇದೇ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಹಳೆವಿದ್ಯಾರ್ಥಿಯಾಗಿದ್ದು, 2025ರ ಆಗಸ್ಟ್‌ನಲ್ಲಿ ಬರವಣಿಗೆ ಪೂರ್ಣಗೊಂಡಿದೆ.

    ಪ್ರವಾದಿ ಕಾಲದಲ್ಲಿ ಅವತೀರ್ಣಗೊಂಡ ಕುರ್‌ಆನ್‌ ಅನ್ನು ಆ ಕಾಲದ ಪಂಡಿತ ಶಿರೋಮಣಿಗಳು ಕೈ ಬರಹದ ಮೂಲಕ ಬರೆದು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಪ್ರಸ್ತುತ ಮುದ್ರಣ ಸೌಲಭ್ಯ ಇದ್ದರೂ ಸಜ್‌ಲ ಅವರು ಕೈಯಲ್ಲಿ ಸ್ಫುಟವಾಗಿ ಬರೆದಿರುವುದು ಸಾಧನೆ ಎನಿಸಿದೆ. ಈ ಕೃತಿಯನ್ನು ಶನಿವಾರ ಕುಂಬ್ರದ ಮರ್ಕಝುಲ್‌ ಹುದಾ ಮಹಿಳಾ ಕಾಲೇಜಿನಲ್ಲಿ ಕೇರಳದ ಮರ್ಕಝ್ ನಾಲೇಜ್‌ ಸಿಟಿಯ ಮುರ್‌ ರಿಸ್‌ ಯಾಸೀನ್‌ ಸಖಾಫಿ ಅಲ್‌ ಅಝ್ಹರಿ ಅವರು ಲೋಕಾರ್ಪಣೆಗೊಳಿಸಿದರು.

    ಮರ್ಕಝುಲ್‌ ಹುದಾ ಮಹಿಳಾ ಕಾಲೇಜು ಅಧ್ಯಕ್ಷ ಅರಿಯಡ್ಕ ಅಬ್ದುಲ್‌ ರಹಿಮಾನ್‌ ಹಾಜಿ, ಷರೀಅತ್‌ ವಿಭಾಗದ ಪ್ರಾಂಶುಪಾಲ ವಳವೂರು ಮುಹಮ್ಮದ್‌ ಸಅದಿ, ಪದವಿ ವಿಭಾಗದ ಪ್ರಾಂಶುಪಾಲ ಮಹಮ್ಮದ್‌ ಮನ್ಸೂರ್‌ ಕಡಬ, ಆಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.

    ಒಟ್ಟು 604 ಪುಟಗಳ ಈ ಕೃತಿಗೆ ಬಿಳಿ, ತಿಳಿನೀಲಿ, ತಿಳಿ ಹಸುರು ಬಣ್ಣದ ಕಾಗದವನ್ನು ಬಳಸಿಕೊಳ್ಳಲಾಗಿದೆ. ಅಕರ್ಷಕವಾದ ಕೆಂಪು ಮತ್ತು ಸ್ವರ್ಣ ವರ್ಣದ ಹೊರ ಕವಚವನ್ನು ಹೊದೆ ಸಲಾಗಿದೆ. ಬರೆದು ಮುಗಿಸಲು ಅವರು ಒಟ್ಟು 303 ದಿನಗಳನ್ನು ತೆಗೆದುಕೊಂಡಿದ್ದಾರೆ. ಒಂದು ಪುಟ ಬರೆಯಲು 4 ಗಂಟೆ ಬೇಕಿತ್ತು. ಕೆಲವು ದಿನಗಳಲ್ಲಿ 8 ಗಂಟೆ ಬಳಸಿ 2 ಪುಟಗಳನ್ನು ಬರೆದಿದ್ದಾರೆ. ಒಟ್ಟಾರೆ ಬರೆದು ಮುಗಿಸಲು 2,416 ಗಂಟೆ ಬಳಕೆಯಾಗಿದೆ ಎಂದು ಸಜ್‌ಲ ತಿಳಿಸಿದ್ದಾರೆ.

  • “ಯತ್ನಾಳರೇ, ಮುಸ್ಲಿಮ್ ಹೆಣ್ಣು ಮಕ್ಕಳ ವಿಷಯಕ್ಕೆ ಬರಬೇಡಿ” 
‘ಮುಸ್ಲಿಮ್ ಯುವಜನ ಪರಿಷತ್’ ತಾಕೀತು ಮಾಡಲು ಕಾರಣವೇನು?

    “ಯತ್ನಾಳರೇ, ಮುಸ್ಲಿಮ್ ಹೆಣ್ಣು ಮಕ್ಕಳ ವಿಷಯಕ್ಕೆ ಬರಬೇಡಿ” ‘ಮುಸ್ಲಿಮ್ ಯುವಜನ ಪರಿಷತ್’ ತಾಕೀತು ಮಾಡಲು ಕಾರಣವೇನು?

    ‘ಮುಸ್ಲಿಂ ಹೆಣ್ಣು ಮಕ್ಕಳ ವಿವಾಹದ ಬಗ್ಗೆ ಅವರ ಅಪ್ಪ ಅಮ್ಮ, ಜಮಾತ್‌ನವರು ಚಿಂತಿಸುತ್ತಾರೆ. ಬಿಜೆಪಿಯ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಈ ಚಿಂತೆ ಬೇಡ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ ತಿರುಗೇಟು ನೀಡಿದೆ.

    ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಅಶ್ರಫ್ ಕಲ್ಲೇಗ, ಮುಸ್ಲಿಂ ಯುವತಿಯನ್ನು ವಿವಾಹವಾದ ಹಿಂದೂ ಯುವಕನಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿರುವುದು. ಮುಸ್ಲಿಂ ಸಮುದಾಯದ ಖಬರ್‌ಸ್ಥಾನಗಳ ಬಗ್ಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.

    ‘ಧರ್ಮಸ್ಥಳ ಪ್ರಕರಣದಲ್ಲಿ ದೂರು ನೀಡಿರುವ ಸಾಕ್ಷಿ ದೂರುದಾರ ಮುಸ್ಲಿಂ ಸಮಾಜಕ್ಕೆ ಸೇರಿದವನು ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಿಷೇಧಿತ ಸಂಘಟನೆ ಪಿಎಫ್ಐ ಕೈವಾಡದ ಬಗ್ಗೆ ಮಾಹಿತಿ ಇದ್ದರೆ ಅವರದೇ ಕೇಂದ್ರ ಸರ್ಕಾರದ ಮೂಲಕ ತನಿಖೆ ಕೈಗೊಳ್ಳಲಿ’ ಎಂದು ಸವಾಲು ಹಾಕಿದರು.

    ‘ಧರ್ಮಸ್ಥಳ ವಿಚಾರವಾಗಿ ಮುಸ್ಲಿಂ ಸಮುದಾಯ ಯಾವೊಬ್ಬ ಪ್ರಮುಖರು ಮಾತನಾಡಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಹೆಗ್ಗಡೆಯವರಿಗೆ ಪ್ರೀತಿ ಇದೆ. ಅಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಆದರೆ ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಈ ಹಿಂದೆ ಯತ್ನಿಸಿ ಅದಕ್ಕೆ ಪರ್ಯಾಯವಾಗಿ ಕನ್ಯಾಡಿ ಕ್ಷೇತ್ರದ ಆರಂಭಕ್ಕೆ ಕಾರಣರಾದ ಜನಾರ್ದನ ಪೂಜಾರಿ ಅವರಿಗೆ ಈಗ ಧರ್ಮಸ್ಥಳದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅದಕ್ಕಾಗಿ ಅವರು ಈ ರೀತಿಯ ಹೇಳಿಕೆ ನೀಡಲು ಆರಂಭಿಸಿದ್ದಾರೆ’ ಎಂದು ಅವರು ದೂರಿದರು.

    ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಪ್ರಧಾನ ಕಾರ್ಯದರ್ಶಿ ನೌಷದ್ ಬೊಳುವಾರು, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಮುಖಂಡ ಹಂಝ ಕಬಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.